ಸ್ಟಾರ್ ಹೋಟೆಲ್ ಗಳೇ ತಾತ್ಕಾಲಿಕ ಆಸ್ಪತ್ರೆಗಳು : ಡಾ.ಕೆ.ಸುಧಾಕರ್
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಾದ ಹಿನ್ನೆಲೆ ಸಿಎಂ ನೇತೃತ್ವದಲ್ಲಿ ಸಭೆ ನಡೆಯಿತು. ಈ ಸಭೆಯಲ್ಲಿ ಭಾಗಿಯಾಗ ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಹಲವು ವಿಚಾರಗಳನ್ನ ಹಂಚಿಕೊಂಡಿದ್ದಾರೆ.
ಸಿಎಂ ಅಧ್ಯಕ್ಷತೆಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿದೆ. ಸರ್ವ ಪಕ್ಷ ಸಭೆಯಲ್ಲಿ ಎಲ್ಲರ ಸಲಹೆ ಪಡೆದು ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ. ನಗರದಲ್ಲಿ ಕೇಸ್ ಗಳ ಹೆಚ್ಚಾಗುತ್ತಿದ್ದು, ಈ ಬಗ್ಗೆ ಹೆಚ್ಚಿನ ಕ್ರಮಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಟೆಸ್ಟ್ ಗಳನ್ನ ಹೆಚ್ಚು ಮಾಡುವುದು, ಕಂಟೈನ್ಮೆಂಟ್ ಜೋನ್ ಹೆಚ್ಚಿಸುವುದು, ಐಸೋಲೇಷನ್ ನಲ್ಲಿದ್ದರ ಮೇಲೆ ನಿಗಾ ವಹಿಸುವುದು.
ದೊಡ್ಡ ಆಸ್ಪತ್ರೆಗಳು ಸ್ಟಾರ್ ಹೋಟೆಲ್ ಗಳೊಂದಿಗೆ ಒಪ್ಪಂದ ಮಾಡಿಕೊಂಡು ತಾತ್ಕಾಲಿಕ ಆಸ್ಪತ್ರೆಗಳನ್ನಾಗಿ ಮಾಡಿಕೊಳ್ಳಬೇಕು. ಅಲ್ಲಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಬೇಕು. ಶೇ 95 ರಷ್ಟು ಜನರಿಗೆ ಆಸ್ಪತ್ರೆಯ ಅಗತ್ಯವಿಲ್ಲ. ಆತಂಕದಿಂದ ಆಸ್ಪತ್ರೆಗೆ ದಾಖಲಾಗುವುದು ಬೇಡ. ಗಂಭೀರವಿಲ್ಲದ ಸೋಂಕಿತರಿಗೆ ಹೋಟಲ್ ನಲ್ಲಿ ಚಿಕಿತ್ಸೆ ನೀಡಲಾಗುವುದು. ಇಂದಿನಿಂದ ಈ ಆದೇಶ ಹೊರಡಿಸಲಾಗುವುದು. ಖಾಸಗಿ ಆಸ್ಪತ್ರೆಗಳಲ್ಲಿ 5 ಸಾವಿರ ಬೆಡ್ ಗಳನ್ನ ನೀಡಬೇಕು.
ಪ್ರತಿ ವಾರ್ಡ್ ನಲ್ಲಿ ಹೆಚ್ಚುವರಿ ಆಂಬ್ಯುಲೆನ್ಸ್ ಇರಬೇಕು. 49 ಶ್ರದ್ಧಾಂಜಲಿ ವಾಹನಗಳು ಇರಲಿದ್ದು, ಇವು ಉಚಿತ ಸೇವೆ ಸಲ್ಲಿಸಲಿವೆ. ಶವ ಸಂಸ್ಕಾರಕ್ಕೆ ಹಣ ನೀಡುವಾಗೆ ಇಲ್ಲ. ಆಸ್ಪತ್ರೆಗಳಲ್ಲಿ ಆಕ್ಷಿಜನ್ ಘಟಕಗಳನ್ನ ಸ್ಥಾಪನೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.