Saturday, August 13, 2022
  • Home
  • About Us
  • Contact Us
  • Privacy Policy
  • Home
  • Newsbeat
  • Samagra karnataka
    • State
    • Hale Mysore
    • Coastal Karnataka
    • Malenadu Karnataka
    • Kalyana karnataka
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • More
    • IPL 2020
    • IPL 2021
    • Health
    • Saaksha Special
    • Marjala Manthana
    • Life Style
    • Cooking
    • Bigg Boss 8
    • Viral News
    • GALLERY
    • TECHNOLOGY
No Result
View All Result
Home Newsbeat

Siddaramaiah | ನಿಮ್ಮ ಸರ್ಕಾರದ ಸಾಧನೆ ಏನು ಬಿ.ಸಿ.ನಾಗೇಶ್?

Mahesh M Dhandu by Mahesh M Dhandu
July 8, 2022
in Newsbeat, Politics, ರಾಜಕೀಯ
0
karnataka-bjp-tweet reaction on siddaramaiah statement saaksha tv

karnataka-bjp-tweet reaction on siddaramaiah statement saaksha tv

0
SHARES
0
VIEWS
Share on FacebookShare on TwitterShare on WhatsappShare on Telegram

Siddaramaiah | ನಿಮ್ಮ ಸರ್ಕಾರದ ಸಾಧನೆ ಏನು ಬಿ.ಸಿ.ನಾಗೇಶ್?

ಬೆಂಗಳೂರು : ನಾವು ಕೈಗೊಂಡ ಕ್ರಮಗಳಿಂದಾಗಿ ಭಾರತ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಮತ್ತು ಎನ್‍ಸಿಇಆರ್‌‌ಟಿ ಯು ರಾಜ್ಯದ ಶಾಲೆಗಳಲ್ಲಿ 3,5,8 ನೇ ತರಗತಿಗಳಲ್ಲಿ ಕಲಿಯುತ್ತಿದ್ದ 1.29 ಲಕ್ಷ ವಿದ್ಯಾರ್ಥಿಗಳಿಗೆ ನಡೆಸಿದ ರಾಷ್ಟ್ರೀಯ ಸಾಧನೆ ಸಮೀಕ್ಷೆಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿತ್ತು. ನಿಮ್ಮ ಸರ್ಕಾರದ ಸಾಧನೆ ಏನು ಬಿ.ಸಿ.ನಾಗೇಶ್ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

Related posts

the-first-look-of-vamana-will-be-released-on-august-15 saaksha tv

Vamana | ಇದೇ 15ಕ್ಕೆ ವಾಮನ ಮೊದಲ‌ ನೋಟ ಅನಾವರಣ

August 13, 2022
K S Eshwarappa Nehru's culture is like Jinnah's culture saaksha tv

K S Eshwarappa | ನೆಹರೂ ಸಂಸ್ಕೃತಿ ಎಂದರೆ ಜಿನ್ನಾ ಸಂಸ್ಕೃತಿ ಇದ್ದಂತೆ

August 13, 2022

ಸಿದ್ದರಾಮಯ್ಯ ಅವರು ತಮ್ಮ ಸರ್ಕಾರದ ಅವಧಿಯಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಎಷ್ಟು ಒತ್ತು ಕೊಟ್ಟಿದ್ದರು? ಆ ಸರ್ಕಾರ ಶೈಕ್ಷಣಿಕ ವರ್ಷದ ಕೊನೆಯಲ್ಲಿ ಶೂ, ಸಾಕ್ಸ್ ಮತ್ತು ಸೈಕಲ್ ಗಳನ್ನು ವಿತರಿಸುತ್ತಿದ್ದರು. ಅವರ ಸರ್ಕಾರದಲ್ಲಿ ಎಷ್ಟು ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡಿಕೊಂಡಿದ್ದರು ಎಂದು ಸಚಿವ ಬಿ.ಸಿ.ನಾಗೇಶ್ ಹೇಳಿಕೆ ನೀಡಿದ್ದರು.

ಇದಕ್ಕೆ ಟ್ವಿಟ್ಟರ್ ನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದು, ಮಕ್ಕಳು ಶಾಲೆಗೆ ಬರೋದು ಶೂ, ಸಾಕ್ಸ್ ಗಳಿಗಲ್ಲ ಎಂಬ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರ ಹೇಳಿಕೆ  ಅಮಾನವೀಯ ಮತ್ತು ಕ್ರೂರತನದ್ದಾಗಿದೆ. ನಾಲ್ಕಾರು ಮೈಲು ಬರಿಗಾಲಲ್ಲಿ ನಡೆದು ಶಾಲೆಗೆ ಬರುವ ಬಡ ಮಕ್ಕಳ ಕಷ್ಟ ತಿಳಿದಿದ್ದರೆ ಶಿಕ್ಷಣ ಸಚಿವರು ಇಷ್ಟೊಂದು ಸಂವೇದನಾರಹಿತರಾಗಿ ಮಾತನಾಡುತ್ತಿರಲಿಲ್ಲ.

siddaramaiah-questioned What is the achievement of your government BC Nagesh Saaksha Tv
siddaramaiah-questioned What is the achievement of your government BC Nagesh Saaksha Tv

ದಲಿತರು, ಅಲೆಮಾರಿಗಳು, ಹಿಂದುಳಿದವರು ಹಾಗೂ ಎಲ್ಲ ಜಾತಿಯ ಬಡವರ ಮಕ್ಕಳಿಗೆ ಸಣ್ಣ ಸ್ವಾಭಿಮಾನ ಇರಲಿ, ಕಲಿಯುವ, ಶಾಲೆಗೆ ಹೋಗುವ ಹುಮ್ಮಸ್ಸು ಬರಲಿ ಎಂಬ ಕಾರಣಕ್ಕೆ ನಾವು ಮಕ್ಕಳ ಸ್ನೇಹಿಯಾದ ಯೋಜನೆಗಳನ್ನು ಜಾರಿಗೆ ತಂದಿದ್ದೆವು. ಬಿ.ಸಿ.ನಾಗೇಶ್ ಅವರೇ, ಭ್ರಷ್ಟಾಚಾರದಲ್ಲಿ ಮುಳುಗಿರುವ ನಿಮಗೆ ಇದೆಲ್ಲಿ ಅರ್ಥವಾದೀತು ಎಂದು ಪ್ರಶ್ನಿಸಿದ್ದಾರೆ.

ನಮ್ಮ ಸರ್ಕಾರದ ಅವಧಿಯಲ್ಲಿ 7905 ಪ್ರಾಥಮಿಕ ಶಾಲಾ ಶಿಕ್ಷಕರು, 1689 ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಮಾಡಿದ್ದೆವು. 10,000 ಪಧವೀಧರ ವಿಷಯವಾರು ಶಿಕ್ಷಕರು, ದೈಹಿಕ ಶಿಕ್ಷಕರು ಹಾಗೂ ಗ್ರಂಥಪಾಲಕರ ನೇಮಕಾತಿ ಪ್ರಕ್ರಿಯೆಯು ಅಂತಿಮ ಹಂತಕ್ಕೆ ಬಂದಿತ್ತು.ಇದರಿಂದಾಗಿ ಒಟ್ಟು 20,000 ಶಿಕ್ಷಕರ ನೇಮಕಾತಿ ಮಾಡಿದಂತಾಗಿತ್ತು.

ನಮ್ಮ ಅವಧಿಯಲ್ಲಿ 20,000 ಅತಿಥಿ ಶಿಕ್ಷಕರು, 1,763 ಪಿಯು ಕಾಲೇಜುಗಳ ಉಪನ್ಯಾಸಕರನ್ನು ನೇಮಕಾತಿ ಮಾಡಿದ್ದೆವು. ನಮ್ಮ ಸರ್ಕಾರ 47 ಲಕ್ಷ ಮಕ್ಕಳಿಗೆ ಸಮವಸ್ತ್ರ, ಶೂ, ಸಾಕ್ಸ್ ಹಾಗೂ 5 ಲಕ್ಷ ಮಕ್ಕಳಿಗೆ ಬೈಸಿಕಲ್ ನೀಡಿತ್ತು.

ಮಕ್ಕಳ ಕಲ್ಯಾಣಕ್ಕಾಗಿ ಇರುವ ಹಿಂದಿನ ಎಲ್ಲಾ ಯೋಜನೆಗಳನ್ನು ಮುಂದುವರೆಸಬೇಕು, ಶೂ, ಸಾಕ್ಸ್, ಸೈಕಲ್, ಹಾಲು, ಸಮವಸ್ತ್ರ, ಪುಸ್ತಕ, ವ್ಯವಸ್ಥಿತ ಕೊಠಡಿಗಳನ್ನು ಕೂಡಲೆ ಒದಗಿಸಬೇಕು, ಶಾಲಾ ಕೊಠಡಿಗಳ ದುರಸ್ತಿ ಮತ್ತು ಖಾಲಿಯಿರುವ ಶಿಕ್ಷಕ ಹುದ್ದೆಗಳ ಭರ್ತಿಗೆ ಶೀಘ್ರ ಕ್ರಮವಹಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸುತ್ತೇನೆ. 11/11#SaveSchools

