ಬೆಂಗಳೂರು: ಆನೆ ದಂತ, ಜಿಂಕೆಯ ಕೊಂಬು, ಎರಡು ತಲೆ ಹಾವು ಸೇರಿದಂತೆ ಅಕ್ರಮವಾಗಿ ವನ್ಯಜೀವಿ ಉತ್ಪನ್ನಗಳ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ವೈಯ್ಯಾಲಿ ಕಾವಲ್ ಪೊಲೀಸರು ಐವರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಕನಕಪುರ ಹಾಗೂ ಮೈಸೂರು ಮೂಲದ ಚಂದ್ರಶೇಖರ್, ರಂಗಸ್ವಾಮಿ, ಲೋಕೇಶ್, ಶೇಖರ್ ಹಾಗೂ ರೈಮಂಡ್ ಎಂಬ ಆರೋಪಿಗಳನ್ನೇ ಬಂಧಿಸಿದ್ದಾರೆ.
ಅಲ್ಲದೇ, ಬಂಧಿತರಿಂದ 5 ಲಕ್ಷ ರೂ. ಮೌಲ್ಯದ ಆನೆ ದಂತ, 12 ಲಕ್ಷ ರೂ. ಮೌಲ್ಯದ 12 ಜಿಂಕೆ ಕೊಂಬು, 10 ಲಕ್ಷ ರೂ. ಮೌಲ್ಯದ ಎರಡು ತಲೆಯ ಹಾವುಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳನ್ನು ಈ ಉತ್ಪನ್ನಗಳನ್ನು ವೈಯಾಲಿಕಾವಲ್ ನಲ್ಲಿ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.