ಸಿಡಿ ಪ್ರಕರಣ : ತನಿಖೆಯಾಗಿ ಸತ್ಯಾಂಶ ಹೊರ ಬಂದೇ ಬರುತ್ತೆ ಕಾಯೋಣ – ಸತೀಶ್ ಜಾರಕಿಹೊಳಿ..!
ಬೆಳಗಾವಿ : ಸಿಡಿ ಪ್ರಕರಣದ ಬಗ್ಗೆ ಯುವತಿ ವಿಡಿಯೋ ಹೇಳಿಕೆ ಬಿಡುಗಡೆ ವಿಚಾರವಾಗಿ ಬೆಳಗಾವಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ. ರಮೇಶ್ ಜಾರಕಿಹೊಳಿ ಈಗಾಗಲೇ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ತನಿಖೆಯಾಗಿ ಸತ್ಯಾಂಶ ಹೊರ ಬಂದೇ ಬರುತ್ತೆ ಕಾದು ಮಾಡೋಣ. ಪೊಲೀಸರೇ ಇದಕ್ಕೆ ಪರಿಹಾರ ಹೇಳಬೇಕು. ನನಗೆ ಪ್ರಕರಣ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲ. ತಕ್ಷಣ ಏನೂ ಹೇಳಕ್ಕಾಗಲ್ಲ, ಕಾದು ಮುಂದಿನ ಹೆಜ್ಜೆ ಇಡಬೇಕಷ್ಟೇ ಎಂದಿದ್ದಾರೆ.
ಸಿಡಿ ಪ್ರಕರಣ : ನಾನೇ ಅಲ್ಲ. ನನಗೆ ಗೊತ್ತೇ ಇಲ್ಲ ಅಂತ ಹೇಳಿ ಅವರೇ ಮಾತನಾಡ್ತಿದ್ದಾರೆ – ಡಿಕೆಶಿ
ಇನ್ನೂ ಇದೇ ವೇಳೆ ಯುವತಿ ಹೇಳಿಕೆ ಆಯ್ತು ಅಷ್ಟೇ, ಲೀಗಲ್ ಆಗಿ ಮುಂದೆ ಬರಬೇಕಲ್ಲ. ಆ ಯುವತಿಗೆ ಅನ್ಯಾಯವಾಗಿದ್ರೆ ಪ್ಲಾಟ್ ಫಾರ್ಮ್ ಇದೆ, ವೇದಿಕೆ ಇದೆ. ಪೊಲೀಸರ ತನಿಖೆ ಬಳಿಕವಷ್ಟೇ ಸತ್ಯಾಂಶ ಗೊತ್ತಾಗುತ್ತೆ. ಯುವತಿ ಹೇಳಿಕೆಯ ಬಳಿಕ ಪೊಲೀಸರ ಪಾತ್ರ ಬಹಳ ದೊಡ್ಡದಿದೆ. ರಾಜಕೀಯ ಷಡ್ಯಂತ್ರ ಬಗ್ಗೆ ನನಗೇನು ಗೊತ್ತಿಲ್ಲ, ಪೊಲೀಸರು ಮಾತ್ರ ಸತ್ಯಾಂಶ ತರಲು ಸಾಧ್ಯ. ಈಗ ರಮೇಶ್ ಜಾರಕಿಹೊಳಿ ತಮ್ಮನ್ನ ಬ್ಲ್ಯಾಕ್ ಮೇಲ್ ಮಾಡಿದ್ದಾಗಿ ಹೇಳಿದ್ದಾರೆ. ಯುವತಿಗೆ ಏನು ಅನ್ಯಾಯವಾಗಿದೆ ಅಂತಾ ಮುಂದೆ ಬಂದು ಹೇಳಬೇಕು ಎಂದಿದ್ದಾರೆ.
ರಾಜ್ಯದಲ್ಲೂ ಕಾಂಗ್ರೆಸ್ ಅಸ್ತಿತ್ವ ಕಳೆದುಕೊಳ್ಳುತ್ತೆ : ಬಿ ವೈ ವಿಜಯೇಂದ್ರ..!
ಇದೇ ವೇಳೆ ಸಿಡಿ ಪ್ರಕರಣದಲ್ಲಿ ತಮ್ಮನ್ನು ಸಿಲುಕಿಸಲಾಗುತ್ತಿದೆ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು ಯಾರನ್ಯಾರು ಸಿಲುಕಿಸೋಕಾಗಲ್ಲ, ಪೊಲೀಸರೇ ಅಂತಿಮ ತೀರ್ಮಾನ ಮಾಡ್ಬೇಕು. ಪೊಲೀಸ್ ತನಿಖೆ ಆಗಬೇಕು ಅಂತಾ ಅದಕ್ಕೆ ನಾವು ಪದೇಪದೇ ಹೇಳೋದು. ಪೊಲೀಸ್ ತನಿಖೆಯಿಂದ ಸತ್ಯಾಂಶ ಹೊರಬರುತ್ತೆ ಅಷ್ಟೇ ಎಂದಿದ್ದಾರೆ.