ಉತ್ತರಖಂಡ ಮತ್ತು ಮಣಿಪುರದಲ್ಲಿ ಸರ್ಕಾರ ಉಳಿಸಿಕೊಂಡ ಬಿಜೆಪಿ…
ಉತ್ತರಾಖಂಡದಲ್ಲಿ ಮತ್ತು ಮಣಿಪುರದಲ್ಲಿ ಸರ್ಕಾರ ಉಳಿಸಿದ ಮೊದಲ ಪಕ್ಷ ಎಂಬ ಹೆಗ್ಗಳಿಕೆಗೆ ಬಿಜೆಪಿ ಪಾತ್ರವಾಗಿದೆ. ಉತ್ತರಾಖಂಡದಲ್ಲಿ ಬಿಜೆಪಿ 70 ಸ್ಥಾನಗಳಲ್ಲಿ ರಲ್ಲಿ 1 ಸ್ಥಾನ ಗೆದ್ದು 46 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಮಣಿಪುರದಲ್ಲಿ ಬಿಜೆಪಿ 60ರಲ್ಲಿ 2 ಸ್ಥಾನ ಗೆದ್ದು 26 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
ಉತ್ತರಾಖಂಡದಲ್ಲಿ ಕಾಂಗ್ರೆಸ್ 1 ಸ್ಥಾನ ಗೆದ್ದು 19ರಲ್ಲಿ ಮುನ್ನಡೆ ಸಾಧಿಸಿದ್ದು, ಇತರರು 3 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಮಣಿಪುರದಲ್ಲಿ ಕಾಂಗ್ರೆಸ್ 10 ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದರೆ, ಎನ್ಪಿಪಿ 9, ಎನ್ಪಿಎಫ್ 3 ಮತ್ತು ಇತರರು 9 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಉತ್ತರಾಖಂಡದಲ್ಲಿ ಬಹುಮತಕ್ಕೆ 36 ಸ್ಥಾನಗಳ ಅಗತ್ಯವಿದ್ದು, ಮಣಿಪುರದಲ್ಲಿ 31 ಸ್ಥಾನಗಳ ಅಗತ್ಯವಿದೆ.
ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ತಮ್ಮ ವಿವಾಹ ವಾರ್ಷಿಕೋತ್ಸವದ ದಿನವೇ ಸೋತಿದ್ದಾರೆ. ರಾವತ್ ಅವರನ್ನು ಲಾಲ್ಕುವಾನ್ ಕ್ಷೇತ್ರದಲ್ಲಿ ಬಿಜೆಪಿಯ ಮೋಹನ್ ಬಿಷ್ತ್ 14 ಸಾವಿರಕ್ಕೂ ಹೆಚ್ಚು ಮತಗಳಿಂದ ಸೋಲಿಸಿದ್ದಾರೆ. ಆದರೆ, ಹರಿದ್ವಾರ ಗ್ರಾಮಾಂತರ ಕ್ಷೇತ್ರದಲ್ಲಿ ರಾವತ್ ಪುತ್ರಿ ಅನುಪಮಾ ರಾವತ್ ಬಿಜೆಪಿಯ ಯತೀಶ್ವರಾನಂದ್ ಅವರನ್ನು ಸುಮಾರು 6000 ಮತಗಳಿಂದ ಸೋಲಿಸಿದ್ದಾರೆ.
2017ರಲ್ಲಿ ಈ ಕ್ಷೇತ್ರದಲ್ಲಿ ಯತೀಶ್ವರಾನಂದ್ ಅವರು ಹರೀಶ್ ರಾವತ್ ಅವರನ್ನು ಸೋಲಿಸಿದ್ದರು. ಆದರೆ, ಎರಡೂ ಕ್ಷೇತ್ರಗಳಲ್ಲಿ ಸೋಲು-ಗೆಲುವಿನ ಬಗ್ಗೆ ಚುನಾವಣಾ ಆಯೋಗ ಇನ್ನೂ ಅಧಿಕೃತ ಘೋಷಣೆ ಮಾಡಿಲ್ಲ. ಮತ್ತೊಂದೆಡೆ, ಮಣಿಪುರದಲ್ಲಿ ಬಿಜೆಪಿ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಹೆನಿಗ್ಯಾಂಗ್ ಕ್ಷೇತ್ರದಲ್ಲಿ ಗೆದ್ದಿದ್ದಾರೆ. ಜಿರಿಬಾಮ್ನಿಂದ ಜನತಾ ದಳ (ಯುನೈಟೆಡ್) ನ ಮೊ. ಅಚಾಬ್ ಉದ್ದೀನ್ 416 ಮತಗಳಿಂದ ಗೆದ್ದಿದ್ದಾರೆ. ತಂಗಮೈಬಂದ್ನಿಂದ, ಜನತಾ ದಳ (ಯುನೈಟೆಡ್) ಕೆ. ಜೋಯ್ಕಿಶನ್ ಸಿಂಗ್ 3,773 ಮತಗಳಿಂದ ಗೆದ್ದಿದ್ದಾರೆ.








