ನಿಮ್ಮಂತಹ ನಾಯಕನನ್ನು ಪಡೆದಿರುವುದಕ್ಕೆ ನಾವು ತುಂಬಾ ಅದೃಷ್ಟವಂತರು : ಕೊಹ್ಲಿ ಬಗ್ಗೆ ಎಬಿಡಿ ಮಾತು Virat Kohli saaksha tv
ಬೆಂಗಳೂರು : ಒಂದೂ ಬಾರಿಯೂ ಕಪ್ ಗೆಲ್ಲದೇ ಆರ್ ಸಿಬಿ ನಾಯಕತ್ವದಿಂದ ಕಿಂಗ್ ವಿರಾಟ್ ಕೊಹ್ಲಿ ಕೆಳಗಿಳಿದಿದ್ದಾರೆ.
14ನೇ ಆವೃತ್ತಿಯಲ್ಲಿ ಆರ್ ಸಿಬಿ ಅಂತಿಮ ನಾಲ್ಕರ ಹಂತ ಪ್ರವೇಶಿಸಿದ್ರೂ, ಎಲಿಮಿನೇಟರ್ ನಲ್ಲಿ ಕೆಕೆಆರ್ ವಿರುದ್ಧ ಸೋತು ಟೂರ್ನಿಯಿಂದ ಹೊರ ನಡೆದು ನಿರಾಸೆ ಅನುಭವಿಸಿತು. ಆ ಮೂಲಕ ವಿರಾಟ್ ಕಪ್ ಗೆಲ್ಲದೇ ನಾಯಕತ್ವದಿಂದ ಕೆಳಗಿಳಿದಂತಾಯಿತು.
ಇನ್ನು ವಿರಾಟ್ ಕೊಹ್ಲಿ ನಾಯಕತ್ವದ ಬಗ್ಗೆ ಆರ್ ಸಿಬಿ ಆಟಗಾರ ಎಬಿಡಿ ವಿಲಿಯರ್ಸ್ ಮಾತನಾಡಿದ್ದು, ಕಿಂಗ್ ಕೊಹ್ಲಿಯನ್ನು ಹಾಡಿಹೊಗಲಿದ್ದಾರೆ.
ವಿರಾಟ್ ನಾಯಕನಾಗಿದ್ದ ಎಲ್ಲ ವರ್ಷಗಳಲ್ಲೂ ನಾನು ತಂಡದಲ್ಲಿದ್ದೇನೆ. ಈ ಸಂದರ್ಭದಲ್ಲಿ ನನ್ನ ಮನಸ್ಸಿನಲ್ಲಿ ಬರುವ ಪದ ಕೃತಜ್ಞತೆಯಾಗಿದೆ ಎಂದು ನಾನು ಭಾವಿಸುತ್ತೇನೆ.
ನಿಮ್ಮಂತಹ ನಾಯಕನನ್ನು ಪಡೆದಿರುವುದಕ್ಕೆ ನಾವು ತುಂಬಾ ಅದೃಷ್ಟವಂತರು. ನೀವು ಈ ತಂಡವನ್ನು ಮುನ್ನಡೆಸಿದ ರೀತಿ ಪ್ರತಿಯೊಬ್ಬರಿಗೂ ಪ್ರೇರಣೆಯಾಗಿದೆ.
ವಿಶೇಷವಾಗಿ ನಾನೊಬ್ಬ ಉತ್ತಮ ಆಟಗಾರನಾಗಲು ಮತ್ತು ಒಬ್ಬ ವ್ಯಕ್ತಿಯಾಗಲೂ ನೀವು ನನಗೆ ಸ್ಫೂರ್ತಿಯಾಗಿದ್ದೀರಿ.
ನಿಮ್ಮ ಪ್ರಭಾವ ಹೇಗೆ ಬೀರಿದೆ ಎಂದರೆ ನಿಮ್ಮಿಂದ ಅದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಅದು ತುಂಬಾ ದೂರ ಸಾಗಿದೆ ಎಂದು ಭಾವುಕರಾಗಿ ನುಡಿದಿದ್ದಾರೆ.