ADVERTISEMENT
Friday, September 18, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Health

ಎಲ್ಲೆಂದರಲ್ಲಿ ಬೆಳೆಯುವ ಉತ್ತರಾಣಿಯ ಆಯುರ್ವೇದದ ಉಪಯೋಗಗಳು ಕಲ್ಪನೆಗೂ ನಿಲುಕದ್ದು:

saaksha tv by saaksha tv
September 4, 2020
in Health, Newsbeat, ಆರೋಗ್ಯ
Share on FacebookShare on TwitterShare on WhatsappShare on Telegram

ಎಲ್ಲೆಂದರಲ್ಲಿ ಬೆಳೆಯುವ ಉತ್ತರಾಣಿಯ ಆಯುರ್ವೇದದ ಉಪಯೋಗಗಳು ಕಲ್ಪನೆಗೂ ನಿಲುಕದ್ದು:

ಯಾವ ಸಹಾಯವೂ ಇಲ್ಲದೇ ಎಲ್ಲೆಡೆ ಬೆಳೆಯುವ ಗಿಡವೆಂದರೆ ಅದು ಉತ್ತರಾಣಿ. ಯಜುರ್ವೇದದಲ್ಲಿ ಇದರ ಪ್ರಸ್ತಾಪ ಬರುತ್ತದೆ. ಭಾರತದಲ್ಲಿ ಈ ಉತ್ತರಾಣಿಯು ಕಳೆಯಂತೆ ಬೆಳೆಯುವ ಸಸ್ಯ. ನೀರಿನಂಶ ಹೆಚ್ಚಿದ್ದಲ್ಲಿ ಉತ್ತರಾಣಿಯದ್ದೇ ಸಾಮ್ರಾಜ್ಯ. ಶರೀರದಲ್ಲಿ ದೂಷಿತವಾಗಿರುವ ರಸಾದಿ ಧಾತುಗಳನ್ನು ಇದು ಶುದ್ಧೀಕರಿಸಬಲ್ಲದು. ಹೀಗಾಗಿಯೇ ಇದಕ್ಕೆ ಅಪಾಮಾರ್ಗ ಎಂಬ ಹೆಸರೂ ಇದೆ. ಉತ್ತರಾಣಿಯಲ್ಲಿ ವಿಷನಾಶಕ ಗುಣವಿರುವುದರಿಂದ ಎಲೆಗಳ ರಸವನ್ನು ಕೈಗಳಿಗೆ ಹಚ್ಚಿಕೊಂಡು ಚೇಳನ್ನು ಹಿಡಿಯಬಹುದು ಎಂದೂ ಹೇಳುತ್ತಾರೆ.

Related posts

ಯತ್ನಾಳ ಮತ್ತು ಈಶ್ವರಪ್ಪ ಇಲ್ಲದೆ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ: ಹಿರಿಯ ನಾಯಕರ ಪರ ನಿರಾಣಿ ಬ್ಯಾಟಿಂಗ್- ರಾಜ್ಯಾಧ್ಯಕ್ಷ ವಿಜಯೇಂದ್ರಗೆ ಮುರುಗೇಶ ನಿರಾಣಿ ಖಡಕ್ ಸಲಹೆ

ಯತ್ನಾಳ ಮತ್ತು ಈಶ್ವರಪ್ಪ ಇಲ್ಲದೆ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ: ಹಿರಿಯ ನಾಯಕರ ಪರ ನಿರಾಣಿ ಬ್ಯಾಟಿಂಗ್- ರಾಜ್ಯಾಧ್ಯಕ್ಷ ವಿಜಯೇಂದ್ರಗೆ ಮುರುಗೇಶ ನಿರಾಣಿ ಖಡಕ್ ಸಲಹೆ

September 18, 2026
ರಷ್ಯಾ ತೈಲ ಖರೀದಿಗೆ ಅಮೆರಿಕದ ಕಠಿಣ ಕ್ರಮ: ಭಾರತ, ಚೀನಾ ಸೇರಿ ದೇಶಗಳ ಮೇಲೆ 100%ವರೆಗೆ ಸುಂಕಕ್ಕೆ ಟ್ರಂಪ್‌ಗೆ ಅಧಿಕಾರ

ರಷ್ಯಾ ತೈಲ ಖರೀದಿಗೆ ಅಮೆರಿಕದ ಕಠಿಣ ಕ್ರಮ: ಭಾರತ, ಚೀನಾ ಸೇರಿ ದೇಶಗಳ ಮೇಲೆ 100%ವರೆಗೆ ಸುಂಕಕ್ಕೆ ಟ್ರಂಪ್‌ಗೆ ಅಧಿಕಾರ

September 18, 2026

ಇನ್ನು ಈ ಉತ್ತರಾಣಿಗೆ ಸಂಸ್ಕೃತದಲ್ಲಿ ಅಪಾಮಾರ್ಗ, ತುಳುವಿನಲ್ಲಿ ಉತ್ತರಾಣಿ, ಹಿಂದಿಯಲ್ಲಿ ಚಿರಚಿಂಟಾ, ಇಂಗ್ಲೀಷ್ ನಲ್ಲಿ ಪ್ರಿಕ್ಲಿಚಪ್ ಫ್ಲವರ್ ಎಂದೂ ಕರೆಯುತ್ತಾರೆ. ಇದಕ್ಕಿರುವ ಇನ್ನಿತರ ಹೆಸರುಗಳೆಂದರೆ ಶಿಕಾರಿ, ಮಯೂರಕ, ಮರ್ಕಟಹಿಪ್ಪಲೀ, ಕುಬ್ಜ, ಮಯೂರಶಿಖಾ ಎಂಬ ಇನ್ನಿತರ ಹೆಸರುಗಳೂ ಇವೆ.

ಕಾಂಡವು ಗಂಟುಗಂಟಾಗಿರುವ ಈ ಗಿಡವು ಪೊದೆಯಾಕಾರದಲ್ಲಿ ಅರ್ಧದಿಂದ ಒಂದು ಮೀಟರ್ ನಷ್ಟು ಎತ್ತರವಾಗಿ ಬೆಳೆಯುತ್ತದೆ. ಎಲೆಗಳು ದುಂಡಾಗಿದ್ದು 5 ಸೆಂಟಿಮೀಟರ್ ನಷ್ಟು ಉದ್ದವಾಗಿ, 3 ರಿಂದ 4 ಸೆಂಟಿಮೀಟರ್ ನಷ್ಟು ಅಗಲವಾಗಿ ಮೃದುವಾಗಿರುವುದು. ಇದರ ಹೂವು ಹಸಿರು ಮತ್ತು ಬಿಳಿ ಮಿಶ್ರಿತ ಬಣ್ಣದಿಂದ ಕೂಡಿದೆ. ಉತ್ತರಾಣಿಯಲ್ಲಿ ಎಷ್ಟು ವಿಧಗಳಿವೆ ಎಂಬ ಕುರಿತು ಸ್ವಲ್ಪ ಗೊಂದಲಗಳಿವೆ. ಕೆಲವು ಬಿಳಿ ಉತ್ತರಾಣಿ ಮತ್ತು ಕೆಂಪು ಉತ್ತರಾಣಿ ಮಾತ್ರ ಇದೆ ಎಂದು ಹೇಳಿದರೆ, ಇನ್ನೂ ಕೆಲವರು ಬಿಳಿ, ಕೆಂಪು ಬಣ್ಣಗಳ ಜೊತೆಗೆ ನೀಲಿ ಉತ್ತರಾಣಿ ಎಂಬ ಮೂರನೆಯ ವಿಧವನ್ನೂ ಗುರುತಿಸುತ್ತಾರೆ. ಬೇರು, ಬೀಜ, ಎಲೆ ಪ್ರಮುಖವಾಗಿ ಔಷಧಿಯಲ್ಲಿ ಬಳಸಲ್ಪಡುತ್ತವೆ.

ಗಾಯದಲ್ಲಿ ರಕ್ತ ಸುರಿಯುತ್ತಿದ್ದರೆ, ಆ ಭಾಗಕ್ಕೆ ಉತ್ತರಾಣಿ ಗಿಡದ ಸೊಪ್ಪಿನ ರಸವನ್ನು ಹಾಕಬೇಕು. ಆಗ ರಕ್ತಸ್ರಾವ ನಿಲ್ಲುತ್ತದೆ ಮತ್ತು ಗಾಯವು ಬಹಳ ಬೇಗ ಗುಣವಾಗುತ್ತದೆ. ಉತ್ತರಾಣಿಯ ರಸವನ್ನು ಹಿಪ್ಪಲಿ ಮತ್ತು ಜೇನುತುಪ್ಪದೊಂದಿಗೆ ಸೇವಿಸಿದರೆ ಕಫ, ಕೆಮ್ಮು ರೋಗವು ಗುಣವಾಗುತ್ತದೆ. ಬಿಳಿ ಉತ್ತರಾಣಿಯ ಬೇರನ್ನು ಶುದ್ಧವಾಗ ನೀರಿನಲ್ಲಿ ತೇದು, ಸ್ತನಗಳ ಮೇಲೆ ಲೇಪಿಸುವುದರಿಂದ ತಾಯಂದಿರ ಎದೆ ಹಾಲು ಹೆಚ್ಚುತ್ತದೆ. ಇಲಿವಿಷ, ಸರ್ಪವಿಷ ಮತ್ತು ಚೇಳಿನ ವಿಷ ದೇಹದಲ್ಲಿದ್ದರೆ ಉತ್ತರಾಣಿಯ ಬೇರನ್ನು ಜಜ್ಜಿ ಅದರ ರಸವನ್ನು ವಿಷವಿಳಿದಿರುವ ಜಾಗಕ್ಕೆ ಹಾಕುವುದರಿಂದ ವಿಷದ ಪ್ರಮಾಣ ಕಡಿಮೆಯಾಗುತ್ತದೆ. ಉತ್ತರಾಣಿಯ ರಸವನ್ನು ತೆಗೆದು ಎಣ್ಣೆ ಮಾಡಿ ಕಿವಿನೋವು, ಕಿವುಡುತನ, ಕಿವಿಯಲ್ಲಿ ಸದಾ ಶಬ್ದ ಬರುವುದು ಮುಂತಾದ ಸಮಸ್ಯೆಗಳಿಗೂ ಔಷಧವಾಗಿ ಬಳಸುತ್ತಾರೆ.

ಉತ್ತರಾಣಿ ಬೇರಿನ ಸೂಕ್ಷ್ಮ ಚೂರ್ಣವನ್ನು ಅಕ್ಕಿ ತೊಳೆದ ನೀರಿನಲ್ಲಿ ಸೇವಿಸುವುದರ ಜೊತೆಗೆ, ಉತ್ತರಾಣಿಯ ಬೀಜದ ಪುಡಿಯ ಲೇಪವನ್ನು ಮೂಲವ್ಯಾಧಿಯ ಅಂಕುರಕ್ಕೆ ಹಾಕುವುದರಿಂದ ಮೂಲವ್ಯಾಧಿ ರೋಗವು ಕಡಿಮೆಯಾಗುತ್ತದೆ. ಉತ್ತರಾಣಿಯ ಬೀಜದಿಂದ ಮತ್ತು ಹಾಲಿನಿಂದ ತಯಾರಿಸಿದ ಗಂಜಿಯನ್ನು ಸೇವಿಸುವುದರಿಂದ ಅತಿಯಾದ ಹಸಿವಿನ ಸಮಸ್ಯೆ ನಿವಾರಣೆಯಾಗುತ್ತದೆ. ಉತ್ತರಾಣಿಯ ಬೀಜದ ಲೇಪವನ್ನು ಮಜ್ಜಿಗೆಯಲ್ಲಿ ಸೇರಿಸಿ ಕುಡಿಯುವುದರಿಂದ ರಕ್ತ ಮೂಲವ್ಯಾಧಿ ನಿವಾರಣೆಯಾಗುತ್ತದೆ. ಉತ್ತರಾಣಿ ಬೀಜದಿಂದ ತಯಾರಿಸಿದ ಎಣ್ಣೆಯನ್ನು ತಲೆಗೆ ಹಚ್ಚುವುದರಿಂದ ತಲೆನೋವು ನಿವಾರಣೆಯಾಗುತ್ತದೆ.

ಮಾಹಿತಿ ಮತ್ತು ಲೇಖನ:- ಅಂಬಿಕಾ ಸೀತೂರು

Tags: #Uttarayana Ayurveda#Yajurveda.Ayurvedaindia
ShareTweetSendShare
Join us on:

Related Posts

ಯತ್ನಾಳ ಮತ್ತು ಈಶ್ವರಪ್ಪ ಇಲ್ಲದೆ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ: ಹಿರಿಯ ನಾಯಕರ ಪರ ನಿರಾಣಿ ಬ್ಯಾಟಿಂಗ್- ರಾಜ್ಯಾಧ್ಯಕ್ಷ ವಿಜಯೇಂದ್ರಗೆ ಮುರುಗೇಶ ನಿರಾಣಿ ಖಡಕ್ ಸಲಹೆ

ಯತ್ನಾಳ ಮತ್ತು ಈಶ್ವರಪ್ಪ ಇಲ್ಲದೆ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ: ಹಿರಿಯ ನಾಯಕರ ಪರ ನಿರಾಣಿ ಬ್ಯಾಟಿಂಗ್- ರಾಜ್ಯಾಧ್ಯಕ್ಷ ವಿಜಯೇಂದ್ರಗೆ ಮುರುಗೇಶ ನಿರಾಣಿ ಖಡಕ್ ಸಲಹೆ

by Shwetha
September 18, 2026
0

ಬಾಗಲಕೋಟೆ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕೆಂದರೆ ಪಕ್ಷದಿಂದ ದೂರವಾಗಿರುವ ಬಂಡಾಯ ನಾಯಕರನ್ನು ಮತ್ತೆ ಮನೆಗೆ ಕರೆತರುವುದು ಅನಿವಾರ್ಯ ಎಂದು ಮಾಜಿ ಸಚಿವ ಮುರುಗೇಶ...

ರಷ್ಯಾ ತೈಲ ಖರೀದಿಗೆ ಅಮೆರಿಕದ ಕಠಿಣ ಕ್ರಮ: ಭಾರತ, ಚೀನಾ ಸೇರಿ ದೇಶಗಳ ಮೇಲೆ 100%ವರೆಗೆ ಸುಂಕಕ್ಕೆ ಟ್ರಂಪ್‌ಗೆ ಅಧಿಕಾರ

ರಷ್ಯಾ ತೈಲ ಖರೀದಿಗೆ ಅಮೆರಿಕದ ಕಠಿಣ ಕ್ರಮ: ಭಾರತ, ಚೀನಾ ಸೇರಿ ದೇಶಗಳ ಮೇಲೆ 100%ವರೆಗೆ ಸುಂಕಕ್ಕೆ ಟ್ರಂಪ್‌ಗೆ ಅಧಿಕಾರ

by Shwetha
September 18, 2026
0

ರಷ್ಯಾದಿಂದ ಕಚ್ಚಾತೈಲ ಮತ್ತು ನೈಸರ್ಗಿಕ ಅನಿಲ ಖರೀದಿಸುವ ದೇಶಗಳ ಮೇಲೆ ಆರ್ಥಿಕ ಒತ್ತಡ ಹೆಚ್ಚಿಸಲು ಅಮೆರಿಕ ಮಹತ್ವದ ಹೆಜ್ಜೆ ಇಟ್ಟಿದೆ. ರಷ್ಯಾ ವಿರುದ್ಧದ ನಿರ್ಬಂಧಗಳನ್ನು ಮತ್ತಷ್ಟು ಬಿಗಿಗೊಳಿಸುವ...

ಕೋತಿ ಮೊಸರು ತಿಂದು ಮೇಕೆ ಬಾಯಿಗೆ ಒರೆಸಿದ್ರು : ಟಿ ನರಸೀಪುರ ಇನ್‌ಸ್ಪೆಕ್ಟರ್ ಧನಂಜಯ ವಿರುದ್ಧ ವರದಿಗಾರನ ಆಕ್ರೋಶ

ಕೋತಿ ಮೊಸರು ತಿಂದು ಮೇಕೆ ಬಾಯಿಗೆ ಒರೆಸಿದ್ರು : ಟಿ ನರಸೀಪುರ ಇನ್‌ಸ್ಪೆಕ್ಟರ್ ಧನಂಜಯ ವಿರುದ್ಧ ವರದಿಗಾರನ ಆಕ್ರೋಶ

by Shwetha
September 18, 2026
0

ಮೈಸೂರು: ಟಿ ನರಸೀಪುರದ ಇನ್‌ಸ್ಪೆಕ್ಟರ್ ಧನಂಜಯ ಅವರ ವಿವಾದಾತ್ಮಕ ನಡೆ ಈಗ ಇಡೀ ಪೊಲೀಸ್ ಇಲಾಖೆಯನ್ನು ಮುಜುಗರಕ್ಕೀಡು ಮಾಡಿದೆ. ಗಣೇಶ ಮೆರವಣಿಗೆಗೆ ಸಂಬಂಧಿಸಿದಂತೆ ತಾವು ನೀಡಿದ್ದ ವಿವಾದಾತ್ಮಕ...

ರೇಷನ್ ಕಾರ್ಡ್ e-KYCಗೆ ಸೆಪ್ಟೆಂಬರ್ 30 ಗಡುವು: ಮಾಡಿಸದಿದ್ದರೆ ಏನಾಗಲಿದೆ?

ರೇಷನ್ ಕಾರ್ಡ್ e-KYC ಗಡುವು ವಿಸ್ತರಣೆ: ಅಕ್ಟೋಬರ್ 20ರವರೆಗೆ ಅವಕಾಶ, ನ್ಯಾಯಬೆಲೆ ಅಂಗಡಿ ಸಮಯವೂ ಬದಲಾವಣೆ

by Shwetha
September 18, 2026
0

ಕರ್ನಾಟಕದ ರೇಷನ್ ಕಾರ್ಡ್ ಫಲಾನುಭವಿಗಳಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮಹತ್ವದ ಮಾಹಿತಿ ನೀಡಿದೆ. ರೇಷನ್ ಕಾರ್ಡ್‌ಗಳ e-KYC ಪೂರ್ಣಗೊಳಿಸಲು ನಿಗದಿಪಡಿಸಿದ್ದ ಸೆಪ್ಟೆಂಬರ್ 30ರ ಗಡುವನ್ನು...

ನಾನೀಗ ಮುಖ್ಯಮಂತ್ರಿಯಲ್ಲ ನನ್ನ ಮಾತು ಎಷ್ಟು ನಡೆಯುತ್ತೆ ಅಂತ ನನಗೇ ಗೊತ್ತು: ಸಿದ್ದರಾಮಯ್ಯ ಅವರ ಅಂತರಾಳದ ಮಾತುಗಳ ಹಿಂದಿರುವ ಮರ್ಮವೇನು?

ನಾನೀಗ ಮುಖ್ಯಮಂತ್ರಿಯಲ್ಲ ನನ್ನ ಮಾತು ಎಷ್ಟು ನಡೆಯುತ್ತೆ ಅಂತ ನನಗೇ ಗೊತ್ತು: ಸಿದ್ದರಾಮಯ್ಯ ಅವರ ಅಂತರಾಳದ ಮಾತುಗಳ ಹಿಂದಿರುವ ಮರ್ಮವೇನು?

by Shwetha
September 18, 2026
0

ಬೆಂಗಳೂರು: ರಾಜಕೀಯ ಅಖಾಡದಲ್ಲಿ ಯಾವಾಗಲೂ ಖಡಕ್ ಮಾತುಗಳಿಗೆ ಹೆಸರಾದ ಸಿದ್ದರಾಮಯ್ಯನವರು ಇಂದು ಅತ್ಯಂತ ಭಾವುಕವಾಗಿ ಮತ್ತು ಮಾರ್ಮಿಕವಾಗಿ ಮಾತನಾಡಿದ್ದಾರೆ. ನಾನೀಗ ಮುಖ್ಯಮಂತ್ರಿಯಲ್ಲ, ನನ್ನ ಮಾತು ಈಗ ಎಷ್ಟು...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram