ನಾಯಕ ನಟರಿಗಾಗಿ ಆಂಧ್ರ, ತೆಲಂಗಾಣದಲ್ಲಿ ಅಭಿಮಾನಿಗಳು ಕಿತ್ತಾಡಿಕೊಳ್ಳುವುದು ಸಾಮಾನ್ಯವಾಗಿತ್ತು. ಈಗ ಅದೇ ಅಭಿಮಾನಿಗಳು ಕರ್ನಾಟಕದಲ್ಲಿ ಕೂಡ ಬಡಿದಾಡಿಕೊಂಡಿದ್ದಾರೆ.
ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಲ್ಲಿಯ ಕೆ.ಆರ್. ಪುರದಲ್ಲಿ ಪ್ರಭಾಸ್ ಅಭಿಮಾನಿಗೆ ಅಲ್ಲು ಅರ್ಜುನ್ ಅಭಿಮಾನಿಗಳು ಥಳಿಸಿದ್ದಾರೆ. ಅಭಿಮಾನಿಗಳ ವಾರ್ ಆನ್ ಲೈನ್ ಲ್ಲಿ ಆರಂಭವಾಗಿದೆ. ಅದು ಹಲ್ಲೆ ಮಾಡಿಕೊಳ್ಳುವ ಹಂತಕ್ಕೆ ಬಂದಿದೆ. ಸದ್ಯ ಇದು ವೈರಲ್ ಆಗಿದ್ದು, ಪೊಲೀಸರ ಗಮನಕ್ಕೆ ತರಲಾಗಿದೆ.
ಅಲ್ಲು ಅರ್ಜುನ್ನ ಟ್ರೋಲ್ ಮಾಡುತ್ತೀಯಾ? ಜೈ ಅಲ್ಲು ಅರ್ಜುನ್ ಅಂತ ಹೇಳು. ನಿನ್ನ ಬಿಟ್ಟು ಬಿಡುತ್ತೀನಿ ಎಂದು ಹೇಳುತ್ತ ವ್ಯಕ್ತಿಯೊಬ್ಬನ ಮೇಲೆ ಹತ್ತಾರು ಯುವಕರು ಹಲ್ಲೆ ಮಡಿದ್ದಾರೆ. ಹೀಗಾಗಿ ಇಂಥವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಗಿದೆ.