ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್
ತುಮಕೂರು: ರಾಜ್ಯಾದ್ಯಂತ ಜನವರಿ 16ರಿಂದ ಕೊರೊನಾ ಲಸಿಕೆ ಅಭಿಯಾನ ಆರಂಭವಾಗಿದ್ದರೂ, ಕೆಲ ದಿನಗಳಿಂದ ವೈದ್ಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಯೇ ಹಿಂದೇಟು ಹಾಕುತ್ತಿರುವ ಬಗ್ಗೆ ವರದಿಗಳು ಬರುತ್ತಿದೆ.
ಪಂಡಿತ್ ದೈವಜ್ಞ ಪ್ರಧಾನ ತಾಂತ್ರಿಕ್ ಶ್ರೀ ಜ್ಞಾನೇಶ್ವರ್ ರಾವ್ ಜ್ಯೋತಿಷ್ಯರು 8548998564
ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮಜೀವನದಯಾವುದೇ ಕಠಿಣ ಗುಪ್ತಾ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಸಮಸ್ಯೆಗಳಿಗೆ ಮೂರು ದಿನಗಳಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್)call/WhatsApp 8548998564
ಈ ನಡುವೆ, ಕೊರೊನಾ ರಾಜ್ಯಾದ್ಯಂತ ಲಸಿಕೆಗೆ ಚಾಲನೆ ನೀಡಿದ ದಿನವೇ ತುಮಕೂರು ಡಿಹೆಚ್ಒ ಹಾಗೂ ನಸಿರ್ಂಗ್ ಕಾಲೇಜಿನ ಪ್ರಿನ್ಸಿಪಾಲ್ ಲಸಿಕೆ ತೆಗೆದುಕೊಂಡ ರೀತಿ ಮಾಧ್ಯಮಗಳ ಕ್ಯಾಮೆರಾಗೆ ಪೋಸ್ ನೀಡಿ ಡ್ರಾಮಾ ಮಾಡಿದ್ದಾರೆ ಎನ್ನಲಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ತುಮಕೂರು ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಾಗೇಂದ್ರಪ್ಪ, ಸರ್ಕಾರಿ ನಸಿರ್ಂಗ್ ಕಾಲೇಜಿನ ಪ್ರಿನ್ಸಿಪಾಲ್ ಡಾ.ರಜಿನಿ ಕೋವಿಡ್ ಲಸಿಕೆ ಪಡೆಯುತ್ತಿರುವುದಾಗಿ ಕ್ಯಾಮೆರಾ ಎದುರು ಡ್ರಾಮಾ ಮಾಡಿದ್ದಾರೆ ಎನ್ನಲಾಗಿದೆ.
ಖಾಲಿ ಸಿರಿಂಜ್…ವಿಕ್ಟರಿ ಸಿಂಬಲ್..!
ನರ್ಸ್ವೊಬ್ಬರು ಖಾಲಿ ಸಿರಿಂಗ್ನೊಂದಿಗೆ ಡಿಹೆಚ್ಒ ಡಾ.ನಾಗೇಂದ್ರಪ್ಪ, ಪ್ರಿನ್ಸಿಪಾಲ್ ಡಾ.ರಜಿನಿ ಅವರ ಬುಜಗಳ ಮೇಲಿರಿಸಿಕೊಂಡು ಲಸಿಕೆ ಕೊಟ್ಟಂತೆ ಕ್ಯಾಮೆರಾಗೆ ಪೋಸ್ ಕೊಡುತ್ತಾರೆ. ನಾವೂ ಕೂಡ ವ್ಯಾಕ್ಸಿನ್ ತಗೊಂಡ್ವಿ ಎಂದು ಮೀಡಿಯಾದವರ ಮುಂದೆ ಪ್ರಿನ್ಸಿಪಾಲ್ ಡಾ.ರಜಿನಿ ವಿಕ್ಟರಿ ಸಿಂಬಲ್ ಕೊಟ್ಟಿದ್ದಾರೆ.
ಆದರೆ, ಲಸಿಕೆ ಪಡೆಯುವಾಗ ಸಿರಿಂಜ್ನಿಂದ ಚುಚ್ಚುವಾಗ ಎಂತಹವರ ಮೈ ಒಂದು ಕ್ಷಣ ಜುಂ ಎನ್ನುತ್ತದೆ. ಆದರೆ, ಡಾ.ನಾಗೇಂದ್ರಪ್ಪ, ಸರ್ಕಾರಿ ನಸಿರ್ಂಗ್ ಕಾಲೇಜಿನ ಪ್ರಿನ್ಸಿಪಾಲ್ ಡಾ.ರಜಿನಿ ಲಸಿಕೆ ತೆಗೆದುಕೊಂಡಾಗ ಅವರ ಮುಖ ಹಾಗೂ ದೇಹ ಯಾವುದೇ ರೀತಿಯಲ್ಲೂ ಪ್ರತಿಕ್ರಿಯಿಸಲ್ಲ. ನರ್ಸ್ ಕೂಡ ಸಿರಿಂಜ್ನ್ನು ತೋಳಿನೆ ಮೇಲೆ ಇಟ್ಟು ಚುಚ್ಚಿದಂತೆ ನಟಿಸುತ್ತಾಳೆ.
ರಾಜ್ಯಾದ್ಯಂತ ಲಕ್ಷಾಂತರ ಜನರಿಗೆ ಮಾದರಿಯಾಗಬೇಕಿದ್ದ ಇಬ್ಬರು ವೈದ್ಯರೇ ಹೀಗೆ ಸುಳ್ಳು ಡೋಸ್ ಕೊಟ್ರೆ ಹೇಗೆ..? ಎಂಬ ಪ್ರಶ್ನೆ ಎದುರಾಗಿದೆ. ಆದರೆ, ಈ ವಿಡಿಯೋ ಬಗ್ಗೆ ಪ್ರಶ್ನಿಸಿಡಾ.ನಾಗೇಂದ್ರಪ್ಪ, ಸರ್ಕಾರಿ ನಸಿರ್ಂಗ್ ಕಾಲೇಜಿನ ಪ್ರಿನ್ಸಿಪಾಲ್ ಡಾ.ರಜಿನಿ ನಾವು ಲಸಿಕೆ ತೆಗೆದುಕೊಂಡಿದ್ದೇವೆ ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ ಎನ್ನಲಾಗಿದೆ.
ಎಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..? ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ ಮೂರು ದಿನಗಳಲ್ಲಿ ಪರಿಹಾರ ಶತಸಿದ್ಧ.ವಿದ್ವಾನ್ ಶ್ರೀ ಜ್ಞಾನೇಶ್ವರ್ ರಾವ್ ಕರೆ ಮಾಡಿ 8548998564.
ಇವರಿಬ್ಬರೂ ಲಸಿಕೆ ಪಡೆದೇ ಇಲ್ಲ ಎನ್ನಲಾಗಿದೆ. ಈ ಇಬ್ಬರೂ ವೈದ್ಯರ ವರ್ತನೆ ಕೋವಿಡ್ ವ್ಯಾಕ್ಸಿನ್ ಮೇಲೆ ನಂಬಿಕೆಯೇ ಇಟ್ಟಿಲ್ಲ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಇವರೇ ಹೀಗೆ ಅಪನಂಬಿಕೆ ತೋರಿಸಿದ್ರೆ ಲಸಿಕೆ ಪಡೆಯೋಕೆ ಯಾರು ತಾನೆ ಮುಂದೆ ಬರ್ತಾರೆ..? ಈಗಾಗಲೇ ಲಸಿಕೆ ಪಡೆಯೋಕೆ ಜನರು ಹಿಂದೇಟು ಹಾಕುತ್ತಿದ್ದಾರೆ. ಈ ಸಂದರ್ಭದಲ್ಲೇ ಇವರಿಬ್ಬರ ಈ ನಾಟಕದ ವಿಡಿಯೋ ಬಾರಿ ಚರ್ಚೆಗೆ ಕಾರಣವಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel