ಪ್ಲೀಸ್ ಚಾನ್ಸ್ ಕೊಡಿ… ರೈನಾ ಮನವಿ.. ಓದಿ ಕ್ರೀಡಾ ಸುದ್ದಿ
01. ಐಪಿಎಲ್ ಮೆಗಾ ಹರಾಜಿನಲ್ಲಿ ಅನ್ ಸೋಲ್ಡ್ ಆದ ಟೀಂ ಇಂಡಿಯಾದ ಮಾಜಿ ಕ್ರಿಕೆಟರ್ ಸುರೇಶ್ ರೈನಾ, ಬಿಸಿಸಿಐಗೆ ವಿಶೇಷವಾದ ಮನವಿವೊಂದನ್ನು ಮಾಡಿಕೊಂಡಿದ್ದಾರೆ. ಐಪಿಎಲ್ ನಲ್ಲಿ ಆಡಲು ಅವಕಾಶ ಸಿಗದ ಭಾರತದ ಆಟಗಾರರಿಗೆ ಇತರೆ ದೇಶಗಳಲ್ಲಿ ನಡೆಯುವ ಲೀಗ್ ನಲ್ಲಿ ಆಡಲು ಅವಕಾಶ ಕೊಡಿ ಎಂದು ರೈನಾ ಮನವಿ ಮಾಡಿಕೊಂಡಿದ್ದಾರೆ.
Suresh raina | ಬೇರೆ ಲೀಗ್ ಗಳಲ್ಲಿ ಆಡಲು ಚಾನ್ಸ್ ಕೊಡಿ ಪ್ಲೀಸ್..
02. ನೀನು ಪ್ರಪಂಚಕ್ಕೆ ಕಿಂಗ್ ಕೊಹ್ಲಿ ಆಗಿರಬಹುದು, ಆದ್ರೆ ನನಗೆ ಮಾತ್ರ ನೀನು ಎಂದಿಗೂ ಛೀಕೂ..! ನಿನ್ನಲಿರುವ ಛಲ, ಗೆಲ್ಲಬೇಕೆನ್ನುವ ಹಠ ಎಂದಿಗೂ ಬಿಡಬೇಡ ಎಂದು ವಿರಾಟ್ ಕೊಹ್ಲಿಗೆ ಟೀಂ ಇಂಡಿಯಾದ ಮಾಜಿ ಕ್ರಿಕೆಟರ್ ಯುವರಾಜ್ ಸಿಂಗ್ ಭಾವುಕ ಪತ್ರ ಬರೆದಿದ್ದಾರೆ. ಅಲ್ಲದೇ ವಿರಾಟ್ ಗಾಗಿ ಗೋಲ್ಡನ್ ಬೂಟ್ ಅನ್ನು ಗಿಫ್ಟ್ ಕಳುಹಿಸಿದ್ದಾರೆ. ಎಂದಿನಂತೆ ಕೊಹ್ಲಿ ದೇಶವನ್ನು ಇನ್ನಷ್ಟು ಹೆಮ್ಮೆ ಪಡುವಂತೆ ಮಾಡಬೇಕು ಎಂದು ಯುವಿ ಆಶಿಸಿದ್ದಾರೆ.
Virat ನೀನೊಬ್ಬ ಲೆಜೆಂಡರಿ ನಾಯಕ : ಯುವಿ ಭಾವುಕ
03. ಶ್ರೀಲಂಕಾ ವಿರುದ್ಧದ ಟಿ 20 ಸರಣಿಗೆ ಸಿದ್ಧತೆ ನಡೆಸುತ್ತಿರುವ ಟೀಂ ಇಂಡಿಯಾಗೆ ಆಘಾತ ಎದುರಾಗಿದೆ. ಟೀಂ ಇಂಡಿಯಾದ ನಯಾ ಸೆನ್ ಸೇಷನ್ ದೀಪಕ್ ಚಹಾರ್ ಗಾಯದ ಸಮಸ್ಯೆಯಿಂದಾಗಿ ಸರಣಿಯಿಂದ ಹೊರ ನಡೆದಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಕೊನೆಯ ಟಿ20 ಪಂದ್ಯದ ವೇಳೆ ಚಹಾರ್ ಗಾಯಗೊಂಡಿದ್ದರು .
INDvsSL | ಟೀಂ ಇಂಡಿಯಾಗೆ ಆಘಾತ.. ಚಹಾರ್ ಔಟ್
04. ಟೀಂ ಇಂಡಿಯಾ ಮಿಸ್ಟರ್ 360 ಖ್ಯಾತಿಯ ಸೂರ್ಯಕುಮಾರ್ ಯಾದವ್ ಕೂಡ ಗಾಯದಿಂದ ಲಂಕಾ ಟಿ 20 ಸರಣಿಯಿಂದ ದೂರ ಉಳಿದಿದ್ದಾರೆ. ಸೂರ್ಯ ಕುಮಾರ್ ಯಾದವ್ ಕೈಗೆ ಗಾಯವಾಗಿದ್ದು, ಅವರು ಸರಣಿಯಲ್ಲಿ ಆಡುವುದಿಲ್ಲ ಎಂದು ಬಿಸಿಸಿಐ ಅಧಿಕಾರಿಗಳು ತಿಳಿಸಿದ್ದಾರೆ. ವಿಂಡೀಸ್ ವಿರುದ್ಧದ ಮೂರನೇ ಟಿ 20 ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಸೂರ್ಯಕುಮಾರ್ ಕೈಗೆ ಗಾಯವಾಗಿತ್ತು.
Surya kumar yadav | ಲಂಕಾ ಸರಣಿಯಿಂದ ಹೊರ ನಡೆದ ಟೀಂ ಇಂಡಿಯಾದ Mr. 360
05. ಮುಂದಿನ ಏಕದಿನ ವಿಶ್ವಕಪ್ ಗೆ ತಯಾರಿ ನಡೆಸುತ್ತಿರುವ ಟೀಂ ಇಂಡಿಯಾಗೆ ಶೀಘ್ರದಲ್ಲಿಯೇ ಹೊಸ ಬೌಲಿಂಗ್ ಬರುವ ಸಾಧ್ಯತೆಗಳಿವೆ. ಟೀಂ ಇಂಡಿಯಾ ಮಾಜಿ ವೇಗದ ಬೌಲರ್ ಅಜಿತ್ ಅಗರ್ಕರ್ ಭಾರತ ಕ್ರಿಕೆಟ್ ತಂಡ ಮುಂದಿನ ಬೌಲಿಂಗ್ ಆಗುವ ಸಾಧ್ಯತೆಗಳಿವೆ. ಟೀಂ ಇಂಡಿಯಾ ಬೌಲಿಂಗ್ ಹುದ್ದೆಗೆ ಅಜಿತ್ ಅವರ ಹೆಸರನ್ನ ಟೀಂ ಇಂಡಿಯಾದ ಸದಸ್ಯರೊಬ್ಬರು ಬಿಸಿಸಿಐಗೆ ಪ್ರತಿಪಾದಿಸಿದ್ದಾರಂತೆ.
Ajit agarkar | ಟೀಂ ಇಂಡಿಯಾಗೆ ಅಗರ್ಕರ್ ಬೌಲಿಂಗ್ ಕೋಚ್
Virat kohli yuvaraj singh suresh raina Cricket