ADVERTISEMENT
Monday, August 3, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ರಾಜಧರ್ಮ ಪಾಲಿಸಲು ತಂದೆಯ ಅಂತಿಮ ದರ್ಶನಕ್ಕೆ ಒಲ್ಲೆ ಎಂದ ಯೋಗಿ…

admin by admin
April 21, 2020
in Newsbeat, Samagra karnataka
Share on FacebookShare on TwitterShare on WhatsappShare on Telegram

ಕೊರೊನಾ ಸೋಂಕಿನ ಈ ಸಂದರ್ಭದಲ್ಲಿ ಅನೇಕ ಮನ ಕಲಕುವ ಘಟನೆಗಳು ನಡೆಯುತ್ತಿದೆ. ಎಂದಿನಂತೆ ಸುದ್ದಿಗಳತ್ತ ಕಣ್ಣಾಡಿಸಿದಾಗ ಉತ್ತರ ಪ್ರದೇಶದ ಮುಖ್ಯ ಮಂತ್ರಿ ಆದಿತ್ಯನಾಥ್ ಅವರ ತಂದೆ ಮರಣ ಹೊಂದಿದರೆಂಬ ಸುದ್ದಿ ಗಮನ ಸೆಳೆಯಿತು. ತಾನು ತಂದೆಯ ಅಂತಿಮ ಮುಖ ದರ್ಶನ ಪಡೆಯಲಾಗದ ಸಂದರ್ಭಕ್ಕೆ ವಿಷಾದಿಸುತ್ತಾ ಅವರು ಕುಟುಂಬಕ್ಕೆ ಬರೆದಿರುವ ಪತ್ರ ನನ್ನನ್ನು ಭಾವುಕಳನ್ನಾಗಿಸಿತು. ತಂದೆಯ ಅಂತಿಮ ಮುಖ ದರ್ಶನವನ್ನು ಮಾಡಲಾಗದ ವಿಷಾದ ಮಿಳಿತಗೊಂಡ ಆ ಪತ್ರದಲ್ಲಿ ಸಂತಾಪವನ್ನು ವ್ಯಕ್ತಪಡಿಸುತ್ತಾ ತಾಯಿಗೆ ಹಾಗೂ ತನ್ನ ಕುಟುಂಬದವರಿಗೆ ಹೆಚ್ಚಿನ ಜನರು ಸೇರದಂತೆ ನೋಡಿಕೊಳ್ಳಿ ಎಂಬ ಮಾತು, ಹೆಚ್ಚಿನ ಸಂಖ್ಯೆಯಲ್ಲಿ ನನ್ನ ತಂದೆಯ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಬೇಡಿ ಸರಕಾರದ ನಿಯಮಗಳನ್ನು ಪಾಲಿಸಿ ಎಂದು ಜನರಲ್ಲಿ ಅವರ ಮನವಿ, ಅವರೊಳಗಿನ ಜವಾಬ್ದಾರಿಯನ್ನು ಮರೆಯದ ನೇತಾರನನ್ನು‌ ಪರಿಚಯಿಸಿತು.
ಈ ಸಂದರ್ಭದಲ್ಲಿ ಜವಾಬ್ದಾರಿಯುತ ಜನಸೇವಕನ ಸ್ಥಾನದಲ್ಲಿ ನಿಂತಿರುವ ಆದಿತ್ಯನಾಥ್ ಯೋಗಿ ಅವರ ತಂದೆಗೆ ಸಂಬಂಧ ಪಟ್ಟ ಮನಮಿಡಿಯುವ ಸನ್ನಿವೇಶವೊಂದು ನೆನಪಾಯಿತು.
ಉತ್ತರ ಪ್ರದೇಶದಲ್ಲಿ ಒಮ್ಮೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ಅವರ ಗಮನ ಸಭೆಯಲ್ಲಿ ತನ್ನ ಭಾಷಣ ಕೇಳುತ್ತಿದ್ದ ಒಬ್ಬ ಹಿರಿಯ ವಯಸ್ಸಿನ ವ್ಯಕ್ತಿಯತ್ತ ಬಿತ್ತಂತೆ. ಕೂಡಲೇ ತಮ್ಮ ಭಾಷಣವನ್ನು ನಿಲ್ಲಿಸಿದ ಮುಖ್ಯಮಂತ್ರಿ ಆದಿತ್ಯನಾಥ್ ಮಾಸಲು ಅಂಗಿ ಪಂಚೆಯನ್ನುಟ್ಟ ಆ ಹಿರಿಯ ವಯಸ್ಸಿನ ವ್ಯಕ್ತಿಯನ್ನು ಸಭೆಗೆ ಕರೆ ತರುವಂತೆ ತಿಳಿಸಿದರಂತೆ. ಎಲ್ಲರ ಗಮನ ತನ್ನೆಡೆಗೆ ಸೆಳೆದ ಆ ಹಿರಿಯರು ಸಂಕೋಚದಿಂದ ವೇದಿಕೆಗೆ ಬಂದಾಗ ಮುಖ್ಯಮಂತ್ರಿ ಯೋಗಿಜೀ ತನ್ನ ಆಸನದಲ್ಲಿ ಅವರನ್ನು ಕುಳ್ಳಿರಿಸಿ ಅವರ ಪಾದಗಳಿಗೆ ನಮಸ್ಕರಿಸಿದರಂತೆ.
