ಯಾದಗಿರಿ : ರಾಜ್ಯದಲ್ಲಿ ಡ್ರಗ್ಸ್ ಬಿರುಗಾಳಿಯ ಮಧ್ಯೆ ಸಂಪುಟ ವಿಸ್ತರಣೆ ಸದ್ದು ಭಾರಿ ಸದ್ದು ಮಾಡುತ್ತಿದೆ. ಸೂಕ್ತ ಸ್ಥಾನಮಾನಕ್ಕಾಗಿ ಕೇಸರಿ ಕಲಿಗಳು ದೆಹಲಿ ದಂಡಯಾತ್ರೆ ನಡೆಸುತ್ತಲೇ ಇದ್ದಾರೆ. ಇದರ ಮಧ್ಯೆ ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರು ಡಿಸಿಎಂ ಸ್ಥಾನಕ್ಕಾಗಿ ದೇವರ ಮೊರೆ ಹೋಗಿದ್ದಾರೆ.
ಯಾದಗಿರಿಯ ವಡಗೇರಾ ತಾಲೂಕಿನ ಗೋನಾಲ ಗ್ರಾಮದ ಗಡೇ ದುರ್ಗಾದೇವಿಗೆ ಸಚಿವ ಶ್ರೀರಾಮುಲು “ನನ್ನನ್ನು ಡಿಸಿಎಂ ಮಾಡು” ಪತ್ರ ಬರೆದಿದ್ದಾರೆ. ದುರ್ಗಾದೇವಿಗೆ ಶ್ರೀರಾಮುಲು ಬರೆದಿದ್ದಾರೆ ಎನ್ನಲಾಗಿರುವ ಇಂಗ್ಲೀಷ್ ನಲ್ಲಿ ಬರೆದಿರುವ ಪತ್ರ ಈ ವೈರಲ್ ಆಗಿದೆ.
ಇಂದು ಗೋನಾಲಕ್ಕೆ ಆಗಮಿಸಿದ ರಾಮುಲು ನೇರವಾಗಿ ಗಡೇ ದುರ್ಗಾದೇವಿ ದೇವಾಲಯಕ್ಕೆ ತೆರಳಿ ದರ್ಶನ ಪಡೆದ್ರು. ಬಳಿಕ ದೇವಸ್ಥಾನದ ಪೂಜಾರಿ ಮರಿಸ್ವಾಮಿ ಅವರ ಮಾರ್ಗದರ್ಶನದಂತೆ, ದೇವಿಯ ಗರ್ಭಗುಡಿಯೊಳಗೆ ಹೋಗಿ ತಮ್ಮ ಪತ್ರವನ್ನು ದೇವಿಯ ಪಾದದ ಬಳಿ ಇಟ್ಟಿದ್ದಾರೆ ಎನ್ನಲಾಗುತ್ತಿದೆ.
ಇನ್ನು ಗೋನಾಳ ಗ್ರಾಮದ ಗಡೇ ದುರ್ಗಾದೇವಿಯು ಶಕ್ತಿ ದೇವತೆಯಾಗಿದ್ದು ದೇವಿಯಗೆ ಪೂಜೆ ಸಲ್ಲಿಸಿ ದೇವಿಯ ಕೃಪೆಗೆ ಪಾತ್ರರಾದರೆ ಒಳಿತಾಗಿದ ನಿದರ್ಶನಗಳು ಇವೆ. ಈ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕೂಡ ಈ ದೇವಾಲಯಕ್ಕೆ ಬಂದು ದೇವಿ ದರ್ಶನ ಪಡೆದಿದ್ದರು.