Sunday, May 28, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Saaksha Special Life Style

Weight Loss Tips : ಇಳಿಸಲು ಜೇನುತುಪ್ಪ , ಬೆಳ್ಳುಳ್ಳು ಟಾನಿಕ್ ಸೂಪರ್ ಹೋಮ್ ರೆಮಿಡಿ

Weight Loss Tips : ಇಳಿಸಲು ಜೇನುತುಪ್ಪ , ಬೆಳ್ಳುಳ್ಳು ಟಾನಿಕ್ ಸೂಪರ್ ಹೋಮ್ ರೆಮಿಡಿ

Namratha Rao by Namratha Rao
August 12, 2022
in Life Style, Newsbeat, ಜೀವನಶೈಲಿ
weight loss tips
Share on FacebookShare on TwitterShare on WhatsappShare on Telegram

ಬೆಳ್ಳುಳ್ಳಿಯು ಹಲವಾರು ರೀತಿಯ ಔಷಧೀಯ ಗುಣಗಳನ್ನು ಹೊಂದಿದ್ದು ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಭಾರತೀಯ ಅಡಿಗೆಮನೆಗಳಲ್ಲಿ ಹೆಚ್ಚಾಗಿ ಬಳಸುವ ಈ ಬೆಳ್ಳುಳ್ಳಿಯಲ್ಲಿ ಹಲವಾರು ಆರೋಗ್ಯದ ರಹಸ್ಯಗಳು ಅಡಗಿವೆ. ಇದರ ನಿಯಮಿತ ಸೇವನೆಯು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರಿಂದ ಪ್ರಸ್ತುತ ಕೊರೋನಾ ಸಾಂಕ್ರಾಮಿಕದ ಕಾಲದಲ್ಲಿ ಸೋಂಕಿನಿಂದ ದೂರವಿರಲು ಸಹಕಾರಿಯಾಗಿದೆ. ಇದು ನಿಮ್ಮ ರಕ್ತನಾಳಗಳನ್ನು ಸಡಿಲಗೊಳಿಸುತ್ತದೆ ಮತ್ತು ನಿಮ್ಮ ಅಪಧಮನಿಗಳ ಮೂಲಕ ರಕ್ತದ ಸುಗಮ ಹರಿವಿಗೆ ನೆರವಾಗುತ್ತದೆ. ಇದು ನಿಮ್ಮ ಹೃದ್ರೋಗದ ಅಪಾಯ ಕಡಿಮೆ ಮಾಡುತ್ತದೆ. ಉರಿಯೂತದ ವಿರುದ್ಧ ಹೋರಾಡಲು ಸಹ ಇದು ಸಹಾಯ ಮಾಡುತ್ತದೆ.

ಬೆಳ್ಳುಳ್ಳಿಯಲ್ಲಿರುವ ಪ್ಲೇವೊನೋಯ್ಡ್ಸ್ ಡಿಎನ್ಎಗೆ ಹಾನಿಯಾಗದಂತೆ ಕಾಪಾಡುವ ‌ಕಾರಣ ಇದು ಕ್ಯಾನ್ಸರ್‌ ಕಣಗಳು ಉಂಟಾಗುವುದನ್ನು ತಡೆಯಲು ನೆರವಾಗುತ್ತದೆ. ಬೆಳ್ಳುಳ್ಳಿಯಲ್ಲಿ ಆ್ಯಂಟಿಆಕ್ಸಿಡೆಂಡ್ ಅಂಶ ಹೆಚ್ಚಾಗಿರುವ ಕಾರಣ ಮಾನಸಿಕ ಒತ್ತಡ ಕಡಿಮೆ ಮಾಡಲು ಪ್ರಯೋಜನಕಾರಿಯಾಗಿದೆ
ಅಷ್ಟೇ ಅಲ್ಲ ಬೆಳ್ಳುಳ್ಳಿ ಪರಿಣಾಮಕಾರಿಯಾಗಿ ತೂಕವನ್ನು ಕಡಿಮೆ ಮಾಡುವ ಗುಣಗಳನ್ನು ಸಹ ಹೊಂದಿದೆ. ‌
ಇದು ಬಿ 6 ಮತ್ತು ಸಿ, ಫೈಬರ್, ಮ್ಯಾಂಗನೀಸ್, ಕ್ಯಾಲ್ಸಿಯಂನಂತಹ ಅನೇಕ ಜೀವಸತ್ವಗಳಿಂದ ತುಂಬಿದೆ. ಇದು ಯಾವುದೇ ಸಮಯದಲ್ಲೂ ಹೆಚ್ಚುವರಿ ಕೊಬ್ಬನ್ನು, ವಿಶೇಷವಾಗಿ ಹೊಟ್ಟೆಯ ಕೊಬ್ಬನ್ನು ತೊಡೆದುಹಾಕಲು ಸಹಾಯ ಮಾಡುವ ಸೂಪರ್ ಆಹಾರವಾಗಿದೆ. ಬೆಳ್ಳುಳ್ಳಿ ಸಹಾಯದಿಂದ ವ್ಯಾಯಾಮ ಮತ್ತು ಆಹಾರದ ನಿರ್ಬಂಧಗಳಿಲ್ಲದೆ ತೂಕವನ್ನು ಕಳೆದುಕೊಳ್ಳಬಹುದು.

Related posts

ಶೇರ್ ಚಾಟ್ ಸರ್ವೇಯಲ್ಲಿ ವರುಣಾ ಕ್ಷೇತ್ರದಲ್ಲಿ ಸೋಮಣ್ಣ ಮುಂದು…

ಶೇರ್ ಚಾಟ್ ಸರ್ವೇಯಲ್ಲಿ ವರುಣಾ ಕ್ಷೇತ್ರದಲ್ಲಿ ಸೋಮಣ್ಣ ಮುಂದು…

May 1, 2023
ಹರೀಶ್ ಪೂಂಜಾ, ಪುತ್ತಿಲರ ಆ 17ರ ರಹಸ್ಯ…!!!

ಅರುಣ್ ಕುಮಾರ್ ಪುತ್ತಿಲ…

April 16, 2023

ಬೆಳ್ಳುಳ್ಳಿ ಸೇವನೆಯಿಂದ ತೂಕ ಇಳಿಸುವುದು ಹೇಗೆ

ನೀವು ತೂಕ ಇಳಿಸಲು ಪ್ರಯತ್ನಿಸುತ್ತಿದ್ದರೆ, ಅದು ಸುಲಭವಲ್ಲ ಎಂದು ನಿಮಗೆ ಈಗಾಗಲೇ ತಿಳಿದಿರುತ್ತದೆ. ಕೆಲವೊಮ್ಮೆ, ಶ್ರಮದಾಯಕ ವ್ಯಾಯಾಮದಿಂದ ಹಿಡಿದು ಆಹಾರ ಸೇವನೆಯನ್ನು ಕಡಿಮೆಗೊಳಿಸುವ ತನಕ ಎಲ್ಲವನ್ನೂ ಪ್ರಯತ್ನಿಸಿದರೂ ಸಹ, ನಿಮಗೆ ತೂಕವನ್ನು ಕಳೆದುಕೊಳ್ಳಲು ಅಸಾಧ್ಯವಾಗಬಹುದು. ಆದರೆ ನಿಮಗೆ ಕೆಲವು ಸರಳ ರಹಸ್ಯಗಳು ತಿಳಿದಿದ್ದರೆ, ಖಂಡಿತವಾಗಿಯೂ ತೂಕ ಇಳಿಸಿಕೊಳ್ಳಲು ನೀವು ಯಶಸ್ವಿಯಾಗುತ್ತೀರಿ. ಹಸಿ ಬೆಳ್ಳುಳ್ಳಿ ಸೇವನೆ ತೂಕವು‌ ಕಳೆದುಕೊಳ್ಳಲು ಅಂತಹ ಒಂದು ಉತ್ತಮ ರಹಸ್ಯವಾಗಿದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಚ್ಚಗಿನ ನೀರನ್ನು ಕುಡಿಯುವುದು, ಮುಂಜಾನೆ ನಿಂಬೆ ಮತ್ತು ಜೇನುತುಪ್ಪವನ್ನು ಸೇವಿಸುವುದು ಮತ್ತು ಇತರ ವಿಧಾನಗಳ ಬಗ್ಗೆ ನಿಮಗೆ ತಿಳಿದಿರಬಹುದು. ಆದರೆ ಇಲ್ಲಿ, ನಾವು ಬೆಳ್ಳುಳ್ಳಿಯನ್ನು ಜೇನುತುಪ್ಪದಲ್ಲಿ ಸೇರಿಸಿ ಹೇಗೆ ಪರಿಣಾಮಕಾರಿಯಾಗಿ ತೂಕವನ್ನು ಕಳೆದುಕೊಳ್ಳಬಹುದು ‌ಎಂದು ವಿವರಿಸಿದ್ದೇವೆ .

