ಹೋಮ್ ವರ್ಕ್ ಮಾಡದಕ್ಕೆ ಕಿವಿಯಲ್ಲಿ ರಕ್ತ ಬರುವಂತೆ ಥಳಿಸಿದ ಶಿಕ್ಷಕ…
ಹೋಂ ವರ್ಕ್ ಮಾಡಿಲ್ಲ ಎಂಬ ಕಾರಣಕ್ಕೆ ವಿದ್ಯಾರ್ಥಿಗೆ ಶಿಕ್ಷಕ ಮನಬಂದಂತೆ ಥಳಿಸಿರುವ ಅಮಾನವಿಯ ಘಟನೆ ಕೊಪ್ಪಳದ ನಗರದ ಧನ್ವಂತರಿ ಕಾಲೋನಿಯಲ್ಲಿ ನಡೆದಿದೆ.
ನವೋದಯ, ಸೈನಿಕ್ ಶಾಲೆಯ ಕೋಚಿಂಗ್ ಕ್ಲಾಸ್ ನಡೆಸುತ್ತಿದ್ದ ಶಿಕ್ಷಕ ಲೋಹಿತ್ ಎಂಬಾತ ಹೋಮ್ ವರ್ಕ್ ಮಾಡಿಲ್ಲ ಎಂಬ ಸಣ್ಣ ಕಾರಣಕ್ಕೆ ೧೦ ವರ್ಷದ ಪ್ರಥಮ್ ಎಂಬ ಬಾಲಕನಿಗೆ ಹಿಗ್ಗಾ ಮುಗ್ಗಾ ಹೊಡೆದಿದ್ದಾರೆ. ಅಲ್ಲದೇ ಪ್ರಥಮ್ ಕಿವಿಯಲ್ಲಿ ರಕ್ತ ಬರುವಂತೆ ಹೊಡೆದಿದ್ದಾರೆ.
ಇದಲ್ಲದೇ ತರಗತಿಗೆ ಬರುವ ಹಲವಾರು ಮಕ್ಕಳ ಮೇಲೆ ಇದೇ ರೀತಿ ಶಿಕ್ಷಕ ಲೋಹಿತ್ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಇದೀಗ ಶಿಕ್ಷಕನ ಅಮಾನವೀಯ ವರ್ತನೆಯಿಂದಾಗಿ ವಿದ್ಯಾರ್ಥಿ ಪ್ರಥಮ್ ನೋವು ಅನುಭವಿಸುತ್ತಿದ್ದಾನೆ. ಸದ್ಯ ಮೈ ಮೇಲೆ ಗಾಯವಾಗಿರುವ ಪ್ರಥಮ್ಗೆ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಲೋಹಿತ್ ಕ್ರೂರ ವರ್ತನೆ ವಿರುದ್ಧ ಬಾಲಕನ ಪೋಷಕರು ಆಕ್ರೋಶ ಹೊರಹಾಕಿದ್ದಾರೆ.