ADVERTISEMENT
Saturday, January 17, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಸಚಿನ್ ಬದುಕಿನ ಆ ಎರಡು ವಿಷಾದಗಳು..! ಅದಕ್ಕೆ ಕಾರಣ ಗವಾಸ್ಕರ್ ಮತ್ತು ವಿವಿಯನ್ ರಿಚರ್ಡಸನ್..!

admin by admin
June 1, 2021
in Newsbeat, Sports, ಕ್ರೀಡೆ
sachin tendulkar saakshatv team india
Share on FacebookShare on TwitterShare on WhatsappShare on Telegram

ಸಚಿನ್ ಬದುಕಿನ ಆ ಎರಡು ವಿಷಾದಗಳು..! ಅದಕ್ಕೆ ಕಾರಣ ಗವಾಸ್ಕರ್ ಮತ್ತು ವಿವಿಯನ್ ರಿಚರ್ಡಸನ್..!

sachin tendulkar saakshatv team indiaಅದು 24 ವರ್ಷಗಳ ಸುದೀರ್ಘ ಕ್ರಿಕೆಟ್ ಬದುಕು.. 200 ಟೆಸ್ಟ್ ಪಂದ್ಯ… 463 ಏಕದಿನ ಪಂದ್ಯ … ಟೆಸ್ಟ್ ಕ್ರಿಕೆಟ್ ನಲ್ಲಿ 15921 ರನ್… ಏಕದಿನ ಕ್ರಿಕೆಟ್ ನಲ್ಲಿ 18426 ರನ್… 51 ಟೆಸ್ಟ್ ಶತಕಗಳು.. 49 ಏಕದಿನ ಶತಕಗಳು… ಒಂದು ವಿಶ್ವಕಪ್ ಕಿರೀಟ.. ನಂಬರ್ ವನ್ ಟೆಸ್ಟ್ ತಂಡದ ಆಟಗಾರ… ಕ್ರಿಕೆಟ್ ಜಗತ್ತಿನ ಹಲವು ದಾಖಲೆಗಳ ಒಡೆಯ.. ಮೈದಾನದಲ್ಲಿ ಮಂತ್ರಘೋಷದಂತೆ ಮೊಳಗುವ ಮೂರಕ್ಷರದ ದೇವರು… ಅಭಿಮಾನಿಗಳ ಎವರ್ ಗ್ರೀನ್ ಹೀರೋ… ಕಿಂಗ್ ಆಫ್ ಕ್ರಿಕೆಟ್.. ಗಾಡ್ ಆಫ್ ಕ್ರಿಕೆಟ್.. ಹೀಗೆ ಹಲವು ಗೌರವ, ದಾಖಲೆಗಳನ್ನು ಬರೆದ ಕ್ರಿಕೆಟ್ ಜಗತ್ತಿನ ಕ್ರಿಕೆಟ್ ಬ್ರಹ್ಮ.. ನಮ್ಮ ಹೆಮ್ಮೆಯ ಭಾರತ ರತ್ನ ಸಚಿನ್ ತೆಂಡುಲ್ಕರ್.
ನಾವು ಅಂದುಕೊಳ್ಳಬಹುದು.. ಸಚಿನ್ ತೆಂಡುಲ್ಕರ್ ಅವರದ್ದು ಪರಿಪೂರ್ಣ ಕ್ರಿಕೆಟ್ ಬದುಕು ಅಂತ. ಆದ್ರೆ ಸಚಿನ್ ಪರಿಪೂರ್ಣ ಕ್ರಿಕೆಟಿಗನಲ್ಲ. ವರ್ಣರಂಚಿತ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ರೂ ಸಚಿನ್ ತೆಂಡುಲ್ಕರ್ ಗೆ ಇನ್ನೂ ಕ್ರಿಕೆಟ್ ಮೇಲಿನ ಪ್ರೀತಿ ಕಡಿಮೆಯಾಗಿಲ್ಲ. ಕ್ರಿಕೆಟ್ ನಲ್ಲಿ ಇನ್ನೂ ಕಲಿಯುತ್ತಿರುವ ಹುಡುಗ ಅಂತನೇ ಭಾವಿಸುತ್ತಿದ್ದಾರೆ.
ವಯಸ್ಸು 40 ಆಗಿದ್ರೂ ಇನ್ನೂ ಕ್ರಿಕೆಟ್ ಆಡಬೇಕು ಅನ್ನೋ ಹಂಬಲ ತುಡಿತ ತೆಂಡುಲ್ಕರ್ ನಲ್ಲಿತ್ತು. ಒಲ್ಲದ ಮನಸ್ಸಿನಿಂದಲೇ ಬಲವಂತವಾಗಿ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ರು. ವಿದಾಯದ ಬಳಿಕ ಕುಟುಂಬದ ಜೊತೆ ಹೆಚ್ಚು ಸಮಯ ಕಾಲ ಕಳೆಯುತ್ತಿರುವ ಆಗಾಗ ಕೈಯಲ್ಲಿ ಬ್ಯಾಟ್ ಹಿಡಿದು ಕ್ರಿಕೆಟ್ ಆಡುತ್ತಿದ್ದಾರೆ. ಯುವ ಕ್ರಿಕೆಟಿಗರಿಗೆ ಕ್ರಿಕೆಟ್ ತರಬೇತಿ ನೀಡುತ್ತಿದ್ದಾರೆ. ಟೀಮ್ ಇಂಡಿಯಾದ ಆಟಗಾರರಿಗೆ ಮಾರ್ಗದರ್ಶನ, ಸಲಹೆಯನ್ನೂ ನೀಡುತ್ತಿದ್ದಾರೆ.
sachin tendulkar saakshatv team indiaಆದ್ರೂ ಸಚಿನ್ ತೆಂಡುಲ್ಕರ್ ಗೆ ಕ್ರಿಕೆಟ್ ಬದುಕಿನಲ್ಲಿ ಏನೋ ಕಳೆದುಕೊಂಡಂತೆ ಭಾಸವಾಗುತ್ತಿದ್ದಂತೆ. ಹೌದು, ಸಚಿನ್ ತೆಂಡುಲ್ಕರ್ ಅವರಿಗೆ ತನ್ನ ಕ್ರಿಕೆಟ್ ಬದುಕಿನ ಬಗ್ಗೆ ಎರಡು ವಿಷಾದಗಳಿವೆಯಂತೆ. ಅಚ್ಚರಿಯಾಗಬೇಡಿ. ಇದು ಸತ್ಯ. ಸ್ವತಃ ಸಚಿನ್ ತೆಂಡುಲ್ಕರ್ ಅವರೇ ಈ ಮಾತನ್ನು ಹೇಳಿಕೊಂಡಿದ್ದಾರೆ.
ಅಷ್ಟಕ್ಕೂ ಸಚಿನ್ ತೆಂಡುಲ್ಕರ್ ಅವರ ವಿಷಾದಕ್ಕೆ ಕಾರಣ ಒಂದು ಸುನೀಲ್ ಗವಾಸ್ಕರ್ ಮತ್ತೊಂದು ಸರ್ ವಿವಿಯನ್ ರಿಚರ್ಡಸನ್.
ಅಂದ ಹಾಗೇ ಸುನೀಲ್ ಗವಾಸ್ಕರ್ ಅವರು ಸಚಿನ್ ತೆಂಡುಲ್ಕರ್ ಅವರ ಪ್ರೀತಿಯ ಕ್ರಿಕೆಟಿಗ. ಗವಾಸ್ಕರ್ ಆಟವನ್ನು ನೋಡಿಕೊಂಡೇ ಬೆಳೆದುಬಂದವರು ಸಚಿನ್ ತೆಂಡುಲ್ಕರ್. ಹಾಗೇ ಸರ್ ವಿವಿಯನ್ ರಿಚರ್ಡಸನ್. ಸಚಿನ್ ತೆಂಡುಲ್ಕರ್ ಅವರ ಬಾಲ್ಯದ ನೆಚ್ಚಿನ ಹೀರೋ. ಹೀಗಾಗಿ ಸಚಿನ್ ಅವರನ್ನು ಸದಾ ಕಾಡುತ್ತಿರುವ ಕೊರಗು ಏನು ಅಂದ್ರೆ ಇವರಿಬ್ಬರ ಜೊತೆಯಾಗಿ ಆಡಲಿಲ್ಲ ಎಂಬುದು.
ಸುನೀಲ್ ಗವಾಸ್ಕರ್ ಜೊತೆಯಾಗಿ ಆಡಲಿಲ್ಲ ಎಂಬ ಬೇಸರ ಒಂದು ಕಡೆಯಾದ್ರೆ, ರಿಚರ್ಡಸನ್ ವಿರುದ್ಧವಾಗಿ ಆಡಲಿಲ್ಲ ಅನ್ನೋ ನೋವು ಸಚಿನ್ ಅವರನ್ನು ಈಗಲೂ ಕಾಡುತ್ತಿದೆಯಂತೆ.
sachin tendulkar saakshatv team indiaಸುನೀಲ್ ಗವಾಸ್ಕರ್ ಅವರು, ಸಚಿನ್ ತೆಂಡುಲ್ಕರ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಎಂಟ್ರಿಕೊಡುವ ಮುನ್ನವೇ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದರು. ಹೀಗಾಗಿ ಗವಾಸ್ಕರ್ ಜೊತೆಯಾಗಿ ಆಡುವ ಅವಕಾಶವೇ ಸಿಗಲಿಲ್ಲ.

Related posts

ಮಂತ್ರಗಳಿಂದ ಕಾಯಿಲೆ ವಾಸಿಯಾಗುವುದಿಲ್ಲ: ಪ್ರೇಮಾನಂದ್‌ ಜಿ ಹೇಳಿಕೆ ವೈರಲ್

ಮಂತ್ರಗಳಿಂದ ಕಾಯಿಲೆ ವಾಸಿಯಾಗುವುದಿಲ್ಲ: ಪ್ರೇಮಾನಂದ್‌ ಜಿ ಹೇಳಿಕೆ ವೈರಲ್

January 17, 2026
ಡಿಸಿಎಂ ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ: ಕೈ ಶಾಸಕ

ಡಿಸಿಎಂ ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ: ಕೈ ಶಾಸಕ

January 17, 2026

ಇನ್ನು ಸರ್ ವಿವಿಯನ್ ರಿಚರ್ಡಸನ್ ಅವರು 1991ರಲ್ಲಿ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದರು. ಆಗ ಸಚಿನ್ ತೆಂಡುಲ್ಕರ್ ವಿಶ್ವ ಕ್ರಿಕೆಟ್ ನಲ್ಲಿ ಪ್ರಜ್ವಲಿಸಲು ಶುರು ಮಾಡಿದ್ದರು. ಆದ್ರೆ ವೆಸ್ಟ್ ಇಂಡೀಸ್ ವಿರುದ್ಧ ಭಾರತಕ್ಕೆ ಆಡುವ ಅವಕಾಶ ಸಿಗಲಿಲ್ಲ. ಹೀಗಾಗಿ ಸಚಿನ್ ರಿಚರ್ಡಸನ್ ವಿರುದ್ಧ ಆಡಲು ಸಾಧ್ಯವಾಗಲಿಲ್ಲ.
ಹೀಗೆ ಸಚಿನ್ ತೆಂಡುಲ್ಕರ್ ತಮ್ಮ ಕ್ರಿಕೆಟ್ ಬದುಕಿನ ಎರಡು ವಿಷಾದದ ಬಗ್ಗೆ ಹೇಳಿಕೊಂಡಿದ್ದಾರೆ. ಒಟ್ಟಿನಲ್ಲಿ ಸಚಿನ್ ತೆಂಡುಲ್ಕರ್ ಎಷ್ಟೇ ಸಾಧನೆ ಮಾಡಿದ್ರೂ ಏನಾದ್ರೂ ತನ್ನ ಕ್ರಿಕೆಟ್ ಬದುಕು ಪರಿಪೂರ್ಣವಾಗಿಲ್ಲ ಅಂತ ಹೇಳುತ್ತಿರುತ್ತಾರೆ. ಈ ಸಾಧಕರೇ ಬದುಕು ಹಾಗೇ..ಒಂಥರ ವಿಚಿತ್ರವಾಗಿರುತ್ತದೆ.

Tags: # Sachin Tendulkar 1st test century#saakshatvCricketICCIndian cricketSachin TendulkarSir Vivian Richardssunil gavaskarteam indiaworld cricket
ShareTweetSendShare
Join us on:

Related Posts

ಮಂತ್ರಗಳಿಂದ ಕಾಯಿಲೆ ವಾಸಿಯಾಗುವುದಿಲ್ಲ: ಪ್ರೇಮಾನಂದ್‌ ಜಿ ಹೇಳಿಕೆ ವೈರಲ್

ಮಂತ್ರಗಳಿಂದ ಕಾಯಿಲೆ ವಾಸಿಯಾಗುವುದಿಲ್ಲ: ಪ್ರೇಮಾನಂದ್‌ ಜಿ ಹೇಳಿಕೆ ವೈರಲ್

by Shwetha
January 17, 2026
0

ಆಧ್ಯಾತ್ಮಿಕತೆಯ ಹೆಸರಿನಲ್ಲಿ ನಡೆಯುತ್ತಿರುವ ಮೋಸಗಳು ಮತ್ತು ವಂಚನೆಗಳ ಬಗ್ಗೆ ಪ್ರೇಮಾನಂದ್‌ ಜಿ ಮಹಾರಾಜ್ ಸ್ಪಷ್ಟ ಹಾಗೂ ತೀಕ್ಷ್ಣ ಅಭಿಪ್ರಾಯ ವ್ಯಕ್ತಪಡಿಸಿದ್ದು, ಅವರ ಹೇಳಿಕೆ ಇದೀಗ ವ್ಯಾಪಕವಾಗಿ ವೈರಲ್...

ಡಿಸಿಎಂ ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ: ಕೈ ಶಾಸಕ

ಡಿಸಿಎಂ ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ: ಕೈ ಶಾಸಕ

by Shwetha
January 17, 2026
0

ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿ ಸ್ಥಾನ ಬದಲಾವಣೆ ಕುರಿತ ಚರ್ಚೆಗಳು ಮತ್ತೆ ಬಿರುಸುಗೊಂಡಿರುವ ನಡುವೆಯೇ, ಡಿಸಿಎಂ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಲಿದ್ದಾರೆ ಎಂಬ ವಿಶ್ವಾಸವನ್ನು ಕಾಂಗ್ರೆಸ್ ಶಾಸಕ ಶಿವಗಂಗಾ...

ಜಿಪಿಎಸ್ ಟ್ರ್ಯಾಕರ್‌ ಅಳವಡಿಸಿದ ರಣಹದ್ದು ಪತ್ತೆ

ಜಿಪಿಎಸ್ ಟ್ರ್ಯಾಕರ್‌ ಅಳವಡಿಸಿದ ರಣಹದ್ದು ಪತ್ತೆ

by Shwetha
January 17, 2026
0

ವಿಜಯಪುರ ಜಿಲ್ಲೆಯ ಚಡಚಣ ಪ್ರದೇಶದಲ್ಲಿ ಜಿಪಿಎಸ್ ಟ್ರ್ಯಾಕರ್, ಕ್ಯಾಮರಾ ಹಾಗೂ ಟ್ರ್ಯಾಕಿಂಗ್ ಸಾಧನಗಳನ್ನು ಅಳವಡಿಸಿರುವ ರಣಹದ್ದು ಪತ್ತೆಯಾಗಿರುವುದು ಭಾರೀ ಆತಂಕ ಮೂಡಿಸಿದೆ. ರಣಹದ್ದಿನ ಕಾಲಿನಲ್ಲಿ ಗುರುತು ಸಂಖ್ಯೆಯಿರುವ...

ವಿಶ್ವವೇ ನಿಬ್ಬೆರಗಾದ ಕ್ಷಣ ಕೊನೆಗೂ ಟ್ರಂಪ್ ಮಡಿಲಿಗೆ ಸೇರಿತು ಪ್ರತಿಷ್ಠಿತ ನೊಬೆಲ್ ಶಾಂತಿ ಪ್ರಶಸ್ತಿ

ವಿಶ್ವವೇ ನಿಬ್ಬೆರಗಾದ ಕ್ಷಣ ಕೊನೆಗೂ ಟ್ರಂಪ್ ಮಡಿಲಿಗೆ ಸೇರಿತು ಪ್ರತಿಷ್ಠಿತ ನೊಬೆಲ್ ಶಾಂತಿ ಪ್ರಶಸ್ತಿ

by Shwetha
January 17, 2026
0

ವಾಷಿಂಗ್ಟನ್: ಜಾಗತಿಕ ರಾಜಕೀಯ ವಲಯದಲ್ಲಿ ಅಚ್ಚರಿಯ ಹಾಗೂ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬಹುಕಾಲದ ಕನಸೊಂದು ವಿಶೇಷ ರೀತಿಯಲ್ಲಿ ಈಡೇರಿದಂತಾಗಿದೆ. ವೆನೆಜುವೆಲಾದ...

ಮನೆಯಲ್ಲಿ 65 ವರ್ಷ ಮೇಲ್ಪಟ್ಟ ಹಿರಿಯರಿದ್ದಾರೆಯೇ? ಹಾಗಾದರೆ ತಪ್ಪದೇ ಓದಿ, ಸರ್ಕಾರದಿಂದ ಸಿಗಲಿದೆ ಮಾಸಿಕ ಪಿಂಚಣಿ ಭಾಗ್ಯ

ಮನೆಯಲ್ಲಿ 65 ವರ್ಷ ಮೇಲ್ಪಟ್ಟ ಹಿರಿಯರಿದ್ದಾರೆಯೇ? ಹಾಗಾದರೆ ತಪ್ಪದೇ ಓದಿ, ಸರ್ಕಾರದಿಂದ ಸಿಗಲಿದೆ ಮಾಸಿಕ ಪಿಂಚಣಿ ಭಾಗ್ಯ

by Shwetha
January 17, 2026
0

ಬೆಂಗಳೂರು: ವಯಸ್ಸಾದ ಕಾಲದಲ್ಲಿ ಯಾರಿಗೂ ಹೊರೆಯಾಗದೆ, ಆರ್ಥಿಕವಾಗಿ ಸ್ವತಂತ್ರರಾಗಿ ಬದುಕಬೇಕು ಎಂಬುದು ಪ್ರತಿಯೊಬ್ಬ ಹಿರಿಯ ಜೀವದ ಕನಸಾಗಿರುತ್ತದೆ. ಈ ಕನಸಿಗೆ ನೀರೆರೆದು ಪೋಷಿಸಲು ಕರ್ನಾಟಕ ರಾಜ್ಯ ಸರ್ಕಾರವು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram