ಛತ್ರಪತಿ ಶಿವಾಜಿ ಮಹಾರಾಜದ ಬಾಲ್ಯದ ಘಟನೆಯನ್ನು ಟಿಪ್ಪು ಘಟನೆಯನ್ನಾಗಿ ಕತೆ ಕಟ್ಟಿ ಶಾಸಕ ವಿಜಯಾನಂದ ಕಾಶಪ್ಪನವರ ವಿವಾದಕ್ಕೆ ಈಡಾಗಿದ್ದಾರೆ.
ಶನಿವಾರ ರಾತ್ರಿ ಹುನಗುಂದ ಪಟ್ಟಣದಲ್ಲಿ ಪ್ರವಾದಿ ಮೊಹಮ್ಮದರ ಜನ್ಮೋತ್ಸವ ಕಾರ್ಯಕ್ರಮ ನಡೆದ ಸಂದರ್ಭದಲ್ಲಿ ಟಿಪ್ಪು ಶೂರ-ಧೀರ ಎಂದು ಹೇಳಿದ್ದರು. ಟಿಪ್ಪು ಸುಲ್ತಾನರು ರಣರಂಗದಲ್ಲಿ ಯುದ್ಧ ಮಾಡುವಾಗ ಒಂದು ಸಲ ಭಯ ಆಗುತ್ತೆ. ಆಗ ಯುದ್ಧ ನಿಲ್ಲಿಸಿದ ಟಿಪ್ಪು, ತನ್ನ ತಾಯಿಯ ಬಳಿ ಹೋಗುತ್ತಾನೆ.
ಯುದ್ಧ ಮಾಡುವಾಗ ಯಾವತ್ತು ನನಗೆ ಭಯ ಆಗಿರಲಿಲ್ಲ.ಇವತ್ರು ಅಚಾನಕ್ ಆಗಿ ಭಯ ಆಯ್ತು ಯಾಕೆ? ಆಂತಾನೆ. ಆಗ ಟಿಪ್ಪು ತಾಯಿ, ನೀನು ಹೇಳಿದ್ದು ಸತ್ಯ. ನೀನು ಇನ್ನು ಮಗು ಆಗಿದ್ದಾಗ, ಒಂದು ಸಲ ನಾನು ಸ್ನಾನಕ್ಕೆ ಹೋದಾಗ. ನೀನು ಅಳುತ್ತಿದ್ದೆ. ಆಗ ಕೆಲಸದಾಕಿ ನಿನಗೆ ತನ್ನ ಎದೆಹಾಲು ಕುಡಿಸಿದ್ದಳು. ಆಗ ನಾನು ಬಂದು ನಿನ್ಮ ತಲೆ ಕೆಳಗೆ ಮಾಡಿ ಹಾಲು ಕಕ್ಕಿಸಿದ್ದೆ. ಆದರೂ ಸ್ವಲ್ಪ ಹಾಲಿನ ಅಂಶ ಉಳಿದಿರಬೇಕು. ಅದಕ್ಕೆ ನಿನಗೆ ಭಯ ಬಂದಿದೆ.
ನೀನು ಅಂಜಬೇಡ ಹೋಗು ಯುದ್ಧ ಮಾಡು ಅಂತ ತಾಯಿ ಕಳಿಸುತ್ತಾಳೆ ಎಂದು ಹೇಳಿದ್ದರು. ಅದಕ್ಕೆ ಅಲ್ಲಿದ್ದವರು ಅಲ್ಲಾಹೋ ಅಕ್ಬರ್ ಎಂದು ಘೋಷಣೆ ಕೂಗಿ ಸಂಭ್ರಮಿಸಿದ್ದರು. ಆದರೆ, ಇದು ಶಿವಾಜಿ ಮಹಾರಾಜರ ಕತೆಯಾಗಿದ್ದು, ಜನರು ಈಗ ಕಾಶಪ್ಪನವರ ವಿರುದ್ಧ ಮುಗಿಬಿದ್ದಿದ್ದಾರೆ.
ಆ ಸಂದರ್ಭದಲ್ಲಿ ಟಿಪ್ಪುವಿನತಹ ತಾಯಿಯ ಮೇಲೆ ನೀನು ಏನೋ ಮಾತಾಡ್ತಿಯಲ್ಲೋ ಮಿಸ್ಟರ್ ಯತ್ನಾಳ್ ಎಂದು ಕಾಶಪ್ಪನವರ ಗುಡುಗಿದ್ದರು. ಅಲ್ಲದೇ, ಯತ್ನಾಳ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಇಂತಹ ಉದ್ದಟತನದ ನಿನ್ನ ಮಾತು ಇನ್ನು ಎಷ್ಟು ದಿನ ನಡೆಯುತ್ತೆ. ಈಗಾಗಲೇ ನೀನು ನಡುಗುತ್ತಿದ್ದೆ. ಆದರೂ ಬಾಯಿಗೆ ಬಂದಂಗ ಮಾತಾಡ್ತಾನೆ. ಇದು ಬಿಜೆಪಿಯವರ ಸಂಸ್ಕೃತಿ, ಸಂಸ್ಕಾರ ಎಂದು ಕಾಶಪ್ಪನವರ ವ್ಯಂಗ್ಯವಾಡಿದ್ದರು. ಅಲ್ಲದೇ, ಯತ್ನಾಳ್ ರನ್ನು ಹುಚ್ಚುನಾಯಿಗೆ ಹೋಲಿಕೆ ಮಾಡಿದ್ದರು.