— Siddaramaiah (@siddaramaiah) July 7, 2022

ನಾವು ಮಕ್ಕಳ ಪೌಷ್ಟಿಕತೆ ಹೆಚ್ಚಿಸುವುದಕ್ಕಾಗಿಯೆ ಕ್ಷೀರಭಾಗ್ಯ ಯೋಜನೆಯನ್ನು ಜಾರಿಗೆ ತಂದು ವಾರದಲ್ಲಿ 5 ದಿನ ಕೆನೆಭರಿತ ಹಾಲನ್ನು ನೀಡಿದ್ದೆವು.

ನಾವು ಗುಣಮಟ್ಟದ ಶಿಕ್ಷಣಕ್ಕಾಗಿಯೆ 1400 ಕ್ಕೂ ಹೆಚ್ಚು ಹಾಸ್ಟೆಲ್‍ಗಳು, ಆಶ್ರಮ ಶಾಲೆಗಳು ಮತ್ತು ವಸತಿ ಶಾಲೆಗಳನ್ನು ನಿರ್ಮಿಸಿದ್ದೆವು. ನನಗಿರುವ ಮಾಹಿತಿ ಪ್ರಕಾರ 71,279 ಕೊಠಡಿಗಳ ನವೀಕರಣ, ಪುನರ್ ನವೀಕರಣ ಕಾರ್ಯಗಳನ್ನು ಪೂರ್ಣಗೊಳಿಸಿದ್ದೇವೆ ಬಿ.ಸಿ.ನಾಗೇಶ್.

ಶಿಕ್ಷಣ ಸಚಿವ  ಬಿ.ಸಿ.ನಾಗೇಶ್  ಅವರೇ, ಬಿಜೆಪಿ ಸರ್ಕಾರ ಎಷ್ಟು ಜನ ಶಿಕ್ಷಕರನ್ನು ನೇಮಕ ಮಾಡಿದೆ? ಎಷ್ಟು ಜನ ಮಕ್ಕಳಿಗೆ ಸೈಕಲ್ ನೀಡಿದೆ? ಎಷ್ಟು ಶಾಲೆಗಳನ್ನು, ವಸತಿ ಶಾಲೆಗಳನ್ನು ನಿರ್ಮಿಸಿದೆ? ಎಂಬ ಲೆಕ್ಕವನ್ನು ರಾಜ್ಯದ ಜನರ ಮುಂದಿಡಿ.  

ಸರ್ಕಾರವೆ ಹೈ ಕೋರ್ಟಿಗೆ ಸಲ್ಲಿಸಿರುವ ವರದಿ ಪ್ರಕಾರ ಸುಮಾರು 10.12 ಲಕ್ಷ ಮಕ್ಕಳು ಶಾಲೆಯಿಂದ ಹೊರಗೆ ಇದ್ದಾರೆ. ಬಿ.ಸಿ.ನಾಗೇಶ್ ಅವರೇ, ಈ ಮಕ್ಕಳ ಭವಿಷ್ಯ ಹಾಳಾದರೆ ಅದಕ್ಕೆ  ಬಿಜೆಪಿ ಸರ್ಕಾರದ ಬೇಜವಾಬ್ದಾರಿ ಮತ್ತು ನಿಮ್ಮ ಉಡಾಫೆತನವೇ ಕಾರಣವಾಗಲಿದೆ.

ಶಿಕ್ಷಣ ಸಚಿವ @BCNagesh_bjp ಅವರೇ, ನಿಮಗೆ ವಿದ್ಯಾರ್ಥಿಗಳ ಬಗ್ಗೆ ಕಾಳಜಿ, ಬದ್ಧತೆ ಇದ್ದರೆ ಪ್ರಾಥಮಿಕ & ಪ್ರೌಢ ಶಿಕ್ಷಣ ಇಲಾಖೆಯಲ್ಲಿ 2008ರಿಂದ ಈವರೆಗೆ ಏನೇನಾಗಿದೆ? ಯಾವ ಸಾಧನೆಗಳಾಗಿವೆ? ಹಾಗೂ ಈ 14 ವರ್ಷಗಳಲ್ಲಿ ಸದರಿ ಇಲಾಖೆಯಲ್ಲಿ ಖರ್ಚು ಮಾಡಿದ ಪ್ರತಿ ಪೈಸೆಗೂ ಸಂಬಂಧಿಸಿದಂತೆ ಶ್ವೇತ ಪತ್ರ ಹೊರಡಿಸಿ. 10/11#SaveSchools

— Siddaramaiah (@siddaramaiah) July 7, 2022

ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರೇ, ನಿಮಗೆ ವಿದ್ಯಾರ್ಥಿಗಳ ಬಗ್ಗೆ ಕಾಳಜಿ, ಬದ್ಧತೆ ಇದ್ದರೆ ಪ್ರಾಥಮಿಕ & ಪ್ರೌಢ ಶಿಕ್ಷಣ ಇಲಾಖೆಯಲ್ಲಿ 2008ರಿಂದ ಈವರೆಗೆ ಏನೇನಾಗಿದೆ? ಯಾವ ಸಾಧನೆಗಳಾಗಿವೆ? ಹಾಗೂ ಈ 14 ವರ್ಷಗಳಲ್ಲಿ ಸದರಿ ಇಲಾಖೆಯಲ್ಲಿ ಖರ್ಚು ಮಾಡಿದ ಪ್ರತಿ ಪೈಸೆಗೂ ಸಂಬಂಧಿಸಿದಂತೆ ಶ್ವೇತ ಪತ್ರ ಹೊರಡಿಸಿ.

ಮಕ್ಕಳ ಕಲ್ಯಾಣಕ್ಕಾಗಿ ಇರುವ ಹಿಂದಿನ ಎಲ್ಲಾ ಯೋಜನೆಗಳನ್ನು ಮುಂದುವರೆಸಬೇಕು, ಶೂ, ಸಾಕ್ಸ್, ಸೈಕಲ್, ಹಾಲು, ಸಮವಸ್ತ್ರ, ಪುಸ್ತಕ, ವ್ಯವಸ್ಥಿತ ಕೊಠಡಿಗಳನ್ನು ಕೂಡಲೆ ಒದಗಿಸಬೇಕು, ಶಾಲಾ ಕೊಠಡಿಗಳ ದುರಸ್ತಿ ಮತ್ತು ಖಾಲಿಯಿರುವ ಶಿಕ್ಷಕ ಹುದ್ದೆಗಳ ಭರ್ತಿಗೆ ಶೀಘ್ರ ಕ್ರಮವಹಿಸಬೇಕು ಎಂದು ಸರ್ಕಾರವನ್ನು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

Tags: #Saaksha TVB C NageshBJPCongressSiddaramaiah
ShareTweetSendShare

Related Posts

the-first-look-of-vamana-will-be-released-on-august-15 saaksha tv

Vamana | ಇದೇ 15ಕ್ಕೆ ವಾಮನ ಮೊದಲ‌ ನೋಟ ಅನಾವರಣ

by Mahesh M Dhandu
August 13, 2022
0

Vamana | ಇದೇ 15ಕ್ಕೆ ವಾಮನ ಮೊದಲ‌ ನೋಟ ಅನಾವರಣ ಬಜಾರ್, ಬೈ ಟು ಲವ್ ಸಿನಿಮಾ ಖ್ಯಾತಿಯ ಧನ್ವೀರ್ ಗೌಡ ನಟಿಸ್ತಿರುವ ಬಹು ನಿರೀಕ್ಷಿತ ಸಿನಿಮಾ...

K S Eshwarappa Nehru's culture is like Jinnah's culture saaksha tv

K S Eshwarappa | ನೆಹರೂ ಸಂಸ್ಕೃತಿ ಎಂದರೆ ಜಿನ್ನಾ ಸಂಸ್ಕೃತಿ ಇದ್ದಂತೆ

by Mahesh M Dhandu
August 13, 2022
0

K S Eshwarappa | ನೆಹರೂ ಸಂಸ್ಕೃತಿ ಎಂದರೆ ಜಿನ್ನಾ ಸಂಸ್ಕೃತಿ ಇದ್ದಂತೆ ಶಿವಮೊಗ್ಗ  : ರಾಜ್ಯದ ೧.೨೦ ಕೋಟಿ ಮನೆಗಳಲ್ಲಿ ತಿರಂಗ ಧ್ವಜ ಹಾರಿಸಲಾಗುತ್ತಿದೆ. ಅಮೃತ...

Har Ghar Tiranga

Har Ghar Tiranga | ಮನೆ ಮನೆಯಲ್ಲೂ ತ್ರಿವರ್ಣ

by Mahesh M Dhandu
August 13, 2022
0

Har Ghar Tiranga | ಮನೆ ಮನೆಯಲ್ಲೂ ತ್ರಿವರ್ಣ ಹರ್ ಘರ್ ತಿರಂಗಾ ಅಭಿಯಾನ ಶುರು ಮನೆ ಮನೆಯಲ್ಲೂ ತಿರಂಗಾ ಹಾರಾಟ ದೇಶದ ಎಲ್ಲೆಡೆ ರಾಷ್ಟ್ರಪ್ರೇಮದ ಕೂಗು...

National Herald case:  3ನೇ ಸುತ್ತಿನ ವಿಚಾರಣೆ ED  ಮುಂದೆ ಹಾಜರಾದ ಸೋನಿಯಾ ಗಾಂಧಿ…

Sonia Gandhi – 2 ತಿಂಗಳಲ್ಲಿ ಎರಡನೇ ಬಾರಿ ಕೊರೊನಾ ಸೋಂಕಿಗೆ ತುತ್ತಾದ ಸೋನಿಯಾ ಗಾಂಧಿ

by Naveen Kumar B C
August 13, 2022
0

2 ತಿಂಗಳಲ್ಲಿ ಎರಡನೇ ಬಾರಿ ಕೊರೊನಾ ಸೋಂಕಿಗೆ ತುತ್ತಾದ ಸೋನಿಯಾ ಗಾಂಧಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಅವರಿಗೆ ಮತ್ತೊಮ್ಮೆ ಕೊರೊನಾ ಸೋಂಕು ದೃಢಪಟ್ಟಿದೆ. ಪಕ್ಷದ ಪ್ರಧಾನ...

Har Ghar Tiranga: ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಚಾಲನೆ ನೀಡಿದ ಯೋಗಿ…

Har Ghar Tiranga: ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಚಾಲನೆ ನೀಡಿದ ಯೋಗಿ…

by Naveen Kumar B C
August 13, 2022
0

Har Ghar Tiranga: ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಚಾಲನೆ ನೀಡಿದ ಯೋಗಿ… ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಶನಿವಾರ ತಮ್ಮ ಅಧಿಕೃತ ನಿವಾಸದಲ್ಲಿ ತ್ರಿವರ್ಣ...

Load More

POPULAR NEWS

  • ಕಾರ್ನಾಡ್ ಸದಾಶಿವರಾಯರೆಂಬ ಪ್ರಾತಃಸ್ಮರಣೀಯರ ಬದುಕು, ಆದರ್ಶ ಮತ್ತು ತ್ಯಾಗ

    ಕಾರ್ನಾಡ್ ಸದಾಶಿವರಾಯರೆಂಬ ಪ್ರಾತಃಸ್ಮರಣೀಯರ ಬದುಕು, ಆದರ್ಶ ಮತ್ತು ತ್ಯಾಗ

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • Honey Trap | ನವ್ಯ ಶ್ರೀ ಹನಿಟ್ರ್ಯಾಪ್ ಕೇಸ್ : ರಾಜ್ಯ ಕಾಂಗ್ರೆಸ್ ಗೆ ಮುಜುಗರ

    0 shares
    Share 0 Tweet 0
  • Astrology: ಮಹಾಲಕ್ಷ್ಮಿಯ ಈ ಮಂತ್ರವನ್ನು 108 ಬಾರಿ ಹೇಳಿದ್ರೆ ನಿಮ್ಮ ಜೀವನದಲ್ಲಿ ನಡೆಯೋದೆಲ್ಲಾ ಪವಾಡಗಳೇ ಕಷ್ಟಗಳು ನಿಮ್ಮ ಹತ್ತಿರಾ ಕೂಡಾ ಸುಳಿಯುವುದಿಲ್ಲಾ…!!!

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

the-first-look-of-vamana-will-be-released-on-august-15 saaksha tv

Vamana | ಇದೇ 15ಕ್ಕೆ ವಾಮನ ಮೊದಲ‌ ನೋಟ ಅನಾವರಣ

August 13, 2022
K S Eshwarappa Nehru's culture is like Jinnah's culture saaksha tv

K S Eshwarappa | ನೆಹರೂ ಸಂಸ್ಕೃತಿ ಎಂದರೆ ಜಿನ್ನಾ ಸಂಸ್ಕೃತಿ ಇದ್ದಂತೆ

August 13, 2022
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Politics
  • News
  • Business
  • Culture
  • National
  • Sports
  • Lifestyle
  • Travel
  • Opinion

© 2022 SaakshaTV - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram