Pragya Singh Thakur : “ಮನೆಯಲ್ಲಿ ಚಾಕು ಹರಿತವಾಗಿಟ್ಟುಕೊಳ್ಳಿ” ಸಂಸದೆ ವಿರುದ್ಧ ದೂರು….
ಶಿವಮೊಗ್ಗದಲ್ಲಿ ನಡೆದ ಹಿಂದೂ ಜಾಗರಣ ವೇದಿಕೆಯಲ್ಲಿ ಸಂಸದೆ ಸಾದ್ವಿ ಪ್ರಗ್ಯಾ ಸಿಂಗ್ ಠಾಕೂರ್ ಅವರು ನೀಡಿದ್ದ ಹೇಳಿಕೆ ಇದೀಗ ರಾಷ್ಟ್ರೀಯ ನ್ಯೂಸ್ ಚಾನೆಲ್ ಗಳಲ್ಲಿ ಸುದ್ದಿಯಾಗುತ್ತಿದೆ. ಲವ್ ಜಿಹಾದ್ನ ಬಗ್ಗೆ ಮಾತನಾಡ್ತಾ ಮನೆಯಲ್ಲಿರುವ ಸೊಪ್ಪು ಹೆಚ್ಚುವ ಚಾಕುವನ್ನ ಹೆಚ್ಚು ಶಾರ್ಪ್ ಆಗಿಟ್ಟಿರಿ ಎಂದಿದ್ದರು. ಇದು ಉತ್ತರ ಭಾರತದಲ್ಲಿ ಸಾಕಷ್ಟು ಸಂಚಲನ ಮೂಡಿಸ್ತಿದೆ.
ಇದೇ ವಿಚಾರವಾಗಿ ಸಾದ್ವಿ ಪ್ರಚೋಧನಕಾರಿ ಹೇಳಿಕೆ ನೀಡಿದ್ದಾರೆ. ಅವರು ಸಾಮಾಜಿಕ ಸಾಸ್ಥ್ಯಕ್ಕೆ ಭಂಗ ತರುತ್ತಿದ್ದಾರೆ ಅಂತಾ ವ್ಯಕ್ತಿಯೊಬ್ಬರು ಕಂಪ್ಲೆಂಟ್ ಮಾಡಿ ಎಫ್ಐಆರ್ ದಾಖಲಿಸುವಂತೆ ಕೋರಿದ್ದಾರೆ. ತೆಹಸೀನ್ ಪೂನಾವಾಲಾ ಎಂಬವರು ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್ (shivamogga sp)ರವರಿಗೆ ಅಡ್ರೆಸ್ ಮಾಡಿ ಕಂಪ್ಲೆಂಟ್ ಮಾಡಿದ್ಧಾರೆ. u/s 153-A, 153-B, 268, 295-A, 298, 504, 508 inter alia of the Indian Penal Code, 1860] ಅಡಿಯಲ್ಲಿ ಎಫ್ಐರ್ ಮಾಡಬೇಕು ಎಂದು ಕೋರಿದ್ದಾರೆ.
ಸಾದ್ವಿ ಹೇಳಿದ್ದೇನು?
ಸಮ್ಮೇಳನದಲ್ಲಿ ಮಾತನಾಡಿದ್ದ ಸಾದ್ವಿ ಪ್ರಗ್ಯಾ ಸಿಂಗ್ ಠಾಕೂರ್ ಮನೆಯ ಹೆಣ್ಣುಮಕ್ಕಳನ್ನು ಸಂರಕ್ಷಿಸಿ, ಅವರಿಗೆ ಸಂಸ್ಕಾರ ಕಲಿಸಿ, ಮನೆಯಲ್ಲಿ ಮಾರಕಾಸ್ತ್ರಗಳನ್ನು ಇಟ್ಟುಕೊಳ್ಳಿ, ಕೊನೆ ಪಕ್ಷ ಸೊಪ್ಪು, ತರಕಾರಿ ಕತ್ತರಿಸುವ ಚಾಕುವನ್ನಾದರೂ ಸವೆದು ಚೂಪಾಗಿ ಇಟ್ಟುಕೊಳ್ಳಿ.. ಸ್ಪಷ್ಟವಾಗಿ ಹೇಳುತ್ತಿದ್ದೇನೆ, ಕೇಳಿ ನಮ್ಮ ಮನೆಯಲ್ಲಿಯು ಸೊಪ್ಪು, ತರಕಾರಿ ಕತ್ತರಿಸುವ ಚಾಕು ಇನ್ನಷ್ಟು ಚೂಪಾಗಿ ಇರಬೇಕು.
ಅವರು ಚಾಕುವಿನಿಂದಲೇ ನಮ್ಮ ಕಾರ್ಯಕರ್ತ ಹರ್ಷನನ್ನು ಕೊಂದರು, ಅವರು ಚಾಕುವಿನಿಂದಲೇ, ನಮ್ಮ ಹಿಂದು ವೀರರನ್ನು ಕೊಂದಿದ್ಧಾರೆ, ಹಾಗಾಗಿ ನಾವು ಕೂಡ ನಮ್ಮ ಮನೆಯ ಸೊಪ್ಪು, ತರಕಾರಿ ಕತ್ತರಿಸುವ ಚಾಕುವನ್ನು ಸ್ವಲ್ಪ ಚೂಪಾಗಿ ಇರಿಸೋಣ, ಗೊತ್ತಿಲ್ಲ, ಯಾವಾಗ ಎಂತಹ ಸಂದರ್ಭ ಬರಬಹುದು ಎಂಬುದು. ಯಾವಾಗ ನಮ್ಮ ಚಾಕು ಸೊಪ್ಪು ತರಕಾರಿಯನ್ನು ಸುಲಭವಾಗಿ ಕತ್ತರಿಸುತ್ತದೋ, ಅದೇ ರೀತಿಯಲ್ಲಿ ಶತ್ರುವಿನ ತಲೆಯನ್ನು ಸಹ ಕತ್ತರಿಸಬಲ್ಲದು.
ಆತ್ಮರಕ್ಷಣೆಯ ಅಧಿಕಾರ ಎಲ್ಲರಿಗೂ ಇದೆ. ನಮ್ಮ ದೇಶದ, ನಮ್ಮ ಮನೆಗೆ ನುಗ್ಗಿ ಯಾರಾದರೂ ನುಗ್ಗಿ ಆಕ್ರಮಣ ಮಾಡುತ್ತಾರೋ ಅದನ್ನು ತಡೆಯುವ ಅಧಿಕಾರ ನಮಗಿದೆ ಎಂದಿದ್ದರು.
Pragya Singh Thakur : “Keep a knife sharp at home” Complaint against MP…