Yadgir | ಆಸ್ತಿಯ ವಿಚಾರಕ್ಕೆ ಅಣ್ಣನ ಕೊಲೆ
ಯಾದಗಿರಿ : ಆಸ್ತಿಯ ವಿಚಾರಕ್ಕೆ ಒಡಹುಟ್ಟಿದ ಅಣ್ಣನನ್ನೇ ಇಬ್ಬರು ತಮ್ಮಂದಿರು ಕೊಲೆ ಮಾಡಿರುವ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ರಂಗಂಪೇಟೆಯಲ್ಲಿ ನಡೆದಿದೆ.
35 ವರ್ಷದ ಪಂಪಣ್ಣ ಪತ್ತಾರ್ ಕೊಲೆಯಾದ ದುರ್ದೈವಿಯಾಗಿದ್ದಾರೆ.
ಪಂಪಣ್ಣ ಬಂಗಾರದ ಅಂಗಡಿ ಇಟ್ಟುಕೊಂಡಿದ್ದದ್ದು, ದುಡ್ಡು ಮತ್ತು ಆಸ್ತಿಯ ವಿಚಾರವಾಗಿ ಸಹೋದರರ ಮಧ್ಯೆ ಜಗಳವಾಗಿದೆ.
ಈ ಗಲಾಟೆ ವಿಕೋಪಕ್ಕೆ ತಿರುಗಿ ಪಂಪಣ್ಣ ಅವರ ಕೊಲೆಯಲ್ಲಿ ಅಂತ್ಯವಾಗಿದೆ.
ತಮ್ಮಂದಿರಾದ ಗಂಗೂ ಪತ್ತಾರ್, ಕಾಳಪ್ಪ ಪತ್ತಾರ್ ಕೊಲೆ ಆರೋಪಿಗಳಾಗಿದ್ದಾರೆ.
ಇನ್ನು ವಿಷಯ ತಿಳಿದು ಸ್ಥಳಕ್ಕೆ ಸುರಪುರ ಸಿಪಿಐ ಸುನೀಲ್ ಮೂಲಿಮನಿ ಭೇಟಿ ನೀಡಿದ್ದಾರೆ.
ಈ ಸಂಬಂಧ ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.