ಹಸಿ ಬೆಳ್ಳುಳ್ಳಿ ಮತ್ತು ಜೇನುತುಪ್ಪದ ಪ್ರಯೋಜನಗಳು

ನೀವು ಖಾಲಿ ಹೊಟ್ಟೆಯಲ್ಲಿ ಎರಡು ಹಸಿ ಬೆಳ್ಳುಳ್ಳಿಯನ್ನು ಸೇವಿಸಿದರೆ, ಅದು ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ ಮತ್ತು ನಿಮ್ಮ ದೇಹವನ್ನು ನಿರ್ವಿಷಗೊಳಿಸುತ್ತದೆ. ಇದಲ್ಲದೆ, ನೀವು ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟದಲ್ಲಿ ಸುಧಾರಣೆಯನ್ನು ಸಹ ಕಾಣಬಹುದು. ಅಷ್ಟೇ ಅಲ್ಲ ನೀವು ಉತ್ತಮ ರೋಗನಿರೋಧಕ ಶಕ್ತಿಯನ್ನು ಪಡೆಯಲು ಕೂಡ ಬೆಳ್ಳುಳ್ಳಿ ನಿಮಗೆ ಸಹಕಾರಿಯಾಗಿದೆ. ಇದು ಶೀತ ಮತ್ತು ಜ್ವರವನ್ನು ಕಡಿಮೆಗೊಳಿಸುವುದರ ಜೊತೆಗೆ ತೂಕವನ್ನು ಕಳೆದುಕೊಳ್ಳಲು ಸಹ ಸಹಾಯ ಮಾಡುತ್ತದೆ.
ಆದರೆ ಇದಕ್ಕೆ ನೀವು ಜೇನುತುಪ್ಪವನ್ನು ಸೇರಿಸಿದಾಗ, ಅದು ನಿಮ್ಮನ್ನು ಸಂಪೂರ್ಣವಾಗಿ ನಿರ್ವಿಷಗೊಳಿಸುವ ಪ್ರಬಲ ಟಾನಿಕ್ ಆಗುತ್ತದೆ. ನಿಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸುವ ಮೂಲಕ ಮತ್ತು ಚಯಾಪಚಯವನ್ನು ಹೆಚ್ಚಿಸಿ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಜೇನು ಹಸಿವನ್ನು ತಡೆಯುತ್ತದೆ ಮತ್ತು ಇದು ಕೊಬ್ಬು ಮತ್ತು ಕೊಲೆಸ್ಟ್ರಾಲ್ ಮುಕ್ತವಾಗಿದೆ. ಇದರ ಸೇವನೆ ದಿನವಿಡೀ ನಿಮ್ಮನ್ನು ಚೈತನ್ಯಗೊಳಿಸುತ್ತದೆ. ಜೊತೆಗೆ ಬೆಳ್ಳುಳ್ಳಿ ನಿಮ್ಮ ತೂಕವನ್ನು ಕಡಿಮೆ ಮಾಡಲು ಮತ್ತು ರೋಗಗಳನ್ನು ದೂರವಿರಿಸಲು ಸಹಾಯ ಮಾಡುತ್ತದೆ.

ಸುಲಭವಾಗಿ ತೂಕವನ್ನು ಕಡಿಮೆ ಮಾಡಲು ಟಾನಿಕ್ ಅನ್ನು ತಯಾರಿಸುವ ಬಗೆ :

ಗಾಜಿನ ಜಾರು ತೆಗೆದುಕೊಂಡು ಅದರಲ್ಲಿ ಅರ್ಧದಷ್ಟು ಶುದ್ಧವಾದ ಮತ್ತು ಸಾವಯವ ಜೇನುತುಪ್ಪವನ್ನು ತುಂಬಿಸಿ. ಕೆಲವು ಬೆಳ್ಳುಳ್ಳಿ ಎಸಳುಗಳನ್ನು ತೆಗೆದುಕೊಂಡು ಅದರ ಸಿಪ್ಪೆಯನ್ನು ತೆಗೆದು ಜೇನುತುಪ್ಪದ ಜಾರಿಗೆ ಸೇರಿಸಿ. ಬೆಳ್ಳುಳ್ಳಿಯನ್ನು ಸಂಪೂರ್ಣವಾಗಿ ಜೇನುತುಪ್ಪದಲ್ಲಿ ಮುಳುಗಿಸಬೇಕು. ಜೇನಿನಲ್ಲಿ ಬೆಳ್ಳುಳ್ಳಿಯ ಎಸಳುಗಳನ್ನು ಬೆರೆಸಿಟ್ಟಿರುವ ಗಾಜಿನ ಜಾರನ್ನು ಒಂದು ತಿಂಗಳವರೆಗೆ ಹಾಗೆಯೇ ಮುಚ್ಚಿಡಿ. ಇದು ಬೆಳ್ಳುಳ್ಳಿ ಮತ್ತು ಜೇನುತುಪ್ಪದ ಪೋಷಕಾಂಶಗಳನ್ನು ವಿಲೀನಗೊಳಿಸಲು ಅನುವು ಮಾಡಿಕೊಡುತ್ತದೆ.

ಇದನ್ನು ಸೇವಿಸುವ ‌ಬಗೆ ಹೇಗೆ

ಇದನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳುವುದರಿಂದ ನೀವು ಉತ್ತಮ ಪರಿಣಾಮವನ್ನು ನಿರೀಕ್ಷಿಸಬಹುದು. ಬಳಿಕ ಗಾಜಿನ ಜಾರಿನಲ್ಲಿರುವ ಬೆಳ್ಳುಳ್ಳಿಯನ್ನು ತೆಗೆದುಕೊಂಡು ಅದನ್ನು ಪುಡಿ ಮಾಡಿ ಸೇವಿಸಿ. ಇದನ್ನು ಪ್ರತಿದಿನ ಒಂದು ತಿಂಗಳವರೆಗೆ ಪ್ರಯತ್ನಿಸಿದರೆ ಗಮನಾರ್ಹ ‌ಬದಲಾವಣೆಯನ್ನು‌ ನೀವು ಗಮನಿಸಬಹುದು.

ಎಚ್ಚರಿಕೆ :

ಇದು ಯಾರಾದರೂ ಬಳಸಬಹುದಾದ ಆರೋಗ್ಯಕರ ಟಾನಿಕ್ ಆಗಿದೆ. ಆದರೆ ನೀವು ಆಸ್ತಮಾದಿಂದ ಬಳಲುತ್ತಿದ್ದರೆ, ಇದನ್ನು ಪ್ರಯತ್ನಿಸುವ ಮೊದಲು ವೈದ್ಯರನ್ನು ಸಂಪರ್ಕಿಸಿ. ಆಸ್ತಮಾದಿಂದ ಬಳಲುತ್ತಿರುವವರಿಗೆ ಬೆಳ್ಳುಳ್ಳಿ ಒಳ್ಳೆಯದಲ್ಲ. ಅಷ್ಟೇ ಅಲ್ಲ ಇದನ್ನು ಅತಿಯಾಗಿ ಬಳಸದಂತೆ ಕೂಡ ಎಚ್ಚರಿಕೆ ವಹಿಸಿ. ದಿನಕ್ಕೆ ಕೇವಲ 2-3 ಎಸಳುಗಳನ್ನು ಬಳಸಿಕೊಂಡು ಈ ಟಾನಿಕ್ ಅನ್ನು ಸೇವಿಸಿ

Tags: #saakshatvGarlicHealth tipsHoneyweight loss tips
ShareTweetSendShare
Join us on:

Related Posts

ಶೇರ್ ಚಾಟ್ ಸರ್ವೇಯಲ್ಲಿ ವರುಣಾ ಕ್ಷೇತ್ರದಲ್ಲಿ ಸೋಮಣ್ಣ ಮುಂದು…

ಶೇರ್ ಚಾಟ್ ಸರ್ವೇಯಲ್ಲಿ ವರುಣಾ ಕ್ಷೇತ್ರದಲ್ಲಿ ಸೋಮಣ್ಣ ಮುಂದು…

by admin
May 1, 2023
0

ಶೇರ್ ಚಾಟ್ ಸರ್ವೇಯಲ್ಲಿ ವರುಣಾ ಕ್ಷೇತ್ರದಲ್ಲಿ ಸೋಮಣ್ಣ ಮುಂದು ರಾಜ್ಯದಲ್ಲಿ ರಾಜಕೀಯ ಕಾವು ರಂಗೇರಿದೆ. ಎಲ್ಲ ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳು ಗೆಲುವಿಗಾಗಿ ತಂತ್ರ- ಪ್ರತಿ ತಂತ್ರ ಹೆಣೆಯುತ್ತಿದ್ದಾರೆ. ಮತದಾರರನ್ನು...

ಹರೀಶ್ ಪೂಂಜಾ, ಪುತ್ತಿಲರ ಆ 17ರ ರಹಸ್ಯ…!!!

ಅರುಣ್ ಕುಮಾರ್ ಪುತ್ತಿಲ…

by admin
April 16, 2023
0

ಮೊನ್ನೆ ಮೊನ್ನೆ ಬಿಜೆಪಿಗೆ ಬಂದವರಿಗೂ ಸ್ಥಾನಮಾನ ಸಿಕ್ಕಿದೆ. ಜೆಡಿಎಸ್ ನಾ ಜಿಲ್ಲಾಧ್ಯಕ್ಷನಾಗಿದ್ದ ಭರತ್ ಶೆಟ್ಟಿಯು ಶಾಸಕರಾದ್ರು, ಇಂತಹ ಉದಾಹರಣೆ ಎಷ್ಟೋ ಸಿಗುತ್ತೆ! ಗೋಕಾಕ್ ನಾ ಸಿಡಿ ಕಿಂಗ್...

ಪುತ್ತೂರಿನಲ್ಲಿ ಪಕ್ಷೇತರರಾಗಿ ಕಣಕ್ಕಿಳಿಯಲಿರುವ ಹಿಂದೂ ಸಂಘಟನೆ ಮುಖಂಡ!

ಪುತ್ತಿಲ ಪರ ಪುತ್ತೂರಿನಲ್ಲಿ ಫೀಲ್ಡ್ ಗೆ ಇಳಿಯೋದು ಬಿಜೆಪಿಯಲ್ಲಿರೋ ಅಸಲಿ ಹಿಂದೂಗಳು..!

by admin
April 16, 2023
0

ಯಾರು ಊಹೆ ಮಾಡಿರಲ್ಲ, ಅರುಣ್ ಕುಮಾರ್ ಪುತ್ತಿಲ ಪಕ್ಷೇತರ ಅಭ್ಯರ್ಥಿಯಾಗಿ ರಣ ಕಣಕ್ಕೆ ದುಮುಕ್ಕುತ್ತಾರೆ ಎಂದು, ಆದ್ರೆ, ಹಿಂದೂ ಕಾರ್ಯಕರ್ತರ ಪರವಾಗಿ ಪುತ್ತಿಲರಿಗೂ ಇದು ಅನಿವಾರ್ಯ... ಈಗಾಗಲೇ,...

ಹರೀಶ್ ಪೂಂಜಾ, ಪುತ್ತಿಲರ ಆ 17ರ ರಹಸ್ಯ…!!!

ಹರೀಶ್ ಪೂಂಜಾ, ಪುತ್ತಿಲರ ಆ 17ರ ರಹಸ್ಯ…!!!

by admin
April 16, 2023
0

ಪುತ್ತಿಲರನ್ನು ಕೂರಿಸಿ ಮನವೊಲಿಸುವ RSS ನ ಹಿರಿಯರು, ಬಿಜೆಪಿ ರಾಜ್ಯಾಧ್ಯಕ್ಷರಿಗೆ ಬುದ್ಧಿ ಹೇಳುವಷ್ಟು ಶಕ್ತಿ ಇಲ್ಲದಾಯ್ತಾ...? ತುಂಬಾ ಬಿಜೆಪಿ ಕಾರ್ಯಕರ್ತರಿಗೆ ಹರೀಶ್ ಪೂಂಜಾರಂತಹ ನಾಯಕ ಬೇಕು ಅನ್ನುವ...

ಈ 5 ರಾಶಿಯವರಿಗೆ ರಾಜಯೋಗ. ನೀವು ಸ್ಪರ್ಶಿಸುವುದೆಲ್ಲವೂ ಚಿನ್ನದಂತಹ ಜೀವನ,

ಈ 5 ರಾಶಿಯವರಿಗೆ ರಾಜಯೋಗ. ನೀವು ಸ್ಪರ್ಶಿಸುವುದೆಲ್ಲವೂ ಚಿನ್ನದಂತಹ ಜೀವನ,

by admin
April 14, 2023
0

ಈ 5 ರಾಶಿಯವರಿಗೆ ರಾಜಯೋಗ. ನೀವು ಸ್ಪರ್ಶಿಸುವುದೆಲ್ಲವೂ ಚಿನ್ನದಂತಹ ಜೀವನ, ನೀವು ಯೋಚಿಸುವ ಎಲ್ಲವೂ ಸಂಭವಿಸಲಿದೆ. 60 ವರ್ಷಗಳ ಚಕ್ರ ಪಟ್ಟಿಯಲ್ಲಿ ಶೋಭಾಕೃತು ವರ್ಷವು 37 ನೇ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • Samsung Galaxy F04 : ಆಕರ್ಷಕ ಫೀಚರ್ಸ್ , ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಲಭ್ಯ

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

Singapore Open Badminton  – ಫೈನಲ್ ಗೆ ಲಗ್ಗೆ ಇಟ್ಟ ಪಿ ವಿ ಸಿಂಧು…

Malaysia Masters: ಸಿಂಧು, ಪ್ರಣಯ್ ಸೆಮಿಫೈನಲ್ ಗೆ ಶ್ರೀಕಾಂತ್ ಗೆ ಸೋಲು

May 28, 2023
IND vs AUS WTC final

WTC Final ವಿಶ್ವ ಟೆಸ್ಟ್: ವಿಜೇತ ತಂಡಕ್ಕೆ ಸಿಗುವ ಬಹುಮಾನದ ಮೊತ್ತ ಎಷ್ಟು ಗೊತ್ತಾ?

May 28, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram