ADVERTISEMENT
Friday, December 12, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಮಿಸ್ ಯೂ ಸ್ಪಿನ್ ಡಾಕ್ಟರ್… ಮುಗಿದೋಯ್ತು ಸ್ಪಿನ್ ಮಾಂತ್ರಿಕನ ಬದುಕು..!

admin by admin
March 5, 2022
in Newsbeat, Sports, ಕ್ರಿಕೆಟ್
Share on FacebookShare on TwitterShare on WhatsappShare on Telegram

ಮೈದಾನದಲ್ಲಿ ಶತ್ರುಗಳು… ಆದ್ರೆ ನಿಜ ಜೀವನದಲ್ಲಿ ಆಪ್ತ ಸ್ನೇಹಿತರು. ತಂಡದೊಳಗಿನ ಒಡನಾಡಿಗಳೇ ವಿಲನ್ ಗಳು.. ಎದುರಾಳಿ ತಂಡಗಳ ಆಟಗಾರರೇ ಹೀರೋಗಳು..ಸ್ಪಾಟ್ ಫೀಕ್ಸಿಂಗ್ ಆರೋಪ, ಉದ್ದೀಪನಾ ದ್ರವ್ಯ ಸೇವನೆ ಆರೋಪ, ಅಲ್ಕೋಹಾಲ್, ಸಿಗರೇಟ್.. ಸೆಕ್ಸ್…ವಿವಾದಗಳು.. ವಿಶ್ವ ದಾಖಲೆಗಳು ಎಲ್ಲವೂ ಕೂಡ ಸ್ಪಿನ್ ಡಾಕ್ಟರ್ ಶೇನ್ ವಾರ್ನ್ ಕ್ರಿಕೆಟ್ ಬದುಕಿನಲ್ಲಿ ಆಗಿ ಹೋಗಿರುವ ಘಟನೆಗಳು.

ಒಬ್ಬ ವ್ಯಕ್ತಿಯಾಗಿ ಶೇನ್ ವಾರ್ನ್ ಆದರ್ಶ ವ್ಯಕ್ತಿ ಅಂತ ಹೇಳುವುದಕ್ಕೆ ಆಗಲ್ಲ. ಆದ್ರೆ ಒಬ್ಬ ಕ್ರಿಕೆಟಿಗನಾಗಿ ಖಂಡಿತವಾಗಿಯೂ ಸ್ಫೂರ್ತಿಯ ಆಟಗಾರ. ಒಬ್ಬ ಸ್ಪಿನ್ ಬೌಲರ್ ಆಗಿ ಮಾದರಿ ಆಟಗಾರ. ಆದ್ರೆ ಶೇನ್ ವಾರ್ನ್ ಅವರನ್ನು ರೋಲ್ ಮಾಡೆಲ್ ಅಂತ ಪರಿಗಣಿಸುವುದು ಕಷ್ಟ. ಕ್ರಿಕೆಟ್ ಮೈದಾನದಲ್ಲಿ ಶೇನ್ ವಾರ್ನ್ ಮಾಡಿರುವ ಮೋಡಿಗೆ ದಾಖಲೆಗಳು ಕೂಡ ಸದ್ದಿಲ್ಲದೆ ಅವರ ಹೆಸರಿನ ಜೊತೆ ಸೇರಿಕೊಂಡಿವೆ. ಹಾಗೇ ವಿವಾದಗಳು ಕೂಡ ಕಪ್ಪುಚುಕ್ಕೆಗಳಾಗಿ ಅವರ ಹೆಸರಿನ ಮುಂದೆ ಅಂಟಿಕೊಂಡಿವೆ. ಹಾಗಂತ ಶೇನ್ ವಾರ್ನ್ ತೀರಾ ಒಳ್ಳೆಯವರು ಅಲ್ಲ. ತೀರಾ ಕೆಟ್ಟವರೂ ಅಲ್ಲ. ಆದ್ರೂ ಎಲ್ಲರು ಕೂಡ ಇಷ್ಟಪಡುವ ವ್ಯಕ್ತಿ.. ತುಂಬಾನೇ ಪ್ರೀತಿಸುವ ಕ್ರಿಕೆಟಿಗ. ಮೈದಾನದಲ್ಲಿ ಎಷ್ಟು ಆಕ್ರಮಣಕಾರಿಯಾಗಿ ಆಡುತ್ತಿದ್ದರೋ ಅಷ್ಟೇ ಹಾಸ್ಯಮಯ ವ್ಯಕ್ತಿ. ವಿಕೆಟ್ ಪಡೆದಾಗ ತುಂಬಾನೇ ಸಂಭ್ರಮಪಡುತ್ತಿದ್ದರು. ಹಾಗೇ ತನ್ನ ಎಸೆತಗಳನ್ನು ದಂಡಿಸುತ್ತಿರುವಾಗ ಮೂಖ ಪ್ರೇಕ್ಷಕನಾಗುತ್ತಿದ್ದರು. ಒಂದು ಕೈಯನ್ನು ಕಟ್ಟಿಕೊಂಡು, ಇನ್ನೊಂದು ಕೈಯ ಹೆಬ್ಬೆರಳನ್ನು ದವಡೆಯ ಮೇಲಿಟ್ಟುಕೊಂಡು, ತೋರು ಬೆರಳನ್ನು ಮೂಗಿನ ಮೇಲಿಟ್ಟುಕೊಂಡು ಕಿರು ನಗೆಯನ್ನು ಬೀರುತ್ತಿದ್ದರು. ಇದು ಶೇನ್ ವಾರ್ನ್ ಕ್ರಿಕೆಟ್ ಬದುಕಿನ ಸ್ಟೈಲ್.

Related posts

ಬೆಂಗಳೂರಿನ ಕೈ ತಪ್ಪುತ್ತಾ ಐಪಿಎಲ್..! ರಾಜ್ಯ ಸರ್ಕಾರದ ಕೈಯಲ್ಲಿದೆ ಚಿನ್ನಸ್ವಾಮಿ ಅಂಗಣದ ಭವಿಷ್ಯ..!

ಬೆಂಗಳೂರಿನ ಕೈ ತಪ್ಪುತ್ತಾ ಐಪಿಎಲ್..! ರಾಜ್ಯ ಸರ್ಕಾರದ ಕೈಯಲ್ಲಿದೆ ಚಿನ್ನಸ್ವಾಮಿ ಅಂಗಣದ ಭವಿಷ್ಯ..!

December 11, 2025
 ನೀವು ಕಳೆದುಕೊಂಡು ನಿಮ್ಮ ಆಸ್ತಿಪಾಸ್ತಿ ಮರಳಿ ಸಿದ್ದಿಸಿಕೊಳ್ಳಲು ಇಲ್ಲಿದೆ ಸುಲಭ ಕಾರ್ತವೀರ್ಯಾರ್ಜುನ ಸ್ವಾಮಿ ಮಂತ್ರದ ತಂತ್ರ ವಿಧಾನ..

 ನೀವು ಕಳೆದುಕೊಂಡು ನಿಮ್ಮ ಆಸ್ತಿಪಾಸ್ತಿ ಮರಳಿ ಸಿದ್ದಿಸಿಕೊಳ್ಳಲು ಇಲ್ಲಿದೆ ಸುಲಭ ಕಾರ್ತವೀರ್ಯಾರ್ಜುನ ಸ್ವಾಮಿ ಮಂತ್ರದ ತಂತ್ರ ವಿಧಾನ..

