ಬೇಟೆಯಾಡಲು ಹೋಗಿದ್ದ ಐವರು ಭಾರತೀಯರನ್ನು ಅಪಹರಿಸಿದ ಚೀನಾ ಸೇನೆ
ಸುಬಾನ್ಸರಿ, ಸೆಪ್ಟೆಂಬರ್05: ಚೀನಾ-ಭಾರತ ಗಡಿಯಲ್ಲಿರುವ ಮೇಲಿನ ಸುಬಾನ್ಸರಿ ಜಿಲ್ಲೆಯ ಕಾಡಿನಲ್ಲಿ ಬೇಟೆಯಾಡಲು ಹೋಗಿದ್ದ ಐವರು ಭಾರತೀಯರನ್ನು ಚೀನಾದ ಮಿಲಿಟರಿ ಅಪಹರಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
ಅರುಣಾಚಲ ಪ್ರದೇಶದ ನ್ಯಾಚೊ ಪ್ರದೇಶದಲ್ಲಿ ಶುಕ್ರವಾರ ಈ ಘಟನೆ ನಡೆದಿದೆ ಎಂದು ಅವರ ಕುಟುಂಬಗಳು ತಿಳಿಸಿವೆ.
ಗುಂಪಿನಲ್ಲಿದ್ದ ಇತರ ಇಬ್ಬರು ತಪ್ಪಿಸಿಕೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.
ನಾನು ಸತ್ಯಾಸತ್ಯತೆಗಳನ್ನು ಪರಿಶೀಲಿಸಲು ನ್ಯಾಚೊ ಪೊಲೀಸ್ ಠಾಣೆಯ ಅಧಿಕಾರಿಯನ್ನು ಪ್ರದೇಶಕ್ಕೆ ಕಳುಹಿಸಿದ್ದೇನೆ ಮತ್ತು ತಕ್ಷಣ ವರದಿ ಮಾಡುವಂತೆ ನಿರ್ದೇಶಿಸಿದ್ದೇನೆ. ಆದರೆ, ಭಾನುವಾರ ಬೆಳಿಗ್ಗೆ ಮಾತ್ರ ವರದಿ ಲಭ್ಯವಿರುತ್ತದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ತರು ಗುಸ್ಸಾರ್ ತಿಳಿಸಿದ್ದಾರೆ.
ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್ಎ) ಸುಬಾನ್ಸರಿ ಜಿಲ್ಲೆಯಿಂದ ಐದು ಜನರನ್ನು ಅಪಹರಿಸಿದೆ ಎಂದು ಕಾಂಗ್ರೆಸ್ ಮುಖಂಡ ನಿನಾಂಗ್ ಎರಿಂಗ್ ಕೂಡ ಶನಿವಾರ ಬೆಳಿಗ್ಗೆ ಟ್ವೀಟ್ ಮಾಡಿದ್ದಾರೆ.
ಆಘಾತಕಾರಿ ಸುದ್ದಿ: ನಮ್ಮ ರಾಜ್ಯ ಅರುಣಾಚಲ ಪ್ರದೇಶದ ಸುಬಾನ್ಸರಿ ಜಿಲ್ಲೆಯ ಐದು ಜನರನ್ನು ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್ಎ) ಅಪಹರಿಸಿದೆ ಎಂದು ವರದಿಯಾಗಿದೆ ಎಂದು ಎರಿಂಗ್ ಟ್ವೀಟ್ ಮಾಡಿದ್ದಾರೆ.
SHOCKING NEWS: Five people from Upper Subansiri district of our state Arunachal Pradesh have reportedly been ‘abducted’ by China’s People’s Liberation Army (PLA).
Few months earlier,a similar incident happened. A befitting reply must be given to #PLA and #CCPChina. @PMOIndia https://t.co/8gRdGsQfId pic.twitter.com/KbDMJ3bUi2
— Ninong Ering 🇮🇳 (@ninong_erring) September 4, 2020