ತ್ರಿವಳಿ ತಲಾಖ್ ಹೇಳಲು ನಿರಾಕರಿಸಿದಕ್ಕೆ ಪತ್ನಿ ಸಂಬಂಧಿಕರಿಂದ ಯುವಕನ ಮೇಲೆ ಹಲ್ಲೆ
ಕೇರಳ : ಮಹಿಳೆಯರಿಗೆ ಅನ್ಯಾಯವಾಗಬಾರದು ಅನ್ನೋ ಕಾರಣಕ್ಕೆ ತ್ರಿವಳಿ ತಲಾಖ್ ಪದ್ದತಿಯನ್ನೇ ಕಾನೂನು ಬಾಹಿರಗೊಳಿಸಲಾಗಿದೆ.. ಆದ್ರೂ ಕೆಲವೆಡೆ ಪುರುಷರು ತಮ್ಮ ಪತ್ನಿಯರಿಗೆ ಬಾರು ಬಾರಿ ಫೋನ್ ಮೂಲಕ ಅಥವ ವಾಟ್ಸಾಪ್ ಫೇಸ್ ಬುಕ್ , ಇಲ್ಲ ಫೋನ್ ಕಾಲ್ ಮೂಲಕ ಮೂರು ಬಾರಿ ತಲಾಖ್ ಪದವನ್ನು ಹೇಳುವ ಮೂಲಕ ವಿಚ್ಛೇದನ ನೀಡುತ್ತಿರುವಂತಹ ಪ್ರಕರಣಗಳು ಕಂಡುಬರುತ್ತಲೇ ಇದೆ..
ಆದ್ರೆ ಇಲ್ಲೊಂದು ಘಟನೆ ಇದಕ್ಕೆ ತದ್ವಿರುದ್ಧ ಎನಿಸುತ್ತೆ.. ಯುವಕನೊಬ್ಬನಿಗೆ ಬಲವಂತಾವಗಿ ತಲಾಖ ಹೇಳುವಂತೆ ಆತನ ಪತ್ನಿಯ ಸಂಬಂಧಿಕರು ಒತ್ತಾಯಿಸಿ ಕಡೆಗೆ ಆತ ಒಪ್ಪದೇ ಹೋದಾಗ ಆತನ ಮೇಲೆ ಮನಸೋಇಚ್ಛೆ ಹಲ್ಲೆ ನಡೆಸಲಾಗಿದೆ.. ಅಂದ್ಹಾಗೆ ಈ ಘಟನೆ ನಡೆದಿರೋದು ಕೇರಳದ ಮಲ್ಲಪುರಂ ಜಿಲ್ಲೆಯಲ್ಲಿ.
ಅಬ್ದುಲ್ ಅಸೀಬ್ (30) ಹಲ್ಲೆಗೊಳಗಾದ ಯವಕನಾಗಿದ್ದಾನೆ. ಈತನಿಗೆ ಒಂದೂವರೆ ತಿಂಗಳ ಹಿಂದೆ ಮದುವೆಯಾಗಿತ್ತು. ಆದ್ರೆ ಮದ್ವೆಯಾದ ಕೆಲವೇ ದಿನಗಳ ನಂತರ ಪತ್ನಿಯಿಂದ ಬೇರೆಯಾಗಿದ್ದ. ಆ ಬಳಿಕ ಪತ್ನಿಯ ತಂದೆ, ತಾಯಿ ಮತ್ತು ಸಂಬಂಧಿಕರು ಅಸೀಬ್ ಬಳಿ ವಿಚ್ಛೇದನ ನೀಡುವಂತೆ ತ್ರಿವಳಿ ತಲಾಖ್ ಹೇಳಲು ಕೇಳಿಕೊಂಡಿದ್ದಾರೆ. ಇದಕ್ಕೆ ನಿರಾಕರಿಸಿದ್ದ ಅಸೀಬ್ಗೆ ಆತನ ಮಾವ ಹಾಗೂ ಪತ್ನಿಯ ಚಿಕ್ಕಪ್ಪಂದಿರು ಥಳಿಸಿದ್ದಾರೆ ಎಂದು ವರದಿಯಾಗಿದೆ..
ಅಸೀಬ್ ಅನುಮಾನಾಸ್ಪದ ಸ್ವಭಾವದವ ಹೊಂದಿದ್ದು, ಮಾದಕ ದ್ರವ್ಯ ಸೇವಿಸುತ್ತಿದ್ದ ಎನ್ನಲಾಗಿದೆ. ಹೀಗಾಗಿ ಇವರ ದಾಂಪತ್ಯ ಜೀವನದಲ್ಲಿ ಬಿರುಕು ಕಾಣಿಸಿಕೊಂಡು ಪತಿ, ಪತ್ನಿ ದೂರವಾಗಿದ್ದರು ಎಂದು ಪತ್ನಿಯ ಸಂಬಂಧಿಕರು ಆರೋಪಿಸಿದ್ದಾರೆ.
ಬಿಟ್ ಕಾಯಿನ್ ಪ್ರಕರಣ : ಶ್ರೀಕಿ ಬಗ್ಗೆ ಸ್ಫೋಟಕ ಮಾಹಿತಿ
ನಿನ್ನೆ ಅಸೀಬ್ ನ ಕಚೇರಿಗೆ ಆಗಮಿಸಿದ ಪತ್ನಿಯ ಚಿಕ್ಕಪ್ಪಂದಿರು ಪತ್ನಿಯ ಮನೆಗೆ ಕರೆದುಕೊಂಡು ಹೋಗಿ, ಸಾಂಕೇತಿಕವಾಗಿ ಪತ್ನಿಗೆ ವಿಚ್ಛೇದನ ನೀಡುವ ಭಾಗವಾಗಿ ತ್ರಿವಳಿ ತಲಾಖ್ ಹೇಳಬೇಕು ಎಂದು ಒತ್ತಾಯಿಸಿದ್ಧಾರೆ.. ಆದ್ರೆ ತಲಾಕ್ ಹೇಳಲು ಆತ ನಿರಾಕರಿಸಿದ್ದಾನೆ. ಇದರಿಂದ ಸಿಟ್ಟಿಗೆದ್ದ ಪತ್ನಿಯ ಚಿಕ್ಕಪ್ಪಂದಿರು ಅಸೀಬ್ಗೆ ಮನಬಂದಂತೆ ಥಳಿಸಿ ಗಂಭೀರವಾಗಿ ಗಾಯಗೊಳಿಸಿದ್ದಾರೆ. ಆಸೀಬ್ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು ಘಟನೆ ಸಂಬಂಧಿಸಿದಂತೆ 6 ಮಂದಿ ಆರೋಪಿಗಳನ್ನು ಕೊಟ್ಟಕ್ಕಲ್ ಪೊಲೀಸರು ಬಂಧಿಸಿ ವಿಚಾರಣೆ ಮುಂದುವರೆಸಿದ್ದಾರೆ..