ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಹಸಿರು ಶಾಲಿನ ಬಳಗೆ ಕೇಸರಿ ಶಾಲಿದೆ ಎಂದು ವಿಧಾನಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ನನಗೆ ಹಸಿರು ಶಾಲು ಮೇಲೆ ಅಪಾರವಾದ ಗೌರವವಿದೆ. 1980 ರಿಂದ 1983 ರವರೆಗೆ ನಾನು ಹಸಿರು ಶಾಲು ಹಾಕಿದ್ದೆ. ಬಿಜೆಪಿಯಲ್ಲಿ ಎಲ್ಲರೂ ಕೇಸರಿ ಶಾಲು ಹಾಕುತ್ತಾರೆ. ಯಡಿಯೂರಪ್ಪ ಮಾತ್ರ ಬಿಜೆಪಿಯಲ್ಲಿ ಹಸಿರುಶಾಲು ಹಾಕುತ್ತಾರೆ. ಆದರೆ ಅವರು ಬಜೆಟ್ ನಲ್ಲಿ ರೈತರಿಗೆ ಅನುಕೂಲಕರ ಯೋಜನೆ ನೀಡಿಲ್ಲ. ಯಡಿಯೂರಪ್ಪನವರ ಹಸಿರು ಶಾಲಿನ ಒಳಗೆ ಕೇಸರಿ ಶಾಲು ಇದೆ ಎನ್ನುವುದು ಬಜೆಟ್ ದಿನ ಗೊತ್ತಾಯ್ತು ಎಂದು ಸಿದ್ದರಾಮಯ್ಯ, ಸಿಎಂ ಅವರ ಕಾಲೆಳೆದಿದ್ದಾರೆ.
ಹೈಕಮಾಂಡ್ ನಾಯಕನಿಗೆ ಸಿಎಂ ಪಟ್ಟದ ಆಫರ್: ರಾಯರೆಡ್ಡಿ ಮಾಸ್ಟರ್ ಪ್ಲಾನ್ ಹಿಂದೆ ಅಡಗಿದೆ ದೊಡ್ಡ ರಹಸ್ಯ
ಕರ್ನಾಟಕ ರಾಜಕಾರಣದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಚರ್ಚೆಗಳು ದಿನಕ್ಕೊಂದು ಹೊಸ ತಿರುವು ಪಡೆಯುತ್ತಿವೆ. ಸದ್ಯ ಹಿರಿಯ ಶಾಸಕ ಹಾಗೂ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾದ ಬಸವರಾಜ್ ರಾಯರೆಡ್ಡಿ ನೀಡಿರುವ ಹೇಳಿಕೆ...