ಮುಖ್ಯಮಂತ್ರಿಗಳಿಂದ ಇಂತಹ ಗೌರವ ಪಡೆದ ವ್ಯಕ್ತಿ ಯಾರಾಗಿರಬಹುದು ಎಂದು ಜನರು ತಮ್ಮ ತಮ್ಮಲ್ಲೇ ಚರ್ಚಿಸಿದಾಗ, ಗಂಭೀರ ಅರ್ದ ಸ್ವರದಲ್ಲಿ ಇವರು ತನ್ನ ಪೂರ್ವಶ್ರಮದ ತಂದೆಯೆಂದು ಯೋಗಿಜೀ ಪರಿಚಯಿಸಿದರಂತೆ. ಸನ್ಯಾಸವನ್ನು ಸ್ವೀಕರಿಸಿರುವ ಯೋಗಿಜೀಯವರು ತನ್ನ ಪೂರ್ವ ಶ್ರಮದ ತಂದೆಯನ್ನು ಈ ರೀತಿಯಲ್ಲಿ ಪರಿಚಯಿಸಿದಾಗ, ಮಗನನ್ನು ದೂರದಿಂದ ನೋಡಲು ಇಳಿವಯಸ್ಸಿನಲ್ಲಿ ಸಾಮಾನ್ಯರಂತೆ ಬಂದಿದ್ದ ತಂದೆ ಮಗನನ್ನು ಭೇಟಿಯಾದ ಕ್ಷಣ ಎಲ್ಲರನ್ನೂ ಭಾವುಕರನ್ನಾಗಿಸಿತಂತೆ.
ರಾಜ್ಯದ ಮುಖ್ಯಮಂತ್ರಿಯಾಗಿರುವ ಮಗನ ಅಧಿಕಾರವನ್ನು ಎಲ್ಲೂ ಬಳಸದೆ ಪುತ್ರ ವಾತ್ಸಲ್ಯ ದ ತುಡಿತದಿಂದ ಧಾವಿಸಿದ ತಂದೆಗೆ ದೊರಕಿದು ಮಗನ ಭೇಟಿಯ ಆ ಅಪರೂಪದ ಕ್ಷಣ.
ಸನ್ಯಾಸಿಯಾದವರು ಪೂರ್ವಶ್ರಮದ ಸಂಬಂಧಗಳಿಗೆ ತಿಲಾಂಜಲಿಯನ್ನು ಇತ್ತು ಸನ್ಯಾಸತ್ವ ಸ್ವೀಕರಿಸುತ್ತಾರೆ. ತನ್ನ ಕುಟುಂಬ ಸಂಸಾರವೆಂಬ ವ್ಯಾಮೋಹಕ್ಕಿಂತ, ಪ್ರಜೆಗಳ ಹಿತರಕ್ಷಣೆಯೇ ಅವರ ಆದ್ಯತೆ. ತನ್ನ ಪ್ರಜೆಗಳ ಯೋಗಕ್ಷೇಮ ವನ್ನೇ ಉಸಿರಾಗಿಸಿಕೊಳ್ಳುವುದನ್ನು ರಾಜಧರ್ಮವೆಂದು ಕರೆಯುತ್ತಾರೆ. ‌ಪುರಾಣದಲ್ಲಿ ಆದರ್ಶ ಪುರುಷನಾಗಿ ಕಾಣಿಸಿಕೊಂಡ ಶ್ರೀ ರಾಮನಲ್ಲಿ ಇಂತಹ ಗುಣಗಳನ್ನು ನಾವು ಕೇಳಿದ್ದರೆ, ಇಂದಿನ ರಾಜಕಾರಣಿಗಳಲ್ಲಿ ಇಂತಹ ಗುಣಗಳನ್ನು ಕಾಣಲು ಸಾಧ್ಯವಿಲ್ಲ. ಆದರೆ ಉತ್ತರ ಪ್ರದೇಶದ ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥರು ನಿಜವಾದ ಅರ್ಥದಲ್ಲಿ ರಾಜಧರ್ಮ ಪಾಲಿಸಿದ್ದಾರೆ.
ತನಗೆ ಜನ್ಮ ನೀಡಿದ, ತನ್ನ ಲಾಲನೆ ಪಾಲನೆ ಮಾಡಿದ ತಂದೆಯ ಅಂತಿಮ ಕ್ಷಣದಲ್ಲಿ ಅವರ ಮುಖ ದರ್ಶನ ಮಾಡುವ ಇಚ್ಛೆ ಇದ್ದರೂ, ಕೋವಿಡ್-19 ಸೋಂಕಿನ ಸಂದರ್ಭದಲ್ಲಿ ನನ್ನನ್ನು ನಂಬಿರುವ ಇಪ್ಪತ್ತಾರು ಕೋಟಿ ಜನರ ಸೇವೆಯೆ ನನ್ನ ಬದುಕಿನ ಆದ್ಯತೆ ಎಂದು ತೋರಿಸಿ ಕೊಟ್ಟಿದ್ದಾರೆ. ತಂದೆಯ ಮುಖ ನೋಡಲು ಇದೊಂದು ಕೊನೆಯ ಅವಕಾಶ, ಮುಂದೆಂದೂ ಬದುಕಲ್ಲಿ ತಂದೆಯ ಮುಖ ನೋಡಲು ಸಾಧ್ಯವಿಲ್ಲ ಎಂಬ ಕಟು ಸತ್ಯದ ನಡುವೆಯೂ ಜನರ ಹಿತದೃಷ್ಟಿಯೇ ನನ್ನ ಬದುಕಿನ ಧ್ಯೇಯ ಎಂದು ತೋರಿಸಿ ಕೊಟ್ಟಿದ್ದಾರೆ.

ಒಬ್ಬ ರಾಜ್ಯದ ನಾಯಕ ಹೇಗಿರಬೇಕು ಎನ್ನುವ ಪ್ರಶ್ನೆ ಎದುರಾದಾಗ, ಉತ್ತರ ಪ್ರದೇಶದ ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥ್ ಅವರ ಆದರ್ಶ ಗುಣಗಳು ನೆನಪಿಗೆ ಬರುತ್ತದೆ.
ಆದರ್ಶಗಳನ್ನು ಮಾತನಾಡುವುದು ಬಹಳ ಸುಲಭ. ಆದರೆ ಅದನ್ನು ಅನುಸರಿಸುವುದು, ಅದರಂತೆ ನಡೆದುಕೊಳ್ಳುವುದು ಸುಲಭದ ಮಾತಲ್ಲ. ಇಂದು ನಾವು ಎಂತಹ ಸಮಾಜದಲ್ಲಿ ಇದ್ದೇವೆ ಎಂದರೆ ಒಬ್ಬ ವ್ಯಕ್ತಿಯಲ್ಲಿನ ಆದರ್ಶದ ಗುಣಗಳನ್ನು ಒಪ್ಪಿಕೊಳ್ಳಲು ನಮಗೆ ಸಾಧ್ಯವಿಲ್ಲ. ನಮ್ಮ ಮೂಗಿನ ನೇರಕ್ಕೆ ಮಾತನಾಡುತ್ತಾ, ಒಳ್ಳೆಯ ವ್ಯಕ್ತಿತ್ವದಲ್ಲೂ ಹುಳುಕನ್ನು ಹುಡುಕುವ ಮನಸ್ಥಿತಿ ನಮ್ಮದು.
ತನ್ನ ಪುತ್ರ ಯೋಗಿ ಆದಿತ್ಯನಾಥ್ ನಲ್ಲಿನ ಪ್ರಾಮಾಣಿಕತೆ, ಕಠೋರ ಪರಿಶ್ರಮ, ನಿಸ್ವಾರ್ಥಭಾವದಿಂದ ಸಮಾಜಕಲ್ಯಾಣಕ್ಕೆ ದುಡಿಯಬೇಕೆಂಬ ಆದರ್ಶ ಗುಣಗಳಿಗೆ ಕಾರಣಕರ್ತರಾಗಿರುವ ಅವರ ತಂದೆಯ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಾವೆಲ್ಲರೂ ಪ್ರಾರ್ಥಿಸೋಣ..
ಓಂ ಶಾಂತಿ..

Related posts

hardik-pandya-tirupati-balaji-darshan-news

Teamindia – ತಿರುಪತಿ ತಿಮ್ಮಪ್ಪನ ದರ್ಶನ ಮಾಡಿದ್ದ ಹಾರ್ದಿಕ್ ಪಾಂಡ್ಯ..! ಬಾಲಾಜಿಗೆ ಮುಡಿಕೊಟ್ಟಿರುವುದು ಯಾಕೆ ಪಾಂಡ್ಯಾ..?

August 2, 2026
jaismine-lamboria-life-story-commonwealth-games-gold

cwg-2026- ಆಸ್ಪತ್ರೆಯಿಂದ ಕಾಮನ್‌ವೆಲ್ತ್ ಚಿನ್ನದವರೆಗೆ..! ಬಾಕ್ಸಿಂಗ್ ರಾಣಿಯ ಹೋರಾಟದ ಯಶೋಗಾಥೆ..!

August 2, 2026
Tags: UTTAR PRADESHyogi adityanath
ShareTweetSendShare
Join us on:

Related Posts

hardik-pandya-tirupati-balaji-darshan-news

Teamindia – ತಿರುಪತಿ ತಿಮ್ಮಪ್ಪನ ದರ್ಶನ ಮಾಡಿದ್ದ ಹಾರ್ದಿಕ್ ಪಾಂಡ್ಯ..! ಬಾಲಾಜಿಗೆ ಮುಡಿಕೊಟ್ಟಿರುವುದು ಯಾಕೆ ಪಾಂಡ್ಯಾ..?

by admin
August 2, 2026
0

ಟೀಮ್ ಇಂಡಿಯಾದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರು ತಿರುಪತಿ ತಿಮ್ಮಪ್ಪನ ದರ್ಶನ ಮಾಡಿದ್ದಾರೆ. ತಮ್ಮ ಗೆಳತಿ ಮಹೀಕಾ ಶರ್ಮಾ ಜೊತೆ ಹಾರ್ದಿಕ್ ಪಾಂಡ್ಯ ತಿರುಮಲ ವೆಂಕಟೇಶ್ವರನಿಗೆ...

jaismine-lamboria-life-story-commonwealth-games-gold

cwg-2026- ಆಸ್ಪತ್ರೆಯಿಂದ ಕಾಮನ್‌ವೆಲ್ತ್ ಚಿನ್ನದವರೆಗೆ..! ಬಾಕ್ಸಿಂಗ್ ರಾಣಿಯ ಹೋರಾಟದ ಯಶೋಗಾಥೆ..!

by admin
August 2, 2026
0

ಸುಮಾರು ಒಂದುವರೆ ತಿಂಗಳ ಹಿಂದೆ. ಆಕೆ ಆಸ್ಪತ್ರೆಯ ಹಾಸಿಗೆ ಮೇಲೆ ಮಲಗಿದ್ದಳು. ಗ್ಲೌಸ್ ಧರಿಸಿ ಅಭ್ಯಾಸ ನಡೆಸಬೇಕಿದ್ದ ಕೈಗಳಿಗೆ ಚಿಕಿತ್ಸೆಯ ಸೂಜಿಗಳು ಚುಚ್ಚಿಕೊಂಡಿದ್ದವು. ಹಲವು ದಿನಗಳ ಕಾಲ...

ecchara-5-rashigalige-shani-kata-mooru-dina-astrology-kannada

Astro-ಎಚ್ಚರ.. ಎಚ್ಚರ.. ನಾಳೆಯಿಂದ ಮೂರು ದಿನ ಈ 5 ರಾಶಿಯವರಿಗೆ ಶನಿಕಾಟ..!

by admin
August 2, 2026
0

ನಾಳೆಯಿಂದ ಮೂರು ದಿನ ಕೆಲ ರಾಶಿಯವರು ಹಣಕಾಸಿನ ವಿಚಾರದಲ್ಲಿ ಜಾಗರೂಕರಾಗಿರಬೇಕು. ಈ ದಿನ ಶನಿ ಹಾಗೂ ಚಂದ್ರನ ಸಂಯೋಗದಿಂದಾಗಿ ಅತ್ಯಂತ ಅಶುಭ ಯೋಗ ಸೃಷ್ಟಿಯಾಗಲಿದೆ. ಇದು ಕೆಲ...

84 ರೂಪಾಯಿಗೆ ಪೆಟ್ರೋಲ್ ಸಿಗಲೇಬೇಕು- ಆಗಸ್ಟ್ 4ಕ್ಕೆ ಪ್ರಧಾನಿ ನಿವಾಸ ಮುತ್ತಿಗೆ ಹಾಕಲಿರುವ ಕೇಜ್ರಿವಾಲ್:ರಾಹುಲ್ ಗಾಂಧಿ ಹಾದಿಯಲ್ಲಿ ಕೇಜ್ರಿವಾಲ್!

84 ರೂಪಾಯಿಗೆ ಪೆಟ್ರೋಲ್ ಸಿಗಲೇಬೇಕು- ಆಗಸ್ಟ್ 4ಕ್ಕೆ ಪ್ರಧಾನಿ ನಿವಾಸ ಮುತ್ತಿಗೆ ಹಾಕಲಿರುವ ಕೇಜ್ರಿವಾಲ್:ರಾಹುಲ್ ಗಾಂಧಿ ಹಾದಿಯಲ್ಲಿ ಕೇಜ್ರಿವಾಲ್!

by Shwetha
August 2, 2026
0

ನವದೆಹಲಿ: ಕೇಂದ್ರ ಸರ್ಕಾರದ ಎಥೆನಾಲ್ ಮಿಶ್ರಿತ ಪೆಟ್ರೋಲ್ ನೀತಿಯನ್ನು ವಿರೋಧಿಸಿ ಆಮ್ ಆದ್ಮಿ ಪಾರ್ಟಿ ಭಾರಿ ಹೋರಾಟಕ್ಕೆ ಕರೆ ನೀಡಿದೆ. ಆಗಸ್ಟ್ 4 ರಂದು ದೆಹಲಿಯ ಮಾಜಿ...

ಮಳೆಯ ಅಬ್ಬರದಿಂದ ಕಾವೇರಿ ಜಲಾಶಯಗಳಿಗೆ ಒಳಹರಿವು ಹೆಚ್ಚಳ

ಮಳೆಯ ಅಬ್ಬರದಿಂದ ಕಾವೇರಿ ಜಲಾಶಯಗಳಿಗೆ ಒಳಹರಿವು ಹೆಚ್ಚಳ

by Shwetha
August 2, 2026
0

ರಾಜ್ಯದ ವಿವಿಧ ಭಾಗಗಳಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಾವೇರಿ ನದಿ ಜಲಾನಯನ ಪ್ರದೇಶದ ಪ್ರಮುಖ ಜಲಾಶಯಗಳಿಗೆ ಒಳಹರಿವು ಹೆಚ್ಚಳವಾಗಿದೆ. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಕೆಆರ್‌ಎಸ್‌,...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram