Punjab Election – ಪಂಜಾಬ್ ಮೇಲೆ ನೇರವಾಗಿ ಕಣ್ಣಿಟ್ಟ ಸೋನಿಯಾ ಗಾಂಧಿ
ಪಂಜಾಬ್ ಚುನಾವಣೆಗೆ ಕಾಂಗ್ರೆಸ್ ಹೈಕಮಾಂಡ್ ರಾಜ್ಯದ ಯಾವುದೇ ನಾಯಕರ ಮೇಲೆ ಅವಲಂಬಿತವಾಗಿಲ್ಲ. ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆಯಾಗಿರುವ ಸೋನಿಯಾ ಗಾಂಧಿ ಕೂಡ ಈ ಬಗ್ಗೆ ತಿವ್ರ ನಿಗಾ ಇಡಲಿದ್ದಾರೆ.
ರಾಜ್ಯದ ಮಾಲ್ವಾ, ಮಜಾ ಮತ್ತು ದೋಬಾ ಕ್ಷೇತ್ರಗಳಲ್ಲಿ ಹೈಕಮಾಂಡ್ ವೀಕ್ಷಕರನ್ನ ನೇಮಿಸಿದೆ. ಇಲ್ಲಿನ ನಾಯಕರ ಚಟುವಟಿಕೆಗಳ ಮೇಲೆ ಕಣ್ಣಿಟ್ಟು ತಮ್ಮ ವರದಿಯನ್ನು ಕಾಂಗ್ರೆಸ್ ಹೈಕಮಾಂಡ್ ಗೆ ಕಳುಹಿಸಲಿದ್ದಾರೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ನಿಂದ 4 ಜನ ನಾಯಕರನ್ನು ನೇಮಿಸಲಾಗಿದೆ.
ಈ ಹಿಂದೆ ಜಿಲ್ಲಾ ಸಮಿತಿಗಳಿಗೆ ಸಮನಾಗಿ ಕಾಂಗ್ರೆಸ್ನಿಂದ ವೀಕ್ಷಕರನ್ನು ನೇಮಿಸಲಾಗಿತ್ತು. ಜಿಲ್ಲಾ ಮಟ್ಟದ ಕಾಂಗ್ರೆಸಿಗರ ಸಾಧನೆ ಮೇಲೆ ಕಣ್ಣಿಟ್ಟಿರುವ ಈ ವೀಕ್ಷಕರು ನಿರಂತರವಾಗಿ ಜಿಲ್ಲೆಯ ಕಾಂಗ್ರೆಸ್ಸಿಗರನ್ನು ಪಕ್ಷದ ಪರವಾಗಿ ಸಜ್ಜುಗೊಳಿಸುತ್ತಿದ್ದಾರೆ,
ಪಂಜಾಬ್ ನಲ್ಲಿ ಕಾಂಗ್ರೆಸ್ ಒಳಗಿನ ಆಂತರಿಕ ಸಮರದಿಂದಾಗಿ ಹೈಕಮಾಂಡ್ ಗೆ ಚಿಂತೆ ಹೆಚ್ಚಾಗಿದೆ. ಮೊದಲಿಗೆ ನವಜೋತ್ ಸಿಧು ಮತ್ತು ಸಿಎಂ ಚರಂಜಿತ್ ಚನ್ನಿ ನಡುವೆ ಸಿಎಂ ಸ್ಥಾನಕ್ಕಾಗಿ ಜಗಳ ಶುರುವಾಗಿದೆ. ಆ ನಂತರ ಈಗ ಟಿಕೆಟ್ ಹಂಚಿಕೆ ವಿಚಾರದಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಹಲವು ಸ್ಥಾನಗಳಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ಧ ಬಂಡಾಯ ವ್ಯಕ್ತವಾಗಿದೆ.
ಇವುಗಳಲ್ಲಿ ಬಸ್ಸಿ ಪಠಾಣದಿಂದ ಸಿಎಂ ಚನ್ನಿ ಸಹೋದರ ಡಾ.ಮನೋಹರ್ ಸಿಂಗ್, ಸಮ್ರಾಳದಿಂದ ಹಾಲಿ ಶಾಸಕ ಅಮ್ರಿಕ್ ಧಿಲ್ಲೋನ್ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ. ಕಪುರ್ತಲಾದಿಂದ ಸಚಿವ ರಾಣಾ ಗುರ್ಜಿತ್ ಅವರು ತಮ್ಮ ಪುತ್ರ ರಾಣಾ ಇಂದ್ರಪ್ರತಾಪ್ ಅವರನ್ನು ಸುಲ್ತಾನ್ಪುರ ಲೋಧಿಯಿಂದ ಕೈಬಿಡಲು ಸಿದ್ಧತೆ ನಡೆಸಿದ್ದಾರೆ. ನವಜಿತ್ ಚೀಮಾ ಅವರಿಗೆ ಇಲ್ಲಿಂದ ಕಾಂಗ್ರೆಸ್ ಟಿಕೆಟ್ ನೀಡಿದೆ. ಅದೇ ರೀತಿ ಸುಮಾರು 15 ಸ್ಥಾನಗಳಲ್ಲಿ ಕಾಂಗ್ರೆಸ್ ಬಂಡಾಯ ಎದುರಿಸುತ್ತಿದೆ.