ADVERTISEMENT
Wednesday, July 15, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಏಜೀಸ್ ಫೆಡರಲ್ ಲೈಫ್ ಇನ್ಶೂರೆನ್ಸ್ ನವದೆಹಲಿ ಮ್ಯಾರಾಥಾನ್ ಗೆದ್ದ ಶ್ರೀನು ಬುಗಥಾ

Namratha Rao by Namratha Rao
March 7, 2021
in Newsbeat, Sports, ಕ್ರೀಡೆ
Shrinu Bugatha
Share on FacebookShare on TwitterShare on WhatsappShare on Telegram

ಒಲಿಂಪಿಕ್ಸ್ ಅರ್ಹತೆ ಗುರಿಯನ್ನು ಸ್ವಲ್ಪದರಲ್ಲೇ ತಪ್ಪಿಸಿಕೊಂಡ ಶ್ರೀನು

ನವದೆಹಲಿ: ವಿಝಿಯನಗರಂನ ಶ್ರೀನು ಬುಗಥಾ ಇಲ್ಲಿ ಭಾನುವಾರ ನಡೆದ ಏಜೀಸ್ ಫೆಡರಲ್ ಲೈಫ್ ಇನ್ಶೂರೆನ್ಸ್ ನವದೆಹಲಿ ಮ್ಯಾರಾಥಾನ್ ಓಟದಲ್ಲಿ ಟೋಕಿಯೋ ಒಲಿಂಪಿಕ್ಸ್‍ನ ಅರ್ಹತಾ ಗುರಿಯನ್ನು ಕೆಲವೇ ಕೆಲವು ನಿಮಿಷಗಳಲ್ಲಿ ತಪ್ಪಿದರು. ಆದರೆ ಸ್ಪರ್ಧೆಯಲ್ಲಿ ಸುಲಭವಾಗಿ ಗೆದ್ದ ಶ್ರೀನು ಚಾಂಪಿಯನ್ ಆಗಿ ಹೊರಹೊಮ್ಮಿದರು.

Related posts

2030ರೊಳಗೆ ಮಲೇರಿಯಾ ಮುಕ್ತ ಭಾರತ; ಕೇಂದ್ರ ಸರ್ಕಾರದ ಗುರಿ

2030ರೊಳಗೆ ಮಲೇರಿಯಾ ಮುಕ್ತ ಭಾರತ; ಕೇಂದ್ರ ಸರ್ಕಾರದ ಗುರಿ

July 15, 2026
ಬಡವರ ಪಿಂಚಣಿಗೆ ಕತ್ತರಿ ಹಾಕಿ ಕಾಂಗ್ರೆಸ್ ಕಾರ್ಯಕರ್ತರಿಗೆ ಗಂಜಿ ಕೇಂದ್ರ: ಭಾರತ್ ಜೋಡೋ ಸಂಘ ಸ್ಥಾಪನೆ ಹಿಂದಿನ ಅಸಲಿ ಬಣ್ಣ ಬಯಲು ಮಾಡಿದ್ರ ಆರ್ ಅಶೋಕ್!?

ಬಡವರ ಪಿಂಚಣಿಗೆ ಕತ್ತರಿ ಹಾಕಿ ಕಾಂಗ್ರೆಸ್ ಕಾರ್ಯಕರ್ತರಿಗೆ ಗಂಜಿ ಕೇಂದ್ರ: ಭಾರತ್ ಜೋಡೋ ಸಂಘ ಸ್ಥಾಪನೆ ಹಿಂದಿನ ಅಸಲಿ ಬಣ್ಣ ಬಯಲು ಮಾಡಿದ್ರ ಆರ್ ಅಶೋಕ್!?

July 15, 2026

ಆರ್ಮಿ ಕ್ರೀಡಾ ಸಂಸ್ಥೆಯ ಅಗ್ರ ಓಟಗಾರ ತಮ್ಮ ವೈಯಕ್ತಿಕ ಶ್ರೇಷ್ಠ 2 ಗಂಟೆ 14 ನಿಮಿಷ 59 ಸೆಕೆಂಡ್‍ಗಳಲ್ಲಿ ಓಟ ಪೂರ್ಣಗೊಳಿಸಿದರು. ಒಲಿಂಪಿಕ್ಸ್‍ಗೆ ಅರ್ಹತೆ ಪಡೆಯಲು ಓಟವನ್ನು 2 ಗಂಟೆ 11 ನಿಮಿಷ 30 ಸೆಕೆಂಡ್‍ಗಳಲ್ಲಿ ಮುಗಿಸಬೇಕಿತ್ತು.

ಒಲಿಂಪಿಕ್ಸ್‍ನಲ್ಲಿ ಸತತ 3ನೇ ಬಾರಿಗೆ ಸ್ಪರ್ಧಿಸುವ ಗುರಿಯೊಂದಿಗೆ ಕಣಕ್ಕಿಳಿದಿದ್ದ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತೆ ಸುಧಾ ಸಿಂಗ್, 2 ಗಂಟೆ 43 ನಿಮಿಷ 31 ಸೆಕೆಂಡ್‍ಗಳಲ್ಲಿ ಓಟ ಮುಗಿಸಿ ಮಹಿಳೆಯರ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದರು. ಆದರೆ ಟೋಕಿಯೋ ಒಲಿಂಪಿಕ್ಸ್‍ಗೆ ಅರ್ಹತೆ ಗಳಿಸಲು ಈ ಪ್ರಯತ್ನ ಸಾಕಾಗಲಿಲ್ಲ. ಒಲಿಂಪಿಕ್ಸ್ ಅರ್ಹತೆಗೆ ಸುಧಾ ರಾಷ್ಟ್ರೀಯ ದಾಖಲೆ ಕೂಡ ಆದ 2 ಗಂಟೆ 30 ನಿಮಿಷಗಳಲ್ಲಿ ಓಟ ಪೂರ್ಣಗೊಳಿಸಬೇಕಿತ್ತು.

ಪ್ರಶಸ್ತಿ ವಿತರಣಾ ಸಮಾರಂಭದ ವೇಳೆ ಹಾಜರಿದ್ದ ಕೇಂದ್ರ ಕ್ರೀಡಾ ಸಚಿವ ಕಿರೆನ್ ರಿಜಿಜು, ಒಲಿಂಪಿಕ್ಸ್‍ನಲ್ಲಿ ದೇಶವನ್ನು ಪ್ರತಿನಿಧಿಸುವ ತಮ್ಮ ಕನಸನ್ನು ಬೆನ್ನತ್ತುವ ಪ್ರಯತ್ನವನ್ನು ಮುಂದುವರಿಸುವಂತೆ ಇಬ್ಬರು ಅಗ್ರ ಓಟಗಾರರಿಗೆ ಸಲಹೆ ನೀಡಿದರು.

Shrinu Bugatha

‘ನಿಮ್ಮ ಗೆಲುವು ಹಾಗೂ ಒಲಿಂಪಿಕ್ಸ್‍ಗೆ ಅರ್ಹತೆ ಪಡೆಯುವ ನಿಟ್ಟಿನಲ್ಲಿ ನೀವು ತೋರಿದ ಪ್ರಯತ್ನಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ನಿಮ್ಮ ಕಠಿಣ ಪರಿಶ್ರಮಕ್ಕೆ ಆದಷ್ಟು ಬೇಗ ಉತ್ತಮ ಪ್ರತಿಫಲ ದೊರೆಯಲಿದೆ ಎನ್ನುವ ನಂಬಿಕೆ ನನಗಿದೆ. ಸದ್ಯದಲ್ಲೇ ನೀವು ಲಯ ಕಂಡುಕೊಳ್ಳುತ್ತೀರಿ ಎನ್ನುವ ವಿಶ್ವಾಸವಿದೆ’ ಎಂದು ಕಿರೆನ್ ರಿಜಿಜು ಹೇಳಿದರು.

ಭಾರತೀಯ ಅಥ್ಲೆಟಿಕ್ಸ್ ಫೆಡರೇಷನ್ (ಎಎಫ್‍ಐ) ಹಾಗೂ ಫಿಟ್ ಇಂಡಿಯಾದ ಮಾನ್ಯತೆಯೊಂದಿಗೆ ಎನ್‍ಇಬಿ ಸ್ಪೋಟ್ರ್ಸ್ ಆಯೋಜಿಸಿದ ನವದೆಹಲಿ ಮ್ಯಾರಾಥಾನ್‍ನ ಶೀರ್ಷಿಕೆ ಪ್ರಾಯೋಜಕರಾದ ಏಜೀಸ್ ಫೆಡರಲ್ ಲೈಫ್ ಇನ್ಶೂರೆನ್ಸ್‍ನ ಚೀಫ್ ಮಾರ್ಕೆಟಿಂಗ್ ಅಧಿಕಾರಿ ಕಾರ್ತಿಕ್ ರಾಮನ್, ಶ್ರೀನು ಬುಗತಾ ತಮ್ಮ ಓಟದ ಅರ್ಧ ದೂರ ತಲುಪಿದ್ದಾಗ ರೇಸ್ ಹೆಡ್ ಕ್ವಾರ್ಟರ್ಸ್‍ನಲ್ಲಿ ಎಲ್ಲರೂ ಬಹಳ ಉತ್ಸಾಹದೊಂದಿಗೆ ವೀಕ್ಷಿಸುತ್ತಿದ್ದರು ಎನ್ನುವ ವಿಚಾರವನ್ನು ಬಹಿರಂಗಪಡಿಸಿದರು.

‘ಅವರು ಬಹಳ ಸೊಗಸಾಗಿ ಓಡಿದರು. ನಾವೆಲ್ಲರೂ ಅವರು ಒಲಿಂಪಿಕ್ಸ್ ಅರ್ಹತೆ ಗುರಿ ತಲುಪಲಿದ್ದಾರೆ ಎಂದುಕೊಂಡಿದ್ದೆವು’ ಎಂದು ಕಾರ್ತಿಕ್ ರಾಮನ್ ಹೇಳಿದರು. ‘ಆದರೂ, ಶ್ರೀನು ಅವರ ಪರಿಶ್ರಮ ಬಹಳ ಖುಷಿ ನೀಡಿತು. ಕೋವಿಡ್ ಸಂದರ್ಭದಲ್ಲೂ 1000 ಓಟಗಾರರು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದು ಪ್ರಶಂಸನೀಯ’ ಎಂದು ಕಾರ್ತಿಕ್ ರಾಮನ್ ಸಂತಸ ವ್ಯಕ್ತಪಡಿಸಿದರು.

ಪುರುಷರ ಎಲೈಟ್ ವಿಭಾಗದಲ್ಲಿ ಉತ್ತಾಖಂಡದ ನಿತೇಂದ್ರ ಸಿಂಗ್ ರಾವತ್ (2:18:54) ಹಾಗೂ ಆರ್ಮಿ ಕ್ರೀಡಾ ಸಂಸ್ಥೆಯ ರಾಶ್ಪಾಲ್ ಸಿಂಗ್ (2:18:57) ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ಗೆದ್ದರು. ಮಹಿಳೆಯರ ಎಲೈಟ್ ವಿಭಾಗದಲ್ಲಿ ಮಹಾರಾಷ್ಟ್ರದ ಜ್ಯೋತಿ ಗಾವಟೆ (2:58:23) ಹಾಗೂ ಲಡಾಖ್‍ನ ಜಿಗ್ಮೆತ್ ಡೋಲ್ಮಾ (3:04:52) ಕ್ರಮವಾಗಿ 2ನೇ ಹಾಗೂ 3ನೇ ಸ್ಥಾನ ಪಡೆದರು.

‘ಓಟದ ಉದ್ದಕ್ಕೂ ಎಲ್ಲೂ ಏನೂ ತೊಂದರೆ ಅನಿಸಲಿಲ್ಲ’ ಎಂದು ಶ್ರೀನು ಬುಗಥಾ ಓಟದ ಮುಗಿದ ಬಳಿಕ ಹೇಳಿದರು. ‘ಇಷ್ಟು ಹತ್ತಿರಕ್ಕೆ ಬಂದು ಅರ್ಹತಾ ಗುರಿಯನ್ನು ತಲುಪದೆ ಇರುವುದು ಬೇಸರ ಮೂಡಿಸಿತು. ಆದರೆ ನನ್ನ ಈ ಪ್ರಯತ್ನದಿಂದ ನಂಬಿಕೆ ಹೆಚ್ಚಾಗಿದೆ. ಸದ್ಯದಲ್ಲೇ ಒಲಿಂಪಿಕ್ಸ್‍ಗೆ ಅರ್ಹತೆ ಪಡೆಯಲಿದ್ದೇನೆ ಎನ್ನುವ ವಿಶ್ವಾಸವಿದೆ’ ಎಂದು ತಿಳಿಸಿದರು.

ಫಲಿತಾಂಶ
ಮ್ಯಾರಥಾನ್ (ಎಲೈಟ್ ವಿಭಾಗ)
ಪುರುಷ: 1.ಶ್ರೀನು ಬುಗಥಾ (2:14:59), 2.ನಿತೇಂದ್ರ ಸಿಂಗ್ ರಾವತ್ (2:18:54), 3.ರಾಶ್ಪಾಲ್ ಸಿಂಗ್ (2:18:57)
ಮಹಿಳೆ: 1.ಸುಧಾ ಸಿಂಗ್ (2:43:41), 2.ಜ್ಯೋತಿ ಗಾವಟೆ (2:58:23), ಜಿಗ್ಮೆತ್ ಡೋಲ್ಮಾ (3:04:53)

ಹಾಫ್ ಮ್ಯಾರಾಥಾನ್
ಪುರುಷ: 1. ಅಮರ್ ಸಿಂಗ್ ದೇವಾಂದ (1:13:58), 2.ಧನಂಜಯ ಶರ್ಮಾ (1:15:33), ಸಂಘ್ ಪ್ರಿಯಾ ಗೌತಮ್ (1:16:35)
ಮಹಿಳೆ: 1. ಜ್ಯೋತಿ ಚೌವ್ಹಾನ್ (1:20:57), 2.ಪೂಜಾ (1:28:39), 3. ತಾಶಿ ಲದೋಲ್ (1:30:13)

ಏಜೀಸ್ ಫೆಡರಲ್ ಲೈಫ್ ಇನ್ಶೂರೆನ್ಸ್ ನವದೆಹಲಿ ಮ್ಯಾರಾಥಾನ್ ಎಲೈಟ್ ಪುರುಷರ ವಿಭಾಗದಲ್ಲಿ ವಿಜೇತರ ಜೊತೆ ಪ್ರಶಸ್ತಿ ವಿತರಣಾ ಸಮಾರಂಭದ ವೇಳೆ ಕೇಂದ್ರ ಕ್ರೀಡಾ ಸಚಿವ ಕಿರೆನ್ ರಿಜಿಜು. ಪೋಡಿಯಂ ಮೇಲೆ ಶ್ರೀನು ಬುಗಥಾ (ಮಧ್ಯೆ), ನಿತೇಂದ್ರ ಸಿಂಗ್ ರಾವತ್ (ಎಡ) ಹಾಗೂ ರಾಶ್ಪಾಲ್ ಸಿಂಗ್(ಬಲ) ಇದ್ದಾರೆ.

 

Tags: New Delhi MarathonShrinu Bugatha
ShareTweetSendShare
Join us on:

Related Posts

2030ರೊಳಗೆ ಮಲೇರಿಯಾ ಮುಕ್ತ ಭಾರತ; ಕೇಂದ್ರ ಸರ್ಕಾರದ ಗುರಿ

2030ರೊಳಗೆ ಮಲೇರಿಯಾ ಮುಕ್ತ ಭಾರತ; ಕೇಂದ್ರ ಸರ್ಕಾರದ ಗುರಿ

by Shwetha
July 15, 2026
0

ಕೇಂದ್ರ ಸರ್ಕಾರವು 2030ರ ವೇಳೆಗೆ ಭಾರತವನ್ನು ಮಲೇರಿಯಾ ಮುಕ್ತ ರಾಷ್ಟ್ರವನ್ನಾಗಿ ಮಾಡುವ ಗುರಿ ಹೊಂದಿದೆ ಎಂದು ತಿಳಿಸಿದೆ. ಕೇಂದ್ರದ ಮಾಹಿತಿಯ ಪ್ರಕಾರ, 2015ರಿಂದ 2023ರ ಅವಧಿಯಲ್ಲಿ ದೇಶದಲ್ಲಿ...

ಬಡವರ ಪಿಂಚಣಿಗೆ ಕತ್ತರಿ ಹಾಕಿ ಕಾಂಗ್ರೆಸ್ ಕಾರ್ಯಕರ್ತರಿಗೆ ಗಂಜಿ ಕೇಂದ್ರ: ಭಾರತ್ ಜೋಡೋ ಸಂಘ ಸ್ಥಾಪನೆ ಹಿಂದಿನ ಅಸಲಿ ಬಣ್ಣ ಬಯಲು ಮಾಡಿದ್ರ ಆರ್ ಅಶೋಕ್!?

ಬಡವರ ಪಿಂಚಣಿಗೆ ಕತ್ತರಿ ಹಾಕಿ ಕಾಂಗ್ರೆಸ್ ಕಾರ್ಯಕರ್ತರಿಗೆ ಗಂಜಿ ಕೇಂದ್ರ: ಭಾರತ್ ಜೋಡೋ ಸಂಘ ಸ್ಥಾಪನೆ ಹಿಂದಿನ ಅಸಲಿ ಬಣ್ಣ ಬಯಲು ಮಾಡಿದ್ರ ಆರ್ ಅಶೋಕ್!?

by Shwetha
July 15, 2026
0

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಭಾರತ್ ಜೋಡೋ ಯುವ ಸಂಘಗಳ ಯೋಜನೆ ಈಗ ದೊಡ್ಡ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಈ ಯೋಜನೆಯು ಸಾಮಾನ್ಯ ಜನರಿಗಾಗಿ...

ಬಲೂಚಿಸ್ತಾನ್ ಸ್ವತಂತ್ರ ರಾಷ್ಟ್ರ ಘೋಷಣೆ: ಅಧಿಕೃತ ಮಾನ್ಯತೆ ಇನ್ನೂ ಇಲ್ಲ

ಬಲೂಚಿಸ್ತಾನ್ ಸ್ವತಂತ್ರ ರಾಷ್ಟ್ರ ಘೋಷಣೆ: ಅಧಿಕೃತ ಮಾನ್ಯತೆ ಇನ್ನೂ ಇಲ್ಲ

by Shwetha
July 15, 2026
0

ಸಾಮಾಜಿಕ ಜಾಲತಾಣಗಳಲ್ಲಿ ಬಲೂಚಿಸ್ತಾನ್ ಸ್ವತಂತ್ರ ರಾಷ್ಟ್ರ ಎಂದು ಘೋಷಿಸಿಕೊಂಡಿದೆ ಎಂಬ ಮಾಹಿತಿ ವ್ಯಾಪಕವಾಗಿ ಹರಿದಾಡುತ್ತಿದೆ. ಕೆಲ ಬಲೂಚ್ ಪ್ರತ್ಯೇಕತಾವಾದಿ ನಾಯಕರು ಸ್ವಾತಂತ್ರ್ಯ ಘೋಷಣೆ, ಹೊಸ ಧ್ವಜ, ರಾಷ್ಟ್ರಗೀತೆ,...

ರಾಮನ ಮನೆಗೇ ಕನ್ನ ಬಿದ್ದ ಮೇಲೆ ನಾವೆಲ್ಲಿಯ ವಿಶ್ವಗುರು? ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ಗಾಯಕಿ ಅನುರಾಧಾ ಪೌಡ್ವಾಲ್ ಆಕ್ರೋಶದ ನುಡಿ

ರಾಮನ ಮನೆಗೇ ಕನ್ನ ಬಿದ್ದ ಮೇಲೆ ನಾವೆಲ್ಲಿಯ ವಿಶ್ವಗುರು? ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ಗಾಯಕಿ ಅನುರಾಧಾ ಪೌಡ್ವಾಲ್ ಆಕ್ರೋಶದ ನುಡಿ

by Shwetha
July 15, 2026
0

ಭಾರತವು ವಿಶ್ವಗುರು ಆಗುತ್ತಿದೆ, ಜಗತ್ತೇ ನಮ್ಮತ್ತ ಬೆರಗು ಕಣ್ಣಿನಿಂದ ನೋಡುತ್ತಿದೆ ಎಂಬ ಮಾತುಗಳು ಕಳೆದ ಹತ್ತು ವರ್ಷಗಳಿಂದ ದೇಶಾದ್ಯಂತ ಮಾರ್ದನಿಸುತ್ತಿವೆ. ಆದರೆ ಈ ರಂಗು ರಂಗಿನ ಘೋಷಣೆಗಳ...

ರಾಜ್ಯದ ಯುವಕರಿಗೆ ಬಂಪರ್ ಆಫರ್: 10 ಸಾವಿರ ಭಾರತ್ ಜೋಡೋ ಸಂಘ ಸ್ಥಾಪನೆಗೆ ಸಿಎಂ ಡಿಕೆ ಶಿವಕುಮಾರ್ ಆದೇಶ, ಪ್ರತಿ ಸಂಘಕ್ಕೆ ಸಿಗಲಿದೆ 10 ಲಕ್ಷ ರೂಪಾಯಿ

ರಾಜ್ಯದ ಯುವಕರಿಗೆ ಬಂಪರ್ ಆಫರ್: 10 ಸಾವಿರ ಭಾರತ್ ಜೋಡೋ ಸಂಘ ಸ್ಥಾಪನೆಗೆ ಸಿಎಂ ಡಿಕೆ ಶಿವಕುಮಾರ್ ಆದೇಶ, ಪ್ರತಿ ಸಂಘಕ್ಕೆ ಸಿಗಲಿದೆ 10 ಲಕ್ಷ ರೂಪಾಯಿ

by Shwetha
July 15, 2026
0

ಕರ್ನಾಟಕದ ಯುವ ಸಮೂಹದಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸುವ ಹಾಗೂ ಸಾಮಾಜಿಕ ಸಾಮರಸ್ಯವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರ ಅತ್ಯಂತ ಮಹತ್ವದ ನಿರ್ಧಾರ ಕೈಗೊಂಡಿದೆ....

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram