ಶ್ರೇಯಸ್ ಅಯ್ಯರ್ ಗೆ ಶಾಕ್.. ಹಾರ್ದಿಕ್ ಪಾಂಡ್ಯಗೆ ಬಂಪರ್..
15 ನೇ ಆವೃತ್ತಿಯ ಐಪಿಎಲ್ ನಲ್ಲಿ ಅಹಮದಾಬಾದ್ ಪ್ರಾಂಚೈಸಿ ಅದೃಷ್ಠ ಪರೀಕ್ಷೆಗೆ ಇಳಿಯಲಿದೆ. ಮೆಗಾ ಹರಾಜಿಗಾಗಿ ಎದುರು ನೋಡುತ್ತಿರುವ ಅಹಮದಾಬಾದ್, ಈಗಾಗಲೇ ಸಪೋರ್ಟಿಂಗ್ ಸ್ಟಾಪ್ ಆಗಿ ಮುಖ್ಯ ಕೋಚ್ (ಆಶಿಶ್ ನೆಹ್ರಾ), ಮೆಂಟರ್ (ಗ್ಯಾರಿ ಕರ್ಸ್ಟನ್) ನೇಮಕ ಮಾಡಿಕೊಂಡಿದೆ.
ಈ ಮಧ್ಯೆ ಅಹಮದಾಬಾದ್ ತಂಡಕ್ಕೆ ಶ್ರೇಯಸ್ ಅಯ್ಯರ್ ನಾಯಕರಾಗಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಅವರಿಗೆ 15 ಕೋಟಿ ರುಪಾಯಿ ಕೊಟ್ಟು ಫಿಕ್ಸ್ ಮಾಡಿಕೊಂಡಿದೆ ಎನ್ನವ ವರದಿಗಳು ಹರಿದಾಡಿದ್ದವು. ಈ ಬಗ್ಗೆ ಅಹಮದಾಬಾದ್ ತಂಡ ಯಾವುದೇ ಅಧಿಕೃತ ಪ್ರಕರಣೆ ಮಾಡಿರಲಿಲ್ಲ.
ಆದ್ರೆ ಇದೀಗ ಅಹಮದಾಬಾದ್ ತಂಡ ಶ್ರೇಯಸ್ ಅಯ್ಯರ್ ಬದಲಿಗೆ ಟೀಂ ಇಂಡಿಯಾದ ಆಲ್ ರೌಂಡ್ ಹಾರ್ದಿಕ್ ಪಾಂಡ್ಯಗೆ ಮಣೆ ಹಾಕಿದೆ ಎನ್ನುವ ವಾರ್ತೆಗಳು ಬರುತ್ತಿವೆ.
ಅಹಮದಾಬಾದ್ ಫ್ರಾಂಚೈಸಿ ಯುವ ಬ್ಯಾಟರ್ ಅಯ್ಯರ್ ಬದಲಿಗೆ ಆಲ್ ರೌಂಡರ್ ಹಾರ್ದಿಕ್ ಗೆ ತಂಡದ ನಾಯಕತ್ವ ನೀಡಲು ಮುಂದಾಗಿದೆಯಂತೆ.
ಇದಲ್ಲದೇ ಆಫ್ಘಾನಿಸ್ತಾನ್ ಸ್ಪಿನ್ನರ್ ರಶೀದ್ ಖಾನ್, ಯುವ ಬ್ಯಾಟರ್ ಇಶಾನ್ ಕಿಶಾನ್ ಅವರ ಹೆಸರು ಕೂಡ ಈ ಪಟ್ಟಿಯಲ್ಲಿದೆ ಎಂದು ಹೇಳಲಾಗುತ್ತಿದೆ.
ಏತನ್ಮಧ್ಯೆ, ಅಹಮದಾಬಾದ್ ಜೊತೆಗೆ ಲಕ್ನೋ ಕೂಡ ನಾಯಕತ್ವಕ್ಕಾಗಿ ಪೈಪೋಟಿ ನಡೆಸುತ್ತಿದೆ. ಸಂಜೀವ್ ಗೋಯೆಂಕಾ ನೇತೃತ್ವದ ಫ್ರಾಂಚೈಸಿ ಆಂಡಿ ಫ್ಲವರ್ ಅವರನ್ನು ಮುಖ್ಯ ಕೋಚ್ ಮತ್ತು ಗೌತಮ್ ಗಂಭೀರ್ ಅವರನ್ನು ಮೆಂಟರ್ ಆಗಿ ನೇಮಿಸಿದೆ.
ಆದರೆ ನಾಯಕತ್ವದ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಮಾಡಲಾಗಿಲ್ಲ. ಆದರೆ, ನಾಯಕನಾಗಿ ಕೆಎಲ್ ರಾಹುಲ್ ಅವರನ್ನು ಅಂತಿಮಗೊಳಿಸಲಾಗಿದೆ ಎಂಬ ಮಾತು ಕೇಳಿಬರುತ್ತಿದೆ.