December 11, 2025

ಶೇನ್ ವಾರ್ನ್ ಕಷ್ಟಪಟ್ಟು ಕ್ರಿಕೆಟ್ ಆಟಗಾರನಾದ್ರು. ಬದುಕಿಗಾಗಿ ಲಾರಿ ಡ್ರೈವರ್ ಆಗಿದ್ದರು. ಡೆಲಿವರಿ ಬಾಯ್ ಆಗಿದ್ದರು. ಹೀಗೆ ಕಷ್ಟಪಟ್ಟು ಕ್ರಿಕೆಟ್ ಆಟಗಾರನಾಗಿ ರೂಪುಗೊಂಡಿರುವ ಶೇನ್ ವಾರ್ನ್ ಮುಂದೊಂದು ದಿನ ವಿಶ್ವದ ಶ್ರೇಷ್ಠ ಕ್ರಿಕೆಟಿಗನಾಗಿ ರೂಪುಗೊಂಡ್ರು. ಕ್ರಿಕೆಟ್ ನಲ್ಲಿ ಯಶ ಸಾಧಿಸುತ್ತಿದ್ದಂತೆ ತನ್ನ ಹಳೆಯದ ಕಷ್ಟದ ದಿನಗಳನ್ನು ಮರೆತುಬಿಟ್ರು. ಐಶಾರಾಮಿ ಬದುಕಿನ ಜೊತೆಗೆ ಕುಡಿತ, ಸಿಗರೇಟ್, ಸೆಕ್ಸ್, ವಿವಾದಗಳಿಂದಲೂ ಹೆಚ್ಚು ಸುದ್ದಿಯಾದ್ರು. ಆದ್ರೂ ಶೇನ್ ವಾರ್ನ್ ಯಾವುದಕ್ಕೂ ತಲೆಕೆಡಿಸಿಕೊಳ್ಳಲಿಲ್ಲ. ಹಾಸ್ಯ ಪ್ರವೃತ್ತಿಯ ಜೊತೆಗೆ ಸಂಬಂಧಗಳಿಗೆ ಬೆಲೆ ಕೊಡುವ ಶೇನ್ ವಾರ್ನ್ ಗೆ ವಿಶ್ವದ ಶ್ರೇಷ್ಠ ಕ್ರಿಕೆಟಿಗರು ಆಪ್ತ ಸ್ನೇಹಿತರಾದ್ರು. ಈ ನಡುವೆ, ತನ್ನ ಕ್ರಿಕೆಟ್ ಬದುಕಿಗೆ ಪ್ರೇರಣೆ ಮತ್ತು ಶಕ್ತಿ ತುಂಬಿದ್ದ ಸ್ಟೀವ್ ವಾ ಅವರ ವಿರುದ್ಧವೇ ತಿರುಗಿಬಿದ್ದಿದ್ದರು. ತನ್ನ ಆಟೋ ಬಯೋಗ್ರಫಿಯಲ್ಲಿ ಸ್ಟೀವ್ ವಿರುದ್ಧವೇ ಬರೆದಿದ್ದರು. ಅಷ್ಟೇ ಅಲ್ಲ, ಮೈದಾನದಲ್ಲಿ ತನಗೆ ಸವಾಲು ಹಾಕೊಂಡು ಎದುರಾಳಿಗಳಾಗಿದ್ದ ಸಚಿನ್ ತೆಂಡುಲ್ಕರ್, ಬ್ರಿಯಾನ್ ಲಾರಾನಂತಹ ಆಟಗಾರರನ್ನು ಮೆಚ್ಚಿ ಕೊಂಡಾಡಿದ್ದರು.

ಇನ್ನು ಶೇನ್ ವಾರ್ನ್ ಮತ್ತು ಭಾರತೀಯ ಆಟಗಾರರ ನಡುವೆ ಉತ್ತಮವಾದ ಬಾಂಧವ್ಯವಿತ್ತು. ಭಾರತ ವಿರುದ್ಧವೇ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡಿದ್ದರು. ಅಷ್ಟೇ ಅಲ್ಲ, 2008ರ ಚೊಚ್ಚಲ ಐಪಿಎಲ್ ನಲ್ಲಿ ರಾಜಸ್ತಾನ ರಾಯಲ್ಸ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದರು. ಜೊತೆಗೆ ಐಪಿಎಲ್ ನಲ್ಲಿ ರಾಜಸ್ತಾನ ರಾಯಲ್ಸ್ ತಂಡದ ಮಾರ್ಗದರ್ಶಕರಾಗಿದ್ದರು. ಹೀಗೆ ಭಾರತೀಯ ಆಟಗಾರರು ಮತ್ತು ಭಾರತದ ಯುವ ಆಟಗಾರರ ಜೊತೆ ಶೇನ್ ವಾರ್ನ್ ತುಂಬಾ ಪ್ರೀತಿಯಿಂದ ಬೆರೆಯುತ್ತಿದ್ದರು.

145 ಟೆಸ್ಟ್ ಪಂದ್ಯಗಳಲ್ಲಿ 708 ವಿಕೆಟ್ ಹಾಗೂ 194 ಏಕದಿನ ಪಂದ್ಯಗಳಲ್ಲಿ 293 ವಿಕೆಟ್ ಪಡೆದಿರುವ ಶೇನ್ ವಾರ್ನ್ ಒಟ್ಟು 1001 ಅಂತಾರಾಷ್ಟ್ರೀಯ ವಿಕೆಟ್ ಗಳನ್ನು ಕಬಳಿಸಿದ್ದಾರೆ. ಸದ್ಯ ಟೆಸ್ಟ್ ಕ್ರಿಕೆಟ್ ನಲ್ಲಿ ಗರಿಷ್ಠ ವಿಕೆಟ್ ಪಡೆದ ಎರಡನೇ ಆಟಗಾರನಾಗಿದ್ದಾರೆ. ಇನ್ನೊಂದೆಡೆ 1993ರ ಆಶಷ್ ಸರಣಿಯಲ್ಲಿ ಇಂಗ್ಲೆಂಡ್ ನ ಮೈಕ್ ಗ್ಯಾಟಿಂಗ್ ಅವರ ವಿಕೆಟ್ ಪಡೆದಿರುವುದು ಶತಮಾನದ ಎಸೆತ ಅಂತನೇ ಕರೆಯಲಾಗುತ್ತಿದೆ. ವಿಶ್ವದ ಶ್ರೇಷ್ಠ ಬ್ಯಾಟ್ಸ್ ಮೆನ್ ಗಳನ್ನು ಗಲಿಬಿಲಿಗೊಳಿಸುತ್ತಿದ್ದ ಶೇನ್ ವಾರ್ನ್ ಚಾಣಕ್ಯ ಬೌಲರ್ ಎಂಬುದರಲ್ಲಿ ಎರಡು ಮಾತಿಲ್ಲ. ತನ್ನ 52ನೇ ವಯಸ್ಸಿನಲ್ಲಿ ಈ ಲೋಕದ ಯಾತ್ರೆ ಮುಗಿಸಿದ ಶೇನ್ ವಾರ್ನ್ ಸಾಧನೆ, ಮಾಡಿರುವ ದಾಖಲೆಗಳು ಎಂದೆಂದಿಗೂ ಕ್ರಿಕೆಟ್ ಇತಿಹಾಸದಲ್ಲಿ ಶಾಶ್ವತವಾಗಿರುತ್ತವೆ.

Tags: Shane WarneShane Warne Non MoreSpin Doctor
ShareTweetSendShare
Join us on:

Related Posts

ಬೆಂಗಳೂರಿನ ಕೈ ತಪ್ಪುತ್ತಾ ಐಪಿಎಲ್..! ರಾಜ್ಯ ಸರ್ಕಾರದ ಕೈಯಲ್ಲಿದೆ ಚಿನ್ನಸ್ವಾಮಿ ಅಂಗಣದ ಭವಿಷ್ಯ..!

ಬೆಂಗಳೂರಿನ ಕೈ ತಪ್ಪುತ್ತಾ ಐಪಿಎಲ್..! ರಾಜ್ಯ ಸರ್ಕಾರದ ಕೈಯಲ್ಲಿದೆ ಚಿನ್ನಸ್ವಾಮಿ ಅಂಗಣದ ಭವಿಷ್ಯ..!

by admin
December 11, 2025
0

ಚಿನ್ನಸ್ವಾಮಿ ಕ್ರೀಡಾಂಗಣ..ಕ್ರೀಡಾ ಕ್ಷೇತ್ರದಲ್ಲಿ ನಮ್ಮ ಬೆಂಗಳೂರಿನ ಹೆಮ್ಮೆಯ ಪ್ರತೀಕ.. ಕರ್ನಾಟಕ ಕ್ರಿಕೆಟಿಗರ ಪ್ರೀತಿಯ ಮೈದಾನ. ಒಂದೇ ಒಂದು ಬಾರಿ ಚಿನ್ನಸ್ವಾಮಿ ಮೈದಾನದಲ್ಲಿ ಆಡಬೇಕು ಎಂಬುದು ಪ್ರತಿಯೊಬ್ಬ ಕ್ರಿಕೆಟಿಗನÀ...

 ನೀವು ಕಳೆದುಕೊಂಡು ನಿಮ್ಮ ಆಸ್ತಿಪಾಸ್ತಿ ಮರಳಿ ಸಿದ್ದಿಸಿಕೊಳ್ಳಲು ಇಲ್ಲಿದೆ ಸುಲಭ ಕಾರ್ತವೀರ್ಯಾರ್ಜುನ ಸ್ವಾಮಿ ಮಂತ್ರದ ತಂತ್ರ ವಿಧಾನ..

 ನೀವು ಕಳೆದುಕೊಂಡು ನಿಮ್ಮ ಆಸ್ತಿಪಾಸ್ತಿ ಮರಳಿ ಸಿದ್ದಿಸಿಕೊಳ್ಳಲು ಇಲ್ಲಿದೆ ಸುಲಭ ಕಾರ್ತವೀರ್ಯಾರ್ಜುನ ಸ್ವಾಮಿ ಮಂತ್ರದ ತಂತ್ರ ವಿಧಾನ..

by admin
December 11, 2025
0

ನೀವು ಕಳೆದುಕೊಂಡು ನಿಮ್ಮ ಆಸ್ತಿಪಾಸ್ತಿ ಮರಳಿ ಸಿದ್ದಿಸಿಕೊಳ್ಳಲು ಇಲ್ಲಿದೆ ಸುಲಭ ಕಾರ್ತವೀರ್ಯಾರ್ಜುನ ಸ್ವಾಮಿ ಮಂತ್ರದ ತಂತ್ರ ವಿಧಾನ.. ಪ್ರತಿಯೊಬ್ಬರೂ ತುಂಬಾ ಕಷ್ಟಪಟ್ಟು ಕೆಲಸ ಮಾಡುವ ಮೂಲಕ ಅಥವಾ ನಿಮಗೆ...

RCB ಅಭಿಮಾನಿಗಳಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್

RCB ಅಭಿಮಾನಿಗಳಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್

by Shwetha
December 11, 2025
0

ಬೆಂಗಳೂರು ಕ್ರಿಕೆಟ್ ಅಭಿಮಾನಿಗಳಿಗೆ, ವಿಶೇಷವಾಗಿ RCB ಫ್ಯಾನ್ಸ್‌ಗಳಿಗೆ ರಾಜ್ಯ ಸರ್ಕಾರದಿಂದ ಸಂತಸದ ಸುದ್ದಿ ಬಂದಿದೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿರುವಂತೆ, ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ IPL ಸೇರಿದಂತೆ ಕ್ರಿಕೆಟ್...

ಕರ್ನಾಟಕ ಭೂ ಕಂದಾಯ ಕಾಯ್ದೆ 1964: ಪ್ರಮುಖ ತಿದ್ದುಪಡಿ ಮಂಡನೆಗೆ ರಾಜ್ಯ ಸರ್ಕಾರ ಸಜ್ಜು

ಕರ್ನಾಟಕ ಭೂ ಕಂದಾಯ ಕಾಯ್ದೆ 1964: ಪ್ರಮುಖ ತಿದ್ದುಪಡಿ ಮಂಡನೆಗೆ ರಾಜ್ಯ ಸರ್ಕಾರ ಸಜ್ಜು

by Shwetha
December 11, 2025
0

ರಾಜ್ಯದಲ್ಲಿ ಭೂ ಸಂಬಂಧಿತ ಕಾನೂನುಗಳನ್ನು ಸ್ಮಾರ್ಟ್ ಮತ್ತು ಸುಗಮಗೊಳಿಸುವ ನಿಟ್ಟಿನಲ್ಲಿ ಬಹು ನಿರೀಕ್ಷಿತ ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ತಿದ್ದುಪಡಿ ಮಂಡನೆಗೆ ಬರುತ್ತಿದೆ. ರಾಜ್ಯ ರೆವಿನ್ಯೂ...

ಧರ್ಮಸ್ಥಳದ ವಿರುದ್ಧದ ಮಹಾ ಷಡ್ಯಂತ್ರ ಬಯಲು: ಶವ ಹೂತ ಕಥೆ ಕಟ್ಟಿದ ಬುರುಡೆ ಗ್ಯಾಂಗ್‌ಗೆ ಸಂಕಷ್ಟ, ಕ್ಷೇತ್ರಕ್ಕೆ ಸಿಕ್ತು ಕ್ಲೀನ್ ಚಿಟ್!

ಧರ್ಮಸ್ಥಳದ ವಿರುದ್ಧದ ಮಹಾ ಷಡ್ಯಂತ್ರ ಬಯಲು: ಶವ ಹೂತ ಕಥೆ ಕಟ್ಟಿದ ಬುರುಡೆ ಗ್ಯಾಂಗ್‌ಗೆ ಸಂಕಷ್ಟ, ಕ್ಷೇತ್ರಕ್ಕೆ ಸಿಕ್ತು ಕ್ಲೀನ್ ಚಿಟ್!

by Shwetha
December 11, 2025
0

ಬೆಳ್ತಂಗಡಿ: ನಾಡಿನ ಪವಿತ್ರ ಯಾತ್ರಾ ಸ್ಥಳ ಶ್ರೀಕ್ಷೇತ್ರ ಧರ್ಮಸ್ಥಳದ ಪಾವಿತ್ರ್ಯತೆಗೆ ಧಕ್ಕೆ ತರುವ ದುರುದ್ದೇಶದಿಂದ ಹೆಣೆಯಲಾದ ನೂರಾರು ಶವಗಳನ್ನು ಹೂಳಲಾಗಿದೆ ಎಂಬ ಭಾರಿ ಷಡ್ಯಂತ್ರದ ಮುಖವಾಡ ಕಳಚಿದೆ....

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram