ಬಾಲಿವುಡ್ ಹಾಳಾಗಲು ಸುಶಾಂತ್ ಸಿಂಗ್ ಎಂಬ ಬ್ರಹ್ಮಾಸ್ತ್ರ ಸಾಕು – ಸುಶಾಂತ್ ಸಹೋದರಿ
ಬಾಲಿವುಡ್ ಗೆ ಆಶಾಕಿರಣದಂತೆ ಬಿಡುಗಡೆಯಾಗಿರುವ ಬ್ರಹ್ಮಾಸ್ತ್ರ (Brahmastra) ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ನಡುವೆ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆ ಕಮಾಯಿ ಮಾಡಿದೆ. ಈ ಸಿನಿಮಾವನನ್ನ ಕೆಲವರು ಸಿನಿಮಾವನ್ನ ಅಧ್ಬುತ ಎಂದ್ರೆ ಬಹುತೇಕರು ಸಿನಿಮಾ ಅಷ್ಟಕಷ್ಟೇ ಅಂತಿದ್ದಾರೆ.. ಇದರ ನಡುವೆಯೂ ಸಿನಿಮಾ ಈವರೆಗೂ ವಿಶ್ವಾದ್ಯಂತ ಸುಮಾರು 70 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ..
ಇದೀಗ ಸುಶಾಂತ್ ಸಿಂಗ್ ಅವರು ಸಹೋದರಿ ಮೀತೂ ಬಾಲಿವುಡ್ ಸಿನಿಮಾರಂಗವನ್ನ ಟೀಕೆ ಮಾಡಿದ್ದಾರೆ.. ಬ್ರಹ್ಮಾಸ್ತ್ರ ಸಿನಿಮಾವನ್ನ ಲೇವಡಿ ಮಾಡಿದ್ದು ,, ಬಾಲಿವುಡ್ ಹಾಳಾಗಲು ಕೇವಲ ಸುಸಾಂತ್ ಸಿಂಗ್ ಬ್ರಹ್ಮಾಸ್ತ್ರ ಸಾಕು ಎಂದಿದ್ದಾರೆ..
ಸುಶಾಂತ್ ಸಿಂಗ್ ರಜಪೂತ್ (sushanthsinghrajput) ಅವರ ಅಕಾಲಿಕ ಮರಣವು ಅವರ ಅಭಿಮಾನಿಗಳಿಗೆ ಮತ್ತು ಇಡೀ ಸಿನಿಮಾರಂಗಕ್ಕೆ ಆಘಾತವನ್ನುಂಟು ಮಾಡಿತ್ತು.. ಅವರು ನಿಧನರಾಗಿ 2 ವರ್ಷಗಳು ಕಳೆದಿದೆ.. ಆದ್ರೆ ಅವರ ನಿಧನಕ್ಕೆ ಬಾಲಿವುಡ್ ನ ದೋಷಿಸುತ್ತಿರುವ ಅವರ ಅಭಿಮಾನಿಗಳು , ಬಾಲಿವುಡ್ ನ ಸ್ಟಾರ್ ಗಳ ಸಿನಿಮಾಗಳನ್ನ ಬಹಿಷ್ಕರಿಸುತ್ತಾ ಬಂದಿದ್ದಾರೆ..
ಸುಶಾಂತ್ ಅವರ ಸಹೋದರಿ ಮೀತು ಸಿಂಗ್ ಅದೇ ನಂತರದ ಬ್ರಹ್ಮಾಸ್ತ್ರದ ಬಿಡುಗಡೆಯ ಕುರಿತು ಮಾತನಾಡುವ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.
ಬಾಲಿವುಡ್ನಲ್ಲಿ ಪರೋಕ್ಷವಾಗಿ ಗೇಲಿ ಮಾಡುತ್ತಾ, ಮೀತು ತಮ್ಮ ಸಹೋದರನ ಫೋಟೋವನ್ನು ಹಂಚಿಕೊಂಡಿದ್ದಾರೆ.. “ಈ ಬಾಲಿವುಡ್ ಅನ್ನು ನಾಶಮಾಡಲು ಸುಶಾಂತ್ ಎಂಬ ಬ್ರಹ್ಮಾಸ್ತ್ರ ಸಾಕು. ಬಾಲಿವುಡ್ ಯಾವಾಗಲೂ ಸಾರ್ವಜನಿಕರನ್ನು ನಿರ್ದೇಶಿಸಲು ಬಯಸುತ್ತದೆ, ಪರಸ್ಪರ ಗೌರವ ಮತ್ತು ನಮ್ರತೆಯನ್ನು ತೋರಿಸಲು ಎಂದಿಗೂ ನಿಲ್ಲುವುದಿಲ್ಲ.
ನೈತಿಕ ಮೌಲ್ಯಗಳಲ್ಲಿ ಶ್ರೀಮಂತವಾಗಿರುವ ನಮ್ಮ ದೇಶದ ಮುಖವಾಗಲು ನಾವು ಅಂತಹ ಜನರನ್ನು ಹೇಗೆ ಬಿಡಬಹುದು? ಆಡಂಬರದಿಂದ ಸಾರ್ವಜನಿಕರ ಪ್ರೀತಿಯನ್ನು ಗೆಲ್ಲುವ ಅವರ ಕ್ಷಮಿಸುವ ಪ್ರಯತ್ನ ವಿಫಲವಾಗಿದೆ. ಗುಣಮಟ್ಟ ಮತ್ತು ನೈತಿಕ ಮೌಲ್ಯಗಳು ಮೆಚ್ಚುಗೆ ಮತ್ತು ಗೌರವವನ್ನು ಗೆಲ್ಲುವ ಏಕೈಕ ವಿಷಯ ಎಂದಿದ್ದಾರೆ..
ಈ ಹಿಂದೆ, ಬ್ರಹ್ಮಾಸ್ತ್ರ ಬಿಡುಗಡೆಯಿಂದಾಗಿ PVR ಮತ್ತು INOX ನಂತಹ ಥಿಯೇಟರ್ ಸರಪಳಿಗಳು ಕೋಟಿಗಟ್ಟಲೆ ನಷ್ಟವನ್ನು ಅನುಭವಿಸಿವೆ ಎಂದು ಮಾಧ್ಯಮ ವರದಿಗಳ ನಂತರ ಬಾಲಿವುಡ್ ನಲ್ಲಿ ಸಾಕಷ್ಟು ಇಂತಹ ನಕಲಿ ವಿಚಾರಗಳಿವೆ ಎಂದು ನಿರ್ಮಾಪಕ , ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಇತ್ತೀಚೆಗೆ ಅಭಿಪ್ರಾಯಪಟ್ಟಿದ್ದಾರೆ.