ದೇಶದಲ್ಲಿಯೇ ಯಡಿಯೂರಪ್ಪ ಅಸಮರ್ಥ ಮುಖ್ಯಮಂತ್ರಿ – ಸಿದ್ದರಾಮಯ್ಯ
ಕೇಂದ್ರ ಸರ್ಕಾರದ ಆದೇಶದಂತೆ ನಮಗೆ ಇನ್ನೂ ಆಕ್ಸಿಜನ್ ಬರ್ತಿಲ್ಲ. 1700 ಮೆಟ್ರಿಕ್ ಟನ್ ಕೊಡಿ ಎಂದು ಆದೇಶ ಆಗಿದೆ. ಆದ್ರೆ ಇವರು 1100-1200 ಮೆಟ್ರಿಕ್ ಟನ್ ಆಕ್ಸಿಜನ್ ಕೊಡ್ತಿದ್ದಾರೆ.. ಕೊರೊನಾ ನಿಯಂತ್ರಣದಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಕೋರ್ಟ್ ಆದೇಶದಂತೆ ಕೇಂದ್ರ ಸರ್ಕಾರ ನಡೆದುಕೊಳ್ಳಬೇಕಿದೆ ಎಂದು ಆಗ್ರಹಿಸಿದ್ದಾರೆ.
ಇನ್ನೂ ಕಾಂಗ್ರೆಸ್ ಮಹಿಳಾ ಘಟಕದ ವತಿಯಿಂದ ಮಕ್ಕಳಿಗೆ ಮಾಸ್ಕ್ ,ಔಷಧಿ, ಬಿಸ್ಕತ್ತು ಇರುವ ಪ್ಯಾಕೆಟ್ ವಿತರಣೆ ಮಾಡಲಾಗ್ತಿದೆ. ಮಹಿಳಾ ಕಾಂಗ್ರೆಸ್ ಕೆಲಸಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ನಾವು ವಿರೋಧ ಪಕ್ಷದಲ್ಲಿ ಇದ್ರೂ ಕೂಡ ಜನರ ಕಷ್ಟಕ್ಕೆ ಸ್ಪಂದಿಸಬೇಕು. ನಮ್ಮ ಶಾಸಕರು ಆ ಕೆಲಸ ಮಾಡ್ತಿದ್ದಾರೆ. ಸರ್ಕಾರದ ಬೇಜವಾಬ್ದಾರಿತನದಿಂದ ಬಹಳ ಜನ ಸಾವೀಗಿಡದ್ರು. ಚಾಮರಾಜನಗರದ ಕೇಸಲ್ಲಿ ಸರ್ಕಾರ ಸುಳ್ಳು ಹೇಳ್ತು. ಚಾಮರಾಜನಗರಕ್ಕೆ ನಾವು ಹೋಗದಿದ್ರೆ ಆ ಕೇಸ್ ಬೆಳಕಿಗೆ ಬರುತ್ತಿರಲಿಲ್ಲ. ರಾಜ್ಯಾದ್ಯಂತ ಸಾವಿರಾರು ಜನ ಆಕ್ಸಿಜನ್, ಬೆಡ್ ಮತ್ತು ರೆಮ್ಡಿಸಿವಿಯರ್ ಇಲ್ಲದೇ ಸತ್ತು ಹೋಗಿದ್ದಾರೆ.
ಆಕ್ಸಿಜನ್ ಇಲ್ಲದೇ ಸತ್ರೆ ಎರಡು ಲಕ್ಷ ಪರಿಹಾರ ಕೊಟ್ರೆ ಮುಗಿಯಿತಾ.. ಇದಕ್ಕೆ ಎಲ್ಲ ಸರ್ಕಾರ ಕಾರಣ..ಸಾವು ಸಂಭವಿಸಲು ಕಾರಣ ಸರ್ಕಾರ. ಈ ರೀತಿಯ ನರಹಂತಕ ಸರ್ಕಾರ ನಾನು ನೋಡಿರಲಿಲ್ಲ. ದೇಶದಲ್ಲಿಯೇ ಯಡಿಯೂರಪ್ಪ ಅಸಮರ್ಥ ಮುಖ್ಯಮಂತ್ರಿ ಎಂದಿದು ಕಿಡಿಕಾರಿದ್ದಾರೆ.
ಇದೇ ವೇಳೆ ರಾಜ್ಯದಲ್ಲಿ ವ್ಯಾಕ್ಸಿನ್ ಕೊರತೆ ಇದೆ. ಇನ್ನೂ ನಾಲ್ಕು ಕೋಟಿ ಜನರಿಗೆ ಲಸಿಕೆ ಕೊಡಬೇಕು. ಪ್ರತಿಯೊಬ್ಬರಿಗೂ ಎರಡು ಡೋಸ್ ಅಂತೆ ಎಂಟು ಕೋಟಿ ವ್ಯಾಕ್ಸಿನ್ ಬೇಕು. ವ್ಯಾಕ್ಸಿನ್ ಹೆಸರಲ್ಲಿ ಕೆಲವರು ದುಡ್ಡು ಹೊಡೆಯುತ್ತಿದ್ದಾರೆ. ಇದಕ್ಕೆ ಇವರು ಶಾಮೀಲು ಆಗಿದ್ದಾರೆ.
ಬ್ಲಾಕ್ ಫಂಗಸ್ ಚಿಮ್ಮನಕಟ್ಟಿ ಪತ್ನಿಗೆ ಬಂದಿದೆ. ಒಂದು ದಿನಕ್ಕೆ ಆರು ಇಂಜೆಕ್ಷನ್ ಬೇಕು..58 ಇಂಜೆಕ್ಷನ್ ಕೊಡಿಸುವ ಅಷ್ಟೋತ್ತಿಗೆ ಸಾಕಾಗಿಹೋಯಿತು. ಆಶೋಕ್, ಸುಧಕಾರ್, ಚೀಫ್ ಸೆಕ್ರೆಟರಿ ಮತ್ತು ಪ್ರೈವೇಟ್ ಆಸ್ಪತ್ರೆಗಳಿಗೆ ಕರೆ ಮಾಡಿ ಕೊಡಿಸಿದೆ. ನಮಗೆ ಈ ರೀತಿ ಆದ್ರೆ , ಸಾಮಾನ್ಯ ಜನರ ಪಾಡೇನು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.