ಗಾಯಕ ಸಿದ್ ಈಗ ಸಿನಿಮಾ ಹೀರೋ : ಹಿಟ್ ನಿರ್ದೇಶಕ ಯಾರ್ ಗೊತ್ತಾ.???
ಕನ್ನಡ ‘ಹಾಯಾಗಿದೆ ಎದೆಯೊಳಗೆ’ ಹಾಡಿನ ಮೂಲಕ ಕನ್ನಡಿಗರ ನಡುವೆ ಫೇಮಸ್ ಆಗಿದ್ದ ಗಾಯಕ ಸಿದ್ ಶ್ರೀರಾಮ್ ಗೆ ಇದೀಗ ಸಿನಿಮಾದಲ್ಲಿ ನಾಯಕನಾಗುವ ಆಫರ್ ಒಲಿದುಬಂದಿದೆ.. ಹೌದು.. ಖ್ಯಾತ ನಿರ್ದೇಶಕ ಮಣಿತ್ನಂ ಅವರು ಸಿದ್ ಶ್ರೀರಾಂಗೆ ಆಕ್ಷನ್ ಕಟ್ ಹೇಳ್ತಿದ್ದಾರೆ..
ಮೊದಲ ಬಾರಿಗೆ ಸಿದ್ ಹಿನ್ನೆಲೆ ಗಾಯನ ಆರಂಭಿಸಿದ್ದು ಕೂಡ ಮಣಿರತ್ನಂ ನಿರ್ಮಾಣದ ಸಿನಿಮಾಗಳ ಮೂಲಕವೇ. ‘ವಾನಮ್ ಕೊಟ್ಟತುಮ್’ ಸಿನಿಮಾಗೆ ಮೊದಲ ಬಾರಿಗೆ ಸಿದ್ ಹಿನ್ನೆಲೆ ಸಂಗೀತ ನೀಡಿ ಜೊತೆಗೆ ಹಾಡುಗಳನ್ನೂ ಕೂಡ ಕಂಪೋಸ್ ಮಾಡಿದ್ದರು.
ಅಂದ್ಹಾಗೆ ಸಿದ್ ಈಗಾಗಲೇ ನಟನಾಗಿ ಸಿನಿಮಾಗೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಆದ್ರೆ ಈ ಸಿನಿಮಾ ನಿರ್ಮಾಣ ಮಾಡುವುದು ಯಾರೆಂಬ ಪ್ರಶ್ನೆಗೆ ಇನ್ನೂ ನಿಖರವಾದ ಉತ್ತರ ಸಿಕ್ಕಿಲ್ಲ.. ಇನ್ನೂ ಅನೇಕ ಪ್ರತಿಭೆಗಳನ್ನ ಬೆಳೆಸಿರುವ ಸಂಗೀತ ನಿರ್ದೇಶಕ ಎ.ಆರ್ ರೆಹಮಾನ್ ಅವರೇ ಸಿದ್ ಅವರ ಪ್ರತಿಭೆಯನ್ನ ಗುರುತಿಸಿದ್ದರು..
ಬ್ರೂಕ್ಲಿ ವಿವಿಯಲ್ಲಿ ಸಂಗೀತ ವಿದ್ಯಾರ್ಥಿಯಾಗಿದ್ದ ಸಿದ್ ಅವರನ್ನ ಮಣಿರತ್ನಂ ನಿರ್ದೇಶನದ ‘ಕಡಲ್’ ಸಿನಿಮಾದಲ್ಲಿ ಹಾಡಿಸಿದ್ದವರು ರೆಹಮಾನ್. ‘ಅಡಿಯೇ’ ಹಾಡು ಹಾಡಲು ಅವಕಾಶ ಕೊಟ್ಟು ಸಿದ್ ಅವರನ್ನ ಬೆಳೆಸಿದ್ದರು.. ಗೆ 2013 ರಿಂದಲೂ ಸಿನಿಮಾರಂಗದಲ್ಲಿ ಸಕ್ರಿಯರಾಗಿರುವ ಸಿದ್ ಈವೇಳೆಗೆ ಹಿಟ್ ಗಾಯಕನಾಗಿ ಗುರುತಿಸಿಕೊಂಡಿದ್ದಾರೆ.. ತಮಿಳು , ತೆಲುಗು , ಕನ್ನಡದಲ್ಲೂ ಸೂಪರ್ ಹಿಟ್ ಹಾಡುಗಳಿಗೆ ಧ್ವನಿಯಾಗಿದ್ದಾರೆ.. ಅಷ್ಟೇ ಭಜರಂಗಿ 2 ಸಿನಿಮಾದ ಹಾಡಿಗೂ ಧ್ವನಿಯಾಗಿದ್ದಾರೆ.. ಇದರ ಹೊರತಾಗಿ ಲವ್ ಯೂ ರಚ್ಚು , ಸಖತ್ ಸಿನಿಮಾಗಳ ಹಾಡನ್ನೂ ಹಾಡಿ ಕನ್ನಡಿಗರಿಗೂ ಚಿರಪರಿಚಿತರಾಗಿದ್ದಾರೆ..