ತಂದೂರಿ ರೊಟ್ಟಿ ತಡವಾಗಿ ನೀಡಿದ್ದಕ್ಕೆ ಕೊಲೆ ನಡೆದಿರುವ ಘಟನೆಯೊಂದು ಧಾರವಾಡ ನಗರದಲ್ಲಿ ನಡೆದಿದೆ.
ಫಕ್ಕೀರೇಶ ಪ್ಯಾಟಿ(40) ಕೊಲೆಯಾದ ವ್ಯಕ್ತಿ. ಕನ್ನಯ್ಯಪ್ಪ ಕೊಲೆ ಮಾಡಿರುವ ವ್ಯಕ್ತಿ ಎನ್ನಲಾಗಿದೆ. ಮೂಲತಃ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಸುಗನಳ್ಳಿ ಗ್ರಾಮದ ಫಕ್ಕೀರೇಶ ಹಲವು ವರ್ಷಗಳಿಂದ ನಗರದ ಸಂಗಮ್ ವೃತ್ತದಲ್ಲಿರುವ ವಿಮಲ್ ಹೋಟೆಲ್ ವೊಂದರಲ್ಲಿ ಕೆಲಸ ಮಾಡುತ್ತಿದ್ದ. ಈತ ಆ ಹೋಟೆಲ್ ನಲ್ಲಿ ತಂದೂರಿ ರೊಟ್ಟಿ ಮಾಡುತ್ತಿದ್ದ.
ದಾಂಡೇಲಿ ಮೂಲದ ಕನ್ನಯ್ಯಪ್ಪ ಹಾಗೂ ಕೊಲೆಯಾದ ವ್ಯಕ್ತಿ ಇದೇ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದರು. ಹೋಟೆಲ್ ಗೆ ಬಂದಿದ್ದ ಗ್ರಾಹಕರಿಗೆ ಫಕ್ಕೀರೇಶ ರೊಟ್ಟಿ ತಡವಾಗಿ ನೀಡಿದ್ದಾನೆ. ಇದರಿಂದ ನನಗೆ ಗ್ರಾಹಕರು ಬೈದಿದ್ದಾರೆ ಎಂಬ ಸಿಟ್ಟಿನಲ್ಲಿ ಕನ್ನಯ್ಯಪ್ಪ ಜಗಳ ತೆಗೆದು ರಾಡ್ ನಿಂದ ಹೊಡೆದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.