ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಪುತ್ತಳಿ ಅನಾವರಣ…
ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಬೆಂಗಳೂರಿನ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರು ಅಧ್ಯಯನ ಮಾಡಿದ ಖಾಸಗಿ ಶಾಲೆಯ ಆವರಣದಲ್ಲಿಂದು ಸಂದೀಪ್ ಉನ್ನಿಕೃಷ್ಣನ್ ಅವರ ಪುತ್ಥಳಿಯನ್ನು ಅನಾವರಣಗೊಳಿಸಲಾಯಿತು.
ಕರ್ನಾಟಕ ಮತ್ತು ಕೇರಳ ಉಪ ವಲಯ ಕಮಾಂಡಿಂಗ್ ಅಧಿಕಾರಿ ಮೇಜರ್ ಜನರಲ್ ರವಿ ಮುರುಗನ್, ಎನ್ ಸಿಸಿ ಕರ್ನಾಟಕ ಹಾಗೂ ಗೋವಾ ವಲಯ ಉಪ ಮಹಾ ನಿರ್ದೇಶಕ ಏರ್ ಕಮಾಂಡರ್ ಬಿ.ಎಸ್. ಕನ್ವರ್ ಮತ್ತಿತರರು ಉಪಸ್ಥಿತರಿದ್ದರು.
ಬಳಿಕ ರವಿ ಮುರುಗನ್ ಮಾತನಾಡಿ “ಮೇಜರ್ ಸಂದೀಪ್ ಉನ್ನಿಕೃಷ್ಣನ್ ಈ ಶಾಲೆಯ ಹಳೆಯ ವಿದ್ಯಾರ್ಥಿ ಎಂಬುದು ಹೆಮ್ಮೆಯ ವಿಷಯ. ಸಂದೀಪ್ ಅವರು ದೇಶಕ್ಕಾಗಿ ಹೋರಾಡಿ ಮಡಿದು ಅಸಾಮಾನ್ಯ ಸಾಹಸಿ ಎನಿಸಿದ್ದಾರೆ. ಅವರ ಬದುಕಿನ ಶಿಸ್ತು ಹಾಗೂ ರಾಷ್ಟ್ರಭಕ್ತಿಯ ದೃಢ ನಿಷ್ಠೆ ಇಂದಿನ ವಿದ್ಯಾರ್ಥಿಗಳಿಗೆ ಮಾರ್ಗದರ್ಶಿಯಾಗಬೇಕು” ಎಂದರು.
Sandeep Unnikrishnan : Unveiling of Major Sandeep Unnikrishnan’s effigy