ಜನಸಂಖ್ಯೆ ನಿಯಂತ್ರಣ ಕಾನೂನು ಕುರಿತು ಸುಪ್ರೀಂ ವಿಚಾರಣೆ…
ದೇಶದಲ್ಲಿ ಜನಸಂಖ್ಯೆ ನಿಯಂತ್ರಣ ಕಾನೂನನ್ನ ಜಾರಿಗೊಳಿಸಬೇಕೆಂಬ ಬೇಡಿಕೆಗೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ಅರ್ಜಿಯನ್ನು ಶುಕ್ರವಾರ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿತು.
ಅರ್ಜಿದಾರರನ್ನ ಪ್ರಶ್ನೆ ಮಾಡಿದ ಮುಖ್ಯ ನ್ಯಾಯಮೂರ್ತಿ ಯುಯು ಲಲಿತ್ ನೇತೃತ್ವದ ಪೀಠ “ ಇಬ್ಬರು ಮಕ್ಕಳ ನಿಯಮವನ್ನು ಜಾರಿಗೆ ತರಲು ನಾವು ಹೇಗೆ ಆದೇಶಿಸಬಹುದು?” ಎಂದು ಪ್ರಶ್ನಿಸಿದೆ. ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಲು ನಿರಾಕರಿಸಿದ ನ್ಯಾಯಾಲಯ, ಈ ಕಾನೂನು ಏಕೆ ಬೇಕು ಎಂದು ನೀವೇ ಹೇಳಿ? ಆ ನಂತರವೇ ನೋಟಿಸ್ ನೀಡುತ್ತೇವೆ ಎಂದಿದೆ.
ಇದೀಗ ಈ ಪ್ರಕರಣ ಅಕ್ಟೋಬರ್ 11 ರಂದು ಮತ್ತೆ ವಿಚಾರಣೆಗೆ ಬರಲಿದೆ. ವಾಸ್ತವವಾಗಿ, ಬಿಜೆಪಿ ನಾಯಕರು ಮತ್ತು ವಕೀಲರಾದ ಅಶ್ವಿನಿ ಉಪಾಧ್ಯಾಯ, ಸ್ವಾಮಿ ಜಿತೇಂದ್ರಾನಂದ ಸರಸ್ವತಿ ಮತ್ತು ದೇವಕಿನಂದನ್ ಠಾಕೂರ್ ಅವರು ಜನಸಂಖ್ಯೆ ನಿಯಂತ್ರಣ ಕಾನೂನಿಗೆ ಒತ್ತಾಯಿಸಿ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು.
Supreme Court Over Population Control Law| Bench Asked How To Order Implementation Of Rule Of Two Children