ಸರ್ಕಾರಕ್ಕೆ ಪಂಗನಾಮ ಹಾಕಿ, ಕೋಟಿ ಕೋಟಿ ಹಣ ಲೂಟಿ ಮಾಡಿದ ಕೋಲಾರದ PDO ಗಳು RTI ನಲ್ಲಿ ಬಹಿರಂಗ..!
ಕೋಲಾರ : ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ನೆಲವೆಂಕಿ ಗ್ರಾಪಂನಲ್ಲಿ ನರೇಗಾ ಯೋಜನೆ ಅಡಿಯಲ್ಲಿ ಆಗಿರುವ ಅವ್ಯವಹಾರದಲ್ಲಿ ಬಾಗಿಯಾಗಿರುವ ಅಧಿಕಾರಿಗಳ ಅಮಾನತು ಗೊಳಿಸಬೇಕು ಎಂದು ಜಿಲ್ಲಾ ಮಟ್ಟದ ಜಾಗೃತಿ ಮತ್ತು ಮೇಲ್ವಿಚಾರಣೆ ಸಮಿತಿ ಸದಸ್ಯ ಎನ್. ನಾರಾಯಣಸ್ವಾಮಿ ಆರೋಪಿಸಿದರು.
ಇಲ್ಲಿನ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಹಗರಣಕ್ಕೆ ಸಂಬಂಧಪಟ್ಟನಂತೆ ಎಸಿಬಿ ಸಂಸ್ಥೆ ಯ ಡಿವೈಎಸ್ಪಿ ಅವರಿಗೆ ಕಳೆದ ಫೆ. 10 ರಂದು ದೂರನ್ನು ನೀಡಲಾಗಿರುವ ಜತೆಗೆ ಇತ್ತೀಚಿಗೆ ಜಿಲ್ಲಾ ಸತ್ರ ನ್ಯಾಯಾಲಯ ಹಾಗೂ ವಿಶೇಷ ಸತ್ರ ನ್ಯಾಯಾಲಯಕ್ಕೆ ತ್ವರಿತ ಗತಿಯಲ್ಲಿ ವಿಚಾರಣೆ ನಡೆಸಲು ಅರ್ಜಿ ಸಲ್ಲಸಲಾಗಿದ್ದು, ನ್ಯಾಯಾಲಯವು ಎಸಿಬಿ ಸಂಸ್ಥೆಗೆ ಆದೇಶ ನೀಡಿ ಎರಡು ತಿಂಗಳಲ್ಲಿ ವರದಿನೀಡಲು ಸೂಚಿಸಿರುವ ಮೂಲಕ ಒಂದು ಕೋಟಿ 49 ಲಕ್ಷದ 86 ಸಾವಿರದ 495 ರೂಗಳ ಅವ್ಯವಾಹಕ್ಕೆ ಸಂಬಂಧಿಸಿದಂತೆ ನೆಲವಂಕಿ ಗ್ರಾಮ ಪಂಚಾಯತ್ ಪಿಡಿಒ ಪಿವಿ ವಿಶ್ವನಾಥರೆಡ್ಡಿ, ಅಧ್ಯಕ್ಷೆ ಬಿ. ಎನ್. ಪ್ರಮೀಳಾ, ಶ್ರೀನಿವಾಸಪುರ ತಾಪಂ ಇಒ ಎಸ್.ಆನಂದ್, ಕಿರಿಯ ಅಭಿಯಂತರ ನಾಗರಾಜ, ಸಹಾಯಕ ಕಾರ್ಯಪಾಲಕ ಅಭಿಯಂತರ ವಿ ಚಂದ್ರಶೇಖರ್, ಜಿಪಂ ಒಂಬುಡ್ಸ್ಮನ್ ಡಾಕ್ಟರ್ ಶ್ರೀರಾಮಯ್ಯ, ನಿವೃತ್ತ ಜಿಪಂ ಉಪ ಕಾರ್ಯದರ್ಶಿ ಲಕ್ಷ್ಮೀನಾರಾಯಣ, ಜಿಪಂ ಉಪಕಾರ್ಯದರ್ಶಿ ಸಂಜೀವಪ್ಪ, ಜಿಪಂ ಅಧೀಕ್ಷಕ ಪರಮೇಶ್ವರಯ್ಯ, ಜಿಪಂ ಸೇವೆಗಳಾದ ಎಂ. ಎನ್. ಪನಾಲಿ, ಜಿ ಜಗದೀಶ್, ಎಚ್ ವಿ. ದರ್ಶನ್ ಎಸಿಬಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ ಎಂದು ತಿಳಿಸಿದರು.
ನರೇಗಾ ಯೋಜನೆ ಅಡಿಯಲ್ಲಿ 2015 16 ನೇ ಸಾಲಿನಲ್ಲಿ ಸರಬರಾಜು ಮಾಡಿರುವ ಬಿಲ್ಲಿನ ಮಟ್ಟಕ್ಕೆ ಅಳತೆ ಪುಸ್ತಕದಲ್ಲಿ ದಾಖಲು ಮಾಡಿಕೊಂಡಿರುವ ಮತ್ತು ತಾಳೆ ಇರುವುದಿಲ್ಲ, ಪಿಡಿಒ ವಿಶ್ವನಾಥರೆಡ್ಡಿ ತಮ್ಮ ಪುತ್ರ ಸಂದೀಪ್ ಹೆಸರಿಗೆ 38 ಲಕ್ಷದ 87, 519 ರೂಗಳನ್ನು ಖಾತೆಗೆ ಅಕ್ರಮವಾಗಿ ಜಮಾ ಮಾಡಿಕೊಂಡಿರುತ್ತಾರೆ ಎಂದು ಆರೋಪಿಸಿದರು.