ಸುಮ್ ಸುಮ್ಮನೆ ಖುಷಿ ಪಡಿಸುವ ರಾಜಕಾರಣಿ ನಾನಲ್ಲ : ಯತ್ನಾಳ್
ರಾಣೆಬೆನ್ನೂರು : ಸುಮ್ಮ ಸುಮ್ಮನೆ ಖುಷಿ ಪಡಿಸುವ ರಾಜಕಾರಣಿ ನಾನಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದ್ದಾರೆ.
ಬೆಳಗಾವಿಯಲ್ಲಿ ಅಮಿತ್ ಶಾ ಕಾರ್ಯಕ್ರಮದ ವಿಚಾರವಾಗಿ ನಗರದಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಆಹ್ವಾನ ಇಲ್ಲದೆ ಯಾವುದೇ ಕಾರ್ಯಕ್ರಮಕ್ಕೆ ಹೋಗುವಂತಹ ವ್ಯಕ್ತಿ ನಾನಲ್ಲ.
ಎಲ್ಲಾದರೂ ಹೋಗಬೇಕಾದರೆ ಅದಕ್ಕೊಂದು ವ್ಯವಸ್ಥೆ ಇರುತ್ತದೆ. ಕೆಲವರ ತರಹ ಸುಮ್ಮ ಸುಮ್ಮನೆ ಖುಷಿ ಪಡಿಸುವ ರಾಜಕಾರಣಿ ನಾನಲ್ಲ ಎಂದು ಹೇಳಿದರು.
ಇದೇ ವೇಳೆ ಪಕ್ಷದ ವಿರುದ್ಧ ಮಾತನಾಡಿದ ಅವರ ವಿರುದ್ಧ ಶಿಸ್ತು ತೆಗೆದುಕೊಳ್ಳುವ ವಿಚಾರವಾಗಿ ಪ್ರತಿಕ್ರಿಯಿಸಿ, ಪಕ್ಷದ ವಿರುದ್ದ ಯಾರು ಹೇಳಿಕೆ ಕೊಟ್ಟಿದ್ದಾರೆ ಅದನ್ನು ಬಹಿರಂಗ ಪಡಿಸಬೇಕಾಗಿದೆ.
ಕೆಲವರ ಮೇಲೆ ಶಿಸ್ತು ಕ್ರಮ ಕೈಗೊಳ್ಳುತ್ತಾರೆ ಎಂಬ ಮಾತುಗಳು ಕೇಳಿ ಬಂದಿವೆ. ಆದರೆ, ನಾನು ಮಾತ್ರ ಅಭಿವೃದ್ದಿ ಪರ ಹೇಳಿಕೆ ನೀಡುವೆ.
ಸಿಎಂ ಯಡಿಯೂರಪ್ಪ ಹತ್ತಿರ ಅಭಿವೃದ್ಧಿಗೆ ಅನುದಾನ ಕೊಡಿ ಅಂತಾ ಕೇಳೊದು ತಪ್ಪಾ.. ಎಂದು ಯತ್ನಾಳ್ ಪ್ರಶ್ನಿಸಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel