ಕೊರೋನಾ ವೈರಸ್ ಸೋಂಕು ಹರಡುವುದನ್ನು ನಿಯಂತ್ರಿಸಲು ದೇಶವನ್ನು 21ದಿನ ಲಾಕ್ ಡೌನ್ ಮಾಡುವುದಾಗಿ ಪ್ರಧಾನಿ ಘೋಷಿಸಿದ್ದು, ಮಂಗಳವಾರ ಮಧ್ಯ ರಾತ್ರಿ ಯಿಂದಲೇ ಈ ನಿರ್ಧಾರ ಜಾರಿಗೆ ಬಂದಿದೆ. ಕೊರೋನಾ ಸೋಂಕು ನಿಯಂತ್ರಿಸಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಅನಿವಾರ್ಯತೆ ಇರುವುದರಿಂದ ಮಂಗಳೂರು ಜಿಲ್ಲೆಯಾದ್ಯಂತ ಕರ್ಫ್ಯೂ ಮಾದರಿಯ ಕಠಿಣ ನಿರ್ಬಂಧಗಳು ಜಾರಿಯಲ್ಲಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಸಾರ್ವಜನಿಕರಿಗೆ ಅಗತ್ಯ ಸೇವೆ ಒದಗಿಸುವ ನಿಟ್ಟಿನಿಂದ ತಮ್ಮ ಕಚೇರಿಯಲ್ಲಿ ವಾರ್ ರೂಂ ಆರಂಭಿಸಿದ್ದಾರೆ. ಸಾರ್ವಜನಿಕರು ಮಾಹಿತಿ, ವೈದ್ಯಕೀಯ ಸೇವೆ, ಆಹಾರ ವ್ಯವಸ್ಥೆ, ಸರಕಾರಿ ಸೇವೆಗಳಿಗೆ ಈ ವಾರ್ ರೂಂನ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸ ಬಹುದಾಗಿದೆ.
ವೈದ್ಯಕೀಯ/ಆ್ಯಂಬುಲೆನ್ಸ್ : 0824-2448888
ಗುರುಚರಣ್ – 94498 47134
ಮಾಹಿತಿ/ಸರಕಾರಿ ಸೇವೆ:
ಸುಧಾಕರ್ (ಸಂಸದರ ಕಾರ್ಯಾಲಯ ಕಾರ್ಯದರ್ಶಿ) – 94834 96726
ಮಂಗಳೂರು ಮಹಾನಗರ ಪಾಲಿಕೆ ಸೇವೆ:
ದಿವಾಕರ್ ಪಾಂಡೇಶ್ವರ್ ( ಮೇಯರ್) – 98451 82462
ಆಹಾರ ಸೇವೆ:
ಕದ್ರಿ ಮನೋಹರ ಶೆಟ್ಟಿ (ಕಾರ್ಪೊರೇಟರ್) : 0824-2448888
ಜಿಲ್ಲಾ ಸಂಚಾಲಕರು :
ನಿತಿನ್ ಕುಮಾರ್- 94484 67540
ಸುಧೀರ್ ಶೆಟ್ಟಿ (ಕಾರ್ಪೊರೇಟರ್)- 98440 22213
ಜಿಲ್ಲಾಧಿಕಾರಿ ಕಚೇರಿ ಕಂಟ್ರೋಲ್ ರೂಂ: 1077









