ಕೋವಿಡ್ 3ನೇ ಅಲೆಗೆ ಆಹ್ವಾನ ನೀಡುತ್ತಾ ಯುಪಿ ಸರ್ಕಾರ – ಕನ್ವಾರ್ ಯಾತ್ರೆಗೆ ಅನುಮತಿ..?
ಉತ್ತರಪ್ರದೇಶ: ಸದ್ಯ ಕುಂಭಮೇಳದ ನಂತರ ಕೋವಿಡ್ 2ನೇ ಅಲೆ ಮಿತಿ ಮೀರಿದ್ದಾಗಿ ಅನೇಕ ವರದಿಗಳು ತಿಳಿಸಿವೆ.. ಇತ್ತೀಚೆಗೆ 2ನೇ ಅಲೆ ತಗ್ಗುತ್ತಿದ್ದು, 3ನೇ ಅಲೆಯ ಎಚ್ಚರಿಕೆಯನ್ನೂ ಸಹ ನೀಡಲಾಗಿದೆ.. ಈ ನಡುವೆ ಬಹುತೇಕ ರಾಜ್ಯಗಳಲ್ಲಿ ಹೇರಲಾಗಿದ್ದ ಲಾಕ್ ಡೌನ್ ಕೂಡ ಸಡಿಲಗೊಳಿಸಲಾಗ್ತಿದೆ..
ಆದ್ರೆ ಉತ್ತರಪ್ರದೇಶದಲ್ಲಿ ಜುಲೈ 25ರಿಂದ ನಡೆಯಲಿರುವ ವಾರ್ಷಿಕ ಕನ್ವಾರ್ ಯಾತ್ರೆಗೆ ಅನುಮತಿ ನೀಡಲು ಉತ್ತರಪ್ರದೇಶ ಸರಕಾರ ನಿರ್ಧರಿಸಿದೆ ಎಂದು ಹೇಳಲಾಗ್ತಿದೆ. ಈ ಮೂಲಕ ಕೊರೊನಾ 3ನೇ ಅಲೆಗೆ ಖುದ್ದು ಅಲ್ಲಿನ ಸರ್ಕಾರವೇ ಆಹ್ವಾನ ನೀಡುವಂತೆ ಆಗುತ್ತದೆ..
ಕೋವಿಡ್ ಶಿಷ್ಟಾಚಾರದ ಅನುಸರಣೆಯ ಖಾತ್ರಿಯೊಂದಿಗೆ ಯಾತ್ರೆ ನಡೆಸಲು ಮಾರ್ಗದರ್ಶಿ ಸೂತ್ರಗಳನ್ನು ಸಿದ್ಧಪಡಿಸುವಂತೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.
ಕನ್ವಾರ್ ಯಾತ್ರೆ ಜುಲೈ 25ರಿಂದ ಆರಂಭವಾಗಲಿದೆ. ಬಿಹಾರದಲ್ಲಿ ಕೂಡ ಯಾತ್ರಿಗಳು ಸಂಚರಿಸುವುದರಿಂದ ಬಿಹಾರ್ನೊಂದಿಗೆ ಮಾತುಕತೆ ನಡೆಸುವಂತೆ ಉತ್ತರಪ್ರದೇಶದ ಅಧಿಕಾರಿಗಳಿಗೆ ಆದಿತ್ಯನಾಥ್ ಅವರು ಸೂಚಿಸಿದ್ದಾರೆ.
ಅಸಲಿ ಮತ್ತು ನಕಲಿ ಅಪ್ಲಿಕೇಶನ್ಗಳನ್ನು ಪತ್ತೆ ಹಚ್ಚುವುದು ಹೇಗೆ ?