ಹುಬ್ಬಳ್ಳಿಯಲ್ಲಿ ಆಕ್ಸಿಜನ್ ವ್ಯವಸ್ಥೆ ಕಲ್ಪಸಿದ ‘ರಿಯಲ್ ಹೀರೋ’ ಸೋನು ಸೂದ್
ಹುಬ್ಬಳ್ಳಿ : ಕಳೆದ ವರ್ಷ ಲಾಕ್ ಡೌನ್ ಆದಾಗಿನಿಂದಲೂ ಜನಪರ ಕೆಲಸ ಮಾಡುತ್ತಾ ಬಡವರಿಗೆ ಬೇಕಾದ ಸಹಾಯ ಮಾಡುತ್ತಾ… ಜಾಗ ಯಾವುದೇಇದ್ರು, ಜನ ಯಾರೇ ಇದ್ರೂ, ಶ್ರೀಮಂತರು ಬಡವರು ಅಂತ ನೋಡದೇ ಸಹಾಯ ಮಾಡ್ತಿದ್ದಾರೆ.. ಕೋವಿಡ್ ಮೊದಲನೇ ಅಲೆ ವೇಳೆ ವಿದ್ಯಾರ್ಥಿಗಳು , ವಲಸೆ ಕಾರ್ಮಿಕರಿಗೆ ನೆರವಾಗಿ ಸಾಕಷ್ಟು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿದ್ದರು. ಈ ಲಾಕ್ ಡೌನ್ ಸಮಯದಲ್ಲೂ ಬಡವರಿಗೆ ನೆರವಾಗ್ತಿದ್ದಾರೆ. ಆಕ್ಸಿಜನ್ ಪೂರೈಕೆ ಸೇರಿ ಅನೇಕ ಕೆಲಸಗಳಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದು, ಸಿನಿಮಾದಲ್ಲಿ ವಿಲ್ಲನ್ ಆದ್ರೂ ರಿಯಲ್ ಲೈಫ್ ನ ಹೀರೋ ಅಂತ ಸಾಬೀತು ಪಡಿಸಿದ್ದಾರೆ.. ಅಲ್ಲದೇ ಬಡವರ ಪಾಲಿಗೆ ದೇವರಾಗಿದ್ದಾರೆ..
ಅಂದ್ಹಾಗೆ ಸೋನು ಕರ್ನಾಟಕ ಬೆಂಗಳೂರು ಜನತೆಗೆ ಸಾಕಷ್ಟು ಬಾರಿ ಸಹಾಯ ಮಾಡಿದ್ದಾರೆ.. ಇದೀಗ ಮತ್ತೊಮ್ಮೆ ನಮ್ಮ ರಾಜ್ಯದ ಜನರ ನೆರವಿಗೆ ದಾವಿಸಿದ್ದಾರೆ.. ಹುಬ್ಬಳ್ಳಿಯಲ್ಲಿ ಮಹಾನಗರದ ಕರ್ನಾಟಕ ರೈಲ್ವೆ ಪೊಲೀಸ್ ಠಾಣೆಯಲ್ಲಿ ಸೋನು ಸೂದ್ ನೇತೃತ್ವದ ಸೂದ್ ಚಾರಿಟಿ ಫೌಂಡೇಶನ್ ವತಿಯಿಂದ ತುರ್ತು ಆಮ್ಲಜನಕ ಸಿಲಿಂಡರ್ ಪೂರೈಕೆ ಘಟಕ ಉದ್ಘಾಟನೆ ಸಮಾರಂಭ ನೇರವೇರಿದೆ.
ಸೂದ್ ಚಾರಿಟಿ ಫೌಂಡೇಶನ್ ಚೇರ್ಮನ್ ರೈಲ್ವೆ ಪೊಲೀಸ್ ಸಿಬ್ಬಂದಿಗೆ ಆಕ್ಸಿಜನ್ ಹೇಗೆ ಬಳಕೆ ಮಾಡಬೇಕು ಮತ್ತು ಇದರ ಸದ್ಬಳಕೆ ಹೇಗೆ ಎನ್ನುವುದರ ಕುರಿತು ಸಂಪೂರ್ಣ ಮಾಹಿತಿ ನೀಡಿದರು. ಸೂದ್ ಚಾರಿಟಿ ಫೌಂಡೇಶನ್ ಕೊರೊನಾ ಸಂಧರ್ಭದಲ್ಲಿ ತುರ್ತು ಸೇವೆ ಆರಂಭಿಸಿರುವುದು ಅವಳಿನಗರದ ಸುತ್ತಮುತ್ತಲಿನ ಅಂದಾಜು 120ಕಿ.ಮಿ. ಅಕ್ಕ ಪಕ್ಕದ ಜಿಲ್ಲೆಗಳಿಗೂ ತಲುಪಿಸುವ ಗುರಿ ಹೊಂದಿದೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.