ಜಿಲ್ಲಾಧಿಕಾರಿಗಳ ಕಚೇರಿ ಪ್ರವೇಶಿಸಬೇಕೆಂದರೆ ನನ್ನ ಶವದ ಮೇಲೆ ಪ್ರವೇಶಿಸಬೇಕು : ಸಬ್ ಇನ್ಸ್ಪೆಕ್ಟರ್
ತುಮಕೂರು : ನೀವು ಜಿಲ್ಲಾಧಿಕಾರಿಗಳ ಕಚೇರಿ ಪ್ರವೇಶಿಸಬೇಕೆಂದರೆ ನನ್ನ ಶವದ ಮೇಲೆ ಪ್ರವೇಶಿಸಬೇಕು ಎಂದು ಸಬ್ ಇನ್ಸ್ಪೆಕ್ಟರ್ ನವೀನ ಹೇಳಿದ್ದಾರೆ.
ತುಮಕೂರಿನ ಜಿಲ್ಲಾಧಿಕಾರಿ ಕಚೇರಿಯೆದರು ನಾಗವಲ್ಲಿ ಗ್ರಾಮಸ್ಥರು ವಸತಿ ಹಾಗೂ ಭೂಮಿ ಕಲ್ಪಿಸುವಂತೆ ಪ್ರತಿಭಟನೆ ಮಾಡಿದರು, ನಿನ್ನೆ ರಾತ್ರಿ ಸುರಿದ ಮಳೆಯಿಂದ ರಕ್ಷಣೆ ಪಡೆಯಲು ಜಿಲ್ಲಾಧಿಕಾರಿ ಕಚೇರಿಗೆ ತೆರಳಲು ಯತ್ನಿಸಿದ್ದರು. ಈ ವೇಳೆ ಪೊಲೀಸರು ಗ್ರಾಮಸ್ಥರಿಗೆ ಕಚೇರಿ ಒಳಗೆ ಪ್ರವೇಶಿಸದಂತೆ ತಡೆದರು.
ಈ ವೇಳೆ ಗ್ರಾಮಸ್ಥರು ಮತ್ತು ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಈ ಸಮಯದಲ್ಲಿ ಸ್ಥಳದಲ್ಲಿದ್ದ ಸಬ್ ಇನ್ಸ್ಪೆಕ್ಟರ್ ನವೀನ ಅವರು, ನಾನೊಬ್ಬ ಕೇವಲ ಸೆಕ್ಯೂರಿಟಿ ಗಾರ್ಡ್ ಆಗಿ ದೇಶವನ್ನು ಪಾಲನೆ ಮಾಡುತ್ತಿದ್ದೇನೆ. ನೀವುಗಳು ಜಿಲ್ಲಾಧಿಕಾರಿ ಕಚೇರಿ ಒಳಗೆ ತೆರಳಲು ಯತ್ನಿಸಬೇಕು ಎಂದರೆ ನನ್ನ ಶವದ ಮೇಲೆ ಹೋಗಬೇಕು ಎಂದು ನುಡಿದರು.
ಇದರಿಂದ ಕಕ್ಕಾಬಿಕ್ಕಿಯಾದ ಪ್ರತಿಭಟನಾಕಾರರು, ಪೊಲೀಸರ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ನಾವು ಜಿಲ್ಲಾಧಿಕಾರಿ ಕಚೇರಿಗೆ ತೆರಳಲು ಯತ್ನಿಸುವುದಿಲ್ಲ. ನೀವು ಜಿಲ್ಲಾಧಿಕಾರಿ ಕಚೇರಿ ಒಳಗೆ ಹೋಗಬೇಡಿ ಎಂದರೆ ನಾವು ಹೋಗುವುದಿಲ್ಲ ಎಂದು ಸಮಾಧಾನ ಪಡಿಸಿದರು.