ADVERTISEMENT
Saturday, June 20, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ವರಮಹಾಲಕ್ಷ್ಮಿ ಪೂಜಾ ಪರಂಪರೆ, ಹಿನ್ನೆಲೆ, ಮಹತ್ವ ಹಾಗೂ ಆಚಾರ ವಿಚಾರ

admin by admin
July 30, 2020
in Newsbeat, Saaksha Special, ಎಸ್ ಸ್ಪೆಷಲ್
Share on FacebookShare on TwitterShare on WhatsappShare on Telegram

ವರಮಹಾಲಕ್ಷ್ಮಿ ಪೂಜಾ ಪರಂಪರೆ, ಹಿನ್ನೆಲೆ, ಮಹತ್ವ ಹಾಗೂ ಆಚಾರ ವಿಚಾರ:

ವರಲಕ್ಷ್ಮಿ ಪೂಜೆ ಹೆಚ್ಚಾಗಿ ದಕ್ಷಿಣ ಭಾರತದಲ್ಲಿ ಶ್ರಾವಣ ಮಾಸದಲ್ಲಿ ಆಚರಿಸುವ ಹಬ್ಬವಾಗಿದ್ದು ತನ್ನದೇ ಆದ ಮಹತ್ವ ಹಾಗೂ ವೈಶಿಷ್ಟ್ಯವನ್ನು ಹೊಂದಿದೆ. ಇದು, ತಮ್ಮ ಕುಟುಂಬಗಳ ಏಳಿಗೆ ಮತ್ತು ಕಲ್ಯಾಣಕ್ಕಾಗಿ ವಿವಾಹಿತ ಮಹಿಳೆಯರು ಆಚರಿಸುವ ಒಂದು ಪ್ರಮುಖ ಆಚರಣೆಯಾಗಿದ್ದು, ಸಾಮಾನ್ಯವಾಗಿ ಶ್ರವಣ ಮಾಸದಲ್ಲಿ ಎರಡನೇ ಶುಕ್ರವಾರದಂದು ಪೂಜಾ ಕಾರ್ಯ ನಡೆಸಲಾಗುತ್ತದೆ.

Related posts

Basketball courts became makeshift pitches in mexico jail

ಫುಟ್‍ಬಾಲ್ ಸಾಮ್ರಾಜ್ಯದಲ್ಲಿ ಚೆಂಡು ಬ್ಯಾಟ್‍ನ ಸದ್ದು.. ಮೆಕ್ಸಿಕೊ ಜೈಲಿನ ಕೈದಿಗಳ ಮನಪರಿವರ್ತನೆಗೆ ಜಂಟಲ್‍ಮ್ಯಾನ್ ಆಟವೇ ಅಸ್ತ್ರ..!

June 19, 2026
ಫಿಫಾ ವಿಶ್ವಕಪ್‍ನಲ್ಲಿ ಆಡದಿದ್ರೂ ಜಗತ್ತನ್ನೇ ಆಡಿಸುತ್ತಿದೆ ಪಾಕಿಸ್ತಾನ..! ಏನಿದು ಸಿಯಾಲ್‍ಕೋಟ್ ರಹಸ್ಯ..?

ಫಿಫಾ ವಿಶ್ವಕಪ್‍ನಲ್ಲಿ ಆಡದಿದ್ರೂ ಜಗತ್ತನ್ನೇ ಆಡಿಸುತ್ತಿದೆ ಪಾಕಿಸ್ತಾನ..! ಏನಿದು ಸಿಯಾಲ್‍ಕೋಟ್ ರಹಸ್ಯ..?

June 19, 2026

ರಂಗೋಲಿ:- ಶುಕ್ರವಾರ ಬ್ರಾಹ್ಮೀ ಮುಹೂರ್ತದಲ್ಲಿ ಸ್ನಾನ ಮಾಡಿ, ಮನೆಯನ್ನು ಶುಚಿಗೊಳಿಸಿ, ಸಾಮಾನ್ಯವಾಗಿ ಅಷ್ಟದಳ ಪದ್ಮ ಅಥವಾ ಹೃದ್ರಾಯ ಕಮಲ ವಿನ್ಯಾಸ ರಂಗೋಲಿಗಳನ್ನು ಪೂಜೆಯ ಉದ್ದೇಶಿತ ಸ್ಥಳದಲ್ಲಿ ಚಿತ್ರಿಸಬೇಕು.

ಕಳಶ:- ಕಂಚಿನ ಅಥವಾ ಬೆಳ್ಳಿಯ ಪಾತ್ರೆಯನ್ನು ಶ್ರೀಗಂಧ, ಅರಿಶಿನ, ಕುಂಕುಮ, ಸುಣ್ಣ ಮತ್ತು ಕೆಂಪು ಮಣ್ಣಿನಿಂದ ಅಲಂಕಾರಗೊಳಿಸಲಾಗುವುದು. ಕಳಶಕ್ಕೆ ಕಚ್ಚಾ ಅಕ್ಕಿ, ನೀರು, ನಾಣ್ಯಗಳು, ಐದು ಬಗೆಯ ಎಲೆಗಳು (ಪಂಚ ಪತ್ರೆ), ಮತ್ತು ಒಣ ಫಲ ಪುಷ್ಪಗಳನ್ನೂ ಹಾಕಲಾಗುವುದು. ಕಳಶ ತುಂಬಲು ಬಳಸುವ ವಸ್ತುಗಳು ಪ್ರದೇಶದಿಂದ ಪ್ರದೇಶಕ್ಕೆ ಬದಲಾಗುತ್ತವೆ ಮತ್ತು ಅರಿಶಿನ, ಬಾಚಣಿಗೆ, ಕನ್ನಡಿ, ಸಣ್ಣ ಕಪ್ಪು ಅಥವಾ ಹಸಿರು ಬಳೆಗಳು ಮತ್ತು ಕಪ್ಪು ಮಣಿಗಳು ಮತ್ತು ಇತರ ಶುಭ ವಸ್ತುಗಳನ್ನು ಒಳಗೊಂಡಿದೆ.

ಕಳಶದ ಬಾಯಿಗೆ ಮಾವಿನ ಎಲೆಗಳನ್ನು ಇಟ್ಟು, ಅರಿಶಿಣ ಕುಂಕುಮ ಲೇಪಿಸಿದ ಶಿಖೆಯಿರುವ ತೆಂಗಿನಕಾಯಿಯನ್ನು ಕಳಶದ ತುದಿಗಿಟ್ಟು ಪ್ರಾಣ ಪ್ರತಿಷ್ಟಾಪಿಸಲಾಗುತ್ತದೆ. ಈ ತೆಂಗಿನಕಾಯಿಗೆ, ಅರಿಶಿಣ ಮತ್ತು ಕುಂಕುಮ, ಗಂಧ ಲೇಪಿಸಿ ಲಕ್ಷ್ಮಿಯ ಚಿತ್ರವನ್ನು ಚಿತ್ರಿಸುವ ಪದ್ಧತಿಯೂ ಕೆಲವೆಡೆ ಇದೆ. ಈಗ ಕಳಶ ಸಾಂಕೇತಿಕವಾಗಿ ವರಮಹಾಲಕ್ಷ್ಮಿ ದೇವಿಯ ಮೂರ್ತ ಸ್ವರೂಪವೆಂದು ಭಾವಿಸಲಾಗುತ್ತದೆ.

ಪದ್ಮ ಕಮಲದ ವಿನ್ಯಾಸವನ್ನು ರಚಿಸಿ ಅದರ ಮೇಲೆ ಮರದ ಸ್ಟ್ಯಾಂಡ್ ಅನ್ನು ಇಡಲಾಗುತ್ತದೆ. ಈ ಪೀಠದ ಮೇಲೆ ಒಂದು ಕಪ್ ಅಕ್ಕಿಯನ್ನು ಹರಡಿ ಅದರ ಮೇಲೆ ಕಳಶ ಪ್ರತಿಷ್ಠಾಪನೆ ಮಾಡಲಾಗುತ್ತದೆ.
ಯಾವುದೇ ಶುಭ ಕಾರ್ಯಕ್ರಮದಲ್ಲೂ ಅಗ್ರ ಪೂಜೆ ಗಣೇಶನಿಗೆ ಆದ ಕಾರಣ, ಬಲ ಮೂಲೆಯಲ್ಲಿ ಒಂದು ಸಣ್ಣ ಗಣೇಶ ಚಿತ್ರವನ್ನು ಇಡಲಾಗುವುದು ಅಥವಾ ಪ್ರಮಥ ಮೂರ್ತಿಯ ವಿಗ್ರಹವನ್ನು ಇಡಲಾಗುತ್ತದೆ. ಕೆಲವು ಕಡೆ ವೀಳ್ಯದ ಎಲೆಯ ಮೇಲೆ ಇಡಿ ಅಡಿಕೆ ಇಟ್ಟು ಗರಿಕೆ ಮುಡಿಸಲಾಗುತ್ತದೆ. ಅಡಿಕೆಯನ್ನು ಗಣೇಶ ಎಂದು ನಂಬುವ ಪರಂಪರೆಯೂ ನಮ್ಮಲ್ಲಿದೆ. ಬೆಲ್ಲ ಅಥವಾ ಬಾಳೆಹಣ್ಣಿನ ತುಂಡನ್ನು ಗಣಪತಿಯ ಮುಂದೆ ನೈವೇದ್ಯಕ್ಕಾಗಿ ಇಡಲಾಗುತ್ತದೆ. ಲಕ್ಷ್ಮಿ ನಾರಾಯಣರ ಚಿತ್ರವನ್ನು ಕಳಶದ ಮುಂದೆ ಇಟ್ಟು ಪೂಜಿಸುವ ಆಚರಣೆಯೂ ಕೆಲವೆಡೆ ಇದೆ.

ಈ ವಸ್ತುಗಳು ವರಮಹಾಲಕ್ಷ್ಮಿ ಪೂಜೆಗೆ ಅಗತ್ಯವಾಗಿ ಲಭ್ಯವಿರಲೇಬೇಕು:

ಅರಿಶಿನ ಪುಡಿ, ಕುಂಕುಮ, ಶ್ರೀಗಂಧ ಅಥವಾ ಚೆಂದನ, ಮಂತ್ರಾಕ್ಷತೆ-ಅರಿಶಿಣ ಅಥವಾ ಕುಂಕುಮ ಲೇಪಿತ ಅಕ್ಷತೆ, ಬಗೆ ಬಗೆಯ ಫಲ ಪುಷ್ಪ, ತಾಂಬೂಲಗಳು, ಹತ್ತಿಯ ಗೆಜ್ಜೇವಸ್ತ್ರ, ದೈವಿಕ ಉಡುಪಾಗಿ ಹತ್ತಿಯ ಬಣ್ಣದಿಂದ ಮಾಡಿದ ಕುಂಕುಮ ಲೇಪಿತ ಮಾಲೆ, ಆಭರಣಗಳನ್ನು ಅರ್ಪಿಸಬಹುದು. ನಿಮ್ಮ ಅನುಕೂಲಕ್ಕೆ ತಕ್ಕಂತೆ ಕಳಶಕ್ಕೊಂದು ಮಂಗಳಸೂತ್ರವನ್ನು ಹಾಕಬಹುದು. ಅರಿಶಿಣದ ನೀರಿನಲ್ಲಿ ಅದ್ದಿದ ಒಂಬತ್ತು ಗಂಟುಗಳನ್ನು ಹೊಂದಿರುವ ಒಂಬತ್ತು ಸಾಲಿನ ದಾರ, ಅಡಿಕೆ ಮತ್ತು ವೀಳ್ಯದ ಎಲೆಗಳು,
ಪೂಜೆಗೆ ಅಗತ್ಯವಿದ್ದಷ್ಟು ಶುದ್ಧ ನೀರು, ಆರತಿ, ಕರ್ಪೂರ, ಧೂಪದ್ರವ್ಯ ವಸ್ತುಗಳು, ಪಂಚಾಮೃತಕ್ಕೆ ಹಾಲು, ಮೊಸರು, ತುಪ್ಪ, ಜೇನುತುಪ್ಪ, ಸಕ್ಕರೆ, ಹಣ್ಣುಗಳು, ನೈವೇದ್ಯಕ್ಕೆ ಭಕ್ಷ್ಯಗಳು. ಇವಿಷ್ಟೂ ವರಮಹಾಲಕ್ಷ್ಮಿ ಉಪಾಸನೆಗೆ ಅಗತ್ಯವಿರುವ ಪೂಜಾ ಪರಿಕರಗಳು.

ಮೊದಲು ವಿಘ್ನವಿನಾಶಕ ಮಂಗಳ ಮೂರ್ತಿ ಗಣೇಶ ಪೂಜೆಯೊಂದಿಗೆ ಪೂಜೆಯನ್ನು ಪ್ರಾರಂಭಿಸಬೇಕು.
ನಿಮ್ಮ ಅನುಕೂಲಕ್ಕೆ ತಕ್ಕಂತೆ ಪೂಜೆ ಮಾಡಬಹುದು, ಮನಸು ಶುದ್ಧವಾಗಿರಲಿ. ಸಕಲ ಫಲ ಪುಷ್ಪ ತಾಂಬೂಲ, ಪಂಚಾಮೃತವನ್ನು ದೇವರಿಗೆ ಅರ್ಪಿಸಿ ಅಂತಿಮವಾಗಿ ಮಂಗಳಾರತಿ ಮಾಡಿ ಮತ್ತು ಈ ಪೂಜೆಯನ್ನು ಆಚರಿಸುವ ಹಿಂದಿನ ವರಮಹಲಕ್ಷ್ಮಿ ಪೌರಾಣಿಕ ಕಥೆಯ ಹಿನ್ನೆಲೆಯನ್ನು ಪಾರಾಯಣ ಮಾಡಬಹುದು. ಪವಿತ್ರ ದಾರವನ್ನು ಪೂಜೆ ಮಾಡಿದ ಮಹಿಳೆಯರ ಬಲ ಮಣಿಕಟ್ಟಿನಲ್ಲಿ ಕಟ್ಟಬೇಕು. ಈ ದಾರವನ್ನು ಧರಿಸುವಾಗ ಆಕೆ ತನ್ನ ಕೈಯಲ್ಲಿ ಕುಂಕುಮ ಅಥವಾ ಹಣ್ಣನ್ನು ಬಲಗೈಯಲ್ಲಿ ಹಿಡಿದಿರಬೇಕು.

ಸಂಜೆ ಸಮಯದಲ್ಲಿ ಆರತಿ ಮಾಡಿ. ಮಹಾಲಕ್ಷ್ಮಿ ದೇವಿಯನ್ನು ಸ್ತುತಿಸಿ, ಶ್ಲೋಕಗಳನ್ನು ಪಠಿಸಿ, ಲಲಿತಾ ಸಹಸ್ರನಾಮ, ಭಕ್ತಿಗೀತೆಗಳನ್ನು ಹಾಡುವ ಕ್ರಮವೂ ಇದೆ. ವಿವಾಹಿತ ಮಹಿಳೆಯರನ್ನು ಮನೆಗೆ ಆಹ್ವಾನಿಸಿ ಮತ್ತು ಅವರಿಗೆ ಅರಸಿನ ಕುಂಕುಮ ನೀಡಿ ಸತ್ಕರಿಸಬೇಕು.

ಮರುದಿನ, ಅಂದರೆ ಶನಿವಾರ, ಸ್ನಾನ ಮಾಡಿದ ನಂತರ ಕಳಶವನ್ನು ನಿಧಾನವಾಗಿ ತೆಗೆದು ಕಳಶದ ಪವಿತ್ರ ನೀರನ್ನು ಮನೆಯಲ್ಲಿ ಪ್ರೋಕ್ಷಣೆ ಮಾಡಿ, ಪೂಜೆಗೆ ಬಳಸಿದ ಅಕ್ಕಿಯನ್ನು ಕುಟುಂಬ ಸದಸ್ಯರು ಮಾತ್ರ ಸೇವಿಸುವ, ಸಿಹಿ ಖಾದ್ಯವನ್ನು ತಯಾರಿಸಲು ಬಳಸಬೇಕಾಗುತ್ತದೆ.

ಕೊರೋನದ ಈ ಸಮಯದಲ್ಲಿ ನಾವು ಮಾಡುವ ಪೂಜೆ ಇತಿ ಮಿತಿಯಲ್ಲಿ ಇರಲಿ. ಆದಷ್ಟು ಹೊರಗಿನ ಅಥಿತಿಗಳು ಎಷ್ಟೇ ಹತ್ತಿರದವರಾದರು ಸಾಮಾಜಿಕ ಅಂತರ ಕಾಯ್ದುಕೊಳ್ಳೋಣ. ಆಡಂಬರದ ಹತ್ತು ಹಲವು ಬಗೆಯ ಖಾದ್ಯ, ಫಲ ಪುಷ್ಪಗಳನ್ನು ಕಡಿಮೆ ಮಾಡಿ ಇತಿ ಮಿತಿಯಲ್ಲಿ ಶ್ರಾವಣ ಮಾಸದ ಮಹಾಲಕ್ಷ್ಮಿ ಪೂಜೆಯನ್ನು ಮಾಡುವಾಗ , ಶ್ರದ್ಧೆ ಭಕ್ತಿ ಇರಲಿ.

Tags: bengaluruhinduhindu festhindu goddesskarnatakaLord Vishnumonth of Shravan.varalakshmi festival
ShareTweetSendShare
Join us on:

Related Posts

Basketball courts became makeshift pitches in mexico jail

ಫುಟ್‍ಬಾಲ್ ಸಾಮ್ರಾಜ್ಯದಲ್ಲಿ ಚೆಂಡು ಬ್ಯಾಟ್‍ನ ಸದ್ದು.. ಮೆಕ್ಸಿಕೊ ಜೈಲಿನ ಕೈದಿಗಳ ಮನಪರಿವರ್ತನೆಗೆ ಜಂಟಲ್‍ಮ್ಯಾನ್ ಆಟವೇ ಅಸ್ತ್ರ..!

by admin
June 19, 2026
0

ಭಾರತದಲ್ಲಿ ಕ್ರಿಕೆಟ್ ಹೇಗೆ ಧರ್ಮವಾಗಿದೆಯೋ ಹಾಗೇ ಆ ರಾಷ್ಟ್ರದಲ್ಲೂ ಫುಟ್‍ಬಾಲ್ ಆಟ ಧರ್ಮವಾಗಿದೆ. ಭಾರತದ ಗಲ್ಲಿ ಗಲ್ಲಿಗಳಲ್ಲಿ ಕ್ರಿಕೆಟ್ ಆಡುವ ರೀತಿಯಲ್ಲೇ ಆ ದೇಶದ ಗಲ್ಲಿ ಗಲ್ಲಿಗಳಲ್ಲೂ...

ಫಿಫಾ ವಿಶ್ವಕಪ್‍ನಲ್ಲಿ ಆಡದಿದ್ರೂ ಜಗತ್ತನ್ನೇ ಆಡಿಸುತ್ತಿದೆ ಪಾಕಿಸ್ತಾನ..! ಏನಿದು ಸಿಯಾಲ್‍ಕೋಟ್ ರಹಸ್ಯ..?

ಫಿಫಾ ವಿಶ್ವಕಪ್‍ನಲ್ಲಿ ಆಡದಿದ್ರೂ ಜಗತ್ತನ್ನೇ ಆಡಿಸುತ್ತಿದೆ ಪಾಕಿಸ್ತಾನ..! ಏನಿದು ಸಿಯಾಲ್‍ಕೋಟ್ ರಹಸ್ಯ..?

by admin
June 19, 2026
0

ಇದೆಂಥಾ ವಿಪರ್ಯಾಸ ನೋಡಿ...! ಭಾರತದಂತೆ ಈ ದೇಶದಲ್ಲೂ ಫುಟ್‍ಬಾಲ್ ಕ್ರೇಝ್ ಇದ್ರೂ ಅಪ್ರತಿಮ ಅಟಗಾರರನ್ನು ತಯಾರು ಮಾಡಲು ಆಗ್ತಿಲ್ಲ. ಹೀಗಾಗಿ ಅವರು ಕೂಡ ಫಿಫಾ ವಿಶ್ವಕಪ್‍ನಲ್ಲಿ ಅರ್ಹತೆ...

ತಮಿಳುನಾಡು ರೈತರಿಗೂ ಸಿಹಿ ಸುದ್ದಿ ಕೊಟ್ಟರಾ ಡಿ ಕೆ ಶಿವಕುಮಾರ್ :ದಕ್ಷಿಣ ಭಾರತದ ಹೃದಯದಂತಿರುವ ಮೇಕೆದಾಟು ಯೋಜನೆ ಬಗ್ಗೆ ಕನ್ನಡಿಗರು ಮತ್ತು ತಮಿಳುನಾಡಿನವರು ತಿಳಿಯಲೇಬೇಕಾದ ಸತ್ಯವಿದು

ತಮಿಳುನಾಡು ರೈತರಿಗೂ ಸಿಹಿ ಸುದ್ದಿ ಕೊಟ್ಟರಾ ಡಿ ಕೆ ಶಿವಕುಮಾರ್ :ದಕ್ಷಿಣ ಭಾರತದ ಹೃದಯದಂತಿರುವ ಮೇಕೆದಾಟು ಯೋಜನೆ ಬಗ್ಗೆ ಕನ್ನಡಿಗರು ಮತ್ತು ತಮಿಳುನಾಡಿನವರು ತಿಳಿಯಲೇಬೇಕಾದ ಸತ್ಯವಿದು

by Shwetha
June 19, 2026
0

ಮೇಕೆದಾಟು ಯೋಜನೆ ಕೇವಲ ಕರ್ನಾಟಕಕ್ಕೆ ಸೀಮಿತವಲ್ಲ, ಇದು ಇಡೀ ದಕ್ಷಿಣ ಭಾರತದ ಪಾಲಿನ ಅತ್ಯಂತ ಮಹತ್ವದ ಮತ್ತು ಆಯಕಟ್ಟಿನ ಯೋಜನೆಯಾಗಿದೆ. ಈ ಯೋಜನೆಯ ಮೂಲಕ ನಾವು ನೆರೆ...

ಜೂನ್ 23ಕ್ಕೆ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ; ರೈತರ ವಾಹನಗಳಿಗೆ ಟೋಲ್ ವಿನಾಯಿತಿ ಆಗ್ರಹ

ಜೂನ್ 23ಕ್ಕೆ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ; ರೈತರ ವಾಹನಗಳಿಗೆ ಟೋಲ್ ವಿನಾಯಿತಿ ಆಗ್ರಹ

by Shwetha
June 19, 2026
0

ರೈತರ ವಾಹನಗಳ ಮೇಲೆ ಟೋಲ್ ಸಂಗ್ರಹಿಸುವುದನ್ನು ವಿರೋಧಿಸಿ ಹಾಗೂ ಕೃಷಿ ವಾಹನಗಳಿಗೆ ಟೋಲ್ ಸುಂಕದಿಂದ ಸಂಪೂರ್ಣ ವಿನಾಯಿತಿ ನೀಡಬೇಕೆಂದು ಒತ್ತಾಯಿಸಿ, ಕರ್ನಾಟಕ ರಾಜ್ಯ ರೈತ ಸಂಘ ಜೂನ್...

ಗೃಹಲಕ್ಷ್ಮಿಯರಿಗೆ ಬಯೋಮೆಟ್ರಿಕ್ ಕಡ್ಡಾಯ? ಇಲ್ಲದಿದ್ದರೆ ₹2,000 ಜಮೆಯಾಗದ ಸಾಧ್ಯತೆ

ಗೃಹಲಕ್ಷ್ಮಿ ಅರ್ಜಿ ನಮೂನೆಯಲ್ಲಿ ಬದಲಾವಣೆ; ಹೆಚ್ಚುವರಿ ಮಾಹಿತಿಗೆ ಸರ್ಕಾರ ಸಿದ್ಧತೆ

by Shwetha
June 19, 2026
0

ರಾಜ್ಯದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಯಲ್ಲಿ ಪಾರದರ್ಶಕತೆ ಹೆಚ್ಚಿಸಲು ಸರ್ಕಾರ ಅರ್ಜಿ ನಮೂನೆಯಲ್ಲಿ ಮತ್ತಷ್ಟು ಬದಲಾವಣೆಗಳನ್ನು ತರಲು ಮುಂದಾಗಿದೆ. ಪ್ರಸ್ತುತ ಅರ್ಜಿ ನಮೂನೆಯಲ್ಲಿ ಫಲಾನುಭವಿಯ ಹೆಸರು, ವಿಳಾಸ, ಆಧಾರ್...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram