ಸಿದ್ದರಾಮಯ್ಯ ಏನು ಮಹಾ ಹರಿಶ್ಚಂದ್ರನಾ : ಏಕವಚನದಲ್ಲಿ ಹೆಚ್ ಡಿಕೆ ವಾಗ್ದಾಳಿ siddaramaiah
ಕೋಲಾರ : ಸಿದ್ದರಾಮಯ್ಯ ಏನು ಮಹಾ ಹರಿಶ್ಚಂದ್ರನಾ..? ಸಿದ್ದರಾಮಯ್ಯ 400-500 ಕೋಟಿ ಲೂಟಿ ಮಾಡಿದ್ದಾರೆ ಎಂದು ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.
ಬೈ ಎಲೆಕ್ಷನ್ ನಲ್ಲಿ ಜೆಡಿಎಸ್ ಹಣ ಪಡೆದು ಬಿಜೆಪಿಯನ್ನ ಗೆಲ್ಲಿಸಿದೆ ಎಂಬ ಆರೋಪದ ವಿಚಾರವಾಗಿ ಕೋಲಾರದಲ್ಲಿ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯ ಏನು ಮಹಾ ಹರಿಶ್ಚಂದ್ರನಾ..?
ಬೈ ಎಲೆಕ್ಷಣ್ ನಲ್ಲಿ ಬಿಜೆಪಿ ಗೆಲ್ಲಿಸಲು ಅವರೇ ಹಣ ಪಡೆದಿದ್ದಾರೆ. 2008ರಲ್ಲಿ ಯಡಿಯೂರಪ್ಪನವರಿಂದ ಹಣ ಪಡೆದಿದ್ದಾರೆ. ಈ ವಿಚಾರವನ್ನು ಸಿದ್ದರಾಮಯ್ಯ ಆಪ್ತರೇ ಹೇಳಿದ್ದಾರೆ ಎಂದು ಗುಡುಗಿದರು.
ಅಲ್ಲದೆ ಬೆಂಗಳೂರಿನಲ್ಲಿ 450 ಎಕರೆ ಭೂ ಹಗರಣ ಮಾಡಿದ್ದಾರೆ ಎಂದು ಆರೋಪಿಸಿದ ಹೆಚ್ ಡಿಕೆ, ಕೆಂಪಣ್ಣ ಆಯೋಗ ಮಾಡಿ 400-500 ಕೋಟಿ ಲೂಟಿ ಮಾಡಿದರು.
ಸಿದ್ದರಾಮಯ್ಯನವರು ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು. ನಾನು ಅವರಿಂದ ಕಲಿಯಬೇಕಿಲ್ಲ ಎಂದು ಗರಂ ಆದರು.