ಟಾಪ್ ಸಿನಿಮಾ ನ್ಯೂಸ್ : LATEST UPDATES
ವ್ಯಾಲೆಂಟೈನ್ಸ್ ಡೇಗೆ ಮತ್ತೊಮ್ಮೆ ರಿಲೀಸ್ ಆಗ್ತಿದೆ ನೋಡಿ ‘ದಿಯಾ’..!
2020ರಲ್ಲಿ ರಿಲೀಸ್ ಆಗಿ ಪ್ರೇಕ್ಷರಿಂದ ಒಳ್ಳೆ ರೆಸ್ಪಾನ್ಸ್ ಗಿಟ್ಟಿಸಿಕೊಂಡು ಮತ್ತೊಮ್ಮೆ ರಿಲೀಸ್ ಆಗಿದ್ದ 2 ಸಿನಿಮಾಗಳು ಅಂದ್ರೆ ಅವು ಲವ್ ಮಾಕ್ಟೇಲ್ ಮತ್ತು ದಿಯಾ.. ಇದೀಗ ನಾಳೆ ಅಂದ್ರೆ ಫೆಬ್ರವರಿ 14ಕ್ಕೆ ಪ್ರೇಮಿಗಳ ದಿನಾಚರಣೆಯಿರುವ ಹಿನ್ನೆಲೆ ಮತ್ತೊಮ್ಮೆ ಸೂಪರ್ ಹಿಟ್ ಸಿನಿಮಾ ದಿಯಾ ಮತ್ತೊಮ್ಮೆ ರಿಲೀಸ್ ಆಗಲಿದೆ. ಪ್ರೇಮಿಗಳ ದಿನಾಚರಣೆಯ ವಿಶೇಷವಾಗಿ ಸಿನಿಮಾವನ್ನು ರಿ ರಿಲೀಸ್ ಮಾಡಲು ಸಿನಿಮಾತಂಡ ತಯಾರಿ ನಡೆಸಿದೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ನಟ ಪೃಥ್ವಿ ಅಂಬರ್ ನೀವು ಗೆಲ್ಲಿಸಿದ ಸಿನಿಮಾ ದಿಯಾ ಸಿನಿಮಾ ಮತ್ತೊಮ್ಮೆ ರಿಲೀಸ್ ಆಗುತ್ತಿದೆ. ಪ್ರೇಕ್ಷಕರ ಮತ್ತು ಚಿತ್ರಮಂದಿರಗಳ ಮಾಲಿಕರ ಬೇಡಿಕೆ ಮೇರೆಗೆ ಸಿನಿಮಾ ಮತ್ತೊಮ್ಮೆ ತೆರೆಗೆ ಬರುತ್ತಿದೆ. ಚಿತ್ರಮಂದಿರಗಳಲ್ಲಿ ನೋಡುವುದನ್ನು ಮಿಸ್ ಮಾಡಿಕೊಂಡವರಿಗೆ ಮತ್ತೊಮ್ಮೆ ಅವಕಾಶ ಸಿಕ್ಕಿದೆ ನೋಡಿ ಎಂದು ಹೇಳಿದ್ದಾರೆ.
ಧೂಮ್ ನಲ್ಲಿ ಈ ಬಾರಿ ಖಳನಾಯಕರಾಗಿ ಬರುತ್ತಿರೋದು ಬಾಲಿವುಡ್ ನ ‘ಬಾದ್ ಷಾ’ ‘ಡಿಪ್ಪಿ’..!
ಧೂಮ್… ಬಾಲಿವುಡ್ ಸಿನಿಮಾದ ಈ ಸೀರೀಸ್ ತನ್ನದೇ ಆದ ದೊಡ್ಡ ಅಭಿಮಾನಿ ಬಳಗವನ್ನೇ ಹೊಂದಿದೆ. ಈ ಸಿನಿಮಾದ ಕಥೆ ಆಕ್ಷನ್ ಸೀನ್ಸ್ ಥ್ರಿಲ್ಲಿಂಗ್ ಎಲಿಮೆಂಟ್ಸ್ ಮ್ಯೂಸಿಕ್ ಎಲ್ಲವೂ ಪ್ರೇಕ್ಷಕರನ್ನ ಸಖತ್ ಥ್ರಿಲ್ ಗೊಳಿಸುತ್ತೆ. ಖಳನಾಯಕರನ್ನೇ ಹೀರೋಗಳ ರೀತಿ ತೋರಿಸೋದು ಈ ಸಿನಿಮಾದ ವಿಶೇಷತೆ ವಿಶೇಷತೆ. ಈ ಸಿನಿಮಾದ ಸೀರೀಸ್ ಗಳನ್ನ ಇಷ್ಟ ಪಡೆದೇ ಇರೋ ಜನರೇ ಇಲ್ಲ ಅನ್ಸುತ್ತೆ. ಇನ್ ಫ್ಯಾಕ್ಟ್ ಹಾಲಿವುಡ್ ರೇಂಜ್ ಗೆ ಈ ಸೀರೀಸ್ ಮೂಡಿಬರುತ್ತೆ. ಅದೇ ಪ್ರೇಕ್ಷಕರು ಆಕರ್ಷಿತರಾಗುವುದಕ್ಕೆ ಪ್ರಮುಖ ಕಾರಣವೂ ಇರಬಹುದು. ಅದ್ರಲ್ಲೂ ಈ ಸೀರೀಸ್ ನಲ್ಲಿ ನಾಯಕರು ಬದಲಾಗುತ್ತಲೇ ಇರುತ್ತಾರೆ. ಆದ್ರೆ ಹೆಚ್ಚು ಜನರಿಗೆ ಇಷ್ಟವಾದ , ಅವರಿಷ್ಟ ಪಟ್ಟ ಸೀರೀಸ್, ನಟ, ಅಂದ್ರೆ ಅದು ಹೃತಿಕ್ ರೋಷನ್ ಇದ್ದ ಸೀರೀಸ್ ಎನ್ನಬಹುದು. ಹೌದು ಹೃತಿಕ್ ಇದ್ದಾಗ ಅದ್ರಲ್ಲೂ ಅವರಿಗೆ ನಾಯಕಿಯಾಗಿ ಆಕ್ಷನ್ ಪ್ರಿನ್ಸ್ ಗೆ ಆಕ್ಷನ್ ಪ್ರಿನ್ಸಸ್ ಆಗಿದ್ದ ಐಶ್ವರ್ಯಾ ಇದ್ದ ಸೀಸನ್ ಜನರಿಗೆ ಬಹಳ ಇಷ್ಟವಾಗಿತ್ತು.
ಖ್ಯಾತ ಖಳನಟ ಸತ್ಯಜಿತ್ ವಿರುದ್ಧ ಸ್ವಂತ ಮಗಳಿಂದಲೇ ದೂರು ದಾಖಲು..!
ಕನ್ನಡದ ಖ್ಯಾತ ನಟ ಸತ್ಯಜಿತ್ ವಿರುದ್ಧ ಪುತ್ರಿಯೇ ಪೊಲೀಸ್ ಠಾಣೆಯಲ್ಲಿ ಮಾನಸಿಕ ಹಿಂಸೆ ಆರೋಪ ಹೊರಿಸಿ ದೂರು ದಾಖಲಿಸಿದ್ದಾರೆ. ನಟ ಸತ್ಯಜಿತ್ ಪುತ್ರಿ ಅಖ್ತರ್ ಸ್ವಹಾನಾ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ತನ್ನ ತಂದೆ ಹಾಗೂ ಅಣ್ಣಂದಿರು ನನ್ನನ್ನು ಹಣಕ್ಕಾಗಿ ಪೀಡುತ್ತಿದ್ದಾರೆ. ನಾನು ಗರ್ಭಿಣಿ ಆಗಿದ್ದು ಈ ಸಮಯದಲ್ಲಿ ನನಗೆ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಆದ್ರೆ ಈ ಬಗ್ಗೆ ಸತ್ಯಜಿತ್ ಪುತ್ರ ಆಕಾಶ್ ಸತ್ಯಜಿತ್ ಸ್ಪಷ್ಟನೆ ನೀಡಿದ್ದು, ಅಪ್ಪ ಹಣಕ್ಕಾಗಿ ಬೇಡಿಕೆ ಇಟ್ಟಿರಲಿಲ್ಲ. ಆಕೆಯೇ ತಂದೆಯ ಮೇಲೆ ನಮ್ಮ ಮೇಲೆ ಸುಳ್ಳು ದೂರು ದಾಖಲಿಸಿದ್ದಾರೆ. ಆಕೆಯ ಶಿಕ್ಷಣದ ಸಾಲ ತೀರಿಸಲು ನಮ್ಮ ತಂದೆ ಸುಮಾರು ಮನೆ ಮಾರಿ 50 ಲಕ್ಷ ಹಣ ಪಾವತಿಸಿದ್ದಾರೆ. ಆದರೆ ಈಗ ತುಸು ಸಹಾಯ ಕೇಳಿದ್ದಕ್ಕೆ ಆಕೆ ಅಪ್ಪನ ವಿರುದ್ಧ ತಿರುಗಿ ಬಿದ್ದಿದ್ದಾಳೆ, ಅಪ್ಪನ ವಿರುದ್ಧ ಸುಳ್ಳು ಕೇಸು ದಾಖಲಿಸಿ, ಈ ವಯಸ್ಸಿನಲ್ಲಿ ಅವರನ್ನು ಪೊಲೀಸ್ ಠಾಣೆಗೆ ಕರೆಸಿದ್ದಾರೆ ಎಂದಿದ್ದಾರೆ.
ನನ್ನ ಕೈಲಿ ಹಲವು ಕನ್ನಡ , ತಮಿಳು ಸಿನಿಮಾಗಳ ಪ್ರಾಜೆಕ್ಟ್ ಗಳಿವೆ – ಸಂಜನಾ ಗಲ್ರಾನಿ..!
ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದಾಗ ಸಂಜನಾ ಸದಾ ಸುದ್ದಿಯಲ್ಲೇ ಇದ್ರು. ಇಸ್ಲಾಂ ಧರ್ಮಕ್ಕೆ ಮತಾಂತರ ಡ್ರಗ್ ಡೀಲಿಂಗ್ ಹೀಗೆ ಎಲ್ಲಾ ವಿಚಾರವಾಗಿಯೂ ಭಾರೀ ಚರ್ಗೆ ಗ್ರಾಸವಾಗಿದ್ರು. ಇದೀಗ ಜಾಮೀನಿನ ಮೇಲೆ ಹೊರಬಂದಿರುವ ಸಂಜನಾ ಈ ಎಲ್ಲಾ ವಿಚಾರವಾಗಿ, ಹಾಗೂ ಮುಂದಿನ ಪ್ಲಾನ್ ಗಳ ಕುರಿತಾಗಿ ಮಾತನಾಡಿದ್ದಾರೆ. ಸಂದರ್ಶನದಲ್ಲಿ ಮಾತನಾಡಿರುವ ಸಂಜನಾ ನನ್ನ ಮುಂದಿನ ಹಾದಿ ಬಹಳ ಕಠಿಣವಾಗಿರಲಿದೆ ಎಂಬ ವಿಚಾರ ನನಗೆ ತಿಳಿದಿದೆ. ನನಗೆ ಎದುರಾಗುವ ಎಲ್ಲಾ ಸಮಸ್ಯೆಗಳನ್ನು ನಗುವಿನೊಂದಿಗೆ, ಪ್ರೀತಿಯೊಂದಿಗೆ ಎದುರಿಸಲಿದ್ದೇನೆ. ನನಗೆ ನ್ಯಾಯಾಂಗದಲ್ಲಿ ವಿಶ್ವಾಸವಿದೆ. ನಾನು ಗೆಲುವು ಸಾಧಿಸಲಿದ್ದೇನೆ ಎಂದಿದ್ದಾರೆ.
ಇದೇ ವೇಳೆ ಮದುವೆಯ ಊಹಾಪೋಹಗಳ ಬಗ್ಗೆ ಉತ್ತರ ನೀಡಿದ ಅವರು ಹೌದು, ನಾನು ಎಂಗೇಜ್ ಆಗಿದ್ದೇನೆ. ಲಾಕ್ ಡೌನ್ ಸಮಯದಲ್ಲಿ ಸರಳ ಸಮಾರಂಭದಲ್ಲಿ ಎಂಗೇಜ್ ಮೆಂಟ್ ಮುಗಿದಿದೆ. ಈ ವಿಷಯವನ್ನು ನನ್ನ ಬಂಧುಗಳಿಗೆ, ಸ್ನೇಹಿತರಿಗೆ ಸಹ ತಿಳಿಸಲಾಗಿರಲಿಲ್ಲ. ಶೀಘ್ರದಲ್ಲಿಯೇ ಮದುವೆ ಆಗಲಿದ್ದೇನೆ ಎಂದಿದ್ದಾರೆ. ಯಾವುದಾದರೂ ಚಾರಿಟೇಬಲ್ ಸೊಸೈಟಿಯಲ್ಲಿ ಸರಳವಾಗಿ ಮದುವೆ ನಡೆಯಲಿದೆ. ಅಲ್ದೇ ನಾನು ಅಧ್ಯಾತ್ಮದ ಕಡೆ ಗಮನವಹಿಸುತ್ತಿದ್ದೇನೆ. ಕೆಲವು ತಿಂಗಳುಗಳಿಂದ ನಮಾಜು ಓದುವುದು ಅಭ್ಯಾಸ ಮಾಡಿಕೊಂಡಿದ್ದೇನೆ. ನಾನು ಕರ್ಮ ಮತ್ತು ದೇವರಲ್ಲಿ ನಂಬಿಕೆ ಇಟ್ಟವಳು, ಎಲ್ಲ ಧರ್ಮಗಳನ್ನು ನಾನು ಸಮಾನವಾಗಿ ಗೌರವಿಸುತ್ತೇನೆ. ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದು ನನ್ನ ವೈಯಕ್ತಿಕ ಆಯ್ಕೆ. ನನ್ನ ಈ ನಿರ್ಧಾರವನ್ನು ರಾಜಕೀಯಗೊಳಿಸುವುದು, ವಿಮರ್ಶೆಗೊಳಪಡಿಸುವುದು ನನಗೆ ಇಷ್ಟವಿಲ್ಲ ಎಂದಿದ್ದಾರೆ.
ಇದೇ ವೇಳೆ ಸಿನಿಮಾ ಭವಿಷ್ಯದ ಬಗ್ಗೆ ಉತ್ತರ ನೀಡಿರುವ ಸಂಜನಾ ನನ್ನ ಕೈಯಲ್ಲಿ ಕನ್ನಡದ ಹಾಗೂ ತಮಿಳಿನ ಕೆಲವು ಸಿನಿಮಾಗಳ ಆಫರ್ ಗಳು ಇವೆ. ಅವುಗಳನ್ನು ಮೊದಲು ಮುಗಿಸಬೇಕಿದೆ. ಅದಾದ ನಂತರ ಹಿಂದಿಯ ಒಂದು ವೆಬ್ ಸರಣಿಯಲ್ಲಿ ನಟಿಸಲಿದ್ದೇನೆ. ಇನ್ನೊಂದು ಹೊಸ ಸಿನಿಮಾದ ಆಫರ್ ಬಂದಿದೆ ಎಂದಿದ್ದಾರೆ.
ನಟ ಮಯೂರ್ ಪಟೇಲ್ ಗೆ ಜೀವ ಬೆದರಿಕೆ
ಬೆಂಗಳೂರು : ಸೈಟ್ ವಿಚಾರಕ್ಕೆ ಸಂಬಂಧಿಸಿದಂತೆ ನಟ ಮಯೂರ್ ಪಟೇಲ್ ಅವರಿಗೆ ಜೀವ ಬೆದರಿಕೆ ಹಾಕಲಾಗಿದೆ.
ಮಯೂರ್ ಪಟೇಲ್ ಅವರು ಬೆಂಗಳೂರು ಹೊರವಲಯದ ಬೇಗೂರು ಸಮೀಪ ಪರಂಗಿಪಾಳ್ಯದಲ್ಲಿ ಸುಬ್ರಹ್ಮಣ್ಯಂ ಎಂಬುವರಿಂದ ನಿವೇಶನ ಖರೀದಿಗೆ ಮುಂದಾಗಿದ್ದರು.
ಕಳೆದ ಜನವರಿ 22 ರಂದು ಗೆಳೆಯನೊಂದಿಗೆ ಮಯೂರ್ ಸೈಟ್ ನೋಡಲು ಹೋಗಿದ್ದರು. ಆಗ ಮಯೂರ್ ಕರಾರು ಮಾಡಿಕೊಂಡಿದ್ದ ಸೈಟ್ ನಲ್ಲಿ ಕಾಂಪೌಂಡ್ ಇತ್ತು.ಈ ನಿವೇಶನ ಅನಂತರಾಮ ರೆಡ್ಡಿ ಮತ್ತು ಮಂಜಣ್ಣ ಎಂಬವರಿಗೆ ಸೇರಿದ್ದು ನೀವು ಇಲ್ಲಿಗೆ ಬಂದರೆ ಸುಮ್ಮನೆ ಬಿಡಲ್ಲ ಎಂದು ಅವಾಜ್ ಹಾಕಲಾಗಿದೆ.
ಅಲ್ಲದೇ, ನಿವೇಶನದ ನಕಲಿ ದಾಖಲೆ ಸೃಷ್ಟಿಸಿ ಜೀವಬೆದರಿಕೆ ಹಾಕಲಾಗಿದೆ ಎನ್ನಲಾಗಿದ್ದು, ಈ ಕುರಿತಾಗಿ ಮಯೂರ್ ಪಟೇಲ್ ಅವರು ಹೆಚ್ಎಸ್ಆರ್ ಲೇಔಟ್ ಪೊಲೀಸರಿಗೆ ದೂರು ನೀಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel