Tuesday, October 3, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಆರ್‍ಎಸ್‍ಎಸ್ ಸಭೆಯಲ್ಲಿ ಎಸ್.ಎಂ ಕೃಷ್ಣ: RSS ಟೋಪಿ ಧರಿಸಿ ಹಿಂದುತ್ವದ ಭಾಷಣ..!

Kariyappa N by Kariyappa N
October 25, 2020
in Newsbeat, Politics, Samagra karnataka, ರಾಜ್ಯ
sm krisna
Share on FacebookShare on TwitterShare on WhatsappShare on Telegram

ಬೆಂಗಳೂರು: ಒಂದು ಕಾಲದಲ್ಲಿ ಕಾಂಗ್ರೆಸ್‍ನ ಕಟ್ಟಾಳು, ತಮ್ಮ ರಾಜಕೀಯ ಜೀವನದ ಕೊನೆಯ ದಿನಗಳವರೆಗೂ ಕಾಂಗ್ರೆಸ್ ತಮ್ಮ ಉಸಿರು ಎಂದು ಭಾವಿಸಿದ್ದವರು ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ. ಕೆಳಹಂತದಿಂದ ತಮ್ಮ ರಾಜಕೀಯ ಜೀವನದಲ್ಲಿ ಅತ್ಯುನ್ನತ ಸ್ಥಾನಗಳನ್ನು ಕಾಂಗ್ರೆಸ್ ಪಕ್ಷದಲ್ಲಿದ್ದುಕೊಂಡು ಅಲಂಕರಿಸಿದ್ದ ಎಸ್.ಎಂ ಕೃಷ್ಣ ಅವರು, ಬದಲಾದ ರಾಯಕೀಯ ಪರಿಸ್ಥಿತಿಯಲ್ಲಿ ಕೆಲ ವರ್ಷಗಳ ಹಿಂದೆ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರಿದ್ದಾರೆ.

smk rss
ಬಿಜೆಪಿ ಸೇರಿದ್ದರೂ ಆರ್‍ಎಸ್‍ಎಸ್‍ನಿಂದ ದೂರವೇ ಇದ್ದ ಎಸ್.ಎಂ ಕೃಷ್ಣ, ನಾಡಹಬ್ಬ ದಸರಾ ಆಚರಣೆ ಅಂಗವಾಗಿ ಬೆಂಗಳೂರಿನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ಆಯೋಜಿಸಿದ್ದ ಸಭೆಯಲ್ಲಿ ಪಾಲ್ಗೊಂಡು ಹಿಂದುತ್ವ ಮತ್ತು ದೇಶಭಕ್ತಿಯ(Hindutva speech) ಕುರಿತು ಸುದೀರ್ಘ ಉಪನ್ಯಾಸ ನೀಡಿದ್ದಾರೆ.
ಎಸ್.ಎಂ.ಕೃಷ್ಣ ಅವರು ಬಿಜೆಪಿ ಸೇರಿದ ನಂತರ ಮೊದಲ ಬಾರಿಗೆ ಆರ್.ಎಸ್.ಎಸ್ ಸಭೆಯಲ್ಲಿ ಭಾಗವಹಿಸಿ ಆರ್‍ಎಸ್‍ಎಸ್ ಟೋಪಿ ಧರಿಸಿ ಹಿಂದುತ್ವದ ಬಗ್ಗೆ ಉಪನ್ಯಾಸ ನೀಡಿದ್ದಾರೆ.

Related posts

ಬೆಂಗಳೂರನ್ನು 5 ಜಿಲ್ಲೆಗಳನ್ನಾಗಿ ವಿಂಗಡಿಸಿದ ಕಾಂಗ್ರೆಸ್

ಬೆಂಗಳೂರನ್ನು 5 ಜಿಲ್ಲೆಗಳನ್ನಾಗಿ ವಿಂಗಡಿಸಿದ ಕಾಂಗ್ರೆಸ್

October 2, 2023
ಚಲಿಸುವಾಗಲೇ ಹೊತ್ತಿ ಉರಿದ ಎಲೆಕ್ಟ್ರಿಕ್ ಕಾರು

ಚಲಿಸುವಾಗಲೇ ಹೊತ್ತಿ ಉರಿದ ಎಲೆಕ್ಟ್ರಿಕ್ ಕಾರು

October 2, 2023

ರಾಷ್ಟ್ರಭಕ್ತಿಯ ಲಸಿಕೆ ಕೊಡಬೇಕು..
ಜಾಗತಿಕ ಮಟ್ಟದಲ್ಲಿ ಭಾರತದತ್ತ ತಿರುಗಿನೋಡುವಂತಹ ಮಟ್ಟಕ್ಕೆ ನಾವು ಬೆಳೆದಿದ್ದೇವೆ. ಸ್ವಾಮಿ ವಿವೇಕಾನಂದರು ಅಮೆರಿಕದಲ್ಲಿ ಮಾಡಿದ ಭಾಷಣ ಭಾರತದಲ್ಲಿ ರಾಷ್ಟ್ರೀಯತೆ ಹಾಗೂ ದೇಶಭಕ್ತಿ ಜಾಗೃತರಾಗುವಂತೆ ಮಾಡಿತ್ತು. ವಿವೇಕಾನಂದರ ಈ ಸಾಧನೆಯ ಹಿಂದೆ ಇದ್ದದ್ದೇ ಆರ್‍ಎಸ್‍ಆರ್ ಸಂಘಟನೆ ಎಂದು ಬಣ್ಣಿಸಿದ ಮಾಜಿ ಸಿಎಂ ಎಸ್.ಎಂ ಕೃಷ್ಣ, ದೇಶದಲ್ಲಿರುವ 134 ಕೋಟಿ ಜನರಿಗೆ ದೇಶಭಕ್ತಿ ಹಾಗೂ ರಾಷ್ಟ್ರಭಕ್ತಿಯ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ನಡೆಯಬೇಕಿದೆ ಎಂದಿದ್ದಾರೆ.

smk rss2
ಎಂಜಿನಿಯರ್ ಆಗಿದ್ದವರೊಬ್ಬರು ತಮ್ಮ ಜೀವನವನ್ನೇ ಎಸ್‍ಎಸ್‍ಎಸ್‍ಗೆ ಮುಡಿಪಾಗಿಟ್ಟಿದ್ದಾರೆಂಬ ವಿಷಯ ತಿಳಿಯಿತು. ಇದನ್ನು ನೋಡಿದರೆ ನಾವು ಪುಟ್ಟಮಕ್ಕಳಿಗೆ ಬಾಲ್ಯದ ಹಂತದಲ್ಲಿಯೇ ರಾಷ್ಟ್ರಭಕ್ತಿಯ ಲಸಿಕೆ ಕೊಡುವ ಅಗತ್ಯವಿದೆ. ಇದರಿಂದ ಇಂದಿನ ಪೀಳಿಗೆಗೆ ರಾಷ್ಟ್ರಭಕ್ತಿಯ ಅರಿವು ಬರಲಿದೆ ಎಂದು ಎಸ್.ಎಂ ಕೃಷ್ಣ ಪ್ರತಿಪಾದಿಸಿದ್ದಾರೆ.

ಅಧಿಕಾರದ ಎಲ್ಲಾ ಮೆಟ್ಟಿಲು ಹತ್ತಿಸಿದ್ದು ಕಾಂಗ್ರೆಸ್..
ಎಸ್.ಎಂ ಕೃಷ್ಣ ಅವರಿಗೆ ತಮ್ಮ ರಾಜಕೀಯ ಜೀವನದಲ್ಲಿ ಅತ್ಯುನ್ನತ ಹುದ್ದೆಗಳನ್ನು ನೀಡಿದ್ದು ಕಾಂಗ್ರೆಸ್ ಪಕ್ಷ. ಶಾಸಕನಾಗಿ, ಸಂಸದನಾಗಿ, ಕೆಪಿಸಿಸಿ ಅಧ್ಯಕ್ಷರಾಗಿ ಲೋಕಸಭೆ ಉಪಸಭಾಪತಿಯಾಗಿ, ಮುಖ್ಯಮಂತ್ರಿಯಾಗಿ, ವಿದೇಶಾಂಗ ಸಚಿವರಾಗಿ, ರಾಜ್ಯಪಾಲರಾಗಿ..ಹೀಗೆ ಉನ್ನತ ಹುದ್ದೆಗಳನ್ನು ಕಾಂಗ್ರೆಸ್‍ನಲ್ಲಿದ್ದುಕೊಂಡೇ ಏರಿದವರು ಎಸ್.ಎಂ ಕೃಷ್ಣ.
ಇಂದಿರಾಗಾಂಧಿ ಕಾಲದಿಂದ ಸೋನಿಯಾಗಾಂಧಿವರೆಗೆ ಎಸ್.ಎಂ ಕೃಷ್ಣ ಗಾಂಧಿ ಕುಟುಂಬದ ಜತೆ ನಿಕಟ ಹೊಂದಿದ್ದವರು. ಹೀಗಾಗಿ ಕಾಂಗ್ರೆಸ್ ಇಲ್ಲದ ಎಸ್.ಎಂ ಕೃಷ್ಣ ಅವರನ್ನು ನೆನೆಸಿಕೊಳ್ಳಲು ಸಾಧ್ಯವಿಲ್ಲ ಎನ್ನುವಷ್ಟರ ಮಟ್ಟಿಗೆ ಕಾಂಗ್ರೆಸ್ ಪಕ್ಷಕ್ಕೆ ತಮ್ಮನ್ನು ಮುಡಿಪಾಗಿಸಿಕೊಂಡಿದ್ದರು.
ಆದರೆ, 2014ರ ಲೋಕಸಭೆ ಚುನಾವಣೆ ಬಳಿಕ ಕಾಂಗ್ರೆಸ್‍ನಿಂದ ದೂರವೇ ಉಳಿದಿದ್ದ ಎಸ್.ಎಂ ಕೃಷ್ಣ, ತಮ್ಮ ರಾಜಕೀಯ ಜೀವನದುದ್ದಕ್ಕೂ ವಿರೋಧಿಸಿಕೊಂಡು ಬಂದಿದ್ದ ಬಿಜೆಪಿ ಪಕ್ಷವನ್ನು ಸೇರುವ ಮೂಲಕ ರಾಜಕೀಯ ಪಂಡಿತರ ಲೆಕ್ಕಾಚಾರವನ್ನೇ ತಲೆಕೆಳಗಾಗುವಂತೆ ಮಾಡಿದ್ದರು. ಬಿಜೆಪಿ ಸೇರಿದ್ದರೂ, ಅದರ ಮಾತೃಸಂಸ್ಥೆ ರಾಷ್ಟ್ರೀಯ ಸ್ವಯಂಸೇವಕ ಸಂಘಟನೆಯಿಂದ ದೂರವೇ ಇದ್ದ ಕೃಷ್ಣ ಅವರು, ಆರ್‍ಎಸ್‍ಎಸ್ ಸಭೆಯಲ್ಲಿ ಹಿಂದುತ್ವದ ಭಾಷಣ ಮಾಡಿ ಮತ್ತೆ ಚರ್ಚೆಗೆ ಗ್ರಾಸವಾಗಿದ್ದಾರೆ.

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: #SM Krishnahindutva speechRSS capRSS meeting
ShareTweetSendShare
Join us on:

Related Posts

ಬೆಂಗಳೂರನ್ನು 5 ಜಿಲ್ಲೆಗಳನ್ನಾಗಿ ವಿಂಗಡಿಸಿದ ಕಾಂಗ್ರೆಸ್

ಬೆಂಗಳೂರನ್ನು 5 ಜಿಲ್ಲೆಗಳನ್ನಾಗಿ ವಿಂಗಡಿಸಿದ ಕಾಂಗ್ರೆಸ್

by Honnappa Lakkammanavar
October 2, 2023
0

ನವದೆಹಲಿ: ರಾಜ್ಯದಲ್ಲಿ ಲೋಕಸಭೆ ಚುನಾವಣೆಯ ತಯಾರಿ ಭರ್ಜರಿಯಾಗಿ ನಡೆಯುತ್ತಿದೆ. ಈಗಾಗಲೇ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮೂಲಕ ಕಾಂಗ್ರೆಸ್ ಸೋಲಿಸಲು ಪಣತೊಟ್ಟರೆ, ಲೋಕಸಭೆಯಲ್ಲಿ ಕೂಡ ಗೆಲುವು ಸಾಧಿಸುವ...

ಚಲಿಸುವಾಗಲೇ ಹೊತ್ತಿ ಉರಿದ ಎಲೆಕ್ಟ್ರಿಕ್ ಕಾರು

ಚಲಿಸುವಾಗಲೇ ಹೊತ್ತಿ ಉರಿದ ಎಲೆಕ್ಟ್ರಿಕ್ ಕಾರು

by Honnappa Lakkammanavar
October 2, 2023
0

ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಕಾರಿಗೆ (Electric car) ಆಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಸುಟ್ಟು ಭಸ್ಮವಾದ ಘಟನೆ ನಗರದಲ್ಲಿ ನಡೆದಿದೆ. ದಕ್ಷಿಣ ಬೆಂಗಳೂರು ಜೆಪಿ ನಗರದ ದಾಲ್ಮಿಯಾ ಮೇಲ್ಸೇತುವೆಯಲ್ಲಿ ಮಧ್ಯಾಹ್ನ...

ನಾಗಭೂಷಣ್ ಅಪಘಾತ :ದುಃಖದಲ್ಲೂ ತಾಯಿಯ ನೇತ್ರದಾನ

ನಾಗಭೂಷಣ್ ಅಪಘಾತ :ದುಃಖದಲ್ಲೂ ತಾಯಿಯ ನೇತ್ರದಾನ

by Honnappa Lakkammanavar
October 2, 2023
0

ನಟ ನಾಗಭೂಷಣ್ ಕಾರು ಅಪಘಾತದಲ್ಲಿ ಸಾವನ್ನಪ್ಪಿದ ಮಹಿಳೆಯ ಕುಟುಂಬಸ್ಥರು ನೋವಿನಲ್ಲಿಯೂ ಕಣ್ಣು ದಾನ ಮಾಡಿದ್ದಾರೆ. ಘಟನೆಯಲ್ಲಿ ಸಾವನ್ನಪ್ಪಿದ ಪ್ರೇಮಾ ಅವರ ಕಣ್ಣುಗಳನ್ನು ದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ....

4 ಹೀಲಿಯಂ ಬಲೂನ್ ಸ್ಫೋಟ; ಮಕ್ಕಳಿಗೆ ಗಾಯ

4 ಹೀಲಿಯಂ ಬಲೂನ್ ಸ್ಫೋಟ; ಮಕ್ಕಳಿಗೆ ಗಾಯ

by Honnappa Lakkammanavar
October 1, 2023
0

ಬೆಂಗಳೂರು : ಮಗುವಿನ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಮನೆಯಲ್ಲಿ ಹಾಕಿದ್ದ ಹೀಲಿಯಂ ಬಲೂನ್ ಸ್ಫೋಟಗೊಂಡ ಪರಿಣಾಮ ನಾಲ್ವರು ಮಕ್ಕಳು ಗಾಯಗೊಂಡಿರುವ ಘಟನೆ ನಡೆದಿದೆ. ಬಲೂನ್ ಗಳು ವಿದ್ಯುತ್...

Shobha Karandlaje

ಸರ್ಕಾರದ ವಿರುದ್ಧ ಹರಿಹಾಯ್ದ ಕೇಂದ್ರ ಸಚಿವೆ

by Honnappa Lakkammanavar
October 1, 2023
0

ಜನರಿಗೆ ಸಿದ್ದರಾಮಯ್ಯ ಸರ್ಕಾರ ಅಂದರೆ ಯಡವಟ್ಟು ಸರ್ಕಾರ ಎನಿಸುತ್ತಿದೆ. ಯಾವ ಆಧಾರದಲ್ಲಿ ಎಲೆಕ್ಷನ್ ಗೆದ್ದಿದ್ದಾರೋ ಅದಕ್ಕೆ ಉಲ್ಟಾ ಆಗಿ ಅಧಿಕಾರ ನಡೆಸುತ್ತಿದ್ದಾರೆ ಎಂದು ಕೇಂದ್ರ ಸಚಿವೆ ಶೋಭ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

1.5 ಲಕ್ಷ ರೂ. ಮೌಲ್ಯದ ಮಂಗಳ ಸೂತ್ರ ನುಂಗಿದ ಎಮ್ಮೆ

1.5 ಲಕ್ಷ ರೂ. ಮೌಲ್ಯದ ಮಂಗಳ ಸೂತ್ರ ನುಂಗಿದ ಎಮ್ಮೆ

October 2, 2023
ಬ್ಯಾರಿಕೇಡ್ ಎಳೆದ ಪೊಲೀಸರು; ಮಹಿಳೆಯ ಮೇಲೆ ಹರಿದ ಟಿಪ್ಪರ್

ಬ್ಯಾರಿಕೇಡ್ ಎಳೆದ ಪೊಲೀಸರು; ಮಹಿಳೆಯ ಮೇಲೆ ಹರಿದ ಟಿಪ್ಪರ್

October 2, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram