ಬೆಂಗಳೂರು: ರಾಜ್ಯಸಭೆ ಚುನಾವಣೆಯಲ್ಲಿ ನಾಸಿರ್ ಹುಸೇನ್ ಗೆಲುವು ಸಾಧಿಸುತ್ತಿದ್ದಂತೆ ನಡೆದ ವಿಜಯೋತ್ಸವದಲ್ಲಿ ಪಾಕ್ ಪರ ಘೋಷಣೆ ಕೂಗಿದ ಆರೋಪಿದಲ್ಲಿ ಬಂಧಿಯಾಗಿರುವ ನಾಶೀಪುಡಿಯನ್ನು ವಿಧಾನಸೌಧ ಪೊಲೀಸರು ಜೈಲಿಗೆ ಕಳುಹಿಸಿದ್ದಾರೆ.
ಆರೋಪಿಯನ್ನು ಎರಡನೇ ಬಾರಿ ಪೊಲೀಸರು ಕಸ್ಟಡಿಗೆ ಪಡೆದಿದ್ದರು. ಮೊದಲನೇ ಬಾರಿ ಪಾಕ್ ಪರ ಘೋಷಣೆ ಕೂಗಿದ್ದ ಕಾರಣ ಪ್ರಕರಣ ಸಂಬಂದ ವಿಧಾನಸೌಧ ಪೊಲೀಸರು ಮುನಾವರ್ ಅಹ್ಮದ್, ಇಲ್ತಿಯಾಸ್, ನಾಶೀಪುಡಿಯನ್ನ ಬಂಧಿಸಿ, ಎರಡು ದಿನಗಳ ಕಾಲ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗಿತ್ತು.
ನಿನ್ನೆ ಇಲ್ತಿಯಾಸ್ ಹಾಗೂ ಮುನಾವರ್ ಅಹ್ಮದ್ನನ್ನ ನ್ಯಾಯಾಲಯಕ್ಕೆ ಹಾಜರುಪಡಿಸಿ ಜೈಲಿಗೆ ಬಿಡಲಾಗಿತ್ತು. ಆದರೆ, ಪ್ರಕರಣದ ಎ1 ಆರೋಪಿ ನಾಶೀಪುಡಿಯನ್ನು ಹೆಚ್ಚಿನ ವಿಚಾರಣೆಗೆ ಅವಶ್ಯಕತೆ ಇದೇ ಎಂದು ಒಂದು ದಿನ ಹೆಚ್ಚುವರಿಯಾಗಿ ಪೊಲೀಸರು ಕಸ್ಟಡಿಗೆ ಪಡೆದುಕೊಂಡಿದ್ದರು. ಇಂದು 12 ಗಂಟೆ ವಿಚಾರಣೆ ಮುಗಿದ ನಂತರ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ಹೀಗಾಗಿ ನ್ಯಾಯಾಧೀಶರು 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಿದ್ದಾರೆ.