ಸಂತೋಷ ಪಾಟೀಲ್ ಪ್ರಕರಣ | ತನಿಕೆಯಾದ ಮೇಲೆ ಸತ್ಯ ಹೊರಗಡೆ ಬರಲಿದೆ : ಸಿಎಂ ಬೊಮ್ಮಾಯಿ
ಬೆಂಗಳೂರು: ಸಚಿವ ಈಶ್ವರಪ್ಪ ಅವರ ಮೇಲೆ ಮಾಡಿದ್ದ ಕಮಿಷನ್ ಆರೋಪ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದ ಗುತ್ತಿಗಾರ ಸಂತೋಷ ಪಾಟೀಲ್ ಪ್ರಕರಣ ಸಂಪೂರ್ಣ ತನಿಕೆಯಾಗಿ, ಸತ್ಯ ಹೊರಗಡೆ ಬರಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಹೇಳಿಕೆ ನೀಡಿದ ಅವರು ಪ್ರಕರಣ ಸಂಬಂಧ ಹೈಕಮಾಂಡ ಮಾಹಿತಿ ಪಡೆದಿದ್ದು, ಇದರಲ್ಲಿ ಅವರ ಪಾತ್ರವಿಲ್ಲ. ತನಿಖೆ ಯಾವ ರೀತಿ ಆಗಬೇಕು ಎಂದು ನೋಡುತ್ತೇವೆ. ಅಲ್ಲದೇ ನಿನ್ನೆಯಷ್ಟೇ ಸಂತೋಷ್ ಪಾಟೀಲ್ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಪ್ರಾಥಮಿಕ ಮಾಹಿತಿ ಬಂದ ಮೇಲೆ ಮುಂದಿನ ನಿರ್ಧಾರ ಮಾಡುತ್ತೇವೆ ಎಂದು ಹೇಳಿದರು.
ಇನ್ನೂ ಕಾಂಗ್ರೆಸ್ ನವರ ಆಧಾರರಹಿತ ಆರೋಪಗಳಿಗೆ ಉತ್ತರ ನೀಡಲ್ಲ. ಹಾಗೇ ಗುತ್ತಿಗೆದಾರರ ಸಂಘದವರು ಮಾಡುವ ಆರೋಪಗಳಿಗೆ ದಾಖಲೆ ನೀಡಲ್ಲ. ಆಧಾರ ರಹಿತ ಆರೋಪಗಳಿಗೆ ಉತ್ತರ ಕೊಡುವುದಿಲ್ಲ. ಅಷ್ಟೇಅಲ್ಲದೇ ವಿಪಕ್ಷನಾಯಕ ಸಿದ್ದರಾಮಯ್ಯ ಅವರ ಕಾಲದಲ್ಲೂ ಹಗರಣ, ಲಂಚದ ಆರೋಪ ಕೇಳಿಬಂದಿತ್ತು. ಬಿಡಿಎಗೆ ಸಂಬಂಧಿಸಿದ ಹಗರಣ ನಡೆದಿತ್ತು ಎಂದು ಸಿದ್ದರಾಮಯ್ಯ ವಿರುದ್ಧ ಗುಡುಗಿದರು.
ಮುಂದುವರೆದು ಕೆಂಪಣ್ನ ಆಗಲಿ ಯಾರೇ ಆಗಲಿ ದಾಖಲೆ ಕೊಟ್ಟು ಮಾತಾಡಬೇಕು. ಕೆಂಪಣ್ಣ ಗುತ್ತಿಗೆದಾರರ ಅಸೋಸಿಯೇಶನ್ ಬಿಟ್ಟು ಬೇರೆ ಅಸೋಸಿಯೇಶನ್ ಗಳು ಇದ್ದಾವೆ. ಒಂದು ತಿಂಗಳು ಕೆಲಸ ಮಾಡಲ್ಲ ಅಂತ ಬೇರೆ ಅಸೋಸಿಯೇಶನ್ ಅವರು ಹೇಳಿಲ್ಲ. ಅವರ ನಿರ್ಧಾರ ಏನೂ ಅನ್ನುವುದು ಗೊತ್ತಿಲ್ಲ. ಆದರೆ ಯಾರೇ ಆಗಲಿ ವೇಗ್ ಆಗಿ ಮಾತನಾಡಬಾರದು ಎಂದು ಸೂಚಿಸಿದರು.