ಕರಾವಳಿಯ ಬಿಸುಪರ್ಬ ಆಚರಣೆ ಮತ್ತು ಮಹತ್ವ
ದೇಶದ ವಿವಿಧ ಪ್ರದೇಶಗಳು ನಿರ್ದಿಷ್ಟ ಹಬ್ಬವನ್ನು ಹೊಂದಿದ್ದು ಅದು ಹೊಸ ವರ್ಷದ ಆರಂಭವನ್ನು ಸೂಚಿಸುತ್ತದೆ. ಯುಗಾದಿ ಕರ್ನಾಟಕದ ಹೊಸ ವರ್ಷದ ಹಬ್ಬವಾದರೆ, ಬಿಸು ಹಬ್ಬ ಕರ್ನಾಟಕದ ಕರಾವಳಿಯಲ್ಲಿ ಹೊಸ ವರ್ಷದ ದಿನವಾಗಿದೆ. ಇದರಲ್ಲಿ ಮಂಗಳೂರು, ಉಡುಪಿ, ಕಾಸರಗೋಡು ಜಿಲ್ಲೆಗಳು ಸೇರಿವೆ. ಈ ದಿನವು ಸೌರಮಾನದ ಹೊಸ ವರ್ಷವನ್ನು ಸೂಚಿಸುತ್ತದೆ. ಇದನ್ನು ತುಳುವಿನಲ್ಲಿ ಬಿಸು ಪರ್ಬ ಎಂದು ಕರೆಯಲಾಗುತ್ತದೆ.
ಕರ್ನಾಟಕದಲ್ಲಿ ಚಂದ್ರನ ಚಲನೆಯನ್ನು ಆಧರಿಸಿ, ಚಂದ್ರಮಾನ ಯುಗಾದಿ ಆಚರಿಸಿದರೆ, ತುಳುನಾಡಿನಲ್ಲಿ ಸೂರ್ಯನ ಚಲನೆಯನ್ನು ಆಧರಿಸಿ ಸೌರಮಾನ ಯುಗಾದಿಯನ್ನು ಆಚರಿಸುತ್ತಾರೆ.
ಹೊಸ ವರ್ಷದ ಬಿತ್ತನೆ ಬಿಸುನಿಂದ ಪ್ರಾರಂಭವಾಗುತ್ತದೆ. ಬಿಸು ಪರ್ಬದಲ್ಲಿ, ಸುಗ್ಗಿಯನ್ನು ತಾವು ನಂಬಿರುವ ದೈವ ದೇವರುಗಳಿಗೆ ಭಕ್ತಿಯಿಂದ ಅರ್ಪಿಸಲಾಗುತ್ತದೆ ಮತ್ತು ಇದನ್ನು ಕೃಷಿಕರ ಮನೆಗಳಲ್ಲಿ ಪೂಜಿಸಲಾಗುತ್ತದೆ. ಇದನ್ನು “ಬಿಸು ಕಣಿ” ಎಂದು ಕರೆಯಲಾಗುತ್ತದೆ.
ತುಳುವರು ಬಿಸು ಪರ್ಬದಂದು ಕುಟುಂಬದ ಮನೆಗೆ ಅಥವಾ ಪೂರ್ವಜರ ಮನೆಗಳಿಗೆ ಅಥವಾ ಸುಗ್ಗಿಯನ್ನು ಪೂಜಿಸುವ ದೇವಾಲಯಗಳಿಗೆ ಭೇಟಿ ನೀಡುತ್ತಾರೆ. ಬಿಸು ಕಣಿಗೆ ಕೈ ಮುಗಿದು, ಪ್ರಾರ್ಥನೆ ಸಲ್ಲಿಸಿ, ಹಿರಿಯರಿಂದ ಆಶೀರ್ವಾದ ಪಡೆಯುತ್ತಾರೆ. ಪರವೂರಿನಲ್ಲಿ ಇರುವ ಕುಟುಂಬ ಸದಸ್ಯರು ಕೂಡ ಈ ದಿನ ಹಾಜರಿದ್ದು ಬಿಸು ಕಣಿಗೆ ಪ್ರಾರ್ಥನೆ ಸಲ್ಲಿಸಿ ಹಿರಿಯರ ಆಶೀರ್ವಾದ ಪಡೆಯುವ ಕ್ರಮ ತುಳುನಾಡಿನಲ್ಲಿ ಇಂದಿಗೂ ಚಾಲ್ತಿಯಲ್ಲಿದೆ.
ಕೃಷಿಯೇ ಪ್ರಧಾನವಾಗಿರುವ ತುಳುನಾಡಿನಲ್ಲಿ ಹೊಸ ಬೆಳೆಯನ್ನು ಸಾಂಕೇತಿಕವಾಗಿ ಬಿತ್ತನೆ ಮಾಡಿದ ನಂತರ ತುಳುವರು ತಮ್ಮ ಸಂಬಂಧಿಕರ ಮನೆಗಳಿಗೆ ಭೇಟಿ ನೀಡುತ್ತಾರೆ.
ಬಿಸು ಪರ್ಬದ ದಿನದಂದು ತುಳುನಾಡಿನಲ್ಲಿ ಬೆಳಗಿನ ಉಪಹಾರವು ಮೂಡೆ ಅಥವಾ ಕೊಟ್ಟೆ ಅಥವಾ ಉದ್ದಿನ ದೋಸೆಯನ್ನು ಒಳಗೊಂಡಿರುತ್ತದೆ. ಮಧ್ಯಾಹ್ನದ ಊಟಕ್ಕೆ ಮನೆಯ ತೋಟದಲ್ಲಿ ಬೆಳೆದ ತರಕಾರಿಗಳಿಂದ ತಯಾರಿಸಿದ ಸಿಹಿಯೂಟ. ಸಾಂಬಾರ್, ಪಲ್ಯ, ಕುಚಿಲಕ್ಕಿ ಅನ್ನದ ಜೊತೆಗೆ ಎಳೆಗೋಡಂಬಿ ಹಾಕಿ ತಯಾರಿಸಿದ ರುಚಿಕರವಾದ ಪಾಯಸದ ಹಬ್ಬದೂಟ.
ತುಳುನಾಡು ಹಲವು ವೈವಿಧ್ಯ ವೈಶಿಷ್ಟ್ಯಗಳ ಸಂಗಮವಾಗಿದ್ದು, ಇಲ್ಲಿನ ಹಬ್ಬ ಹರಿದಿನಗಳು, ಆಚರಣೆಗಳು, ಧಾರ್ಮಿಕ ವಿಧಿ ವಿಧಾನಗಳು ತುಳುವರ ಬದುಕಿನ ಅವಿಭಾಜ್ಯ ಅಂಗವಾಗಿದೆ. ಯಾವುದೇ ಹಬ್ಬದ ಆಚರಣೆಯಲ್ಲಿ ತುಳುನಾಡಿನ ಜನರು ತಮ್ಮನ್ನು ಇತರರಿಗಿಂತ ಭಿನ್ನವಾಗಿ ತೊಡಗಿಸಿಕೊಳ್ಳುತ್ತಾರೆ. ಅದರಲ್ಲಿ ಆಧುನಿಕತೆಯ ಆಡಂಬರ ಒಂದಿಷ್ಟು ಇರದೇ, ತುಳು ಮಣ್ಣಿನ ಸರಳ ಸುಂದರ ಸಂಸ್ಕೃತಿಯನ್ನು ಕಾಣಬಹುದಾಗಿದೆ.
ಮಧುಮೇಹದಿಂದ ಅಜೀರ್ಣದವರೆಗೆ ಖಾಲಿ ಹೊಟ್ಟೆಯಲ್ಲಿ ಶುಂಠಿ ನೀರು ಕುಡಿಯುವುದರ ಪ್ರಯೋಜನಗಳು#Saakshatv #healthtips #gingerwater https://t.co/P464W2TPr7
— Saaksha TV (@SaakshaTv) April 11, 2021
ಎಲ್ಐಸಿಯ ಹೊಸ ಯೋಜನೆಯಲ್ಲಿ ಹೂಡಿಕೆ ಮಾಡಿ, ಪ್ರತಿ ತಿಂಗಳು 8000 ರೂಪಾಯಿ ಪಿಂಚಣಿ ಪಡೆಯಿರಿ#lic-new-scheme #pensionplan https://t.co/RGN4GIPoq0
— Saaksha TV (@SaakshaTv) April 11, 2021
ಇನ್'ಸ್ಟಂಟ್ (instant) ಸಬ್ಬಕ್ಕಿ /ಸಾಬುದಾನ /ಸಾಗು ಇಡ್ಲಿ#Saakshatv #cookingrecipe #instantsabbakkiidli https://t.co/3pXy3Pe84Z
— Saaksha TV (@SaakshaTv) April 11, 2021
ಇಂದಿರಾನಗರದ ಗೂಂಡಾ ಜೊತೆ ಇಂದಿರಾನಗರದ ಗೂಂಡಿ#rahuldravid #deepikapadukone #Indiranagar https://t.co/UXIjMyNhn1
— Saaksha TV (@SaakshaTv) April 11, 2021
#Saakshatv #Tulunaadu #bisuparba #bisu