ADVERTISEMENT
Tuesday, August 25, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home National

ಪೋಷಕರೇ ಎಚ್ಚರ – ಕರ್ನಾಟಕ ಸೇರಿದಂತೆ ದೇಶದಲ್ಲಿದೆ 24 ನಕಲಿ ವಿಶ್ವವಿದ್ಯಾಲಯಗಳು

admin by admin
October 8, 2020
in National, Newsbeat, ದೇಶ - ವಿದೇಶ
Fake University saakshatv
Share on FacebookShare on TwitterShare on WhatsappShare on Telegram

24 ನಕಲಿ ವಿಶ್ವವಿದ್ಯಾಲಯಗಳ ಹೆಸರನ್ನು ಬಿಡುಗಡೆ ಮಾಡಿದ ಯುಜಿಸಿ ( Fake University )

ಹೊಸದಿಲ್ಲಿ, ಅಕ್ಟೋಬರ್8: ನಕಲಿ ಎಂದು ಕರೆಯಲ್ಪಡುವ 24 ವಿಶ್ವವಿದ್ಯಾಲಯಗಳ ಹೆಸರನ್ನು ವಿಶ್ವವಿದ್ಯಾಲಯ ಧನಸಹಾಯ ಆಯೋಗ ಬಿಡುಗಡೆ ಮಾಡಿದೆ. ( Fake University )

Related posts

saakshatv.com/jio-world-convention-centre-launches-conference-ambassador-program-mumbai

ಮುಂಬೈಗೆ ಜಾಗತಿಕ ಸಮ್ಮೇಳನಗಳನ್ನು ತರಲು ‘ಕಾನ್ಫರೆನ್ಸ್ ಅಂಬಾಸಿಡರ್’ ಕಾರ್ಯಕ್ರಮ

August 25, 2026
saakshatv.com/dun-and-bradstreet-city-vitality-index-report-emerging-cities-growth

ಮೆಟ್ರೋ ನಗರಗಳನ್ನು ಹಿಂದಿಕ್ಕಿ ಬೆಳೆಯುತ್ತಿವೆ ಸಣ್ಣ ನಗರಗಳು: ‘ಡನ್ & ಬ್ರಾಡ್‌ಸ್ಟ್ರೀಟ್’ ವರದಿಯಲ್ಲಿ ಅಚ್ಚರಿಯ ಮಾಹಿತಿ!

August 25, 2026

ನಕಲಿ ವಿಶ್ವವಿದ್ಯಾಲಯಗಳ ಪಟ್ಟಿ 2020 ದಲ್ಲಿ ಕರ್ನಾಟಕ ಸೇರಿದಂತೆ ದೇಶದಲ್ಲಿರುವ 24 ವಿಶ್ವವಿದ್ಯಾಲಯಗಳ ಹೆಸರಿದೆ.

ಆಯೋಗದ ಪ್ರಕಾರ ಈ ವಿಶ್ವವಿದ್ಯಾಲಯಗಳಿಗೆ ಯಾವುದೇ ಪದವಿ ನೀಡಲು ಅಧಿಕಾರವಿಲ್ಲ. ದೆಹಲಿಯ ಒಟ್ಟು 7 ವಿಶ್ವವಿದ್ಯಾಲಯಗಳು ಮತ್ತು ಉತ್ತರ ಪ್ರದೇಶದ 8 ವಿಶ್ವವಿದ್ಯಾಲಯಗಳನ್ನು ಆಯೋಗವು ನಕಲಿ ಎಂದು ಘೋಷಿಸಿದೆ.

ಆಯೋಗ ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ಈ 24 ಸ್ವ-ಶೈಲಿಯ, ಗುರುತಿಸಲಾಗದ ಸಂಸ್ಥೆಗಳಾಗಿದ್ದು, ಯುಜಿಸಿ ಕಾಯ್ದೆಗೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿವೆ.

ಇವುಗಳನ್ನು ನಕಲಿ ವಿಶ್ವವಿದ್ಯಾಲಯಗಳೆಂದು ಘೋಷಿಸಲಾಗಿದೆ ಮತ್ತು ಇವುಗಳಿಗೆ ಯಾವುದೇ ಪದವಿ ನೀಡಲು ಅಧಿಕಾರವಿಲ್ಲ.

ಇವುಗಳು ಕೇಂದ್ರ ಅಥವಾ ರಾಜ್ಯ ಅಥವಾ ಯುಜಿಸಿ ಕಾಯಿದೆಯ ಅಡಿಯಲ್ಲಿ ಸ್ಥಾಪಿತವಾಗಿಲ್ಲ.

ಇಂತಹ ಸ್ವಯಂ ಘೋಷಿತ ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣ ಕೋರ್ಸ್​ಗಳನ್ನು ಮುಂದುವರೆಸದಂತೆ ವಿದ್ಯಾರ್ಥಿಗಳು ಹಾಗೂ ಪಾಲಕರಿಗೆ ಯುಜಿಸಿ ಕಾರ್ಯದರ್ಶಿ ರಜನೀಶ್ ಜೈನ್ ಸೂಚಿಸಿದ್ದಾರೆ.

Fake University saakshatv
Fake University

ನಕಲಿ ವಿಶ್ವವಿದ್ಯಾಲಯಗಳ ಪಟ್ಟಿಯನ್ನು ಈ ಕೆಳಗೆ ನೀಡಲಾಗಿದೆ.

ಕರ್ನಾಟಕ:
Badaganvi Sarkar World Open University Education Society, Gokak, Belgaum, Karnataka.

ದೆಹಲಿ:
1 Commercial University Ltd., Daryaganj, Delhi.

2 United Nations University, Delhi.

3 Vocational University, Delhi.

4 ADR-Centric Juridical University, ADR House, 8J, Gopala Tower, 25 Rajendra Place, New Delhi – 110 008.

5 Indian Institute of Science and Engineering, New Delhi.

6 Viswakarma Open University for Self-Employment, Rozgar Sewasadan, 672, Sanjay Enclave, Opp. GTK Depot, Delhi-110033.

7 Adhyatmik Vishwavidyalaya (Spiritual University), 351-352, Phase-I, Block-A, Vijay Vihar, Rithala, Rohini, Delhi-110085

ಆಂಧ್ರ ಪ್ರದೇಶ
Christ New Testament Deemed University, #32-32-2003, 7th Lane, Kakumanuvarithoto, Guntur, Andhra Pradesh-522002 and another address of Christ New Testament Deemed University, Fit No. 301, Grace Villa Apts., 7/5, Srinagar, Guntur, Andhra Pradesh-522002

ಕೇರಳ
St. John’s University, Kishanattam, Kerala.

ಮಹಾರಾಷ್ಟ್ರ
Raja Arabic University, Nagpur, Maharashtra.

ಪಶ್ಚಿಮ ಬಂಗಾಳ
1 Indian Institute of Alternative Medicine, Kolkatta.

2 Institute of Alternative Medicine and Research,8-A, Diamond Harbour Road, Builtech inn, 2nd Floor, Thakurpurkur, Kolkatta – 700063

ಉತ್ತರ ಪ್ರದೇಶ
1 Varanaseya Sanskrit Vishwavidyalaya, Varanasi (UP) Jagatpuri, Delhi.

2 Mahila Gram Vidyapith/Vishwavidyalaya, (Women’s University) Prayag, Allahabad, Uttar Pradesh.

3 Gandhi Hindi Vidyapith, Prayag, Allahabad, Uttar Pradesh.

4 National University of Electro Complex Homeopathy, Kanpur, Uttar Pradesh.

5 Netaji Subhash Chandra Bose University (Open University), Achaltal, Aligarh, Uttar Pradesh.

6 Uttar Pradesh Vishwavidyalaya, Kosi Kalan, Mathura, Uttar Pradesh.

7 Maharana Pratap Shiksha Niketan Vishwavidyalaya, Pratapgarh, Uttar Pradesh.

8 Indraprastha Shiksha Parishad, Institutional Area,Khoda,Makanpur,Noida Phase-II, Uttar Pradesh.

ಒಡಿಶಾ
1. Nababharat Shiksha Parishad, Anupoorna Bhawan, Plot No. 242, Pani Tanki Road,Shaktinagar, Rourkela-769014.

2 North Orissa University of Agriculture & Technology, Odisha.

ಪುದುಚೆರಿ
1 Sree Bodhi Academy of Higher Education, No. 186, Thilaspet, Vazhuthavoor Road, Puducherry-605009

ಏತನ್ಮಧ್ಯೆ, ಯುಜಿಸಿ ಭಾರತದ ವಿಶ್ವವಿದ್ಯಾನಿಲಯಗಳನ್ನು ಹೊಸ ಶೈಕ್ಷಣಿಕ ಅಧಿವೇಶನದೊಂದಿಗೆ ನವೆಂಬರ್ 1, 2020 ರಿಂದ ಪ್ರಾರಂಭಿಸುವಂತೆ ನಿರ್ದೇಶಿಸಿದೆ. ಪದವಿಪೂರ್ವ ಮತ್ತು ಸ್ನಾತಕೋತ್ತರ ಕೋರ್ಸ್‌ಗಳ ಪ್ರಥಮ ವರ್ಷದ ತರಗತಿಗಳು 2020 ರ ನವೆಂಬರ್‌ನಿಂದ ಪ್ರಾರಂಭವಾಗಲಿದೆ.

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: #saakshatvfake universityugc
ShareTweetSendShare
Join us on:

Related Posts

saakshatv.com/jio-world-convention-centre-launches-conference-ambassador-program-mumbai

ಮುಂಬೈಗೆ ಜಾಗತಿಕ ಸಮ್ಮೇಳನಗಳನ್ನು ತರಲು ‘ಕಾನ್ಫರೆನ್ಸ್ ಅಂಬಾಸಿಡರ್’ ಕಾರ್ಯಕ್ರಮ

by admin
August 25, 2026
0

ಮುಂಬೈ, : ಮುಂಬೈಯನ್ನು ಜಾಗತಿಕ ಮಟ್ಟದ ಸಮ್ಮೇಳನಗಳು ಹಾಗೂ ಬಿಸಿನೆಸ್‌ ಈವೆಂಟ್‌ಗಳ ಪ್ರಮುಖ ತಾಣವನ್ನಾಗಿ ರೂಪಿಸುವ ಉದ್ದೇಶದಿಂದ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ (JWCC) ‘ಕಾನ್ಫರೆನ್ಸ್ ಅಂಬಾಸಿಡರ್...

saakshatv.com/dun-and-bradstreet-city-vitality-index-report-emerging-cities-growth

ಮೆಟ್ರೋ ನಗರಗಳನ್ನು ಹಿಂದಿಕ್ಕಿ ಬೆಳೆಯುತ್ತಿವೆ ಸಣ್ಣ ನಗರಗಳು: ‘ಡನ್ & ಬ್ರಾಡ್‌ಸ್ಟ್ರೀಟ್’ ವರದಿಯಲ್ಲಿ ಅಚ್ಚರಿಯ ಮಾಹಿತಿ!

by admin
August 25, 2026
0

ಬೆಂಗಳೂರು: ಭಾರತದ ಆರ್ಥಿಕ ಬೆಳವಣಿಗೆ ಎಂದರೆ ಕೇವಲ ಮುಂಬೈ, ದೆಹಲಿ, ಬೆಂಗಳೂರಿನಂತಹ ದೊಡ್ಡ ಮೆಟ್ರೋ ನಗರಗಳು ಮಾತ್ರ ಅಂತ ನೀವು ಅಂದುಕೊಂಡಿದ್ದರೆ, ಆ ಲೆಕ್ಕಾಚಾರವನ್ನು ಬದಲಿಸಿಕೊಳ್ಳುವ ಸಮಯ...

ಕಲೆ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಅಮೆರಿಕನ್ ಎಕ್ಸ್‌ಪ್ರೆಸ್ ಮತ್ತು ನೀತಾ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್ ಸಹಭಾಗಿತ್ವ

ಕಲೆ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಅಮೆರಿಕನ್ ಎಕ್ಸ್‌ಪ್ರೆಸ್ ಮತ್ತು ನೀತಾ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್ ಸಹಭಾಗಿತ್ವ

by admin
August 25, 2026
0

 ಅಮೆರಿಕನ್ ಎಕ್ಸ್‌ಪ್ರೆಸ್ ಬ್ಯಾಂಕಿಂಗ್ ಕಾರ್ಪ್ ಮತ್ತು ನೀತಾ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್  ( ಎನ್‌ಎಂಎಸಿಸಿ) ಕಲೆ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಹಭಾಗಿತ್ವವನ್ನು ಘೋಷಿಸಿವೆ. ಇದು ಅರ್ಹ ಅಮೆರಿಕನ್ ಎಕ್ಸ್‌ಪ್ರೆಸ್ ಇಂಡಿಯಾ ಕಾರ್ಡ್ ಸದಸ್ಯರಿಗೆ ಎನ್‌ಎಂಎಸಿಸಿಯಲ್ಲಿ ಕಲೆ, ಮನರಂಜನೆ ಮತ್ತು ಆತಿಥ್ಯ ಕ್ಷೇತ್ರಗಳಿಗೆ ಸಂಬಂಧಿಸಿದ ವಿಶೇಷ ಸಾಂಸ್ಕೃತಿಕ ಅನುಭವವನ್ನು ನೀಡಲಿದೆ.  ಅಮೆರಿಕನ್ ಎಕ್ಸ್‌ಪ್ರೆಸ್ 'ಆದ್ಯತೆಯ ಪೇಮೆಂಟ್ ಪಾಲುದಾರರಾಗಿ'  ಅರ್ಹ ಕಾರ್ಡ್ ಸದಸ್ಯರಿಗೆ ಎನ್‌ಎಂಎಸಿಸಿಯಲ್ಲಿ ವಿಶೇಷ ಸೌಲಭ್ಯಗಳನ್ನು ನೀಡಲಿದೆ. ಈ ಪಾಲುದಾರಿಕೆಯು ಭಾರತೀಯ ಮತ್ತು ಅಂತರರಾಷ್ಟ್ರೀಯ ಕಲೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸುವ ಎನ್‌ಎಂಎಸಿಸಿಯ ಬದ್ಧತೆಯನ್ನು ಎತ್ತಿಹಿಡಿಯಲಿದೆ. ಮುಂಗಡ ಟಿಕೆಟ್ ಮಾರಾಟ (ಪ್ರಿ-ಸೇಲ್), ಆಯ್ದ ಪ್ರದರ್ಶನಗಳಿಗೆ ಉಚಿತ ಪ್ರವೇಶ, ವಿಶೇಷ ಡೈನಿಂಗ್ ಸೌಲಭ್ಯಗಳು ಮತ್ತು ಪ್ರೀಮಿಯಂ ಸೇವೆಗಳು ಇದರ ಪ್ರಮುಖ ವೈಶಿಷ್ಟ್ಯಗಳಾಗಿವೆ.  ಅಮೆರಿಕನ್ ಎಕ್ಸ್‌ಪ್ರೆಸ್ ಇಂಡಿಯಾದ ಸಿಇಒ ಮತ್ತು ಕಂಟ್ರಿ ಮ್ಯಾನೇಜರ್ ಸಂಜಯ್ ಖನ್ನಾ ಮಾತನಾಡಿ: “ಭಾರತವು ಕಲೆ ಮತ್ತು ಸಂಸ್ಕೃತಿಯ ಅಸಾಧಾರಣ ಪರಂಪರೆಯನ್ನು ಹೊಂದಿದೆ. ಎನ್‌ಎಂಎಸಿಸಿ ಈ ಪರಂಪರೆಯನ್ನು ಆಚರಿಸುವ ಮತ್ತು ಜಾಗತಿಕ ಮಟ್ಟದ ಅದ್ಭುತ ಅನುಭವಗಳನ್ನು ಪ್ರೇಕ್ಷಕರಿಗೆ ತಲುಪಿಸುವ ಅಸಾಧಾರಣ ವೇದಿಕೆಯನ್ನು ಸೃಷ್ಟಿಸಿದೆ. ನಮ್ಮ ಕಾರ್ಡ್ ಸದಸ್ಯರಿಗೆ ಅತ್ಯಮೂಲ್ಯ ಮತ್ತು ವಿಶಿಷ್ಟ ಅನುಭವಗಳನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ” ಎಂದರು.  ಜಿಯೋ ವರ್ಲ್ಡ್ ಸೆಂಟರ್‌ನ ಸಿಇಒ ದೇವೇಂದ್ರ ಬರ್ಮಾ ತಿಳಿಸುತ್ತಾ: “ ಎನ್‌ಎಂಎಸಿಸಿಯಲ್ಲಿ  ಭಾರತದ ಶ್ರೇಷ್ಠತೆಯನ್ನು ಜಗತ್ತಿಗೆ ಪರಿಚಯಿಸುವುದು ಮತ್ತು ಜಗತ್ತಿನ ಶ್ರೇಷ್ಠತೆಯನ್ನು ಭಾರತಕ್ಕೆ ತರುವುದು ನಮ್ಮ ದೃಷ್ಟಿಯಾಗಿದೆ. ಸಂಸ್ಕೃತಿಯ ಮೂಲಕ ಜನರನ್ನು ಬೆಸೆಯುವ ನಮ್ಮ ನಂಬಿಕೆಯೇ ಈ ಸಹಯೋಗಕ್ಕೆ ಮೂಲ ಕಾರಣವಾಗಿದೆ” ಎಂದರು.  ಅಮೆರಿಕನ್ ಎಕ್ಸ್‌ಪ್ರೆಸ್ ಬಗ್ಗೆ: 1850 ರಲ್ಲಿ ಸ್ಥಾಪನೆಯಾಗಿರುವ ಅಮೆರಿಕನ್ ಎಕ್ಸ್‌ಪ್ರೆಸ್  ಜಾಗತಿಕ ಪಾವತಿಗಳು ಮತ್ತು ಪ್ರೀಮಿಯಂ ಲೈಫ್‌ಸ್ಟೈಲ್ ಬ್ರ್ಯಾಂಡ್ ಆಗಿದೆ. ಇದು ಗ್ರಾಹಕರ ಜೀವನವನ್ನು ಸಮೃದ್ಧಗೊಳಿಸಲು ಮತ್ತು ವ್ಯಾಪಾರವನ್ನು ಯಶಸ್ವಿಗೊಳಿಸಲು ವಿಶ್ವಾಸಾರ್ಹ ಸೇವೆಗಳನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗೆ :americanexpress.com, americanexpress.com/en-us/newsroom/, and  ನೀತಾ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್  ಬಗ್ಗೆ: ಇದು ಮುಂಬಯಿನ ಬಾಂದ್ರಾ ಕುರ್ಲಾ ಸಂಕೀರ್ಣದ ಹೃದಯಭಾಗದಲ್ಲಿರುವ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿರುವ, ಕಲಾ ಕ್ಷೇತ್ರದಲ್ಲೊಂದು ಅತ್ಯಂತ ವಿಶಿಷ್ಟವಾದ ಕೇಂದ್ರವಾಗಿದೆ.

saakshatv.com/53-year-old-injured-elephant-joy-moti-airlifted-to-vantara-jamnagar

ಪ್ರವಾಹದಲ್ಲಿ ಗಂಭೀರವಾಗಿ ಗಾಯಗೊಂಡ 53 ವರ್ಷದ ಆನೆ ಜೋಯ್ ಮೋತಿ ವಂತಾರಾಗೆ ಏರ್‌ಲಿಫ್ಟ್!

by admin
August 25, 2026
0

ಜಾಮ್‌ನಗರ- ಅಸ್ಸಾಂ ಮತ್ತು ನಾಗಾಲ್ಯಾಂಡ್‌ನಲ್ಲಿ ಇತ್ತೀಚೆಗೆ ಸಂಭವಿಸಿದ ಭೀಕರ ಪ್ರವಾಹದ ಅಲೆಗಳಿಗೆ ಸಿಲುಕಿ ತೀವ್ರವಾಗಿ ಗಾಯಗೊಂಡಿದ್ದ 53 ವರ್ಷ ವಯಸ್ಸಿನ 'ಜೋಯ್‌ ಮೋತಿ' ಎಂಬ ಹೆಣ್ಣಾನೆಗೆ ವಿಶೇಷ ವೈದ್ಯಕೀಯ ಚಿಕಿತ್ಸೆ ನೀಡಲು, ಗುಜರಾತ್‌ನ ಜಾಮ್‌ನಗರದಲ್ಲಿರುವ ಪ್ರಸಿದ್ಧ 'ವಂತಾರಾ' (Vantara) ಆಸ್ಪತ್ರೆಗೆ ವಿಮಾನದ ಮೂಲಕ (Air transport) ಕರೆತರಲಾಗುತ್ತಿದೆ. ಭಾರತದ ಇತಿಹಾಸದಲ್ಲೇ ವನ್ಯಜೀವಿ ಚಿಕಿತ್ಸೆಗಾಗಿ ಆನೆಯೊಂದನ್ನು ವಿಮಾನದಲ್ಲಿ ಕರೆದೊಯ್ಯುತ್ತಿರುವುದು ಇದೇ ಮೊದಲ ಬಾರಿಯಾಗಿದೆ.  ಕಳೆದ ಜುಲೈ ತಿಂಗಳ ಎರಡನೇ ವಾರದಲ್ಲಿ ನಾಗಾಲ್ಯಾಂಡ್‌ನಲ್ಲಿ ಸಂಭವಿಸಿದ ಪ್ರವಾಹದಲ್ಲಿ ಜೋಯ್‌ ಮೋತಿ ಆನೆ ನೀರಿನಲ್ಲಿ ಕೊಚ್ಚಿಹೋಗಿತ್ತು. ಸ್ಥಳೀಯ ಸಾರ್ವಜನಿಕರು ಮತ್ತು ಸರಕಾರಿ ಸಂಸ್ಥೆಗಳ ನೆರವಿನಿಂದ ಅದನ್ನು ಸುರಕ್ಷಿತವಾಗಿ ರಕ್ಷಿಸಲಾಗಿತ್ತು. ಆದರೆ ಈ ದುರ್ಘಟನೆಯಲ್ಲಿ ಆನೆಗೆ ಮೈಯೆಲ್ಲಾ ಗಂಭೀರ ಗಾಯಗಳಾಗಿತ್ತು.  ಆನೆಯ ಹಣೆಯ ಭಾಗ, ಬಲ ಕಿವಿ, ಬಾಲದ ಮೇಲ್ಭಾಗ, ಎಡ ತೊಡೆ ಮತ್ತು ಹೊಟ್ಟೆಯ ಭಾಗದಲ್ಲಿ ತೀವ್ರ ಸ್ವರೂಪದ ಗಾಯಗಳಾಗಿವೆ. ಅದರಲ್ಲೂ ಜನನಾಂಗದ ಸುತ್ತ ಆಳವಾದ ಗಾಯವಾಗಿ ಹುಳುಗಳು ಬಿದ್ದಿದ್ದವು.  ಪ್ರವಾಹದ ಹೊಡೆತದಿಂದ ಆನೆಯ ಬಲ ಕಣ್ಣು ಸಂಪೂರ್ಣವಾಗಿ ಹಾನಿಗೊಂಡಿದ್ದು, ಶಾಶ್ವತವಾಗಿ ದೃಷ್ಟಿ ಕಳೆದುಕೊಂಡಿದೆ. ಅಲ್ಲದೆ ಕಣ್ಣಿನಿಂದ ಸತತವಾಗಿ ನೀರು ಬರುತ್ತಿದೆ.  ಮರ ಸಾಗಾಣಿಕೆ  ಕೆಲಸದ ಸಮಯದಲ್ಲಾದ ಕಾಡಿನ ಅಪಘಾತದಿಂದಾಗಿ ಹಿಂದೆ ಎಡ ಹಿಂದಿನ ಕಾಲಿಗೆ ಮೂಳೆ ಮುರಿತವಾಗಿತ್ತು. ಇದರಿಂದಾಗಿ ಆನೆಗೆ ಸಾಮಾನ್ಯ ರೀತಿಯಲ್ಲಿ ನಡೆಯಲು, ಆಹಾರ ಹಾಗೂ ನೀರನ್ನು ಹುಡುಕಿಕೊಳ್ಳಲು ಬಹಳ ಕಷ್ಟವಾಗುತ್ತಿತ್ತು.  ವೈದ್ಯಕೀಯ ಕಾರಣಗಳಿಗಾಗಿ ವಿಮಾನದ ಮೂಲಕ ರಕ್ಷಣೆ ರಕ್ಷಣೆಯ ಬಳಿಕ ಸ್ಥಳೀಯ ಮಟ್ಟದಲ್ಲಿ ಪ್ರಥಮ ಚಿಕಿತ್ಸೆ, ಡ್ರೆಸ್ಸಿಂಗ್, ನೋವು ನಿವಾರಕಗಳು ಮತ್ತು ಪೌಷ್ಟಿಕ ಸತ್ವಗಳನ್ನು ನೀಡಲಾಗಿತ್ತು. ಆದರೆ ಆನೆಯ ವಯಸ್ಸು, ಗಾಯಗಳ ತೀವ್ರತೆ ಮತ್ತು ಓಡಾಡಲು ಇರುವ ಸಮಸ್ಯೆಯನ್ನು ಗಮನಿಸಿದರೆ, ಸಾಂಪ್ರದಾಯಿಕ ರಸ್ತೆ ಮಾರ್ಗದ ಮೂಲಕ ದೂರದ ಪ್ರಯಾಣ ಮಾಡುವುದು ಅದರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀಳುವ ಸಾಧ್ಯತೆಯಿತ್ತು.  ಆದ್ದರಿಂದ, ಪ್ರಯಾಣದ ಅವಧಿಯನ್ನು ಕನಿಷ್ಠಗೊಳಿಸಲು ಮತ್ತು ಆನೆಗೆ ಯಾವುದೇ ದೈಹಿಕ ಒತ್ತಡ ಉಂಟಾಗದಂತೆ ತಡೆಯಲು ಅತ್ಯಂತ ಎಚ್ಚರಿಕೆಯಿಂದ ವಿಮಾನದ ಮೂಲಕ (Airlift) ಜಾಮ್‌ನಗರಕ್ಕೆ ಕರೆತರಲು ನಿರ್ಧರಿಸಲಾಯಿತು. ವಂತಾರಾ ತಲುಪಿದ ತಕ್ಷಣವೇ ಜೋಯ್‌ ಮೋತಿಗೆ ತಜ್ಞ ವೈದ್ಯರಿಂದ ಸಮಗ್ರ ಆರೋಗ್ಯ ತಪಾಸಣೆ ನಡೆಸಿ, ವಿಶೇಷ ಚಿಕಿತ್ಸೆ ಹಾಗೂ ಪೌಷ್ಟಿಕಾಂಶದ ಆರೈಕೆ ನೀಡಲಾಗುತ್ತದೆ.  ಜೋಯ್‌ ಮೋತಿಯ ಈ ಘಟನೆಯು ವನ್ಯಜೀವಿ ತುರ್ತುಪರಿಹಾರ ಕೇಂದ್ರಗಳು ಸ್ಥಳೀಯವಾಗಿ ಎಷ್ಟು ಅಗತ್ಯ ಎಂಬುದನ್ನು ಎತ್ತಿ ತೋರಿಸಿದೆ. ಪ್ರವಾಹ, ಮಾನವ-ವನ್ಯಜೀವಿ ಸಂಘರ್ಷ ಅಥವಾ ಇತರೆ ಆರೋಗ್ಯ ತುರ್ತು ಸಂದರ್ಭಗಳಲ್ಲಿ ವನ್ಯಜೀವಿಗಳಿಗೆ ತಕ್ಷಣದ ಚಿಕಿತ್ಸೆ ಸಿಗುವಂತಾಗಲು, ಅಸ್ಸಾಂನಲ್ಲಿ ಮೂರು ಪ್ರತ್ಯೇಕ ವನ್ಯಜೀವಿ ವೈದ್ಯಕೀಯ ಆರೈಕೆ ಕೇಂದ್ರಗಳನ್ನು (ಅಸ್ಸಾಂ ಅರಣ್ಯ ಇಲಾಖೆಯಡಿ ಸಂಪೂರ್ಣ ಸ್ವಾಯತ್ತತೆಯಿಂದ ಕಾರ್ಯನಿರ್ವಹಿಸುವ) ಸ್ಥಾಪಿಸಲು ವಂತಾರಾ ಪ್ರಸ್ತಾವನೆ ಸಲ್ಲಿಸಿದೆ. ಭವಿಷ್ಯದಲ್ಲಿ ಇಂತಹ ಪ್ರಕರಣಗಳಿಗೆ ದೂರದ ಪ್ರಯಾಣದ ಅವಶ್ಯಕತೆ ಇಲ್ಲದಂತೆ ಸ್ಥಳೀಯವಾಗಿ ಉನ್ನತ ಮಟ್ಟದ ಚಿಕಿತ್ಸೆ ದೊರೆಯುವಂತೆ ಮಾಡುವುದು ಇದರ ಮುಖ್ಯ ಉದ್ದೇಶವಾಗಿದೆ.  ಇದು ಜೋಯ್‌ ಮೋತಿಯ ಯಾವುದೇ ಶಾಶ್ವತ ಸ್ಥಳಾಂತರವಲ್ಲ; ಕೇವಲ ಜೀವ ಉಳಿಸುವ ತುರ್ತು ಚಿಕಿತ್ಸೆಗಾಗಿ ಮಾತ್ರ ಮಾಡಲಾಗಿರುವ ತಾತ್ಕಾಲಿಕ ವ್ಯವಸ್ಥೆಯಾಗಿದೆ. ಚಿಕಿತ್ಸೆಯ ಬಳಿಕ ಜೋಯ್‌ ಮೋತಿ ಸುರಕ್ಷಿತ ಜೀವನ ನಡೆಸಲು ವಂತಾರಾದಲ್ಲಿ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ.

indonesia-partners-with-vantara-for-wildlife-health-and-conservation

ಸಂಚಾರಿ ಆಸ್ಪತ್ರೆಗಳ ನಿರ್ಮಾಣ, ಉನ್ನತೀಕರಿಸಿದ ಆನೆ ಆಸ್ಪತ್ರೆ, ತರಬೇತಿ ಕೇಂದ್ರಗಳ ಸ್ಥಾಪನೆ ಇಂಡೋನೇಷ್ಯಾ ಅರಣ್ಯ ಸಚಿವ ರಾಜಾ ಜುಲಿ ಆಂಟೋನಿ ಘೋಷಣೆ

by admin
August 25, 2026
0

  ಜಕಾರ್ತಾ, 2026: ವಂತರಾ ಸಂಸ್ಥೆಯ ಸಹಯೋಗದೊಂದಿಗೆ  ವನ್ಯಜೀವಿಗಳ ಆರೋಗ್ಯ ಮತ್ತು ಸ್ಥಳದಲ್ಲೇ  ಸಂರಕ್ಷಣಾ ಉಪಕ್ರಮಗಳನ್ನು ಆರಂಭಿಸುವುದಾಗಿ ಇಂಡೋನೇಷ್ಯಾದ ಅರಣ್ಯ ಸಚಿವ ರಾಜಾ ಜುಲಿ ಆಂಟೋನಿ ಘೋಷಿಸಿದ್ದಾರೆ. ಆರಂಭಿಕ ಹಂತದಲ್ಲಿ ಸಾಮರ್ಥ್ಯ ವೃದ್ಧಿ ತರಬೇತಿಗಳು,  ಸಂಚಾರಿ ಆಸ್ಪತ್ರೆಗಳು ಮತ್ತು ಉನ್ನತೀಕರಿಸಲಾದ ವೇ ಕಂಬಾಸ್ ಆನೆ ಆಸ್ಪತ್ರೆಯನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದ್ದಾರೆ. ಇಂಡೋನೇಷ್ಯಾದ ಅರಣ್ಯ ಸಚಿವರಾದ ರಾಜಾ ಜುಲಿ ಆಂಟೋನಿ ಅವರು ಜಕಾರ್ತಾದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,  ಇಂಡೋನೇಷ್ಯಾದ ವನ್ಯಜೀವಿ ಆರೋಗ್ಯ ಮತ್ತು ಸ್ಥಳದಲ್ಲೇ ಸಂರಕ್ಷಣಾ ಪ್ರಯತ್ನಗಳ ಪ್ರಮುಖ ವಿಸ್ತರಣೆಯನ್ನು ಇಂದು ಅಧಿಕೃತವಾಗಿ ಘೋಷಿಸಿದರು. ಈ ಕಾರ್ಯಕ್ರಮಕ್ಕೆ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಕಾರ್ಯನಿರ್ವಾಹಕ ನಿರ್ದೇಶಕರಾದ ಅನಂತ್ ಅಂಬಾನಿ ಅವರು ಸ್ಥಾಪಿಸಿರುವ ವಿಶ್ವದ ಬೃಹತ್ ವನ್ಯಜೀವಿ ಸಂರಕ್ಷಣಾ ಸಂಸ್ಥೆಯಾದ 'ವಂತರಾ' ಹಾಗೂ ಇಂಡೋನೇಷ್ಯಾದ ಹೆಸರಾಂತ ವನ್ಯಜೀವಿ ಸಂಸ್ಥೆಯಾದ 'ಪಿಟಿ ಫೌನಾ ಲ್ಯಾಂಡ್ ಗ್ರೂಪ್'  ಸಹಯೋಗ ನೀಡುತ್ತಿವೆ ಎಂದರು. ಸಚಿವ ರಾಜಾ ಜುಲಿ ಆಂಟೋನಿ ಮಾತನಾಡುತ್ತಾ, “ವನ್ಯಜೀವಿ ಸಂರಕ್ಷಣೆ ಎಂಬುದು ಅಂತಿಮವಾಗಿ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ನಮ್ಮ ವನ್ಯಜೀವಿಗಳಿಗೆ ಯಾವಾಗ ಮತ್ತು ಎಲ್ಲೇ ಅಗತ್ಯವಿದ್ದರೂ ಅವುಗಳನ್ನು ನೋಡಿಕೊಳ್ಳಲು ಅಗತ್ಯವಿರುವ ಸೌಲಭ್ಯಗಳು, ಪರಿಣತಿ ಮತ್ತು ಸಂಪನ್ಮೂಲಗಳು ಇಂಡೋನೇಷ್ಯಾದಲ್ಲಿರುವುದನ್ನು ನಾವು ಖಚಿತಪಡಿಸಿಕೊಳ್ಳಬೇಕು. ಈ ಪಾಲುದಾರಿಕೆಯ ಮೂಲಕ ನಮ್ಮ ಸ್ವಂತ ವನ್ಯಜೀವಿ ಆರೋಗ್ಯ ಮತ್ತು ಸಂರಕ್ಷಣಾ ಮೂಲಸೌಕರ್ಯವನ್ನು ನಾವು ಬಲಪಡಿಸುತ್ತಿದ್ದೇವೆ. ವಂತರಾ ತನ್ನ ಅನುಭವ, ಪರಿಣತಿ ಮತ್ತು ಸಂಪನ್ಮೂಲಗಳ ಮೂಲಕ ನಮಗೆ ಬೆಂಬಲ ನೀಡುತ್ತಿದೆ. ಈ ಸಹಕಾರದಡಿಯಲ್ಲಿ ಬರುವ ಎಲ್ಲಾ ಸೌಲಭ್ಯಗಳು ಮತ್ತು ಕಾರ್ಯಕ್ರಮಗಳನ್ನು ಇಂಡೋನೇಷ್ಯಾ ಸರ್ಕಾರದ ಹಾಗೂ ಸಂಬಂಧಿತ ಪ್ರಾಧಿಕಾರಗಳೇ ಸ್ವಂತವಾಗಿ ಹೊಂದಿದ್ದು, ನಿರ್ವಹಿಸಿ ಮುನ್ನಡೆಸಲಿವೆ. ಇದು ಮುಂಬರುವ ಪೀಳಿಗೆಗಳಿಗಾಗಿ ಇಂಡೋನೇಷ್ಯಾದ ಸಂರಕ್ಷಣಾ ಪ್ರಾಮುಖ್ಯತೆಗಳು ಮತ್ತು ನಮ್ಮ ವನ್ಯಜೀವಿಗಳ ಸೇವೆಗೆ ಮೀಸಲಿರುವುದನ್ನು ಇದು ಖಚಿತಪಡಿಸುತ್ತದೆ” ಎಂದರು. ವಂತರಾದ ಸಿಇಒ ವಿವಾನ್ ಕರಾನಿ ಮಾತನಾಡಿ, “ಇಂಡೋನೇಷ್ಯಾ ಸರ್ಕಾರದೊಂದಿಗೆ ಕೆಲಸ ಮಾಡಲು ಮತ್ತು ದೇಶದ ವನ್ಯಜೀವಿ ಸಂರಕ್ಷಣಾ ಪ್ರಯತ್ನಗಳಿಗೆ ಕೊಡುಗೆ ನೀಡಲು ನಮಗೆ ಸಿಕ್ಕಿರುವ ಈ ಅವಕಾಶ ಹಾಗೂ ವಿಶ್ವಾಸಕ್ಕಾಗಿ ನಾವು ಕೃತಜ್ಞರಾಗಿದ್ದೇವೆ. ಇಂಡೋನೇಷ್ಯಾವು ವಿಶ್ವದ ಅತ್ಯಂತ ಅಸಾಧಾರಣ ಜೀವವೈವಿಧ್ಯತೆಯನ್ನು ಹೊಂದಿರುವ ನಾಡಾಗಿದೆ. ಈ ಪ್ರಾಕೃತಿಕ ಪರಂಪರೆಯನ್ನು ಭವಿಷ್ಯದ ಪೀಳಿಗೆಗಾಗಿ ರಕ್ಷಿಸುವಲ್ಲಿ ಇಂಡೋನೇಷ್ಯಾಕ್ಕೆ ಬೆಂಬಲ ನೀಡುವುದು ವಂತರಾಗೆ ದೊರೆತ ಸೌಭಾಗ್ಯವಾಗಿದೆ. ವಂತರಾ ಸಂಸ್ಥೆಯು ವನ್ಯಜೀವಿ ಆರೋಗ್ಯ, ಪಶುವೈದ್ಯಕೀಯ ಆರೈಕೆ, ಪ್ರಾಣಿ ಸಾಕಣೆ ಮತ್ತು ಸಂರಕ್ಷಣೆ ಕ್ಷೇತ್ರಗಳಲ್ಲಿ ಆಳವಾದ ಪರಿಣತಿಯನ್ನು ಅಭಿವೃದ್ಧಿಪಡಿಸಿದ್ದು, ಆ ಅನುಭವವನ್ನು ಇಂಡೋನೇಷ್ಯಾ ಜೊತೆ ಹಂಚಿಕೊಳ್ಳಲು ನಾವು ಸಂತೋಷಪಡುತ್ತೇವೆ. ಅಲ್ಲದೆ, ಈ ದೇಶದ ದೀರ್ಘಕಾಲದ ಸಂರಕ್ಷಣಾ ಅನುಭವದಿಂದ ಕಲಿಯಲು ನಾವು ಎದುರು ನೋಡುತ್ತಿದ್ದೇವೆ. ಅತ್ಯಂತ ಮುಖ್ಯವಾಗಿ, ಈ ಪಾಲುದಾರಿಕೆಯು ವನ್ಯಜೀವಿಗಳಿಗೆ ಪ್ರಾಯೋಗಿಕ ಹಾಗೂ ಶಾಶ್ವತವಾದ ಪ್ರಯೋಜನವನ್ನು ತಂದುಕೊಡಬೇಕೆಂಬುದು ನಮ್ಮ ಆಶಯವಾಗಿದೆ” ಎಂದು ತಿಳಿಸಿದರು. ಫೌನಾ ಲ್ಯಾಂಡ್‌ನ ಸಿಇಒ ಡ್ಯಾನಿ ಗುನಾಲನ್ ಮಾತನಾಡಿ, “ಇಂಡೋನೇಷ್ಯಾದಲ್ಲಿ ಅಸಾಧಾರಣ ವನ್ಯಜೀವಿ ಮತ್ತು ಜೀವವೈವಿಧ್ಯತೆಯ ಸಂಪತ್ತಿದೆ. ಈ ಪ್ರಾಕೃತಿಕ ಪರಂಪರೆಯನ್ನು ರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಇಂಡೋನೇಷ್ಯಾ ಸರ್ಕಾರ ಮತ್ತು ವಂತರಾದೊಂದಿಗೆ ಜತೆಗೂಡಿ ಕೆಲಸ ಮಾಡಲು ನಾವು ಹರ್ಷಿಸುತ್ತೇವೆ. ನಮ್ಮೆಲ್ಲರ ಅನುಭವ ಮತ್ತು ಪರಿಣತಿಯನ್ನು ಒಟ್ಟುಗೂಡಿಸಿ ದೇಶಾದ್ಯಂತ ವನ್ಯಜೀವಿಗಳ ಆರೋಗ್ಯ ಹಾಗೂ ಆರೈಕೆಯನ್ನು ಬಲಪಡಿಸಲು ಇದು ಸಹಕಾರಿಯಾಗಿದೆ. ಈ ಪಾಲುದಾರಿಕೆಯು ಸ್ಥಳೀಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ, ವನ್ಯಜೀವಿಗಳಿಗೆ ಲಭ್ಯವಿರುವ ಮೂಲಸೌಕರ್ಯವನ್ನು ಬಲಪಡಿಸುತ್ತದೆ ಮತ್ತು ಅತ್ಯಂತ ಮುಖ್ಯವಾಗಿ ಪ್ರಾಣಿಗಳಿಗೆ ಹಾಗೂ ಅವುಗಳನ್ನು ರಕ್ಷಿಸಲು ಶ್ರಮಿಸುತ್ತಿರುವ ಜನರಿಗೆ ನಿಜವಾದ ಹಾಗೂ ಶಾಶ್ವತವಾದ ವ್ಯತ್ಯಾಸವನ್ನು ತರುತ್ತದೆ ಎಂದು ನಾವು ನಂಬುತ್ತೇವೆ” ಎಂದರು. ಈ ಕಾರ್ಯಕ್ರಮವು ಇಂಡೋನೇಷ್ಯಾದ ವನ್ಯಜೀವಿ ಆರೋಗ್ಯ ಮೂಲಸೌಕರ್ಯ ಮತ್ತು ಕ್ಷೇತ್ರ ಸಾಮರ್ಥ್ಯಗಳನ್ನು ಬಲಪಡಿಸಲಿದ್ದು, ಇಂಡೋನೇಷ್ಯಾದ ಪ್ರಾಧಿಕಾರಗಳ ನೇತೃತ್ವದ ಕಾರ್ಯಕ್ರಮಗಳಿಗೆ ವಂತರಾ ವಿಶೇಷ ಪಶುವೈದ್ಯಕೀಯ ಪರಿಣತಿ, ತಾಂತ್ರಿಕ ಬೆಂಬಲ, ಮೂಲಸೌಕರ್ಯ ನೆರವು ಮತ್ತು ಸಾಮರ್ಥ್ಯ ವೃದ್ಧಿ ತರಬೇತಿಗಳನ್ನು ಒದಗಿಸಲಿದೆ. ಘೋಷಿಸಲಾದ  ಉಪಕ್ರಮಗಳು: ಆನೆ ಪಾಲಕರು, ಪಶುವೈದ್ಯರು ಮತ್ತು ಇಂಡೋನೇಷ್ಯಾದಲ್ಲಿ ವನ್ಯಜೀವಿ ನಿರ್ವಹಣೆಯಲ್ಲಿ ತೊಡಗಿರುವ ಇತರ ಅಧಿಕಾರಿಗಳಿಗೆ ಸಾಮರ್ಥ್ಯ ವೃದ್ಧಿ ತರಬೇತಿಗಳು. ಇಂಡೋನೇಷ್ಯಾಾದಾದ್ಯಂತ ಕಾಡುಪ್ರಾಣಿಗಳ ಅಗತ್ಯಗಳನ್ನು ಸ್ಥಳದಲ್ಲೇ  ಪೂರೈಸಲು " 10 ಸಂಚಾರಿ  ಆಸ್ಪತ್ರೆಗಳು'. ವೇ ಕಂಬಾಸ್ ಆನೆ ಆಸ್ಪತ್ರೆಯನ್ನು ಅತ್ಯಾಧುನಿಕ ಉಪಕರಣಗಳು, ಸಲಕರಣೆಗಳು ಮತ್ತು ತಂತ್ರಜ್ಞಾನಗಳೊಂದಿಗೆ 'ಆನೆ ಚಿಕಿತ್ಸಾ ಮತ್ತು ಆರೈಕೆ ಕೇಂದ್ರ'ವಾಗಿ  ಉನ್ನತೀಕರಿಸುವುದು. ಈ ನವೀಕರಿಸಿದ ಆಸ್ಪತ್ರೆಯು ಮಾನವನ ಆರೈಕೆಯಲ್ಲಿರುವ 62 ಸುಮಾತ್ರ ಆನೆಗಳಿಗೆ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿರುವ ಸುಮಾರು 100 ಕಾಡು ಸುಮಾತ್ರಾ ಆನೆಗಳಿಗೆ ರಕ್ಷಣೆ ನೀಡಲಿದೆ. ಈ ಉಪಕ್ರಮಗಳು ಇಂಡೋನೇಷ್ಯಾ ಸರ್ಕಾರ ಮತ್ತು ವಂತರಾ ನಡುವಿನ  ವಿಶಾಲ ಸಹಕಾರ ಒಪ್ಪಂದದ ಒಂದು ಭಾಗವಾಗಿದ್ದು, ಇದು ವನ್ಯಜೀವಿ ಆರೋಗ್ಯ, ಪ್ರಾಣಿ ಕಲ್ಯಾಣ ಮತ್ತು ಸಂರಕ್ಷಣೆಯಾದ್ಯಂತ ಸಹಕಾರಕ್ಕೆ ಒಂದು ಚೌಕಟ್ಟನ್ನು ಒದಗಿಸುತ್ತದೆ. ಈ ಒಡಂಬಡಿಕೆಯಡಿಯಲ್ಲಿ, ಇಂಡೋನೇಷ್ಯಾದ ರಾಷ್ಟ್ರೀಯ ಸಂರಕ್ಷಣಾ ಪ್ರಾಮುಖ್ಯತೆಗಳಿಗೆ ಅನುಗುಣವಾಗಿ ಉಭಯ ಪಕ್ಷಗಳು ಸಹಕಾರದ ಪ್ರಾಥಮಿಕ ಕ್ಷೇತ್ರಗಳನ್ನು ಗುರುತಿಸಿವೆ. ವಂತರಾ ತನ್ನ ಪಶುವೈದ್ಯಕೀಯ, ಪ್ರಾಣಿ ಆರೈಕೆ ಮತ್ತು ಸಂರಕ್ಷಣಾ ಪರಿಣತಿ, ತಾಂತ್ರಿಕ ಸಾಮರ್ಥ್ಯಗಳು, ಮೂಲಸೌಕರ್ಯ ಬೆಂಬಲ ಮತ್ತು ಸಾಮರ್ಥ್ಯ ವೃದ್ಧಿ ಕಾರ್ಯಕ್ರಮಗಳನ್ನು ಕೊಡುಗೆಯಾಗಿ ನೀಡಲಿದ್ದು, ಇಂಡೋನೇಷ್ಯಾ ಸರ್ಕಾರ, ಸಂಬಂಧಿತ ರಾಷ್ಟ್ರೀಯ ಸಂಸ್ಥೆಗಳು ಮತ್ತು ಫೌನಾ ಲ್ಯಾಂಡ್‌ನೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸಲಿದೆ.

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram