Umesh Katthi | ಸಿದ್ದರಾಮಯ್ಯ ಜವಾಬ್ದಾರಿಯುತ ನಾಯಕ
ಗದಗ : ಸಿದ್ದರಾಮಯ್ಯ ಜವಾಬ್ದಾರಿಯುತ ನಾಯಕ ನಾಡುಕಟ್ಟುವ ಕೆಲಸ ಮಾಡಬೇಕು ಎಂದು ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ.
ಸರ್ಕಾರದ ವಿರುದ್ಧ 40 ಪರ್ಸೆಂಟ್ ಭ್ರಷ್ಟಾಚಾರ ಆರೋಪದ ಬಗ್ಗೆ ಗದಗ್ ನಲ್ಲಿ ಮಾತನಾಡಿರುವ ಉಮೇಶ್ ಕತ್ತಿ, ಕೆಂಪಣ್ಣ ಸಿದ್ದರಾಮಯ್ಯನ ಶಿಷ್ಯ. 40% ರಾಜ್ಯ ಸರ್ಕಾರದ್ದು, 50% ಬಿಬಿಎಂಪಿದ್ದು… ಒಟ್ಟು 90 ಪರ್ಸೆಟ್ ಆಯ್ತು. ಈ ಹಿಂದೆ ಎಷ್ಟಿತ್ತು ಸಾಬೀತು ಮಾಡಲಿ ಎಂದು ಸವಾಲು ಹಾಕಿದರು.
ಕಮೀಷನ್ ಇದ್ರೆ ದೂರು ನೀಡಲಿ ಲೋಕಾಯುಕ್ತ ಇದೆ. ತನಿಖೆ ಆಗಲಿ ಯಾರ್ಯಾರು ಕಮಿಷನ್ ಪಡೆದಿದ್ರೆ ಹೊರಗೆ ಬರಲಿ. ಯಾರ ವಿರುದ್ಧವೂ ಕ್ರಮಕ್ಕೆ ಸರ್ಕಾರ ಹಿಂಜರಿಯಲ್ಲ. ಬಾಯಿ ಇದೆ ಅಂತ ಏನೇನೋ ಮಾತನಾಡಿದ್ರೆ ಸರಿಯಲ್ಲ. ಸಿದ್ದರಾಮಯ್ಯಾಗೆ ಮಾಡುವುದಕ್ಕೆ ಕೆಲಸವಿಲ್ಲ.
ಇದು ರಾಜಕಾರಣ ಅಲ್ಲ, ರಾಜಕಾರಣ ಅಂದ್ರೆ ಅಭಿವೃದ್ಧಿ, ಜನರ ತೊಂದರೆ, ಸರ್ಕಾರ ನಡೆ ಬಗ್ಗೆ ಮಾತನಾಡಲಿ. ಸರ್ಕಾರ ತಪ್ಪು ದಾರಿಯಲ್ಲಿ ಹೋದ್ರೆ ಸರಿ ದಾರಿಗೆ ಕೆಲಸ ಮಾಡಲಿ. ವಿನಾಕಾರಣ 40% 50% ಅಂದ್ರೆ. ನಿಮ್ಮ ಸರ್ಕಾರದಲ್ಲಿ ಎಷ್ಟಿತ್ತು ಹೇಳಿ ಎಂದು ಕೇಳಿದ್ದಾರೆ.
ಇನ್ನು 40% ಬಗ್ಗೆ ಮೊದ್ಲು ದೂರು ಕೊಡಿ . ದೂರು ಕೊಟ್ಟರೇ ಲೋಕಾಯುಕ್ತ, ಸಿಬಿಐ, ಸಿಓಡಿ, ಈಡಿ ಅವರ ಯಾವ ತನಿಖೆ ಅಂತಾರೋ ಆ ತನಿಖೆ ಮಾಡೋಣ. ಮಾಧ್ಯಮಗಳು ಇದೇ ತೋರೀಸ್ತೀರಿ, ರಾಜ್ಯ ಹಾಳಾಗ್ತಾದೆ, ರಾಜ್ಯ ಕಟ್ಟುವ ಕೆಲಸ ಮಾಡಿ ಎಂದು ಹೇಳಿದರು.