ಮಧ್ಯಪ್ರದೇಶದಲ್ಲಿ ದಲಿತರು, ಆದಿವಾಸಿಗಳ ಮೇಲೆ ದೌರ್ಜನ್ಯ ಎಸಗುವು ಪದ್ಧತಿ ಇಂದಿಗೂ ಮನಡೆಯುತ್ತಿದೆ. ಆದಿವಾಸಿ ವ್ಯಕ್ತಿ ಮೇಲೆ ಮೂತ್ರ ವಿಸರ್ಜನೆ, ದಲಿತರಿಗೆ ಮಲ ತಿನ್ನುವಂತೆ ಮುಸ್ಲಿಂರು ಒತ್ತಾಯಿಸಿದ ಪ್ರಕರಮದಲ್ಲಿ ಬೆನ್ನಲ್ಲಿಯೇ ಸದ್ಯ ಮತ್ತೊಂದು ಹೀನ ಪ್ರಕರಣ ಬೆಳಕಿಗೆ ಬಂದಿದೆ. ಆಕಸ್ಮಿಕವಾಗಿ ದಲಿತ ವ್ಯಕ್ತಿಯೊಬ್ಬ ಮೈ ಮುಟ್ಟಿದ ಎಂಬ ಕಾರಣಕ್ಕೆ ಒಬಿಸಿ ಸಮುದಾಯದ ವ್ಯಕ್ತಿ ದಲಿಯ ವ್ಯಕ್ತಿ ಮುಖ ಸೇರಿದಂತೆ ಮೈ ತುಂಬ ಮಲ ಮೆತ್ತುವ ಮೂಲಕ ಹೀನ ಮನಸ್ಥಿತಿ ಪ್ರದರ್ಶಿಸಿದ್ದಾನೆ.
ಮಧ್ಯಪ್ರದೇಶದ ಛತ್ತರ್ಪುರ ಜಿಲ್ಲೆಯ ಬಿಕೌರ ಗ್ರಾಮದಲ್ಲಿ ಈ ಹೊಲಸು ಘಟನೆ ನಡೆದಿದೆ. ದಶಥ ಅಹಿರ್ವಾರ್ ಎಂಬ ವ್ಯಕ್ತಿ ಗ್ರಾಮಪಂ ಕಟ್ಟಡದ ಚಂರಡಿ ನಿರ್ಮಾಣ ಕೆಲಸದಲ್ಲಿ ತೊಡಗಿದ್ದರು. ಈ ಸಂದರ್ಭದಲ್ಲಿ ಅವರ ಕೈ ಒಬಿಸಿ ಸಮುದಾಯದ ರಾಮಕೃಪಾಲ್ ಪಟೇಲ್ ಎಂಬಾತನಿಗೆ ಸ್ಪರ್ಶಿಸಿದೆ. ಹೀಗಾಗಿ ಕುಪಿತಗೊಂಡ ರಾಮಕೃಪಾಲ್, ಮನುಷ್ಯರ ಮಲವನ್ನು ವ್ಯಕ್ತಿಯ ಮುಖ ಹಾಗೂ ಮೈಗೆ ಸವರಿ ನೀಚ ಕೃತ್ಯ ಎಸಗಿದ್ದಾನೆ.