ಕರ್ನಾಟಕ ರಾಜ್ಯ, ಚಿಕ್ಕಮಗಳೂರು ಜಿಲ್ಲೆ, ಮೂಡಿಗೆರೆ ತಾಲ್ಲೂಕು, ಕಳಸ ಗ್ರಾಮದಲ್ಲಿ ಶ್ರೀ ಕಲಶೇಶ್ವರಸ್ವಾಮಿ ದೇವಸ್ಥಾನವಿದೆ. ಸಹ್ಯಾದ್ರಿ ಪಶ್ಚಿಮಘಟ್ಟದಲ್ಲಿ ಕಳಸ ಗ್ರಾಮವು ಸುತ್ತಮುತ್ತಲೂ ಬೆಟ್ಟಗಳಿಂದ, ಹಸಿರು ತುಂಬಿದ ಅರಣ್ಯದಿಂದ ಹಾಗೂ ಚಿಕ್ಕಚಿಕ್ಕಜಲಪಾತಗಳಿಂದ ಹಾಗೂ ಭದ್ರಾನದಿಯಲ್ಲಿ ಸುಂದರ ಪರಿಸರದಲ್ಲಿ ಶ್ರೀ ಕಲಶೇಶ್ವರ ಸ್ವಾಮಿ ದೇವಸ್ಥಾನ ಸ್ಥಾಪಿಸಲ್ಪಟ್ಟಿದೆ.
ಪೌರಾಣಿಕ ಹಿನ್ನಲೆ
ಶ್ರೀ ಕಳಸ ಕ್ಷೇತ್ರದ ಮಹಿಮೆಯನ್ನು ಸ್ಕಾಂದ ಪುರಾಣದ ತುಂಗಾಭದ್ರಾ ಕಾಂಡದಲ್ಲಿ ವಿಸ್ತಾರವಾಗಿ ವಿವರಿಸಲ್ಪಟ್ಟಿದೆ. ಕಳಸ ಕ್ಷೇತ್ರವು ಭದ್ರಾನದಿಯ ದಡದಲ್ಲಿರುವ ಪುರಾತನ ಕ್ಷೇತ್ರವಾಗಿದೆ. ಕಳಸ ಕ್ಷೇತ್ರವು “ದಕ್ಷಿಣಕಾಶಿ” ಎಂದು ಪುರಾಣ ಪ್ರಸಿದ್ದವಾಗಿದೆ.ಈ ಕ್ಷೇತ್ರದ ಉತ್ಪತ್ತಿಗೆ ಶ್ರೀ ಅಗಸ್ತ್ಯ ಮಹಾಮುನಿಯೇ ಕಾರಣರಾಗಿದ್ದಾರೆ.
ಮಿತ್ರ ವರುಣರೆಂಬ ಋಷಿ ಸಹೋದರರಿಬ್ಬರೂ ವಿಹಾರ ಮಾಡುತ್ತಾ ತುಂಗಭದ್ರಾ ನದಿಯ ತೀರದಲ್ಲಿ ತಪಸ್ಸು ಮಾಡುತ್ತಿರಲು ಇವರ ತಪಸ್ಸಿನಿಂದ ಭೀತಗೊಂಡ ಇಂದ್ರನು ತಪಸ್ಸನ್ನು ಭಂಗ ಮಾಡಲು ಊರ್ವಶಿ ಎಂಬ ಅಪ್ಸರೆಯನ್ನು ಕಳುಹಿಸುತ್ತಾನೆ. ಈಕೆಯ ದೆಸೆಯಿಂದ ಮಿತ್ರ ವರುಣರು ತಪಸ್ಸಿನಿಂದ ಬಹಿರ್ಮುಖರಾಗಿ ಮೋಹ ಪರವಶರಾಗಲು ಇವರ ದೇಹದಲ್ಲಿ ಶುಕ್ಲವು ಪ್ರಸರಿಸುವಂತಾಗಲು ಹಾಗೂ ಮಿತ್ರವರುಣರು ಬಹುದಿನಗಳ ಕಾಲ ತಪಸ್ಸು ಮಾಡಿರುವ ಕಾರಣ ಉತ್ತಮರ ಆವಿರ್ಭಾವ ಆಗಬಹುದೆಂದು ಯೋಚಿಸಿ ಶುಕ್ಲವು ಭೂಪನವಾದಂತೆ ದೇವತೆಗಳು ಒಂದು ಕಲಶ ಸ್ಥಾಪನೆ ಮಾಡಿದರು ಅದರಂತೆ ಶ್ರೇಷ್ಠರಾದ ಅಗಸ್ತ್ಯರ ಅವಿರ್ಭಾವವಾಯಿತು. ಕಲಶದ ಹೊರಗೆ ಚೆಲ್ಲಿದ ರೇತಸ್ಸಿನಿಂದ ಹಿಂದೆ ನಿಮಿಚಕ್ರವರ್ತಿಯಿಂದ ಶಾಪಗ್ರಸ್ತರಾಗಿದ್ದ ವಸಿಷ್ಠರ ಜನನವಾಯಿತು. ಅಗಸ್ತ್ಯರು ಗಂಧಪುಷ್ಪ ಧೂಪ ದೀಪಗಳಿಂದ ಪರಶಿವನನ್ನು ಆರಾಧಿಸಿ ದ್ಯಾನ ಪರವಶವಾಗಲು ಮಹದೇವನು ಕುರಿತು ನನ್ನ ಜನ್ಮ ಸ್ಥಳವಾದ ಕಲಶದಲ್ಲಿ ನೀನು ಕಲಶೇಶ ಎಂಬ ಅಭಿದಾನದಿಂದ ಆವಿರ್ಭವಿಸಿ ಭಕ್ತಾಧಿಗಳಿಗೆ ಕಲ್ಯಾಣವನ್ನು ಕೊಡುತ್ತ ಕಾಲಾಂತ್ಯದವರೆವಿಗೂ ಇರಬೇಕೆಂದು ಪ್ರಾರ್ಥಿಸಲು ಭಕ್ತವತ್ಸಲನಾದ ಶ್ರೀ ಶಂಕರನು ಅಗಸ್ತ್ಯರು ಕೋರಿದ ವರವನ್ನು ಕರುಣಿಸಿ ಅಂತರ್ಧಾನನಾದನು , ಹೀಗೆ ಅಗಸ್ತ್ಯರ ಅನುಗ್ರಹರ್ಥವಾಗಿ ದೇವತೆಗಳಿಂದ ಸ್ಥಾಪಿತವಾದ ಕಲಶದಲ್ಲಿ ಶ್ರೀ ಸ್ವಾಮಿಯು ಉದ್ಬವಿಸಿದ ಕಾರಣ ಈಶ್ವರನಿಗೆ ಇಲ್ಲಿಗೆ ‘ಕಲಶೇಶ’ ಎಂದು ನಾಮಂಕಿತವಾಯಿತು/ನಾಮಕರಣವಾಯಿತು.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ
ಧಾರ್ಮಿಕಚಿಂತಕರು ಮತ್ತು ಸಲಹೆಗಾರರು
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ಜ್ಯೋತಿಷ್ಯಶಾಸ್ತ್ರತಜ್ಞರು 8548998564
ಐತಿಹಾಸಿಕ ಹಿನ್ನಲೆ
ಶ್ರೀ ಕಲಶೇಶ್ವರ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಹಲವಾರು ಶಿಲಾಶಾಸನಗಳು ಹಾಗೂ ತಾಮ್ರ ಶಾಸನಗಳು ಲಭ್ಯವಿದೆ. ಅದರಂತೆ ಶ್ರೀ ಕಲಶೇಶ್ವರ ದೇವಸ್ಥಾನದ ಗರ್ಭಗುಡಿಯನ್ನು ವಿಧರ್ಭ ದೇಶದ ಶೃತಬಿಂದು ಮಹರಾಜನಿಂದ ನಿರ್ಮಿಸಲ್ಪಟ್ಟಿರುವುದಾಗಿ ತಿಳಿದು ಬಂದಿರುತ್ತದೆ. ಆನಂತರ ಈ ರಾಜ್ಯವು ಹುಂಚ ಮತ್ತು ಕಾರ್ಕಳ ದೊರೆಗಳ ವಶವಾಯಿತು.ಆನಂತರ ಐಗೂರು ರಾಜರುಗಳ ವಶಕ್ಕೆ ಬಂದಿತು. ಆನಂತರ ಈ ರಾಜ್ಯವು ಕೆಳದಿ ಸಂಸ್ಥಾನದ ವಶಕ್ಕೆ ಬಂದಿತು. ಶ್ರೀ ಕಲಶೇಶ್ವರನಿಗೆ ಚಿನ್ನದ ಮುಖವಾಡವನ್ನು ಶ್ರೀ ಸೋಮಶೇಖರ ನಾಯಕನೇ ನೀಡಿರುವುದು ತಿಳಿದು ಬಂದಿರುತ್ತದೆ. ಈ ದೇವಸ್ಥಾನದಲ್ಲಿ ದೊರೆತ್ತಿರುವ ವಿವಿಧ ಶಾಸನಗಳಿಂದ ಕ್ರಿ.ಶ.1154 ರಿಂದ 1547 ಇಸವಿಯವರೆಗೆ ಇಲ್ಲಿನ ರಾಜರುಗಳು ಶ್ರೀ ಕಲಶೇಶ್ವರನ ಪೂಜೆಗಾಗಿ ಅನೇಕ ಗ್ರಾಮ ಮತ್ತು ಭೂಮಿಗಳನ್ನು ಕೊಟ್ಟಿರುವ ಅಂಶಗಳಿವೆ. ಈ ದೇವಸ್ಥಾನಕ್ಕೆ ಮೈಸೂರು ಮಹರಾಜರು ಕೂಡ ಸೇವೆಯನ್ನು ಸಲ್ಲಿಸಿರುತ್ತಾರೆ. ಈ ದೇವಸ್ಥಾನದ ರಜತದ/ಬೆಳ್ಳಿಯ ಬಾಗಿಲುಗಳು ವಿಶೇಷ ಕೆತ್ತನೆಯಿಂದ ಕೂಡಿದ್ದು ಮೈಸೂರು ಮಹಾರಾಜರು ಕೊಡುಗೆಯಾಗಿ ನೀಡಿರುತ್ತಾರೆ.
ಬಾಗಿಲು ತೆರೆಯುವ ಸಮಯ
08:00 AM IST – 01:00 PM IST
03:30 AM IST – 08:30 AM IST
ಬಾಗಿಲು ಮುಚ್ಚುವ ಸಮಯ
01:00 PM IST – 03:30 PM IST
ದರ್ಶನಕ್ಕೆ ಬೆಳಿಗ್ಗೆ 8.00ಗಂಟೆಯಿಂದ 01.00
ಅಪರಾಹ್ನ 3.30ರಿಂದ ರಾತ್ರಿ 8.00ಗಂಟೆಯವರೆಗೂ ಅವಕಾಶವಿರುತ್ತದೆ.
ಸಂಪರ್ಕ:
ದೂರವಾಣಿ ಸಂಖ್ಯೆ : 08263274705
ಇಮೇಲ್ : kalasheshwara[at]gmail[dot]com








