ರಾಜಕೀಯಕ್ಕೆ ಬರುವಂತೆ ಒತ್ತಾಯ ಮಾಡಿ ನನಗೆ ನೋವುಂಟು ಮಾಡಬೇಡಿ : ರಜನೀಕಾಂತ್..!
ಅನಾರೋಗ್ಯಕ್ಕೆ ತುತ್ತಾಗಿದ್ದ ಬಳಿಕ ರಾಜಕೀಯದಿಂದ ಹಿಂದೆಸರಿಯುತ್ತಿರೋದಾಗಿ ಇತ್ತೀಚೆಗಷ್ಟೇ ಸೂಪರ್ ಸ್ಟಾರ್ ರಜನೀಕಾಂತ್ ಅವರು ಘೋಷಣೆ ಮಾಡಿದ್ದರು. ಆದ್ರೆ ಅವರು ರಾಜಕೀಯಕ್ಕೆ ಬರಲೇಬೇಕೆಂದು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳು, ಹಾಗೂ ಬಹಿರಂಗವಾಗಿ ಒತ್ತಾಯ ಮಾಡ್ತಾಯಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ತಲೈವಾ , ರಾಜಕೀಯಕ್ಕೆ ಬರುವಂತೆ ಒತ್ತಾಯ ಮಾಡುವ ಮೂಲಕ ನನಗೆ ನೋವುಂಟು ಮಾಡಬೇಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ನಿನ್ನೆ ಚೆನ್ನೈನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾವಣೆಗೊಂಡು ರಜನಿಕಾಂತ್ ರಾಜಕೀಯಕ್ಕೆ ಬರಲೇಬೇಕೆಂದು ಒತ್ತಾಯಿಸಿದ್ದರು. ಇದೇ ವಿಚಾರವಾಗಿ ಇಂದು ಮುಂಜಾನೆ ಟ್ವಿಟರ್ ನಲ್ಲಿ ಪತ್ರ ಬರೆದಿರುವ ರಜನಿಕಾಂತ್ ಅವರು, ದಯವಿಟ್ಟು ಈ ರೀತಿಯ ಪ್ರತಿಭಟನೆ, ಕೂಟ, ಸಭೆಗಳನ್ನು ಆಯೋಜಿಸಿ ಒತ್ತಡ ಹೇರಬೇಡಿ. ನನ್ನ ನಿರ್ಧಾರಕ್ಕೆ ವಿರುದ್ಧವಾಗಿ ಒತ್ತಾಯ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.
ಕೆಜಿಎಫ್ 2 ಟೀಸರ್ ನಲ್ಲಿ ಪವರ್ ಫುಲ್ ನಲ್ಲಿ ಲುಕ್ ನಲ್ಲಿ ಕಾಣಿಸಿಕೊಂಡ ಈ ನಟಿ ಯಾರು…? ಪಾತ್ರ ಯಾವುದು…?
ಈಗಾಗಲೇ ನಾನು ರಾಜಕೀಯದಿಂದ ನಿರ್ಗಮಿಸಲು ಇರುವಂತಹ ಕಾರಣಗಳನ್ನು ವಿವರಿಸಿದ್ದೇನೆ. ಅದರ ಹೊರತಾಗಿ ಮತ್ತೆ ನನ್ನನ್ನು ರಾಜಕೀಯಕ್ಕೆ ಬರಲೇಬೇಕೆಂದು ಒತ್ತಾಯಿಸಿ ಬಲವಂತ ಮಾಡುವುದು ನನಗೆ ನೋವುಂಟು ಮಾಡುತ್ತದೆ. ನಾಯಕತ್ವದ ನಿರ್ಧಾರವನ್ನು ಪ್ರಶ್ನಿಸಿ ಪ್ರತಿಭಟನೆ ಮಾಡುವುದು ನಾಯಕತ್ವಕ್ಕೆ ತೋರುವ ಅಗೌರವವಾಗುತ್ತದೆ. ದಯವಿಟ್ಟು ಆ ರೀತಿ ಮಾಡಬೇಡಿ ಎಂದು ಹೇಳಿದ್ದಾರೆ. ನನ್ನ ಕುರಿತಂತೆ ನಿನ್ನೆ ಪ್ರತಿಭಟನೆ ನಡೆಸಿದ ಎಲ್ಲರಿಗೂ ಕೃತಜ್ಞತೆಗಳು. ನೀವಿಟ್ಟ ಅಭಿಮಾನಕ್ಕೆ ನಾನು ಋಣಿ ಎಂದು ಟ್ವಿಟರ್ನಲ್ಲಿ ರಜನಿಕಾಂತ್ ತಿಳಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel