ಜೈಲಿಗೂ ಹಾಕಲಿ ನಾವು ಹೆದರಲ್ಲ : ಡಿ.ಕೆ.ಶಿವಕುಮಾರ್
ಬೆಂಗಳೂರು : ಸೌಮ್ಯ ರೆಡ್ಡಿ ಮೇಲೆ ಕೇಸ್ ಹಾಕಿದ್ದಾರೆ. ಜೈಲಿಗೂ ಹಾಕಲಿ ಇದಕ್ಕೆ ನಾವು ಹೆದರಲ್ಲ ಶಾಸಕಿ ಸೌಮ್ಯ ರೆಡ್ಡಿ ಮೇಲೆ ಎಫ್ ಐ ಆರ್ ವಿಚಾರ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಪ್ರತಿಕ್ರಿಯೆ ನೀಡಿದ್ದಾರೆ.
ಸದಾಶಿವ ನಗರ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸೌಮ್ಯ ರೆಡ್ಡಿ ಅವರನ್ನು ನಾನು ನೋಡುತ್ತಿದ್ದೆ. ಅವರನ್ನು ಪೆÇಲೀಸರು ಎಳೆದಾಡಿದ್ರು, ಅದನ್ನ ನೀವು ಯಾರು ನೋಡಲಿಲ್ಲ.
ಸೌಮ್ಯ ಸ್ವಯಂ ರಕ್ಷಣೆಗೋಸ್ಕರ ಹಾಗೆ ಮಾಡಿದ್ರು. ಕಬ್ಬಾಳದ ಹುಡುಗನಿಗೆ ಪೊಲೀಸ್ ಹೊಡೆದ್ರು. ಆರ್ ಆರ್ ನಗರದಲ್ಲಿ ಯಾಕೆ ಸಿದ್ದರಾಮಯ್ಯ ಮೇಲೆ ಕೇಸ್ ಹಾಕಲಿಲ್ಲ.
ಸೌಮ್ಯ ರೆಡ್ಡಿ ಪರವಾಗಿ ನಾನು ನಿಲ್ಲುತ್ತೇವೆ. ಸೌಮ್ಯ ಅವರು ಹೇಗೆ ಕೆಳಗೆ ಬಿದ್ರು ಅಂತ ನಾನು ನೋಡಿದ್ದೇನೆ. ಪೊಲೀಸ್ ತಮ್ಮ ಗೌರವ ಕಳೆದುಕೊಳ್ಳುತ್ತಿದ್ದಾರೆ.
ಪೊಲೀಸ್ ಕೃತ್ಯಕ್ಕೆ ಸರ್ಕಾರದ ಸಪೋರ್ಟ್ ಇದೆ. ಸೌಮ್ಯ ರೆಡ್ಡಿ ಮೇಲೆ ಕೇಸ್ ಹಾಕಿದ್ದಾರೆ. ಜೈಲಿಗೂ ಹಾಕಲಿ ಇದಕ್ಕೆ ನಾವು ಹೆದರಲ್ಲ. ನಾವು ಯಾವುದೇ ತಪ್ಪು ಮಾಡಿಲ್ಲ.
ಬೇರೆ ಬೇರೆ ಕಡೆ ಇವರ ಪಾರ್ಟಿ ಅವರು ಮಾಡಿದ ಘಟನೆಗಳ ಬಗ್ಗೆ ಕೇಸ್ ಹಾಕಿದ್ದಾರಾ. ಇಂತಹ ರಾಜಕಾರಣವನ್ನು ನಾವು ಸಹಿಸಲ್ಲ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಇದೇ ವೇಳೆ ವಿಧಾನ ಪರಿಷತ್ ಉಪ ಸಭಾಪತಿ ಸ್ಥಾನಕ್ಕೆ ಅಭ್ಯರ್ಥಿ ಕಣಕ್ಕಿಳಿಸುವ ಬಗ್ಗೆ ಪಕ್ಷದ ಮುಖಂಡರು ಸಭೆ ಸೇರಿ ತೀರ್ಮಾನ ಮಾಡುತ್ತೇವೆ ಎಂಬುದಾಗಿ ಡಿಕೆಶಿವಕುಮಾರ್ ತಿಳಿಸಿದ್ರು.
ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸುತ್ತಿದ್ದೇವೆ. ಉಪಸಭಾಪತಿ ಗಳಾಗಿದ್ದ ಧರ್ಮೇಗೌಡ ಅವರು ಹಾಗೆ ಮಾಡಬಾರದಿತ್ತು.
ಆ ಸ್ಥಾನಕ್ಕೆ ನಮ್ಮ ಪಕ್ಷದ ಮುಖಂಡರು ತೀರ್ಮಾನ ಮಾಡುತ್ತೇವೆ. ಉಪಸಭಾಪತಿ ಸ್ಥಾನಕ್ಕೆ ಗೌರವ ಕೊಡುವ ರೀತಿಯಲ್ಲಿ ತೀರ್ಮಾನ ಮಾಡುತ್ತೇವೆ ಎಂದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel